<p>ಚೈನ್ನೈ: ಇದುವರೆಗೆ ರಾಜಕಾರಣಿಗಳ ಆಟವೇ ನಡೆಯುತ್ತಿದ್ದ ತಮಿಳುನಾಡಿನಲ್ಲಿ ಇನ್ನು ಕೆಲವು ತಿಂಗಳು ಸರ್ಕಾರಿ ಅಧಿಕಾರಿಗಳದ್ದೇ ಕಾರುಬಾರು. ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರೆತಿರುವುದೇ ಇದಕ್ಕೆ ಕಾರಣ. <br /> <br /> ಏಪ್ರಿಲ್ 13ರಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮತ ಎಣಿಕೆ ಕಾರ್ಯ ಮೇ 13ರಂದು ನಡೆಯಲಿದ್ದು, ಈ ಅವಧಿಯಲ್ಲಿ ಪ್ರಮುಖ ನಾಲ್ಕು ಸಾರ್ವಜನಿಕ ಕಾರ್ಯಕ್ರಮ ನಡೆಯಲಿವೆ. ಚುನಾವಣೆ ನೀತಿ ಸಂಹಿತೆ ಅಡ್ಡಬರುವುದರಿಂದ ರಾಜಕಾರಣಿಗಳಿಗೆ ಈ ಕಾರ್ಯಕ್ರಮಗಳಲ್ಲಿ ದೊಡ್ಡಪ್ರಮಾಣದಲ್ಲಿ ತೊಡಗಿಸಿಕೊಂಡು ಜನರ ಗಮನಸೆಳೆಯಲು ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ಸರ್ಕಾರಿ ಅಧಿಕಾರಿಗಳೇ ಈ ಕಾರ್ಯಕ್ರಮಗಳಲ್ಲಿ ಗಮನಸೆಳೆಯಲಿದ್ದಾರೆ.<br /> <br /> ಮಾರ್ಚ್ 8ರಂದು ವಿಶ್ವ ಮಹಿಳಾ ದಿನದ ಅಂಗವಾಗಿ ಇಲ್ಲಿನ ಮರಿನಾಬೀಚ್ನಲ್ಲಿರುವ ತಮಿಳು ಕವಯಿತ್ರಿ ಅವ್ವೈಯ್ಯಾರ್ ಪ್ರತಿಮೆಗೆ ಪುಷ್ಪಗುಚ್ಛ ಇರಿಸಲು ರಾಜಕಾರಣಿಗಳು ಅಥವಾ ಮಹಿಳಾ ಸಂಸದರಿಗೆ ಸಾಧ್ಯವಿಲ್ಲ. ಅವರು ಈ ಕಾರ್ಯಕ್ರಮಕ್ಕೆ ಆಗಮಿಸಬಹುದಾದರೂ,ಎಲ್ಲಾ ಜವಾಬ್ದಾರಿಗಳು ಅಧಿಕಾರಿಗಳದ್ದು. <br /> <br /> ಈ ವರ್ಷ ಚುನಾವಣಾ ನೀತಿ ಸಂಹಿತೆ ಅಡ್ಡ ಬರುವುದರಿಂದ ಈ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡುವಂತಿಲ್ಲ. ಇದರ ಹೊರತಾಗಿ, ಕಾರ್ಮಿಕರ ದಿನಾಚರಣೆ, ಬಾಬು ಜಗ್ಜೀವನ್ ರಾಮ್ ಜನ್ಮಾದಿನಾಚರಣೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದೂ ಸರ್ಕಾರಿ ಅಧಿಕಾರಿಗಳದ್ದೇ ಕಾರುಬಾರು.<br /> <br /> ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಸಾರ್ವಜನಿಕರಾಗಿ ಭಾಗವಹಿಸಬಹುದೇ ಹೊರತು, ಆ ಸಂದರ್ಭವನ್ನು ಪ್ರಚಾರಕ್ಕೆ ಬಳಸುವಂತಿಲ್ಲ. ಇನ್ನು ತಮಿಳುನಾಡು ಸರ್ಕಾರದ ಅಧಿಕೃತ ವೈಬ್ಸೈಟ್ನಲ್ಲೂ ಚುನಾವಣಾ ಪ್ರಕ್ರಿಯೆ ತಂದಿರುವ ವ್ಯತ್ಯಾಸವನ್ನು ಕಾಣಬಹುದು. ತಮಿಳುನಾಡಿನ ರಾಜ್ಯಪಾಲರ, ರಾಜ್ಯದ ಸಂವಿಧಾನದ ಮುಖ್ಯಸ್ಥರು, ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಮಾಹಿತಿಯನ್ನು ವೆಬ್ಸೈಟ್ ಪ್ರತ್ಯೇಕ ಪುಟಗಳಲ್ಲಿ ತಿಳಿಯಬಹುದು.<br /> <br /> ವೆಬ್ಸೈಟ್ನಲ್ಲಿದ್ದ ಮುಖ್ಯಮಂತ್ರಿ ಎಂ.ಕರುಣಾನಿಧಿ, ಉಪಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹಾಗೂ ಇತರ ಸಚಿವರ ಛಾಯಾಚಿತ್ರಗಳನ್ನೂ ತೆಗೆಯಲಾಗಿದೆ. ‘ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಸಾರ್ವಜನಿಕ ಬೊಕ್ಕಸದಿಂದ ಖರ್ಚುಮಾಡಿ ಯಾವುದೇ ರಾಜಕಾರಣಿಗೆ ಪ್ರಚಾರ ನೀಡಲು ಸಾಧ್ಯವಿಲ್ಲ’ ಎಂದು ಈ ಬೆಳವಣಿಗೆಗಳ ಕುರಿತು ತಮಿಳುನಾಡಿನ ಮುಖ್ಯ ಚುನಾವಣಾ ಆಯುಕ್ತ ಪ್ರವೀಣ್ ಕುಮಾರ್ ವಿವರಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚೈನ್ನೈ: ಇದುವರೆಗೆ ರಾಜಕಾರಣಿಗಳ ಆಟವೇ ನಡೆಯುತ್ತಿದ್ದ ತಮಿಳುನಾಡಿನಲ್ಲಿ ಇನ್ನು ಕೆಲವು ತಿಂಗಳು ಸರ್ಕಾರಿ ಅಧಿಕಾರಿಗಳದ್ದೇ ಕಾರುಬಾರು. ಚುನಾವಣೆ ಪ್ರಕ್ರಿಯೆಗೆ ಚಾಲನೆ ದೊರೆತಿರುವುದೇ ಇದಕ್ಕೆ ಕಾರಣ. <br /> <br /> ಏಪ್ರಿಲ್ 13ರಂದು ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಮತ ಎಣಿಕೆ ಕಾರ್ಯ ಮೇ 13ರಂದು ನಡೆಯಲಿದ್ದು, ಈ ಅವಧಿಯಲ್ಲಿ ಪ್ರಮುಖ ನಾಲ್ಕು ಸಾರ್ವಜನಿಕ ಕಾರ್ಯಕ್ರಮ ನಡೆಯಲಿವೆ. ಚುನಾವಣೆ ನೀತಿ ಸಂಹಿತೆ ಅಡ್ಡಬರುವುದರಿಂದ ರಾಜಕಾರಣಿಗಳಿಗೆ ಈ ಕಾರ್ಯಕ್ರಮಗಳಲ್ಲಿ ದೊಡ್ಡಪ್ರಮಾಣದಲ್ಲಿ ತೊಡಗಿಸಿಕೊಂಡು ಜನರ ಗಮನಸೆಳೆಯಲು ಸಾಧ್ಯವಿಲ್ಲ. ಹಾಗಾಗಿ ಈ ಬಾರಿ ಸರ್ಕಾರಿ ಅಧಿಕಾರಿಗಳೇ ಈ ಕಾರ್ಯಕ್ರಮಗಳಲ್ಲಿ ಗಮನಸೆಳೆಯಲಿದ್ದಾರೆ.<br /> <br /> ಮಾರ್ಚ್ 8ರಂದು ವಿಶ್ವ ಮಹಿಳಾ ದಿನದ ಅಂಗವಾಗಿ ಇಲ್ಲಿನ ಮರಿನಾಬೀಚ್ನಲ್ಲಿರುವ ತಮಿಳು ಕವಯಿತ್ರಿ ಅವ್ವೈಯ್ಯಾರ್ ಪ್ರತಿಮೆಗೆ ಪುಷ್ಪಗುಚ್ಛ ಇರಿಸಲು ರಾಜಕಾರಣಿಗಳು ಅಥವಾ ಮಹಿಳಾ ಸಂಸದರಿಗೆ ಸಾಧ್ಯವಿಲ್ಲ. ಅವರು ಈ ಕಾರ್ಯಕ್ರಮಕ್ಕೆ ಆಗಮಿಸಬಹುದಾದರೂ,ಎಲ್ಲಾ ಜವಾಬ್ದಾರಿಗಳು ಅಧಿಕಾರಿಗಳದ್ದು. <br /> <br /> ಈ ವರ್ಷ ಚುನಾವಣಾ ನೀತಿ ಸಂಹಿತೆ ಅಡ್ಡ ಬರುವುದರಿಂದ ಈ ಕಾರ್ಯಕ್ರಮದಲ್ಲಿ ರಾಜಕೀಯ ಭಾಷಣ ಮಾಡುವಂತಿಲ್ಲ. ಇದರ ಹೊರತಾಗಿ, ಕಾರ್ಮಿಕರ ದಿನಾಚರಣೆ, ಬಾಬು ಜಗ್ಜೀವನ್ ರಾಮ್ ಜನ್ಮಾದಿನಾಚರಣೆ, ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ದಿನಾಚರಣೆಯಂದೂ ಸರ್ಕಾರಿ ಅಧಿಕಾರಿಗಳದ್ದೇ ಕಾರುಬಾರು.<br /> <br /> ಈ ಎಲ್ಲಾ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಸಾರ್ವಜನಿಕರಾಗಿ ಭಾಗವಹಿಸಬಹುದೇ ಹೊರತು, ಆ ಸಂದರ್ಭವನ್ನು ಪ್ರಚಾರಕ್ಕೆ ಬಳಸುವಂತಿಲ್ಲ. ಇನ್ನು ತಮಿಳುನಾಡು ಸರ್ಕಾರದ ಅಧಿಕೃತ ವೈಬ್ಸೈಟ್ನಲ್ಲೂ ಚುನಾವಣಾ ಪ್ರಕ್ರಿಯೆ ತಂದಿರುವ ವ್ಯತ್ಯಾಸವನ್ನು ಕಾಣಬಹುದು. ತಮಿಳುನಾಡಿನ ರಾಜ್ಯಪಾಲರ, ರಾಜ್ಯದ ಸಂವಿಧಾನದ ಮುಖ್ಯಸ್ಥರು, ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳ ಮಾಹಿತಿಯನ್ನು ವೆಬ್ಸೈಟ್ ಪ್ರತ್ಯೇಕ ಪುಟಗಳಲ್ಲಿ ತಿಳಿಯಬಹುದು.<br /> <br /> ವೆಬ್ಸೈಟ್ನಲ್ಲಿದ್ದ ಮುಖ್ಯಮಂತ್ರಿ ಎಂ.ಕರುಣಾನಿಧಿ, ಉಪಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಹಾಗೂ ಇತರ ಸಚಿವರ ಛಾಯಾಚಿತ್ರಗಳನ್ನೂ ತೆಗೆಯಲಾಗಿದೆ. ‘ಚುನಾವಣಾ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗ ಸಾರ್ವಜನಿಕ ಬೊಕ್ಕಸದಿಂದ ಖರ್ಚುಮಾಡಿ ಯಾವುದೇ ರಾಜಕಾರಣಿಗೆ ಪ್ರಚಾರ ನೀಡಲು ಸಾಧ್ಯವಿಲ್ಲ’ ಎಂದು ಈ ಬೆಳವಣಿಗೆಗಳ ಕುರಿತು ತಮಿಳುನಾಡಿನ ಮುಖ್ಯ ಚುನಾವಣಾ ಆಯುಕ್ತ ಪ್ರವೀಣ್ ಕುಮಾರ್ ವಿವರಿಸುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>