<p>ಮೂಡುಬಿದಿರೆ: `ಅನ್ಯಾಯದಲ್ಲಿ ಸಂಪತ್ತು ಗಳಿಸಿ ಶ್ರೀಮಂತರಾದವರಿಗೆ ತೃಪ್ತಿ ಎನ್ನುವುದೇ ಇಲ್ಲ. ಇಂತಹ ಸಂಪತ್ತು ಶಾಶ್ವತ ಅಲ್ಲ~ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು. <br /> <br /> ಬುಧವಾರ ವಿದ್ಯಾಗಿರಿಯಲ್ಲಿ ನಡೆದ ಮಿಜಾರುಗುತ್ತು ಆನಂದ ಆಳ್ವ ಅವರ 95ನೇ ಹುಟ್ಟುಹಬ್ಬದ ಪ್ರಯುಕ್ತ ಆಳ್ವಾಸ್ ಶಿಕ್ಷಣ ಸಂಸ್ಥೆಯ ರಜತಾದ್ರಿ ಮತ್ತು ಕೊಡಚಾದ್ರಿ ವಸತಿ ನಿಲಯ ಮತ್ತು ಮೂಲ್ಕಿ ಭಾಸ್ಕರ ಸರಸ್ವತಿ ಕ್ರೀಡಾ ಹಾಸ್ಟೆಲ್ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 66 ವರ್ಷಗಳಾಗಿವೆ. ಇಂದಿನ ಪರಿಸ್ಥಿತಿಯನ್ನು ಗಮನಿಸಿದಾಗ ನಾವು ಎಲ್ಲೊ ಒಂದು ಕಡೆ ದಾರಿ ತಪ್ಪಿದ ಅನುಭವವಾಗುತ್ತಿದೆ. ಸಮಾಜದಲ್ಲಿ ದುರಾಸೆ ಹೆಚ್ಚಾಗುತ್ತಿದೆ. ಅನ್ಯಾಯದಲ್ಲಿ ಗಳಿಸಿ ಶ್ರೀಮಂತರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. <br /> <br /> ಭ್ರಷ್ಟಾಚಾರ ನಮ್ಮ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಸರ್ಕಾರಿ ನೌಕರರು ತಾವು ಸಮಾಜ ಸೇವಕರೆನ್ನುವುದನ್ನು ಮರೆತಿದ್ದಾರೆ. ಇದರಿಂದಾಗಿ ಮಾನವೀಯತೆ. ಸಂಸ್ಕೃತಿ ಮಾಯವಾಗಿದೆ~ ಎಂದು ವಿಷಾದ ವ್ಯಕ್ತಪಡಿಸಿದರು. <br /> <br /> ಮಂಗಳೂರಿನ ಕೊಣಾಜೆಯಲ್ಲಿ ನಿರ್ಮಾಣವಾಗುತ್ತಿರುವ ಲಯನ್ಸ್ ಮುಕ್ತಿ ಭೂಮಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಡಾ. ಮೋಹನ್ ಆಳ್ವ ಅವರು ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ಲಯನ್ 324 ಡಿ5ರ ಮಾಜಿ ಸಂಚಾಲಕಿ ವಿಜಯಲಕ್ಷ್ಮಿ ಪ್ರಸಾದ್ ರೈ ಅವರಿಗೆ ಹಸ್ತಾಂತರಿಸಿದರು.<br /> <br /> ಕೊಯಮುತ್ತೂರಿನ ಸ್ಟೇನ್ ಕಂಪೆನಿಯ ಕೆ.ಎಸ್ ಹೆಗ್ಡೆ, ಉದ್ಯಮಿ ಅರವಿಂದ ಪೂಂಜ, ಬಾಲಕೃಷ್ಣ ಅಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ , ಜಯಶ್ರೀ ಎ. ಶೆಟ್ಟಿ, ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ, ವರ್ಷಾ ವಿ. ಆಳ್ವ, ವಿನಯ ಆಳ್ವ ಇದ್ದರು. ಸರ್ಕಾರದ ವಿಪಕ್ಷ ಮುಖ್ಯ ಸಚೇತಕ ಅಭಯಚಂದ್ರ ಅವರು ಆನಂದ ಆಳ್ವ ಅವರ ಮನೆಗೆ ತೆರಳಿ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೂಡುಬಿದಿರೆ: `ಅನ್ಯಾಯದಲ್ಲಿ ಸಂಪತ್ತು ಗಳಿಸಿ ಶ್ರೀಮಂತರಾದವರಿಗೆ ತೃಪ್ತಿ ಎನ್ನುವುದೇ ಇಲ್ಲ. ಇಂತಹ ಸಂಪತ್ತು ಶಾಶ್ವತ ಅಲ್ಲ~ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಹೇಳಿದರು. <br /> <br /> ಬುಧವಾರ ವಿದ್ಯಾಗಿರಿಯಲ್ಲಿ ನಡೆದ ಮಿಜಾರುಗುತ್ತು ಆನಂದ ಆಳ್ವ ಅವರ 95ನೇ ಹುಟ್ಟುಹಬ್ಬದ ಪ್ರಯುಕ್ತ ಆಳ್ವಾಸ್ ಶಿಕ್ಷಣ ಸಂಸ್ಥೆಯ ರಜತಾದ್ರಿ ಮತ್ತು ಕೊಡಚಾದ್ರಿ ವಸತಿ ನಿಲಯ ಮತ್ತು ಮೂಲ್ಕಿ ಭಾಸ್ಕರ ಸರಸ್ವತಿ ಕ್ರೀಡಾ ಹಾಸ್ಟೆಲ್ ಉದ್ಘಾಟಿಸಿ ಅವರು ಮಾತನಾಡಿದರು.<br /> <br /> `ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 66 ವರ್ಷಗಳಾಗಿವೆ. ಇಂದಿನ ಪರಿಸ್ಥಿತಿಯನ್ನು ಗಮನಿಸಿದಾಗ ನಾವು ಎಲ್ಲೊ ಒಂದು ಕಡೆ ದಾರಿ ತಪ್ಪಿದ ಅನುಭವವಾಗುತ್ತಿದೆ. ಸಮಾಜದಲ್ಲಿ ದುರಾಸೆ ಹೆಚ್ಚಾಗುತ್ತಿದೆ. ಅನ್ಯಾಯದಲ್ಲಿ ಗಳಿಸಿ ಶ್ರೀಮಂತರಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. <br /> <br /> ಭ್ರಷ್ಟಾಚಾರ ನಮ್ಮ ವ್ಯವಸ್ಥೆಯನ್ನು ಹಾಳು ಮಾಡುತ್ತಿದೆ. ಸರ್ಕಾರಿ ನೌಕರರು ತಾವು ಸಮಾಜ ಸೇವಕರೆನ್ನುವುದನ್ನು ಮರೆತಿದ್ದಾರೆ. ಇದರಿಂದಾಗಿ ಮಾನವೀಯತೆ. ಸಂಸ್ಕೃತಿ ಮಾಯವಾಗಿದೆ~ ಎಂದು ವಿಷಾದ ವ್ಯಕ್ತಪಡಿಸಿದರು. <br /> <br /> ಮಂಗಳೂರಿನ ಕೊಣಾಜೆಯಲ್ಲಿ ನಿರ್ಮಾಣವಾಗುತ್ತಿರುವ ಲಯನ್ಸ್ ಮುಕ್ತಿ ಭೂಮಿಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಡಾ. ಮೋಹನ್ ಆಳ್ವ ಅವರು ಒಂದು ಲಕ್ಷ ರೂಪಾಯಿ ದೇಣಿಗೆಯನ್ನು ಲಯನ್ 324 ಡಿ5ರ ಮಾಜಿ ಸಂಚಾಲಕಿ ವಿಜಯಲಕ್ಷ್ಮಿ ಪ್ರಸಾದ್ ರೈ ಅವರಿಗೆ ಹಸ್ತಾಂತರಿಸಿದರು.<br /> <br /> ಕೊಯಮುತ್ತೂರಿನ ಸ್ಟೇನ್ ಕಂಪೆನಿಯ ಕೆ.ಎಸ್ ಹೆಗ್ಡೆ, ಉದ್ಯಮಿ ಅರವಿಂದ ಪೂಂಜ, ಬಾಲಕೃಷ್ಣ ಅಳ್ವ, ಮಾಜಿ ಸಚಿವ ಅಮರನಾಥ ಶೆಟ್ಟಿ , ಜಯಶ್ರೀ ಎ. ಶೆಟ್ಟಿ, ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ, ವರ್ಷಾ ವಿ. ಆಳ್ವ, ವಿನಯ ಆಳ್ವ ಇದ್ದರು. ಸರ್ಕಾರದ ವಿಪಕ್ಷ ಮುಖ್ಯ ಸಚೇತಕ ಅಭಯಚಂದ್ರ ಅವರು ಆನಂದ ಆಳ್ವ ಅವರ ಮನೆಗೆ ತೆರಳಿ ಹುಟ್ಟುಹಬ್ಬದ ಶುಭಾಶಯ ಸಲ್ಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>