<p>ಚೆನ್ನೈ, (ಪಿಟಿಐ): ತಮಿಳುನಾಡಿನ ಕಂದನ್ಕೊಳಂ ಅಣು ವಿದ್ಯುತ್ ಘಟಕ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಹತ್ತು ದಿನಗಳಿಂದ ಧರಣಿ ಕುಳಿತಿರುವ ಸ್ಥಳೀಯರೊಂದಿಗೆ ಸಂಧಾನ ಮಾತುಕತೆ ನಡೆಸಲು ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಮಂಗಳವಾರ ಇಲ್ಲಿಗೆ ಆಗಮಿಸಿದ್ದಾರೆ. <br /> <br /> `ಅಣು ಸ್ಥಾವರ ನಿರ್ಮಾಣಕ್ಕೂ ಮುನ್ನ ಎಲ್ಲ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸ್ಥಳೀಯರ ಆತಂಕ ದೂರಮಾಡಿ ಅವರ ಮನವೊಲಿಸುವ ಭರವಸೆ ಇದೆ~ ಎಂದು ಕಂದನ್ಕೊಳಂಗೆ ತೆರಳುವ ಮುನ್ನ ಅವರು ಸುದ್ದಿಗಾರರಿಗೆ ತಿಳಿಸಿದರು.<br /> <br /> ಜನರ ಭಯ ದೂರವಾಗುವವರೆಗೂ ಉದ್ದೇಶಿತ ಘಟಕದ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸೋಮವಾರ ಪ್ರಧಾನಮಂತ್ರಿಗೆ ಖಾರವಾದ ಪತ್ರ ಬರೆದಿದ್ದರು. <br /> <br /> ಇದಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನಿ, ದೂರವಾಣಿಯಲ್ಲಿ ಜಯಾ ಅವರೊಂದಿಗೆ ಮಾತುಕತೆ ನಡೆಸಿದರು. ಸಮಸ್ಯೆ ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಅದರ ಫಲವಾಗಿಯೇ ನಾರಾಯಣ ಸ್ವಾಮಿ ಅವರನ್ನು ಪ್ರಧಾನಿ ಮಂಗಳವಾರ ಇಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ. <br /> <br /> <strong>ವಿರೋಧ ದುರದೃಷ್ಟಕರ: ರಷ್ಯ <br /> </strong>ನವದೆಹಲಿ ವರದಿ: ಭಾರತ ಮತ್ತು ರಷ್ಯ ಜಂಟಿಯಾಗಿ ಕಂದನ್ಕೊಳಂನಲ್ಲಿ ನಿರ್ಮಿಸುತ್ತಿರುವ ಅಣು ವಿದ್ಯುತ್ ಘಟಕ ವಿರೋಧಿಸಿ ಸ್ಥಳೀಯರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ದುರದೃಷ್ಟಕರ ಎಂದು ರಷ್ಯ ಪ್ರತಿಕ್ರಿಯಿಸಿದೆ.<br /> <br /> `ಜಪಾನ್ ಫುಕುಶಿಮಾ ಅಣುಸ್ಥಾವರ ದುರಂತವನ್ನು ಗಮನದಲ್ಲಿಟ್ಟುಕೊಂಡು ಇಲ್ಲಿಯ ಸ್ಥಾವರ ನಿರ್ಮಿಸಲಾಗುತ್ತಿದೆ. ಪ್ರಾಕೃತಿಕ ವಿಕೋಪಗಳನ್ನು ತಡೆದುಕೊಳ್ಳುವ ನಿರೋಧಕ ಶಕ್ತಿ ಸ್ಥಾವರಕ್ಕಿದೆ. ಜನರು ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ~ ಎಂದು ಚೆನ್ನೈನಲ್ಲಿರುವ ರಷ್ಯದ ರಾಜತಾಂತ್ರಿಕ ಕಚೇರಿಯ ಹಿರಿಯ ಅಧಿಕಾರಿ ವಿ.ಕರ್ಮಾಲಿಟೊ ಭರವಸೆ ನೀಡಿದ್ದಾರೆ. <br /> <br /> <strong>ರಹಸ್ಯ ವರದಿ ಸೋರಿಕೆ</strong> <br /> ಚೆನ್ನೈ ವರದಿ: ರಷ್ಯ ಸಹಯೋಗ ಮತ್ತು ತಂತ್ರಜ್ಞಾನದಲ್ಲಿ ಕಂದನ್ಕೊಳಂನಲ್ಲಿ ನಿರ್ಮಿಸುತ್ತಿರುವ ಅಣು ವಿದ್ಯುತ್ ಘಟಕದ ಗುಣಮಟ್ಟ ಮತ್ತು ಪ್ರತಿರೋಧಕ ಶಕ್ತಿಯ ಬಗ್ಗೆ ಸಂದೇಹ ವ್ಯಕ್ತವಾಗಿರುವ ಅತ್ಯಂತ ರಹಸ್ಯ ವರದಿಯನ್ನು ನಾರ್ವೆ ಮೂಲದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ಬಹಿರಂಗಪಡಿಸಿದೆ. <br /> <br /> `ದಿ ಬೆಲ್ಲಾನ್ ಪ್ರತಿಷ್ಠಾನ~ ಬಹಿರಂಗಪಡಿಸಿದೆ ಎನ್ನಲಾದ ಗೋಪ್ಯ ವರದಿಯಲ್ಲಿ ಪ್ರಸ್ತಾಪಿಸಿದ ಅಂಶಗಳ ಹಿನ್ನೆಲೆಯಲ್ಲಿಯೇ ಈ ಘಟಕ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.<br /> <br /> ಭೂಕಂಪ ಮತ್ತು ಸುನಾಮಿಯಂತಹ ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ರಷ್ಯ ನಿರ್ಮಿತ ಸ್ಥಾವರಗಳ ಗುಣಮಟ್ಟ ಮತ್ತು ಪ್ರತಿರೋಧಕ ಶಕ್ತಿಯ ಬಗ್ಗೆ ಅಲ್ಲಿಯ ಸರ್ಕಾರದ ವರದಿ ಸಂದೇಹ ವ್ಯಕ್ತಪಡಿಸಿದೆ. ಈ ಸ್ಥಾವರಗಳ ಗುಣಮಟ್ಟ ನಿಗದಿಗಿಂತ ಕೆಳಮಟ್ಟದ್ದಾಗಿದೆ ಎಂಬ ಅಂಶಗಳನ್ನು ವರದಿ ಒಳಗೊಂಡಿದೆ. <br /> ಆದರೆ, ಭಾರತೀಯ ಅಣುಶಕ್ತಿ ನಿಗಮದ ವಿಜ್ಞಾನಿ ಡಾ. ಸುಧೀಂದ್ರ ಠಾಕೂರ್ ಅವರು ಈ ಆರೋಪಗಳನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.<br /> <br /> ಸ್ವಾಯತ್ತ ಸಂಸ್ಥೆಯಾಗಿರುವ ಅಣುಶಕ್ತಿ ನಿಯಂತ್ರಣ ಮಂಡಳಿ ರಷ್ಯದಿಂದ ಆಮದು ಮಾಡಿಕೊಳ್ಳಲಾದ ಎಲ್ಲ ಯಂತ್ರೋಪಕರಣಗಳ ಗುಣಮಟ್ಟವನ್ನೂ ಪರೀಕ್ಷಿಸಿ ಒಪ್ಪಿಗೆ ನೀಡಿದ ಬಳಿಕವಷ್ಟೇ ಅವುಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಮತ್ತೊಬ್ಬ ಅಣು ವಿಜ್ಞಾನಿ ಸ್ಪಷ್ಟಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚೆನ್ನೈ, (ಪಿಟಿಐ): ತಮಿಳುನಾಡಿನ ಕಂದನ್ಕೊಳಂ ಅಣು ವಿದ್ಯುತ್ ಘಟಕ ನಿರ್ಮಾಣ ಕಾಮಗಾರಿ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಹತ್ತು ದಿನಗಳಿಂದ ಧರಣಿ ಕುಳಿತಿರುವ ಸ್ಥಳೀಯರೊಂದಿಗೆ ಸಂಧಾನ ಮಾತುಕತೆ ನಡೆಸಲು ಪ್ರಧಾನಮಂತ್ರಿ ಕಚೇರಿಯ ರಾಜ್ಯ ಸಚಿವ ವಿ.ನಾರಾಯಣ ಸ್ವಾಮಿ ಮಂಗಳವಾರ ಇಲ್ಲಿಗೆ ಆಗಮಿಸಿದ್ದಾರೆ. <br /> <br /> `ಅಣು ಸ್ಥಾವರ ನಿರ್ಮಾಣಕ್ಕೂ ಮುನ್ನ ಎಲ್ಲ ಸುರಕ್ಷತಾ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಸ್ಥಳೀಯರ ಆತಂಕ ದೂರಮಾಡಿ ಅವರ ಮನವೊಲಿಸುವ ಭರವಸೆ ಇದೆ~ ಎಂದು ಕಂದನ್ಕೊಳಂಗೆ ತೆರಳುವ ಮುನ್ನ ಅವರು ಸುದ್ದಿಗಾರರಿಗೆ ತಿಳಿಸಿದರು.<br /> <br /> ಜನರ ಭಯ ದೂರವಾಗುವವರೆಗೂ ಉದ್ದೇಶಿತ ಘಟಕದ ನಿರ್ಮಾಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಒತ್ತಾಯಿಸಿ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಸೋಮವಾರ ಪ್ರಧಾನಮಂತ್ರಿಗೆ ಖಾರವಾದ ಪತ್ರ ಬರೆದಿದ್ದರು. <br /> <br /> ಇದಕ್ಕೆ ತಕ್ಷಣ ಸ್ಪಂದಿಸಿದ ಪ್ರಧಾನಿ, ದೂರವಾಣಿಯಲ್ಲಿ ಜಯಾ ಅವರೊಂದಿಗೆ ಮಾತುಕತೆ ನಡೆಸಿದರು. ಸಮಸ್ಯೆ ಬಗೆಹರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿದರು. ಅದರ ಫಲವಾಗಿಯೇ ನಾರಾಯಣ ಸ್ವಾಮಿ ಅವರನ್ನು ಪ್ರಧಾನಿ ಮಂಗಳವಾರ ಇಲ್ಲಿಗೆ ಕಳುಹಿಸಿಕೊಟ್ಟಿದ್ದಾರೆ. <br /> <br /> <strong>ವಿರೋಧ ದುರದೃಷ್ಟಕರ: ರಷ್ಯ <br /> </strong>ನವದೆಹಲಿ ವರದಿ: ಭಾರತ ಮತ್ತು ರಷ್ಯ ಜಂಟಿಯಾಗಿ ಕಂದನ್ಕೊಳಂನಲ್ಲಿ ನಿರ್ಮಿಸುತ್ತಿರುವ ಅಣು ವಿದ್ಯುತ್ ಘಟಕ ವಿರೋಧಿಸಿ ಸ್ಥಳೀಯರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ದುರದೃಷ್ಟಕರ ಎಂದು ರಷ್ಯ ಪ್ರತಿಕ್ರಿಯಿಸಿದೆ.<br /> <br /> `ಜಪಾನ್ ಫುಕುಶಿಮಾ ಅಣುಸ್ಥಾವರ ದುರಂತವನ್ನು ಗಮನದಲ್ಲಿಟ್ಟುಕೊಂಡು ಇಲ್ಲಿಯ ಸ್ಥಾವರ ನಿರ್ಮಿಸಲಾಗುತ್ತಿದೆ. ಪ್ರಾಕೃತಿಕ ವಿಕೋಪಗಳನ್ನು ತಡೆದುಕೊಳ್ಳುವ ನಿರೋಧಕ ಶಕ್ತಿ ಸ್ಥಾವರಕ್ಕಿದೆ. ಜನರು ಅನಗತ್ಯವಾಗಿ ಆತಂಕಪಡುವ ಅಗತ್ಯವಿಲ್ಲ~ ಎಂದು ಚೆನ್ನೈನಲ್ಲಿರುವ ರಷ್ಯದ ರಾಜತಾಂತ್ರಿಕ ಕಚೇರಿಯ ಹಿರಿಯ ಅಧಿಕಾರಿ ವಿ.ಕರ್ಮಾಲಿಟೊ ಭರವಸೆ ನೀಡಿದ್ದಾರೆ. <br /> <br /> <strong>ರಹಸ್ಯ ವರದಿ ಸೋರಿಕೆ</strong> <br /> ಚೆನ್ನೈ ವರದಿ: ರಷ್ಯ ಸಹಯೋಗ ಮತ್ತು ತಂತ್ರಜ್ಞಾನದಲ್ಲಿ ಕಂದನ್ಕೊಳಂನಲ್ಲಿ ನಿರ್ಮಿಸುತ್ತಿರುವ ಅಣು ವಿದ್ಯುತ್ ಘಟಕದ ಗುಣಮಟ್ಟ ಮತ್ತು ಪ್ರತಿರೋಧಕ ಶಕ್ತಿಯ ಬಗ್ಗೆ ಸಂದೇಹ ವ್ಯಕ್ತವಾಗಿರುವ ಅತ್ಯಂತ ರಹಸ್ಯ ವರದಿಯನ್ನು ನಾರ್ವೆ ಮೂಲದ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಯೊಂದು ಬಹಿರಂಗಪಡಿಸಿದೆ. <br /> <br /> `ದಿ ಬೆಲ್ಲಾನ್ ಪ್ರತಿಷ್ಠಾನ~ ಬಹಿರಂಗಪಡಿಸಿದೆ ಎನ್ನಲಾದ ಗೋಪ್ಯ ವರದಿಯಲ್ಲಿ ಪ್ರಸ್ತಾಪಿಸಿದ ಅಂಶಗಳ ಹಿನ್ನೆಲೆಯಲ್ಲಿಯೇ ಈ ಘಟಕ ನಿರ್ಮಾಣಕ್ಕೆ ಸ್ಥಳೀಯರ ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗಿದೆ.<br /> <br /> ಭೂಕಂಪ ಮತ್ತು ಸುನಾಮಿಯಂತಹ ಪ್ರಾಕೃತಿಕ ವಿಕೋಪದ ಸಂದರ್ಭಗಳಲ್ಲಿ ರಷ್ಯ ನಿರ್ಮಿತ ಸ್ಥಾವರಗಳ ಗುಣಮಟ್ಟ ಮತ್ತು ಪ್ರತಿರೋಧಕ ಶಕ್ತಿಯ ಬಗ್ಗೆ ಅಲ್ಲಿಯ ಸರ್ಕಾರದ ವರದಿ ಸಂದೇಹ ವ್ಯಕ್ತಪಡಿಸಿದೆ. ಈ ಸ್ಥಾವರಗಳ ಗುಣಮಟ್ಟ ನಿಗದಿಗಿಂತ ಕೆಳಮಟ್ಟದ್ದಾಗಿದೆ ಎಂಬ ಅಂಶಗಳನ್ನು ವರದಿ ಒಳಗೊಂಡಿದೆ. <br /> ಆದರೆ, ಭಾರತೀಯ ಅಣುಶಕ್ತಿ ನಿಗಮದ ವಿಜ್ಞಾನಿ ಡಾ. ಸುಧೀಂದ್ರ ಠಾಕೂರ್ ಅವರು ಈ ಆರೋಪಗಳನ್ನು ಸ್ಪಷ್ಟವಾಗಿ ಅಲ್ಲಗಳೆದಿದ್ದಾರೆ.<br /> <br /> ಸ್ವಾಯತ್ತ ಸಂಸ್ಥೆಯಾಗಿರುವ ಅಣುಶಕ್ತಿ ನಿಯಂತ್ರಣ ಮಂಡಳಿ ರಷ್ಯದಿಂದ ಆಮದು ಮಾಡಿಕೊಳ್ಳಲಾದ ಎಲ್ಲ ಯಂತ್ರೋಪಕರಣಗಳ ಗುಣಮಟ್ಟವನ್ನೂ ಪರೀಕ್ಷಿಸಿ ಒಪ್ಪಿಗೆ ನೀಡಿದ ಬಳಿಕವಷ್ಟೇ ಅವುಗಳನ್ನು ಆಮದು ಮಾಡಿಕೊಳ್ಳಲಾಗಿದೆ ಎಂದು ಮತ್ತೊಬ್ಬ ಅಣು ವಿಜ್ಞಾನಿ ಸ್ಪಷ್ಟಪಡಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>