<p>ಪುತ್ತೂರು: ಜನತೆಯ ಸಹಕಾರ ಮತ್ತು ಸಹಭಾಗಿತ್ವವಿದ್ದಲ್ಲಿ ಮಾತ್ರ ಅಭಿವೃದ್ಧಿ ಕೆಲಸಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ ಎಂದು ಪುರಸಭಾಧ್ಯಕ್ಷೆ ಕಮಲಾ ಆನಂದ್ ಹೇಳಿದರು. <br /> <br /> ಪುತ್ತೂರು ಪುರಸಭಾ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ ನೈತಾಡಿ ವ್ಯಾಪ್ತಿಯಲ್ಲಿ ಪುರಸಭಾ ವತಿಯಿಂದ ಅಳವಡಿಸಲಾದ ದಾರಿ ದೀಪ ವ್ಯವಸ್ಥೆಯನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.<br /> <br /> ಸ್ಥಳೀಯ ಸದಸ್ಯರಾದ ಪುರಸಭಾ ವಿಪಕ್ಷ ನಾಯಕ ಎಚ್, ಮಹಮ್ಮದ್ ಆಲಿ ಅವರು ಮಾತನಾಡಿ ಕೆಮ್ಮಿಂಜೆ ವಾರ್ಡಿನಲ್ಲಿ ಪುರಸಭಾ ವತಿಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದರು. <br /> <br /> ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು , ಸದಸ್ಯರಾದ ಲ್ಯಾನ್ಸಿ ಮಸ್ಕರೇನ್ಹಸ್ , ಉಷಾ ಬಾಲಕೃಷ್ಣ , ಅನ್ವರ್ ಖಾಸಿಂ , ಮುಖ್ಯಾಧಿಕಾರಿ ಸುಧಾಕರ್, ಸ್ಥಳಿಯ ಪ್ರಮುಖರಾದ ವಿಶ್ವನಾಥ ಟೈಲರ್ , ಜಾನ್ ಪಿರೇರಾ, ದಿಲೀಪ್ ಕುಮಾರ್ , ಅಬ್ದುಲ್ ಕುಂಞಿ , ಚೇತನ್, ರಫೀಕ್ ಮೊಟ್ಟೆತ್ತಡ್ಕ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪುತ್ತೂರು: ಜನತೆಯ ಸಹಕಾರ ಮತ್ತು ಸಹಭಾಗಿತ್ವವಿದ್ದಲ್ಲಿ ಮಾತ್ರ ಅಭಿವೃದ್ಧಿ ಕೆಲಸಗಳು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಸಾಧ್ಯ ಎಂದು ಪುರಸಭಾಧ್ಯಕ್ಷೆ ಕಮಲಾ ಆನಂದ್ ಹೇಳಿದರು. <br /> <br /> ಪುತ್ತೂರು ಪುರಸಭಾ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ ನೈತಾಡಿ ವ್ಯಾಪ್ತಿಯಲ್ಲಿ ಪುರಸಭಾ ವತಿಯಿಂದ ಅಳವಡಿಸಲಾದ ದಾರಿ ದೀಪ ವ್ಯವಸ್ಥೆಯನ್ನು ಅವರು ಸೋಮವಾರ ಉದ್ಘಾಟಿಸಿ ಮಾತನಾಡಿದರು.<br /> <br /> ಸ್ಥಳೀಯ ಸದಸ್ಯರಾದ ಪುರಸಭಾ ವಿಪಕ್ಷ ನಾಯಕ ಎಚ್, ಮಹಮ್ಮದ್ ಆಲಿ ಅವರು ಮಾತನಾಡಿ ಕೆಮ್ಮಿಂಜೆ ವಾರ್ಡಿನಲ್ಲಿ ಪುರಸಭಾ ವತಿಯಿಂದ ಸಾಕಷ್ಟು ಅಭಿವೃದ್ಧಿ ಕೆಲಸಗಳು ನಡೆದಿವೆ ಎಂದರು. <br /> <br /> ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು , ಸದಸ್ಯರಾದ ಲ್ಯಾನ್ಸಿ ಮಸ್ಕರೇನ್ಹಸ್ , ಉಷಾ ಬಾಲಕೃಷ್ಣ , ಅನ್ವರ್ ಖಾಸಿಂ , ಮುಖ್ಯಾಧಿಕಾರಿ ಸುಧಾಕರ್, ಸ್ಥಳಿಯ ಪ್ರಮುಖರಾದ ವಿಶ್ವನಾಥ ಟೈಲರ್ , ಜಾನ್ ಪಿರೇರಾ, ದಿಲೀಪ್ ಕುಮಾರ್ , ಅಬ್ದುಲ್ ಕುಂಞಿ , ಚೇತನ್, ರಫೀಕ್ ಮೊಟ್ಟೆತ್ತಡ್ಕ ಮತ್ತಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>