<p>ಶ್ರೀಕೃಷ್ಣ ಕಲ್ಚರಲ್ ಅಕಾಡೆಮಿಯ ಗುರು ನಾಗಲಕ್ಷ್ಮಿ ಅವರ ಶಿಷ್ಯೆ ಅನನ್ಯ ಈಚೆಗೆ ಯವನಿಕದಲ್ಲಿ ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನೋಜ್ಞ ಭರತನಾಟ್ಯ ಪ್ರದರ್ಶನ ನೀಡಿದರು.<br /> <br /> ಆರಂಭದಲ್ಲಿ ನಾಟರಾಗದ ಆದಿತಾಳ ಪುಷ್ಪಾಂಜಲಿಯ ಪ್ರಾರ್ಥನಾ ನೃತ್ಯದೊಂದಿಗೆ ವೇದಿಕೆ ಮೇಲೆ ಬಂದು ಗಣೇಶನಿಗೆ ಭಕ್ತಿ ಪರವಶರಾಗಿ ನೃತ್ಯದ ಮೂಲಕ ವಂದಿಸಿದರು. ಗುರುಗಳ ತಾಳಕ್ಕೆ ತಕ್ಕಂತೆ ಪಕ್ಕವಾದ್ಯಕ್ಕೆ ಸರಿಸಾಟಿಯಾಗಿ ಜತಿ ಸ್ವರವನ್ನು ಚಾಕಚಕ್ಯತೆಯಿಂದ ಅಭಿನಯಿಸಿದರು.<br /> <br /> ಸುಂದರವಾಗಿ ಶಬ್ದಂ ಪ್ರದರ್ಶಿಸಿದ ಅವರ ಮತ್ತೊಂದು ಮನೋಲ್ಲಾಸ ನೃತ್ಯ ಕನಕದಾಸರ ರಚನೆಯ ರಾಗಮಾಲಿಕೆ ಮತ್ತು ಮಿಶ್ರ ಛಾಪುತಾಳದಲ್ಲಿ ಕೂಡಿತ್ತು. ನಂತರ ಕೃಷ್ಣ ಲೀಲೆಗಳು ಮತ್ತು ವರ್ಣನೆಯ ಅಭಿನಯ. `ಮಧುರವೂ ಮಧುರ~ ಎಂಬ ಕೃಷ್ಣ ಗೀತೆಯ ಮೂಲಕ ಸಖಿಯರ ವರ್ಣನೆ, ಅದರಿಂದ ಹೊಗಳುವ ತೆಗಳುವ ಇರಿಸು ಮುರಿಸಾಗುವ ಚಿಂತೆ ಮತ್ತು ಸಂತೋಷಗಳ ಸುದ್ದಿ ಮುಟ್ಟಿಸುವ ಪರಿಯನ್ನು ಸುಂದರವಾಗಿ ಅಭಿನಯಿಸಿದರು. <br /> <br /> ಪಕ್ಕವಾದ್ಯದಲ್ಲಿ ಸಹಕರಿಸಿದ ವಿದುಷಿ ನಾಗಲಕ್ಷ್ಮಿ (ನಟುವಾಂಗ), ಭಾರತಿ ವೇಣುಗೋಪಾಲ್ (ಹಾಡುಗಾರಿಕೆ), ಸಾಯಿನಾರಾಯಣ್(ಮೃದಂಗ), ಶ್ರೇಯಸ್ (ಕೊಳಲು) ನೃತ್ಯದ ಸೊಬಗು ಹೆಚ್ಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀಕೃಷ್ಣ ಕಲ್ಚರಲ್ ಅಕಾಡೆಮಿಯ ಗುರು ನಾಗಲಕ್ಷ್ಮಿ ಅವರ ಶಿಷ್ಯೆ ಅನನ್ಯ ಈಚೆಗೆ ಯವನಿಕದಲ್ಲಿ ಶುಕ್ರವಾರದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮನೋಜ್ಞ ಭರತನಾಟ್ಯ ಪ್ರದರ್ಶನ ನೀಡಿದರು.<br /> <br /> ಆರಂಭದಲ್ಲಿ ನಾಟರಾಗದ ಆದಿತಾಳ ಪುಷ್ಪಾಂಜಲಿಯ ಪ್ರಾರ್ಥನಾ ನೃತ್ಯದೊಂದಿಗೆ ವೇದಿಕೆ ಮೇಲೆ ಬಂದು ಗಣೇಶನಿಗೆ ಭಕ್ತಿ ಪರವಶರಾಗಿ ನೃತ್ಯದ ಮೂಲಕ ವಂದಿಸಿದರು. ಗುರುಗಳ ತಾಳಕ್ಕೆ ತಕ್ಕಂತೆ ಪಕ್ಕವಾದ್ಯಕ್ಕೆ ಸರಿಸಾಟಿಯಾಗಿ ಜತಿ ಸ್ವರವನ್ನು ಚಾಕಚಕ್ಯತೆಯಿಂದ ಅಭಿನಯಿಸಿದರು.<br /> <br /> ಸುಂದರವಾಗಿ ಶಬ್ದಂ ಪ್ರದರ್ಶಿಸಿದ ಅವರ ಮತ್ತೊಂದು ಮನೋಲ್ಲಾಸ ನೃತ್ಯ ಕನಕದಾಸರ ರಚನೆಯ ರಾಗಮಾಲಿಕೆ ಮತ್ತು ಮಿಶ್ರ ಛಾಪುತಾಳದಲ್ಲಿ ಕೂಡಿತ್ತು. ನಂತರ ಕೃಷ್ಣ ಲೀಲೆಗಳು ಮತ್ತು ವರ್ಣನೆಯ ಅಭಿನಯ. `ಮಧುರವೂ ಮಧುರ~ ಎಂಬ ಕೃಷ್ಣ ಗೀತೆಯ ಮೂಲಕ ಸಖಿಯರ ವರ್ಣನೆ, ಅದರಿಂದ ಹೊಗಳುವ ತೆಗಳುವ ಇರಿಸು ಮುರಿಸಾಗುವ ಚಿಂತೆ ಮತ್ತು ಸಂತೋಷಗಳ ಸುದ್ದಿ ಮುಟ್ಟಿಸುವ ಪರಿಯನ್ನು ಸುಂದರವಾಗಿ ಅಭಿನಯಿಸಿದರು. <br /> <br /> ಪಕ್ಕವಾದ್ಯದಲ್ಲಿ ಸಹಕರಿಸಿದ ವಿದುಷಿ ನಾಗಲಕ್ಷ್ಮಿ (ನಟುವಾಂಗ), ಭಾರತಿ ವೇಣುಗೋಪಾಲ್ (ಹಾಡುಗಾರಿಕೆ), ಸಾಯಿನಾರಾಯಣ್(ಮೃದಂಗ), ಶ್ರೇಯಸ್ (ಕೊಳಲು) ನೃತ್ಯದ ಸೊಬಗು ಹೆಚ್ಚಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>