<p>ಅಲ್ಲಿ ಎಲ್ಲೆಲ್ಲೂ ಸಂಗೀತವೇ ಆವರಿಸಿಕೊಂಡಿತ್ತು. ಹಿರಿಯರು, ಮಕ್ಕಳು, ಯುವಕ ಯುವತಿಯರು ಎಲ್ಲರ ಬಾಯಲ್ಲೂ ಹಾಡುಗಳು ಅನುರಣಿಸುತ್ತಿದ್ದವು. ಸಂಗೀತ ಎಲ್ಲರ ಹೃದಯ ತಟ್ಟುವ ಮಾಧ್ಯಮ, ಅಷ್ಟೇ ಅಲ್ಲ, ಅನಾಥ ಮಕ್ಕಳ ಜೀವನವನ್ನು ಸುಧಾರಿಸುವ ಚೈತನ್ಯ ಸಂಗೀತಕ್ಕಿದೆ ಎಂಬುದು ಇಲ್ಲಿ ನಿರೂಪಿತಗೊಂಡಿತ್ತು.<br /> <br /> ಅದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದ `ಮೆಗಾ ಮ್ಯೂಸಿಕ್ ಹಬ್ಬ~. ಆದರೆ ಇದು ಕೇವಲ ಸಂಗೀತ ಕಾರ್ಯಕ್ರಮ ಆಗಿರಲಿಲ್ಲ, ಇದರ ಹಿಂದೆ ಅರ್ಥಪೂರ್ಣ ಉದ್ದೇಶವೊಂದಿತ್ತು. ಅನಾಥ ಮಕ್ಕಳಿಗೆ ಸೂರು ಕಲ್ಪಿಸುವ ಉದ್ದೇಶದಿಂದ `ಕಾರ್ಟ್ಮನ್ ಸೊಸೈಟಿ~ ಮತ್ತು `ಸರಿಗಮ~ ಸಂಸ್ಥೆಗಳು ಒಟ್ಟುಗೂಡಿ ಈ ಸಂಗೀತ ಸಂಜೆಯನ್ನು ಆಯೋಜಿಸಿದ್ದವು. <br /> <br /> ಈ ಸಮಾರಂಭದ ಮುಖ್ಯ ಉದ್ದೇಶ `ಉತ್ಥಾನ್~ ಮ್ಯೂಸಿಕ್ ಆಲ್ಬಮ್ ಬಿಡುಗಡೆ. ಅನಾಥ ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ರೂಪುಗೊಂಡಿರುವ `ಉತ್ಥಾನ್~ ಪ್ರಸ್ತುತಪಡಿಸಲು ಈ ಕಾರ್ಯಕ್ರಮ ನಡೆಸಿಕೊಡಲಾಯಿತು.<br /> <br /> ಅನಾಥ ಮಕ್ಕಳಿಗೆ ಆಶ್ರಯ ನೀಡಿರುವ `ಕಡೇಶ್ ಹೋಮ್~ ನ ಮಕ್ಕಳ ಸಾಮರ್ಥ್ಯ, ಕೌಶಲ್ಯವನ್ನು ಜಗತ್ತಿಗೆ ಪರಿಚಯಿಸಲು ಮಕ್ಕಳೇ ಹಾಡಿದ `ಉತ್ಥಾನ್~ ಮ್ಯೂಸಿಕ್ ಆಲ್ಬಮ್ ಹೊರತರಲಾಗಿದೆ. ಅದರಿಂದ ಬರುವ ಹಣವನ್ನು ಅವರ ಅಭಿವೃದ್ಧಿಗೆ ವಿನಿಯೋಗಿಸಲು ಈ ಕಾರ್ಯಕ್ರಮ ನಡೆದಿತ್ತು. ಅನಾಥ ಮಕ್ಕಳ ಜೀವನ ಗುಣಮಟ್ಟವನ್ನು ಸುಧಾರಿಸಲು ಇಲ್ಲಿ ಹಲವು ಸಂಘ ಸಂಸ್ಥೆ, ಮ್ಯೂಸಿಕ್ ಬ್ಯಾಂಡ್ಗಳು ಕೈಜೋಡಿಸಿದ್ದವು.<br /> <br /> ಕಾರ್ಯಕ್ರಮವನ್ನು ಕೇಂದ್ರ ಯೋಜನಾ ಖಾತೆಯ ಮಾಜಿ ಸಚಿವ ಎಂ. ವಿ. ರಾಜಶೇಖರನ್ ದೀಪ ಬೆಳಗಿಸಿ ಉದ್ಘಾಟಿಸಿದರು. `ಈ ಮುದ್ದು ಮಕ್ಕಳ ಜೀವನವೂ ದೀಪದಂತೆ ಪ್ರಜ್ವಲಗೊಳ್ಳಲಿ, ಅವರ ಬದುಕು ಕತ್ತಲಲ್ಲಿ ಕಮರದೆ, ದೀಪದಂತೆ ಬೆಳಗಲಿ~ ಎಂದು ಹಾರೈಸಿದರು. `ಇವರು ಅನಾಥರಲ್ಲ, ನಾವೆಲ್ಲರೂ ಒಂದೇ. ಇವರ ಬದುಕನ್ನು ಸುಧಾರಿಸಲು ಎಲ್ಲರೂ ಒಗ್ಗೂಡುವ ಅವಶ್ಯಕತೆಯಿದೆ~ ಎಂದು ನುಡಿದರು.<br /> <br /> ನಂತರ ಒಡಿಶಾದ ಪ್ರಸಿದ್ಧ ನೃತ್ಯಗಾತಿ ಅಶ್ವಿನಿ ರಘುನಾಥ್ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ ನಡೆಯಿತು. ಈ ನೃತ್ಯಕ್ಕೆ ಎಲ್ಲೆಡೆಯಿಂದಲೂ ಕರತಾಡನ ಕೇಳಿಬಂದಿತ್ತು. ಈ ನೃತ್ಯ ಕಾರ್ಯಕ್ರಮಕ್ಕೆ ಕಳೆ ತಂದಿತ್ತು. <br /> <br /> ನಂತರ `ಉತ್ಥಾನ್~ ಮ್ಯೂಸಿಕ್ ಆಲ್ಬಮ್ ಅನ್ನು ಸಂಗೀತ ನಿರ್ದೇಶಕ ಅಗ್ನೆಲ್ ರೋಮನ್ ಬಿಡುಗಡೆಗೊಳಿಸಿದರು. `ಈ ಆಲ್ಬಮ್ನಲ್ಲಿ ಒಟ್ಟು ಏಳು ಹಾಡುಗಳಿವೆ. <br /> </p>.<p>ಆರು ಹಾಡುಗಳನ್ನು ಮಕ್ಕಳು ಹಾಡಿದ್ದಾರೆ. ಟೈಟಲ್ ಹಾಡನ್ನು ಪಾಕಿಸ್ತಾನಿ ಸೂಫಿ ಸಂಗೀತಗಾರ ಸಾಜಿದ್ ಅಲಿ ಗಫೂರ್ ಹಾಡಿದ್ದಾರೆ. ಈ ಹಾಡುಗಳು ಮತ್ತು ಸಂಗೀತ ಸಂಯೋಜನೆ ಎಲ್ಲರ ಮನತಟ್ಟುತ್ತದೆ~ ಎಂದರು. ಈ ಹಾಡಿಗೆ ಸಾಹಿತ್ಯ ರೂಪಿಸಿದ್ದ ಅರುಣ್ ಕುಮಾರ್ ಕೂಡ ಎಲ್ಲರನ್ನು ರಂಜಿಸಲು ಇಲ್ಲಿ ಬಂದಿದ್ದರು. `ಮಕ್ಕಳ ನೋವು, ನಲಿವು, ಸಂತಸ, ಬದುಕು ಎಲ್ಲವೂ ಈ ಹಾಡಿನಲ್ಲಿ ಅಡಗಿದೆ, ಅದನ್ನು ಕೇಳಿ ಸವಿಯಬೇಕಷ್ಟೆ~ ಎಂದರು.<br /> <br /> ನಂತರ ಪಾಕಿಸ್ತಾನದ ಪ್ರಸಿದ್ಧ ಗಾಯಕ ಸಾಜಿದ್ ಅಲಿ ಗಫೂರ್ ಅವರ ಸಂಗೀತ ಸಂಯೋಜನೆಯ ತುಣುಕನ್ನು ಅಲ್ಲಿ ವಿಡಿಯೋ ಮೂಲಕ ಪ್ರದರ್ಶಿಸಲಾಯಿತು. ಅವರ ಸಂಯೋಜನೆಯ ಸಂಗೀತ ಸಾಧನಗಳ ಕಛೇರಿಯನ್ನು ಒಂದಷ್ಟು ಹೊತ್ತು ಅಲ್ಲಿ ತೋರಿಸಲಾಯಿತು. <br /> <br /> ಇದಾದ ನಂತರದ ಸರದಿ ಭಾರತೀಯ ಸಂಗೀತ ಬ್ಯಾಂಡ್ಗಳಾದ `ಅಗಂ~ ಮತ್ತು `ಎಕಾ~ದ್ದಾಗಿತ್ತು. ಅಗಂ ತಂಡ ಕಾರ್ನಾಟಿಕ್ ರಾಕ್ ಸಂಗೀತವನ್ನು ವಿಭಿನ್ನವಾಗಿ ನಡೆಸಿಕೊಟ್ಟಿತು. ಶಾಸ್ತ್ರೀಯ ಗಾಯನಕ್ಕೆ ರಾಕ್ ಸಂಗೀತವನ್ನು ಬೆರೆಸಿ ಹಾಡಿದ್ದು ಅಲ್ಲಿದ್ದವರಿಗೆ ಸಂಗೀತದ ಹುಚ್ಚು ಹಿಡಿಸಿತ್ತು. ಶಾಸ್ತ್ರೀಯ ಹಾಡುಗಳಿಗೆ ಆಧುನಿಕ ಸ್ಪರ್ಶ ನೀಡಿದರೆ ಹೇಗಿರುತ್ತೆ ಎಂಬುದನ್ನು ವಿಭಿನ್ನವಾಗಿ ಪರಿಚಯಿಸಿದ್ದು ಈ ಬ್ಯಾಂಡ್. ಹಲವು ಹಿಂದಿ, ಮಲೆಯಾಳಂ ಹಾಡುಗಳನ್ನು ಗಿಟಾರ್, ಪಿಯಾನೊ, ಡ್ರಂ ಇವುಗಳ ಬಡಿದೆಬ್ಬಿಸುವ ಶಬ್ದದೊಂದಿಗೆ ಕೇಳಿಸಿದ್ದರು. ಆ ಸಂಗೀತಕ್ಕೆ ಹೆಜ್ಜೆ ಹಾಕಲು ಅದಾಗಲೇ ಹಿಂದಿನ ಸಾಲಿನವರು ಆರಂಭಿಸಿದ್ದರು. <br /> <br /> ಇನ್ನು ಸ್ವತಂತ್ರ ರಾಕ್ ಬ್ಯಾಂಡ್ನದ್ದು ಇನ್ನೂ ವಿಭಿನ್ನ. ಹಾಡಿನೊಂದಿಗೆ ನೃತ್ಯಕ್ಕೂ ಹೆಜ್ಜೆ ಹಾಕುತ್ತಿದ ತಂಡಕ್ಕೆ ಪ್ರೇಕ್ಷಕರ ಕಡೆಯಿಂದ ಸಂಪೂರ್ಣ ಪ್ರೋತ್ಸಾಹ. ಆ ತಂಡ ತನ್ನ ಹೆಸರಿಗೆ ತಕ್ಕಂತೆ ಹಾಡಿ ರಂಜಿಸಿತ್ತು. ಹಾಡೆಂದರೆ ಹೀಗಿರಬೇಕು ಎಂಬ ಹೊಗಳಿಕೆಯೊಂದಿಗೆ ಎಲ್ಲರೂ ಒನ್ಸ್ ಮೋರ್ ಎಂದು ಕೂಗುತ್ತಿದ್ದರು. <br /> <br /> ಸಂಜೆ 5ಕ್ಕೆ ಆರಂಭವಾದ ಈ ಸಂಗೀತ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ರಾತ್ರಿ ಹತ್ತಾಗಿತ್ತು. ಸಂಗೀತದ ರಸಸಂಜೆಯಲ್ಲಿ ತೇಲಿದ್ದ ಜನರ ಬಾಯಲ್ಲಿ ಮನೆಗೆ ಮರಳುವಾಗಲೂ ಸಂಗೀತ ಗುನುಗುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಲ್ಲಿ ಎಲ್ಲೆಲ್ಲೂ ಸಂಗೀತವೇ ಆವರಿಸಿಕೊಂಡಿತ್ತು. ಹಿರಿಯರು, ಮಕ್ಕಳು, ಯುವಕ ಯುವತಿಯರು ಎಲ್ಲರ ಬಾಯಲ್ಲೂ ಹಾಡುಗಳು ಅನುರಣಿಸುತ್ತಿದ್ದವು. ಸಂಗೀತ ಎಲ್ಲರ ಹೃದಯ ತಟ್ಟುವ ಮಾಧ್ಯಮ, ಅಷ್ಟೇ ಅಲ್ಲ, ಅನಾಥ ಮಕ್ಕಳ ಜೀವನವನ್ನು ಸುಧಾರಿಸುವ ಚೈತನ್ಯ ಸಂಗೀತಕ್ಕಿದೆ ಎಂಬುದು ಇಲ್ಲಿ ನಿರೂಪಿತಗೊಂಡಿತ್ತು.<br /> <br /> ಅದು ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ನಡೆದ `ಮೆಗಾ ಮ್ಯೂಸಿಕ್ ಹಬ್ಬ~. ಆದರೆ ಇದು ಕೇವಲ ಸಂಗೀತ ಕಾರ್ಯಕ್ರಮ ಆಗಿರಲಿಲ್ಲ, ಇದರ ಹಿಂದೆ ಅರ್ಥಪೂರ್ಣ ಉದ್ದೇಶವೊಂದಿತ್ತು. ಅನಾಥ ಮಕ್ಕಳಿಗೆ ಸೂರು ಕಲ್ಪಿಸುವ ಉದ್ದೇಶದಿಂದ `ಕಾರ್ಟ್ಮನ್ ಸೊಸೈಟಿ~ ಮತ್ತು `ಸರಿಗಮ~ ಸಂಸ್ಥೆಗಳು ಒಟ್ಟುಗೂಡಿ ಈ ಸಂಗೀತ ಸಂಜೆಯನ್ನು ಆಯೋಜಿಸಿದ್ದವು. <br /> <br /> ಈ ಸಮಾರಂಭದ ಮುಖ್ಯ ಉದ್ದೇಶ `ಉತ್ಥಾನ್~ ಮ್ಯೂಸಿಕ್ ಆಲ್ಬಮ್ ಬಿಡುಗಡೆ. ಅನಾಥ ಮಕ್ಕಳಿಂದ, ಮಕ್ಕಳಿಗಾಗಿ, ಮಕ್ಕಳಿಗೋಸ್ಕರ ರೂಪುಗೊಂಡಿರುವ `ಉತ್ಥಾನ್~ ಪ್ರಸ್ತುತಪಡಿಸಲು ಈ ಕಾರ್ಯಕ್ರಮ ನಡೆಸಿಕೊಡಲಾಯಿತು.<br /> <br /> ಅನಾಥ ಮಕ್ಕಳಿಗೆ ಆಶ್ರಯ ನೀಡಿರುವ `ಕಡೇಶ್ ಹೋಮ್~ ನ ಮಕ್ಕಳ ಸಾಮರ್ಥ್ಯ, ಕೌಶಲ್ಯವನ್ನು ಜಗತ್ತಿಗೆ ಪರಿಚಯಿಸಲು ಮಕ್ಕಳೇ ಹಾಡಿದ `ಉತ್ಥಾನ್~ ಮ್ಯೂಸಿಕ್ ಆಲ್ಬಮ್ ಹೊರತರಲಾಗಿದೆ. ಅದರಿಂದ ಬರುವ ಹಣವನ್ನು ಅವರ ಅಭಿವೃದ್ಧಿಗೆ ವಿನಿಯೋಗಿಸಲು ಈ ಕಾರ್ಯಕ್ರಮ ನಡೆದಿತ್ತು. ಅನಾಥ ಮಕ್ಕಳ ಜೀವನ ಗುಣಮಟ್ಟವನ್ನು ಸುಧಾರಿಸಲು ಇಲ್ಲಿ ಹಲವು ಸಂಘ ಸಂಸ್ಥೆ, ಮ್ಯೂಸಿಕ್ ಬ್ಯಾಂಡ್ಗಳು ಕೈಜೋಡಿಸಿದ್ದವು.<br /> <br /> ಕಾರ್ಯಕ್ರಮವನ್ನು ಕೇಂದ್ರ ಯೋಜನಾ ಖಾತೆಯ ಮಾಜಿ ಸಚಿವ ಎಂ. ವಿ. ರಾಜಶೇಖರನ್ ದೀಪ ಬೆಳಗಿಸಿ ಉದ್ಘಾಟಿಸಿದರು. `ಈ ಮುದ್ದು ಮಕ್ಕಳ ಜೀವನವೂ ದೀಪದಂತೆ ಪ್ರಜ್ವಲಗೊಳ್ಳಲಿ, ಅವರ ಬದುಕು ಕತ್ತಲಲ್ಲಿ ಕಮರದೆ, ದೀಪದಂತೆ ಬೆಳಗಲಿ~ ಎಂದು ಹಾರೈಸಿದರು. `ಇವರು ಅನಾಥರಲ್ಲ, ನಾವೆಲ್ಲರೂ ಒಂದೇ. ಇವರ ಬದುಕನ್ನು ಸುಧಾರಿಸಲು ಎಲ್ಲರೂ ಒಗ್ಗೂಡುವ ಅವಶ್ಯಕತೆಯಿದೆ~ ಎಂದು ನುಡಿದರು.<br /> <br /> ನಂತರ ಒಡಿಶಾದ ಪ್ರಸಿದ್ಧ ನೃತ್ಯಗಾತಿ ಅಶ್ವಿನಿ ರಘುನಾಥ್ ಅವರಿಂದ ಒಡಿಸ್ಸಿ ನೃತ್ಯ ಪ್ರದರ್ಶನ ನಡೆಯಿತು. ಈ ನೃತ್ಯಕ್ಕೆ ಎಲ್ಲೆಡೆಯಿಂದಲೂ ಕರತಾಡನ ಕೇಳಿಬಂದಿತ್ತು. ಈ ನೃತ್ಯ ಕಾರ್ಯಕ್ರಮಕ್ಕೆ ಕಳೆ ತಂದಿತ್ತು. <br /> <br /> ನಂತರ `ಉತ್ಥಾನ್~ ಮ್ಯೂಸಿಕ್ ಆಲ್ಬಮ್ ಅನ್ನು ಸಂಗೀತ ನಿರ್ದೇಶಕ ಅಗ್ನೆಲ್ ರೋಮನ್ ಬಿಡುಗಡೆಗೊಳಿಸಿದರು. `ಈ ಆಲ್ಬಮ್ನಲ್ಲಿ ಒಟ್ಟು ಏಳು ಹಾಡುಗಳಿವೆ. <br /> </p>.<p>ಆರು ಹಾಡುಗಳನ್ನು ಮಕ್ಕಳು ಹಾಡಿದ್ದಾರೆ. ಟೈಟಲ್ ಹಾಡನ್ನು ಪಾಕಿಸ್ತಾನಿ ಸೂಫಿ ಸಂಗೀತಗಾರ ಸಾಜಿದ್ ಅಲಿ ಗಫೂರ್ ಹಾಡಿದ್ದಾರೆ. ಈ ಹಾಡುಗಳು ಮತ್ತು ಸಂಗೀತ ಸಂಯೋಜನೆ ಎಲ್ಲರ ಮನತಟ್ಟುತ್ತದೆ~ ಎಂದರು. ಈ ಹಾಡಿಗೆ ಸಾಹಿತ್ಯ ರೂಪಿಸಿದ್ದ ಅರುಣ್ ಕುಮಾರ್ ಕೂಡ ಎಲ್ಲರನ್ನು ರಂಜಿಸಲು ಇಲ್ಲಿ ಬಂದಿದ್ದರು. `ಮಕ್ಕಳ ನೋವು, ನಲಿವು, ಸಂತಸ, ಬದುಕು ಎಲ್ಲವೂ ಈ ಹಾಡಿನಲ್ಲಿ ಅಡಗಿದೆ, ಅದನ್ನು ಕೇಳಿ ಸವಿಯಬೇಕಷ್ಟೆ~ ಎಂದರು.<br /> <br /> ನಂತರ ಪಾಕಿಸ್ತಾನದ ಪ್ರಸಿದ್ಧ ಗಾಯಕ ಸಾಜಿದ್ ಅಲಿ ಗಫೂರ್ ಅವರ ಸಂಗೀತ ಸಂಯೋಜನೆಯ ತುಣುಕನ್ನು ಅಲ್ಲಿ ವಿಡಿಯೋ ಮೂಲಕ ಪ್ರದರ್ಶಿಸಲಾಯಿತು. ಅವರ ಸಂಯೋಜನೆಯ ಸಂಗೀತ ಸಾಧನಗಳ ಕಛೇರಿಯನ್ನು ಒಂದಷ್ಟು ಹೊತ್ತು ಅಲ್ಲಿ ತೋರಿಸಲಾಯಿತು. <br /> <br /> ಇದಾದ ನಂತರದ ಸರದಿ ಭಾರತೀಯ ಸಂಗೀತ ಬ್ಯಾಂಡ್ಗಳಾದ `ಅಗಂ~ ಮತ್ತು `ಎಕಾ~ದ್ದಾಗಿತ್ತು. ಅಗಂ ತಂಡ ಕಾರ್ನಾಟಿಕ್ ರಾಕ್ ಸಂಗೀತವನ್ನು ವಿಭಿನ್ನವಾಗಿ ನಡೆಸಿಕೊಟ್ಟಿತು. ಶಾಸ್ತ್ರೀಯ ಗಾಯನಕ್ಕೆ ರಾಕ್ ಸಂಗೀತವನ್ನು ಬೆರೆಸಿ ಹಾಡಿದ್ದು ಅಲ್ಲಿದ್ದವರಿಗೆ ಸಂಗೀತದ ಹುಚ್ಚು ಹಿಡಿಸಿತ್ತು. ಶಾಸ್ತ್ರೀಯ ಹಾಡುಗಳಿಗೆ ಆಧುನಿಕ ಸ್ಪರ್ಶ ನೀಡಿದರೆ ಹೇಗಿರುತ್ತೆ ಎಂಬುದನ್ನು ವಿಭಿನ್ನವಾಗಿ ಪರಿಚಯಿಸಿದ್ದು ಈ ಬ್ಯಾಂಡ್. ಹಲವು ಹಿಂದಿ, ಮಲೆಯಾಳಂ ಹಾಡುಗಳನ್ನು ಗಿಟಾರ್, ಪಿಯಾನೊ, ಡ್ರಂ ಇವುಗಳ ಬಡಿದೆಬ್ಬಿಸುವ ಶಬ್ದದೊಂದಿಗೆ ಕೇಳಿಸಿದ್ದರು. ಆ ಸಂಗೀತಕ್ಕೆ ಹೆಜ್ಜೆ ಹಾಕಲು ಅದಾಗಲೇ ಹಿಂದಿನ ಸಾಲಿನವರು ಆರಂಭಿಸಿದ್ದರು. <br /> <br /> ಇನ್ನು ಸ್ವತಂತ್ರ ರಾಕ್ ಬ್ಯಾಂಡ್ನದ್ದು ಇನ್ನೂ ವಿಭಿನ್ನ. ಹಾಡಿನೊಂದಿಗೆ ನೃತ್ಯಕ್ಕೂ ಹೆಜ್ಜೆ ಹಾಕುತ್ತಿದ ತಂಡಕ್ಕೆ ಪ್ರೇಕ್ಷಕರ ಕಡೆಯಿಂದ ಸಂಪೂರ್ಣ ಪ್ರೋತ್ಸಾಹ. ಆ ತಂಡ ತನ್ನ ಹೆಸರಿಗೆ ತಕ್ಕಂತೆ ಹಾಡಿ ರಂಜಿಸಿತ್ತು. ಹಾಡೆಂದರೆ ಹೀಗಿರಬೇಕು ಎಂಬ ಹೊಗಳಿಕೆಯೊಂದಿಗೆ ಎಲ್ಲರೂ ಒನ್ಸ್ ಮೋರ್ ಎಂದು ಕೂಗುತ್ತಿದ್ದರು. <br /> <br /> ಸಂಜೆ 5ಕ್ಕೆ ಆರಂಭವಾದ ಈ ಸಂಗೀತ ಕಾರ್ಯಕ್ರಮ ಮುಗಿಯುವ ಹೊತ್ತಿಗೆ ರಾತ್ರಿ ಹತ್ತಾಗಿತ್ತು. ಸಂಗೀತದ ರಸಸಂಜೆಯಲ್ಲಿ ತೇಲಿದ್ದ ಜನರ ಬಾಯಲ್ಲಿ ಮನೆಗೆ ಮರಳುವಾಗಲೂ ಸಂಗೀತ ಗುನುಗುತ್ತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>