<p>ಇತ್ತೀಚೆಗೆ ನಾವು ಸಂಸಾರ ಸಮೇತ ಮಂತ್ರಾಲಯಕ್ಕೆ ಹೋಗಿದ್ದೆವು. ಅಲ್ಲಿಗೆ ಹೋದವರೆಲ್ಲಾ ಗುರು ರಾಘವೇಂದ್ರರು ತಪಗೈದ ಸ್ಥಳವೆಂದು ನಂಬಲಾಗಿರುವ ಪಂಚಮುಖಿ ಆಂಜನೇಯನ ದರ್ಶನಕ್ಕೆ ತೆರಳುವುದು ವಾಡಿಕೆ.<br /> <br /> ಅದರಂತೆಯೇ ನಾವು ಕೂಡ ತೆರಳಿದೆವು. ಪಂಚಮುಖಿ ಆಂಜನೇಯನ ದೇವಸ್ಥಾನವಿರುವುದು ಕರ್ನಾಟಕದಲ್ಲಿ, ಮಂತ್ರಾಲಯವಿರುವುದು ಆಂಧ್ರದಲ್ಲಿ. ಯಾವುದೇ ಉತ್ತರ ಕರ್ನಾಟಕದ ಹಳ್ಳಿಗಳಂತೆ ಅಲ್ಲಿಯೂ ಸಹಾ ಮೂಲಸೌಕರ್ಯ, ನೈರ್ಮಲ್ಯ ಇತ್ಯಾದಿಗಳನ್ನು ಹುಡುಕಿದರೂ ಸಿಗುವುದಿಲ್ಲ. ತುಂಗೆಯು ಪಕ್ಕದಲ್ಲಿಯೇ ಹರಿಯುತ್ತಿದ್ದರೂ ಕುಡಿಯುವ ನೀರಿಗೆ ತತ್ವಾರ. <br /> <br /> ಚೀನಾ ಸರ್ಕಾರವು ಸಮುದ್ರದ ಮೇಲೆ ನೂರಾರು ಕಿಲೋಮೀಟರ್ ಸೇತುವೆಯನ್ನು ಎರಡು ವರ್ಷಗಳಲ್ಲಿ ಕಟ್ಟಿ ಮುಗಿಸುತ್ತದೆ ಆದರೆ ನಮ್ಮ ಘನ ಸರ್ಕಾರಕ್ಕೆ ತುಂಗಾ ನದಿಯ ಮೇಲೆ ಸೇತುವೆಯನ್ನು ಕಟ್ಟಿ ಮುಗಿಸಲು ವರ್ಷಗಳೇ ಕಳೆದರೂ ಸಹಾ ಸಾಧ್ಯವಾಗಿಲ್ಲ.<br /> <br /> ಇನ್ನು ನಮ್ಮ ಜೀವವನ್ನು ತ್ರಿಚಕ್ರವಾಹನದ ಚಾಲಕನ ಕೈಯಲ್ಲಿ ಕೊಟ್ಟು ನೀರಿಲ್ಲದ ನದಿಯನ್ನು ದಾಟಿದರೂ ರಸ್ತೆಯೆಂಬ ವಸ್ತುವನ್ನು ಹುಡುಕಬೇಕು. ಯಾವ ಸಡಕ್ ಯೋಜನೆಯೂ ಅಲ್ಲಿಗೆ ಬಂದಂತಿಲ್ಲ. ನದಿಯನ್ನು ದಾಟಿದ ಕೂಡಲೇ ಕರ್ನಾಟಕದ ಗಡಿಯ ಗ್ರಾಮ `ರಾಮರಾವ್ ಕ್ಯಾಂಪ್~ ಮತ್ತು ಕರ್ನಾಟಕ ರಾಜ್ಯಕ್ಕೆ ಸುಸ್ವಾಗತವೆಂಬ ಫಲಕವೂ ಕಾಣಸಿಗುತ್ತದೆ. ಇಲ್ಲಿಯೇ ಅಸಲಿ ರಾಕ್ಷಸ ದರ್ಶನವೂ ಆಗುತ್ತದೆ.<br /> <br /> ಇಲ್ಲಿ ಕರ್ನಾಟಕ ಪೊಲೀಸರು ಒಂದು ಗಡಿ ಠಾಣೆಯನ್ನು ಹಾಕಿಕೊಂಡು ಕೂತಿದ್ದಾರೆ. ಆಂಧ್ರ ಪರ್ಮಿಟ್ ಹೊಂದಿರುವ ಆಟೋಗಳನ್ನು ತಡೆದು ಪ್ರತೀ ಆಟೋಕ್ಕೆ ರೂ. 20/-ನ್ನು ವಸೂಲು ಮಾಡುತ್ತಾರೆ, ಇದಕ್ಕೆ ಯಾವ ರಸೀತಿಯೂ ಇರುವುದಿಲ್ಲ. ಇದಲ್ಲದೆ ತಿಂಗಳಿಗೆ ರೂ. 100/- ಪ್ರತ್ಯೇಕವಾಗಿ ಬೇರೆ ಕೊಡಬೇಕಂತೆ.<br /> <br /> ನಾನು ಚಾಲಕನನ್ನು ಈ ರೀತಿ ಯಾಕೆ ಇವರಿಗೆ ಕೊಡುತ್ತೀರಿ, ರಾಯಚೂರು ಜಿಲ್ಲೆಯ ಪರ್ಮಿಟ್ ಕೂಡಾ ತೆಗೆದುಕೊಳ್ಳಬಾರದೇ ಎಂದು ಕೇಳಿದ್ದಕ್ಕೆ ಆತನೆಂದ ತ್ರಿಚಕ್ರ ವಾಹನಕ್ಕೆ ಬೇರೊಂದು ರಾಜ್ಯದ ಪರ್ಮಿಟ್ ಕೊಡುವುದಿಲ್ಲವಂತೆ. <br /> <br /> ಆಂಧ್ರದಲ್ಲಿ ವರ್ಷಕ್ಕೆ ರೂ. 450/- ಪರ್ಮಿಟ್ ಶುಲ್ಕ, ಕರ್ನಾಟಕದ ಪೊಲೀಸರಿಗೆ ತಿಂಗಳಿಗೆ ಸುಮಾರು ರೂ. 900/- ಕೊಡಬೇಕೆಂದ. ಇದಕ್ಕಿಂತ ದಾರುಣವಾದದ್ದೆಂದರೆ, ಬೆಲೆ ಹೆಚ್ಚಾಗಿದೆಯೆಂದು ರಿಕ್ಷಾದವರು ಬಾಡಿಗೆಯನ್ನು ಹೆಚ್ಚಿಸಿಕೊಂಡರೆ, ಪೊಲೀಸರು ಕೂಡಾ ರೂ. 20/- ರಿಂದ ರೂ. 30/- ಮಾಡಿದರಂತೆ. ಯಾವ ಸರ್ಕಾರಕ್ಕೂ ಹೊಟ್ಟೆಪಾಡಿಗಾಗಿ ಓಡಿಸುವ ಆಟೋಗಳಿಗೆ ಇಷ್ಟು ದೂರಕ್ಕೆ ಅಂತರರಾಜ್ಯವೆಂದು ಪರಿಗಣಿಸಬಾರದೆಂದು ಅನ್ನಿಸಿಲ್ಲ.<br /> <br /> ಆ ಕಡೆ ಆಂಧ್ರದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರೆ, ಈ ಕಡೆ ಇಂತಹ ಶಾಸಕರ ಯೋಜನೆಯಲ್ಲಿ ನಿರ್ಮಿತವಾದದ್ದು ಎಂದು ಫಲಕಗಳು. ಎರಡೂ ಬೇರೆ ಬೇರೆ ಪಕ್ಷಗಳ ಸರ್ಕಾರಗಳು, ಎರಡರ ಘೋಷಣೆಯೂ `ಅಭಿವೃದ್ಧಿಯೇ~ ಆದರೆ ಯಾರ ಅಭಿವೃದ್ಧಿ ಎಂಬುದೇ ಯಕ್ಷಪ್ರಶ್ನೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇತ್ತೀಚೆಗೆ ನಾವು ಸಂಸಾರ ಸಮೇತ ಮಂತ್ರಾಲಯಕ್ಕೆ ಹೋಗಿದ್ದೆವು. ಅಲ್ಲಿಗೆ ಹೋದವರೆಲ್ಲಾ ಗುರು ರಾಘವೇಂದ್ರರು ತಪಗೈದ ಸ್ಥಳವೆಂದು ನಂಬಲಾಗಿರುವ ಪಂಚಮುಖಿ ಆಂಜನೇಯನ ದರ್ಶನಕ್ಕೆ ತೆರಳುವುದು ವಾಡಿಕೆ.<br /> <br /> ಅದರಂತೆಯೇ ನಾವು ಕೂಡ ತೆರಳಿದೆವು. ಪಂಚಮುಖಿ ಆಂಜನೇಯನ ದೇವಸ್ಥಾನವಿರುವುದು ಕರ್ನಾಟಕದಲ್ಲಿ, ಮಂತ್ರಾಲಯವಿರುವುದು ಆಂಧ್ರದಲ್ಲಿ. ಯಾವುದೇ ಉತ್ತರ ಕರ್ನಾಟಕದ ಹಳ್ಳಿಗಳಂತೆ ಅಲ್ಲಿಯೂ ಸಹಾ ಮೂಲಸೌಕರ್ಯ, ನೈರ್ಮಲ್ಯ ಇತ್ಯಾದಿಗಳನ್ನು ಹುಡುಕಿದರೂ ಸಿಗುವುದಿಲ್ಲ. ತುಂಗೆಯು ಪಕ್ಕದಲ್ಲಿಯೇ ಹರಿಯುತ್ತಿದ್ದರೂ ಕುಡಿಯುವ ನೀರಿಗೆ ತತ್ವಾರ. <br /> <br /> ಚೀನಾ ಸರ್ಕಾರವು ಸಮುದ್ರದ ಮೇಲೆ ನೂರಾರು ಕಿಲೋಮೀಟರ್ ಸೇತುವೆಯನ್ನು ಎರಡು ವರ್ಷಗಳಲ್ಲಿ ಕಟ್ಟಿ ಮುಗಿಸುತ್ತದೆ ಆದರೆ ನಮ್ಮ ಘನ ಸರ್ಕಾರಕ್ಕೆ ತುಂಗಾ ನದಿಯ ಮೇಲೆ ಸೇತುವೆಯನ್ನು ಕಟ್ಟಿ ಮುಗಿಸಲು ವರ್ಷಗಳೇ ಕಳೆದರೂ ಸಹಾ ಸಾಧ್ಯವಾಗಿಲ್ಲ.<br /> <br /> ಇನ್ನು ನಮ್ಮ ಜೀವವನ್ನು ತ್ರಿಚಕ್ರವಾಹನದ ಚಾಲಕನ ಕೈಯಲ್ಲಿ ಕೊಟ್ಟು ನೀರಿಲ್ಲದ ನದಿಯನ್ನು ದಾಟಿದರೂ ರಸ್ತೆಯೆಂಬ ವಸ್ತುವನ್ನು ಹುಡುಕಬೇಕು. ಯಾವ ಸಡಕ್ ಯೋಜನೆಯೂ ಅಲ್ಲಿಗೆ ಬಂದಂತಿಲ್ಲ. ನದಿಯನ್ನು ದಾಟಿದ ಕೂಡಲೇ ಕರ್ನಾಟಕದ ಗಡಿಯ ಗ್ರಾಮ `ರಾಮರಾವ್ ಕ್ಯಾಂಪ್~ ಮತ್ತು ಕರ್ನಾಟಕ ರಾಜ್ಯಕ್ಕೆ ಸುಸ್ವಾಗತವೆಂಬ ಫಲಕವೂ ಕಾಣಸಿಗುತ್ತದೆ. ಇಲ್ಲಿಯೇ ಅಸಲಿ ರಾಕ್ಷಸ ದರ್ಶನವೂ ಆಗುತ್ತದೆ.<br /> <br /> ಇಲ್ಲಿ ಕರ್ನಾಟಕ ಪೊಲೀಸರು ಒಂದು ಗಡಿ ಠಾಣೆಯನ್ನು ಹಾಕಿಕೊಂಡು ಕೂತಿದ್ದಾರೆ. ಆಂಧ್ರ ಪರ್ಮಿಟ್ ಹೊಂದಿರುವ ಆಟೋಗಳನ್ನು ತಡೆದು ಪ್ರತೀ ಆಟೋಕ್ಕೆ ರೂ. 20/-ನ್ನು ವಸೂಲು ಮಾಡುತ್ತಾರೆ, ಇದಕ್ಕೆ ಯಾವ ರಸೀತಿಯೂ ಇರುವುದಿಲ್ಲ. ಇದಲ್ಲದೆ ತಿಂಗಳಿಗೆ ರೂ. 100/- ಪ್ರತ್ಯೇಕವಾಗಿ ಬೇರೆ ಕೊಡಬೇಕಂತೆ.<br /> <br /> ನಾನು ಚಾಲಕನನ್ನು ಈ ರೀತಿ ಯಾಕೆ ಇವರಿಗೆ ಕೊಡುತ್ತೀರಿ, ರಾಯಚೂರು ಜಿಲ್ಲೆಯ ಪರ್ಮಿಟ್ ಕೂಡಾ ತೆಗೆದುಕೊಳ್ಳಬಾರದೇ ಎಂದು ಕೇಳಿದ್ದಕ್ಕೆ ಆತನೆಂದ ತ್ರಿಚಕ್ರ ವಾಹನಕ್ಕೆ ಬೇರೊಂದು ರಾಜ್ಯದ ಪರ್ಮಿಟ್ ಕೊಡುವುದಿಲ್ಲವಂತೆ. <br /> <br /> ಆಂಧ್ರದಲ್ಲಿ ವರ್ಷಕ್ಕೆ ರೂ. 450/- ಪರ್ಮಿಟ್ ಶುಲ್ಕ, ಕರ್ನಾಟಕದ ಪೊಲೀಸರಿಗೆ ತಿಂಗಳಿಗೆ ಸುಮಾರು ರೂ. 900/- ಕೊಡಬೇಕೆಂದ. ಇದಕ್ಕಿಂತ ದಾರುಣವಾದದ್ದೆಂದರೆ, ಬೆಲೆ ಹೆಚ್ಚಾಗಿದೆಯೆಂದು ರಿಕ್ಷಾದವರು ಬಾಡಿಗೆಯನ್ನು ಹೆಚ್ಚಿಸಿಕೊಂಡರೆ, ಪೊಲೀಸರು ಕೂಡಾ ರೂ. 20/- ರಿಂದ ರೂ. 30/- ಮಾಡಿದರಂತೆ. ಯಾವ ಸರ್ಕಾರಕ್ಕೂ ಹೊಟ್ಟೆಪಾಡಿಗಾಗಿ ಓಡಿಸುವ ಆಟೋಗಳಿಗೆ ಇಷ್ಟು ದೂರಕ್ಕೆ ಅಂತರರಾಜ್ಯವೆಂದು ಪರಿಗಣಿಸಬಾರದೆಂದು ಅನ್ನಿಸಿಲ್ಲ.<br /> <br /> ಆ ಕಡೆ ಆಂಧ್ರದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದರೆ, ಈ ಕಡೆ ಇಂತಹ ಶಾಸಕರ ಯೋಜನೆಯಲ್ಲಿ ನಿರ್ಮಿತವಾದದ್ದು ಎಂದು ಫಲಕಗಳು. ಎರಡೂ ಬೇರೆ ಬೇರೆ ಪಕ್ಷಗಳ ಸರ್ಕಾರಗಳು, ಎರಡರ ಘೋಷಣೆಯೂ `ಅಭಿವೃದ್ಧಿಯೇ~ ಆದರೆ ಯಾರ ಅಭಿವೃದ್ಧಿ ಎಂಬುದೇ ಯಕ್ಷಪ್ರಶ್ನೆಯಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>