<p>ಹುಬ್ಬಳ್ಳಿ: ಅಲ್ಲಿ ಕಣ್ಣು ಕೋರೈಸುವ ವಜ್ರಖಚಿತ ಆಭರಣಗಳು, ಹೊಳೆಯುವ ಮುತ್ತುರತ್ನಗಳು ಜೊತೆಗೆ ಚಿನ್ನಾಭರಣಗಳು... ಆಗಾಗ ಬೆಂಕಿ ಉಗುಳುತ್ತ ನಿಧಿ ಕಾಯುವ ಸರ್ಪ. ಈ ಶೇಷಶಯನನ ಆಚೆಗೆ ಬೆಳ್ಳಿ ಗಣಪ. ಜೊತೆಗೆ ಚಿನ್ನದ ಗಣಪನ ದರ್ಶನ. ಇವುಗಳ ಕಾವಲಿಗೆ ನಿಂತ ಆನೆಗಳು. <br /> <br /> ಇದು ಕೇರಳದ ರಾಜಧಾನಿ ತಿರುವನಂತಪುರದಲ್ಲಿಯ ಅನಂತಪದ್ಮನಾಭ ದೇವಾಲಯದ ಚಿತ್ರಣ. ತನ್ನ ಸಂಪತ್ತಿನಿಂದ ಈಚೆಗಷ್ಟೇ ವಿವಾದ ಕೇಂದ್ರವಾಗಿರುವ ಅನಂತಪದ್ಮನಾಭ ದೇವಾಲಯವನ್ನು ಈಗ ನಗರದ ಶಿಂಪಿಗಲ್ಲಿಯಲ್ಲಿಯೇ ನೋಡಬಹುದು. ಧ್ವನಿಸುರುಳಿಯಲ್ಲಿಯ ಚೆಂಡೆಯ ಸದ್ದಿನೊಂದಿಗೆ ಆರಂವಾಗುವ ಈ ಮನಮೋಹಕ ದೃಶ್ಯಾವಳಿ ಐದು ನಿಮಿಷಗಳ ಕಾಲಾವಧಿಯದು. ಈ ದೃಶ್ಯಾವಳಿ ನೋಡಲು, ಈ ದೇವಾಲಯ ಮಾದರಿ ನೋಡಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಇದರಿಂದ ಸರತಿ ಸಾಲು ಹೆಚ್ಚುತ್ತಿದೆ.<br /> <br /> ಶಿಂಪಿಗಲ್ಲಿಯ ಮಾರುತಿ ಯುವಕ ಸೇವಾ ಸಂಘದ ಈ ಬಾರಿಯ ಕೊಡುಗೆ ಅನಂತಪದ್ಮನಾಭ ದೇವಾಲಯ ಮಾದರಿ. ಇದನ್ನು ವಿಜಯ್ ದಂಡಗಿ ರೂಪಿಸಿದ್ದಾರೆ. `ದೇಶದ ಅಪರೂಪದ ಹಾಗೂ ವಿವಾದಿತ ದೇವಸ್ಥಾನದ ದರ್ಶನವನ್ನು ನಮ್ಮ ಹುಬ್ಬಳ್ಳಿ ಜನತೆಗೆ ಇಲ್ಲಿಯೇ ಮಾಡಿಸುವ ಉದ್ದೇಶದಿಂದ ಅನಂತ ಪದ್ಮನಾಭ ದೇವಾಲಯ ಮಾದರಿ ಆಯ್ಕೆ ಮಾಡಿಕೊಂಡೆ~ ಎನ್ನುತ್ತಾರೆ ವಿಜಯ್ ದಂಡಗಿ.<br /> <br /> `ಅನಂತ ಪದ್ಮನಾಭನ ದೇವಸ್ಥಾನದ ಮುಂಭಾಗವನ್ನು ಹೋಲುವ ಇಲ್ಲಿನ ಚಿತ್ರಣಕ್ಕೆ ಒಟ್ಟು ಒಂಬತ್ತು ಲಕ್ಷ ರೂಪಾಯಿ ವೆಚ್ಚವಾಗಿದೆ. ಅತ್ಯಂತ ಸೂಕ್ಷ್ಮವಾದ ಬೆಳಕಿನ ವಿನ್ಯಾಸ ಮಾಡಲಾಗಿದೆ. ಭಕ್ತಿಸಂಗೀತದ ಹಿನ್ನೆಲೆಯಲ್ಲಿ ಈ ಕಲಾಕೃತಿಯ ವೀಕ್ಷಣೆ ಖುಷಿ ನೀಡುತ್ತದೆ. ಮುಂಬೈನ ಎಂಜಿನಿಯರ್ ನಿತ್ಯಾನಂದ ಬೆಳಕಿನ ವಿನ್ಯಾಸ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಿದ್ದಾರೆ. ಹಗಲು ಹೊತ್ತಿನಲ್ಲೂ ವೀಕ್ಷಣೆಗೆ ಅವಕಾಶವಿದೆ. ಆದರೆ ರಾತ್ರಿ ನೋಡುವುದೇ ಚೆಂದ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ~ ಎನ್ನುತ್ತಾರೆ ದಂಡಗಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಅಲ್ಲಿ ಕಣ್ಣು ಕೋರೈಸುವ ವಜ್ರಖಚಿತ ಆಭರಣಗಳು, ಹೊಳೆಯುವ ಮುತ್ತುರತ್ನಗಳು ಜೊತೆಗೆ ಚಿನ್ನಾಭರಣಗಳು... ಆಗಾಗ ಬೆಂಕಿ ಉಗುಳುತ್ತ ನಿಧಿ ಕಾಯುವ ಸರ್ಪ. ಈ ಶೇಷಶಯನನ ಆಚೆಗೆ ಬೆಳ್ಳಿ ಗಣಪ. ಜೊತೆಗೆ ಚಿನ್ನದ ಗಣಪನ ದರ್ಶನ. ಇವುಗಳ ಕಾವಲಿಗೆ ನಿಂತ ಆನೆಗಳು. <br /> <br /> ಇದು ಕೇರಳದ ರಾಜಧಾನಿ ತಿರುವನಂತಪುರದಲ್ಲಿಯ ಅನಂತಪದ್ಮನಾಭ ದೇವಾಲಯದ ಚಿತ್ರಣ. ತನ್ನ ಸಂಪತ್ತಿನಿಂದ ಈಚೆಗಷ್ಟೇ ವಿವಾದ ಕೇಂದ್ರವಾಗಿರುವ ಅನಂತಪದ್ಮನಾಭ ದೇವಾಲಯವನ್ನು ಈಗ ನಗರದ ಶಿಂಪಿಗಲ್ಲಿಯಲ್ಲಿಯೇ ನೋಡಬಹುದು. ಧ್ವನಿಸುರುಳಿಯಲ್ಲಿಯ ಚೆಂಡೆಯ ಸದ್ದಿನೊಂದಿಗೆ ಆರಂವಾಗುವ ಈ ಮನಮೋಹಕ ದೃಶ್ಯಾವಳಿ ಐದು ನಿಮಿಷಗಳ ಕಾಲಾವಧಿಯದು. ಈ ದೃಶ್ಯಾವಳಿ ನೋಡಲು, ಈ ದೇವಾಲಯ ಮಾದರಿ ನೋಡಲು ಸಾರ್ವಜನಿಕರು ಮುಗಿಬೀಳುತ್ತಿದ್ದಾರೆ. ಇದರಿಂದ ಸರತಿ ಸಾಲು ಹೆಚ್ಚುತ್ತಿದೆ.<br /> <br /> ಶಿಂಪಿಗಲ್ಲಿಯ ಮಾರುತಿ ಯುವಕ ಸೇವಾ ಸಂಘದ ಈ ಬಾರಿಯ ಕೊಡುಗೆ ಅನಂತಪದ್ಮನಾಭ ದೇವಾಲಯ ಮಾದರಿ. ಇದನ್ನು ವಿಜಯ್ ದಂಡಗಿ ರೂಪಿಸಿದ್ದಾರೆ. `ದೇಶದ ಅಪರೂಪದ ಹಾಗೂ ವಿವಾದಿತ ದೇವಸ್ಥಾನದ ದರ್ಶನವನ್ನು ನಮ್ಮ ಹುಬ್ಬಳ್ಳಿ ಜನತೆಗೆ ಇಲ್ಲಿಯೇ ಮಾಡಿಸುವ ಉದ್ದೇಶದಿಂದ ಅನಂತ ಪದ್ಮನಾಭ ದೇವಾಲಯ ಮಾದರಿ ಆಯ್ಕೆ ಮಾಡಿಕೊಂಡೆ~ ಎನ್ನುತ್ತಾರೆ ವಿಜಯ್ ದಂಡಗಿ.<br /> <br /> `ಅನಂತ ಪದ್ಮನಾಭನ ದೇವಸ್ಥಾನದ ಮುಂಭಾಗವನ್ನು ಹೋಲುವ ಇಲ್ಲಿನ ಚಿತ್ರಣಕ್ಕೆ ಒಟ್ಟು ಒಂಬತ್ತು ಲಕ್ಷ ರೂಪಾಯಿ ವೆಚ್ಚವಾಗಿದೆ. ಅತ್ಯಂತ ಸೂಕ್ಷ್ಮವಾದ ಬೆಳಕಿನ ವಿನ್ಯಾಸ ಮಾಡಲಾಗಿದೆ. ಭಕ್ತಿಸಂಗೀತದ ಹಿನ್ನೆಲೆಯಲ್ಲಿ ಈ ಕಲಾಕೃತಿಯ ವೀಕ್ಷಣೆ ಖುಷಿ ನೀಡುತ್ತದೆ. ಮುಂಬೈನ ಎಂಜಿನಿಯರ್ ನಿತ್ಯಾನಂದ ಬೆಳಕಿನ ವಿನ್ಯಾಸ ಹಾಗೂ ವಿದ್ಯುತ್ ದೀಪಾಲಂಕಾರ ಮಾಡಿದ್ದಾರೆ. ಹಗಲು ಹೊತ್ತಿನಲ್ಲೂ ವೀಕ್ಷಣೆಗೆ ಅವಕಾಶವಿದೆ. ಆದರೆ ರಾತ್ರಿ ನೋಡುವುದೇ ಚೆಂದ. ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ~ ಎನ್ನುತ್ತಾರೆ ದಂಡಗಿ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>