<p><strong>ಬೆಂಗಳೂರು: </strong>ಬಿಗ್ ಬಜಾರ್ನ ರಾಜಾಜಿನಗರದ ಹೊಸ ಫ್ಯಾಮಿಲಿ ಸೆಂಟರ್ನ ಪ್ರಾರಂಭೋತ್ಸವದ ಅಂಗವಾಗಿ ಅನಾಥ ಮಕ್ಕಳಿಗೆ ದೇಣಿಗೆ ನೀಡಲು ಮಹಾತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.<br /> ನಟ ಶಿವರಾಜ್ಕುಮಾರ್ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿದರು. <br /> <br /> 53 ಅನಾಥ ಮಕ್ಕಳಿಗೆ ವಸತಿ ಹಾಗೂ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜಾಜಿನಗರದ ಹಲವು ಸ್ಥಳೀಯರು ನೆರವು ನೀಡಿದರು. ದೇಣಿಗೆ ನೀಡ ಬಯಸುವ ಎಲ್ಲರಿಗೂ ಬಾಗಿಲು ತೆರೆದಿದೆ. ನಗದು ಅಥವಾ ಇತರೆ ಯಾವುದೇರೂಪದಲ್ಲಿ ನೆರವು ನೀಡಬಹುದು.<br /> <br /> `ಮನವ~ ಸ್ವಯಂಸೇವಾ ಸಂಸ್ಥೆಯ 15ಕ್ಕೂ ಹೆಚ್ಚು ಮಕ್ಕಳು ಮಹಾತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಕ್ಕಡಿಯ ಒಂದು ಭಾಗದಲ್ಲಿ ಪ್ರತಿ ಮಗುವನ್ನು ಕೂರಿಸಿ, ಇನ್ನೊಂದು ಭಾಗದಲ್ಲಿ ಸಮ ತೂಕದ ದೇಣಿಗೆ ಇಟ್ಟು ತೂಗಲಾಯಿತು. ಶಿವರಾಜ್ಕುಮಾರ್ ತಾವೇ ಮೊದಲು ದೇಣಿಗೆ ನೀಡಿ ಇತರರನ್ನು ನೆರವು ನೀಡಲು ಉತ್ತೇಜಿಸಿದರು.<br /> <br /> `ಮಹಾತುಲಾಭಾರ ಅನಾಥ ಮಕ್ಕಳಿಗೆ ಹಣ ಸಂಗ್ರಹಿಸಲು ಭಿನ್ನ ವೇದಿಕೆ. ಈ ಕಾರ್ಯಕ್ರಮದಲ್ಲಿ ಬಿಗ್ಬಜಾರ್ನೊಂದಿಗೆ ಕೈಜೋಡಿಸಲು ಹೆಮ್ಮೆಯಾಗುತ್ತಿದೆ~ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. <br /> <br /> ಮಹಾತುಲಾಭಾರದಲ್ಲಿ ಪಾಲ್ಗೊಳ್ಳಲು 20 ಸಾವಿರಕ್ಕೂ ಅಧಿಕ ನಿವಾಸಿಗಳನ್ನು ಕೋರಲಾಗಿತ್ತು. ಮೊದಲ 100 ದೇಣಿಗೆಗಳನ್ನು ನಟ ಶಿವರಾಜ್ಕುಮಾರ್ಸ್ವೀಕರಿಸಿದರು. <br /> <br /> ದೇಣಿಗೆ ನೀಡಿದವರಿಗೆ ಬಿಗ್ಬಜಾರ್ ವತಿಯಿಂದ ಶೀಘ್ರ ಕೃತಜ್ಞತಾ ಪತ್ರ ಸಲ್ಲಿಸಲಾಗುವುದು ಎಂದು ಬಿಗ್ಬಜಾರ್ ದಕ್ಷಿಣ ವಲಯದ ಮುಖ್ಯಸ್ಥ ವೆಂಕಟೇಶ್ವರ ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬಿಗ್ ಬಜಾರ್ನ ರಾಜಾಜಿನಗರದ ಹೊಸ ಫ್ಯಾಮಿಲಿ ಸೆಂಟರ್ನ ಪ್ರಾರಂಭೋತ್ಸವದ ಅಂಗವಾಗಿ ಅನಾಥ ಮಕ್ಕಳಿಗೆ ದೇಣಿಗೆ ನೀಡಲು ಮಹಾತುಲಾಭಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.<br /> ನಟ ಶಿವರಾಜ್ಕುಮಾರ್ ತುಲಾಭಾರ ಕಾರ್ಯಕ್ರಮ ಉದ್ಘಾಟಿಸಿದರು. <br /> <br /> 53 ಅನಾಥ ಮಕ್ಕಳಿಗೆ ವಸತಿ ಹಾಗೂ ಶಿಕ್ಷಣ ಕಲ್ಪಿಸುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜಾಜಿನಗರದ ಹಲವು ಸ್ಥಳೀಯರು ನೆರವು ನೀಡಿದರು. ದೇಣಿಗೆ ನೀಡ ಬಯಸುವ ಎಲ್ಲರಿಗೂ ಬಾಗಿಲು ತೆರೆದಿದೆ. ನಗದು ಅಥವಾ ಇತರೆ ಯಾವುದೇರೂಪದಲ್ಲಿ ನೆರವು ನೀಡಬಹುದು.<br /> <br /> `ಮನವ~ ಸ್ವಯಂಸೇವಾ ಸಂಸ್ಥೆಯ 15ಕ್ಕೂ ಹೆಚ್ಚು ಮಕ್ಕಳು ಮಹಾತುಲಾಭಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ತಕ್ಕಡಿಯ ಒಂದು ಭಾಗದಲ್ಲಿ ಪ್ರತಿ ಮಗುವನ್ನು ಕೂರಿಸಿ, ಇನ್ನೊಂದು ಭಾಗದಲ್ಲಿ ಸಮ ತೂಕದ ದೇಣಿಗೆ ಇಟ್ಟು ತೂಗಲಾಯಿತು. ಶಿವರಾಜ್ಕುಮಾರ್ ತಾವೇ ಮೊದಲು ದೇಣಿಗೆ ನೀಡಿ ಇತರರನ್ನು ನೆರವು ನೀಡಲು ಉತ್ತೇಜಿಸಿದರು.<br /> <br /> `ಮಹಾತುಲಾಭಾರ ಅನಾಥ ಮಕ್ಕಳಿಗೆ ಹಣ ಸಂಗ್ರಹಿಸಲು ಭಿನ್ನ ವೇದಿಕೆ. ಈ ಕಾರ್ಯಕ್ರಮದಲ್ಲಿ ಬಿಗ್ಬಜಾರ್ನೊಂದಿಗೆ ಕೈಜೋಡಿಸಲು ಹೆಮ್ಮೆಯಾಗುತ್ತಿದೆ~ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು. <br /> <br /> ಮಹಾತುಲಾಭಾರದಲ್ಲಿ ಪಾಲ್ಗೊಳ್ಳಲು 20 ಸಾವಿರಕ್ಕೂ ಅಧಿಕ ನಿವಾಸಿಗಳನ್ನು ಕೋರಲಾಗಿತ್ತು. ಮೊದಲ 100 ದೇಣಿಗೆಗಳನ್ನು ನಟ ಶಿವರಾಜ್ಕುಮಾರ್ಸ್ವೀಕರಿಸಿದರು. <br /> <br /> ದೇಣಿಗೆ ನೀಡಿದವರಿಗೆ ಬಿಗ್ಬಜಾರ್ ವತಿಯಿಂದ ಶೀಘ್ರ ಕೃತಜ್ಞತಾ ಪತ್ರ ಸಲ್ಲಿಸಲಾಗುವುದು ಎಂದು ಬಿಗ್ಬಜಾರ್ ದಕ್ಷಿಣ ವಲಯದ ಮುಖ್ಯಸ್ಥ ವೆಂಕಟೇಶ್ವರ ಕುಮಾರ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>