<p>ಆಳ ಸಮುದ್ರದಲ್ಲಿ ಮೀನು ಹಿಡಿಯಲು ಹೋಗುವ ಭಾರತದ ಮೀನುಗಾರರು ಸಾವುನೋವಿಗೀಡಾಗುವ ಘಟನೆಗಳು ಹೆಚ್ಚುತ್ತಲೇ ಇವೆ. ಮಹಾರಾಷ್ಟ್ರ-ಗುಜರಾತ್ಗಳ ನೂರಾರು ಮೀನುಗಾರರು ಮುದ್ರದಲ್ಲಿ ತಮಗೆ ಅರಿವಿಲ್ಲದಂತೆ ಪಾಕಿಸ್ತಾನದ ಗಡಿಪ್ರವೇಶಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿ ಆ ದೇಶದ ಜೈಲುಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. <br /> <br /> ಇತ್ತೀಚೆಗೆ ಕೇರಳದ ಕೊಚ್ಚಿ ಸಮೀಪ ಭಾರತೀಯ ಮೀನುಗಾರರ ಮೇಲೆ ಇಟಲಿಯ ತೈಲಸಾಗಾಣಿಕೆಯ ಹಡಗಿನ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದರು. ಆ ಘಟನೆಯ ನೆನಪು ಮಾಸಿಹೋಗುವ ಮೊದಲೇ ಇನ್ನೊಂದು ದುಷ್ಕೃತ್ಯ ನಡೆದಿದೆ.<br /> <br /> ದುಬೈ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಭಾರತೀಯ ಮೂಲದ ಮೀನುಗಾರರ ಮೇಲೆ ಅಮೆರಿಕದ ನೌಕಾದಳ ಗುಂಡುಹಾರಿಸಿದ ಪರಿಣಾಮ ಒಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಅಮಾನವೀಯ ಘಟನೆ ನಡೆದಿದೆ. <br /> <br /> ಸಾಮಾನ್ಯ ದೋಣಿಗಳಲ್ಲಿ ಮೀನುಹಿಡಿಯಲು ಹೋಗುವವರಿಗೆ ಮೀನುಗಾರಿಕೆಯಲ್ಲದೆ ಬೇರೆ ಉದ್ದೇಶಗಳಿರುವುದಿಲ್ಲ. ಇಂತಹವರನ್ನು ಕಡಲುಗಳ್ಳರೋ, ಬೇಹುಗಾರರೋ ಎಂದು ವಿದೇಶಿ ಹಡಗುಗಳ ಸಿಬ್ಬಂದಿ ತಪ್ಪಾಗಿ ತಿಳಿದುಕೊಂಡು ದಾಳಿ ನಡೆಸುವುದೂ ಉಂಟು.<br /> <br /> ಸಮುದ್ರದಲ್ಲಿನ ಅಂತರರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿ ಪಾಕಿಸ್ತಾನದ ಜೈಲಲ್ಲಿರುವ ಬಹುತೇಕ ಮೀನುಗಾರರು ಬೇಹುಗಾರಿಕೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ತಾವು ನೀಡಿದ ಸೂಚನೆಯನ್ನು ಉಲ್ಲಂಘಿಸಿ ಮುನ್ನುಗ್ಗಿದ್ದೇ ಗುಂಡು ಹಾರಿಸಲು ಕಾರಣ ಎಂಬ ಅಮೆರಿಕ ರಾಯಭಾರ ಕಚೇರಿಯ ಸ್ಪಷ್ಟೀಕರಣ ನಂಬುವಂತಹದ್ದಲ್ಲ. <br /> <br /> ಊರು ಬಿಟ್ಟುಬಂದು ಹೊಟ್ಟೆಪಾಡಿಗಾಗಿ ಕಡುಕಷ್ಟದ ಮೀನುಗಾರಿಕೆ ನಡೆಸುತ್ತಿರುವವರು ಅಮೆರಿಕದ ನೌಕಾಪಡೆಯ ಮೇಲೆ ದಾಳಿ ನಡೆಸಲು ಮುಂದಾಗುತ್ತಾರೆ ಎಂಬ ಹೇಳಿಕೆಯೇ ಬಾಲಿಶತನದಿಂದ ಕೂಡಿದ್ದು.<br /> <br /> ಈ ಘಟನೆ ತಮ್ಮಿಂದ ಆಗಿರುವ ಪ್ರಮಾದ ಎನ್ನುವುದನ್ನೂ ಒಪ್ಪಿಕೊಳ್ಳದೆ ಇರುವ ಅಮೆರಿಕ ತನ್ನ ಎಂದಿನ ಯಜಮಾನಿಕೆಯ ಸೊಕ್ಕನ್ನು ಪ್ರದರ್ಶಿಸಿದೆ. ಭಾರತದ ತೀಕ್ಷ್ಣ ಪ್ರತಿಕ್ರಿಯೆಯ ನಂತರ ಕ್ಷಮೆಯಾಚಿಸಿ ದುಷ್ಕೃತ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ.<br /> <br /> ಮೀನುಗಾರರ ದೋಣಿಯನ್ನು ಶತ್ರುಸೇನೆ ಎಂದು ತಪ್ಪಾಗಿ ತಿಳಿದುಕೊಳ್ಳಲು ಅಮೆರಿಕವನ್ನು ಕಾಡುತ್ತಿರುವ ಅಪರಾಧಿ ಮನೋಭಾವ ಕೂಡಾ ಕಾರಣ. ಇರಾನ್ ಮೇಲೆ ರಾಜತಾಂತ್ರಿಕ ಒತ್ತಡ ಹೇರುವುದಕ್ಕಾಗಿ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ನೌಕಾಸೇನೆಯನ್ನು ಜಮಾವಣೆ ಮಾಡುತ್ತಿರುವ ಅಮೆರಿಕ ಸಹಜವಾಗಿಯೇ ಶತ್ರುವಿನಿಂದ ದಾಳಿಯ ಭೀತಿಯನ್ನು ಎದುರಿಸುತ್ತಿದೆ. <br /> <br /> ಹಗ್ಗ ಕಂಡರೂ ಹಾವೆಂದು ಭ್ರಮಿಸುವ ಭೀತಿಗ್ರಸ್ತ ಮನಸ್ಸಿನಿಂದಾಗುವ ಎಡವಟ್ಟು ಕೂಡಾ ಈ ದುರ್ಘಟನೆಗೆ ಕಾರಣವಾಗಿರಬಹುದು. ಆದರೆ ಅಮೆರಿಕದಂತಹ ದೊಡ್ಡ ದೇಶದ ಸೇನೆ ಹೊಣೆಗೇಡಿಯಂತೆ ಅಸಹಾಯಕರ ಮೇಲೆ ಗುಂಡುಹಾರಿಸುವಂತಹ ಅತಿರೇಕದ ಕ್ರಮಗಳಿಗೆ ಮುಂದಾಗುವುದು ಸರಿಯಲ್ಲ. ಮೀನುಗಾರರ ಮೇಲೆ ನಿರ್ದಿಷ್ಟ ಆರೋಪಗಳಿದ್ದರೆ ಅವರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಪ್ರಕಾರ ವಿಚಾರಣೆಗೊಳಪಡಿಸಬೇಕು. <br /> <br /> ಇಂತಹ ಘಟನೆಗಳು ಪುನರಾವರ್ತನೆಗೊಳ್ಳುತ್ತಿರುವುದರಿಂದ ಭಾರತ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಮೆರಿಕದ ಒಂದು ಕ್ಷಮೆಯಾಚನೆಗೆ ತಲೆದೂಗಿ ಈ ದುಷ್ಕೃತ್ಯವನ್ನು ಮರೆತುಬಿಡಬಾರದು. ಇದನ್ನು ಒಂದು ಹತ್ಯೆಯೆಂದೇ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.<br /> <br /> ಸಾವಿಗೀಡಾದ ಮೀನುಗಾರನ ಕುಟುಂಬಕ್ಕೆ ಪರಿಹಾರವನ್ನು ಅಮೆರಿಕ ಸರ್ಕಾರದಿಂದಲೇ ಕೊಡಿಸಬೇಕು. ಅಮೆರಿಕವೂ ಸೇರಿದಂತೆ ನೆರೆಯ ದೇಶಗಳ ಜತೆ ಮಾತುಕತೆ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆಳ ಸಮುದ್ರದಲ್ಲಿ ಮೀನು ಹಿಡಿಯಲು ಹೋಗುವ ಭಾರತದ ಮೀನುಗಾರರು ಸಾವುನೋವಿಗೀಡಾಗುವ ಘಟನೆಗಳು ಹೆಚ್ಚುತ್ತಲೇ ಇವೆ. ಮಹಾರಾಷ್ಟ್ರ-ಗುಜರಾತ್ಗಳ ನೂರಾರು ಮೀನುಗಾರರು ಮುದ್ರದಲ್ಲಿ ತಮಗೆ ಅರಿವಿಲ್ಲದಂತೆ ಪಾಕಿಸ್ತಾನದ ಗಡಿಪ್ರವೇಶಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿ ಆ ದೇಶದ ಜೈಲುಗಳಲ್ಲಿ ನರಕಯಾತನೆ ಅನುಭವಿಸುತ್ತಿದ್ದಾರೆ. <br /> <br /> ಇತ್ತೀಚೆಗೆ ಕೇರಳದ ಕೊಚ್ಚಿ ಸಮೀಪ ಭಾರತೀಯ ಮೀನುಗಾರರ ಮೇಲೆ ಇಟಲಿಯ ತೈಲಸಾಗಾಣಿಕೆಯ ಹಡಗಿನ ಸಿಬ್ಬಂದಿ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಾವಿಗೀಡಾಗಿದ್ದರು. ಆ ಘಟನೆಯ ನೆನಪು ಮಾಸಿಹೋಗುವ ಮೊದಲೇ ಇನ್ನೊಂದು ದುಷ್ಕೃತ್ಯ ನಡೆದಿದೆ.<br /> <br /> ದುಬೈ ಸಮೀಪದ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಭಾರತೀಯ ಮೂಲದ ಮೀನುಗಾರರ ಮೇಲೆ ಅಮೆರಿಕದ ನೌಕಾದಳ ಗುಂಡುಹಾರಿಸಿದ ಪರಿಣಾಮ ಒಬ್ಬರು ಮೃತಪಟ್ಟು ನಾಲ್ವರು ಗಾಯಗೊಂಡಿರುವ ಅಮಾನವೀಯ ಘಟನೆ ನಡೆದಿದೆ. <br /> <br /> ಸಾಮಾನ್ಯ ದೋಣಿಗಳಲ್ಲಿ ಮೀನುಹಿಡಿಯಲು ಹೋಗುವವರಿಗೆ ಮೀನುಗಾರಿಕೆಯಲ್ಲದೆ ಬೇರೆ ಉದ್ದೇಶಗಳಿರುವುದಿಲ್ಲ. ಇಂತಹವರನ್ನು ಕಡಲುಗಳ್ಳರೋ, ಬೇಹುಗಾರರೋ ಎಂದು ವಿದೇಶಿ ಹಡಗುಗಳ ಸಿಬ್ಬಂದಿ ತಪ್ಪಾಗಿ ತಿಳಿದುಕೊಂಡು ದಾಳಿ ನಡೆಸುವುದೂ ಉಂಟು.<br /> <br /> ಸಮುದ್ರದಲ್ಲಿನ ಅಂತರರಾಷ್ಟ್ರೀಯ ಗಡಿಯನ್ನು ಉಲ್ಲಂಘಿಸಿದ ಕಾರಣಕ್ಕೆ ಬಂಧನಕ್ಕೊಳಗಾಗಿ ಪಾಕಿಸ್ತಾನದ ಜೈಲಲ್ಲಿರುವ ಬಹುತೇಕ ಮೀನುಗಾರರು ಬೇಹುಗಾರಿಕೆಯ ಆರೋಪಗಳನ್ನು ಎದುರಿಸುತ್ತಿದ್ದಾರೆ. ತಾವು ನೀಡಿದ ಸೂಚನೆಯನ್ನು ಉಲ್ಲಂಘಿಸಿ ಮುನ್ನುಗ್ಗಿದ್ದೇ ಗುಂಡು ಹಾರಿಸಲು ಕಾರಣ ಎಂಬ ಅಮೆರಿಕ ರಾಯಭಾರ ಕಚೇರಿಯ ಸ್ಪಷ್ಟೀಕರಣ ನಂಬುವಂತಹದ್ದಲ್ಲ. <br /> <br /> ಊರು ಬಿಟ್ಟುಬಂದು ಹೊಟ್ಟೆಪಾಡಿಗಾಗಿ ಕಡುಕಷ್ಟದ ಮೀನುಗಾರಿಕೆ ನಡೆಸುತ್ತಿರುವವರು ಅಮೆರಿಕದ ನೌಕಾಪಡೆಯ ಮೇಲೆ ದಾಳಿ ನಡೆಸಲು ಮುಂದಾಗುತ್ತಾರೆ ಎಂಬ ಹೇಳಿಕೆಯೇ ಬಾಲಿಶತನದಿಂದ ಕೂಡಿದ್ದು.<br /> <br /> ಈ ಘಟನೆ ತಮ್ಮಿಂದ ಆಗಿರುವ ಪ್ರಮಾದ ಎನ್ನುವುದನ್ನೂ ಒಪ್ಪಿಕೊಳ್ಳದೆ ಇರುವ ಅಮೆರಿಕ ತನ್ನ ಎಂದಿನ ಯಜಮಾನಿಕೆಯ ಸೊಕ್ಕನ್ನು ಪ್ರದರ್ಶಿಸಿದೆ. ಭಾರತದ ತೀಕ್ಷ್ಣ ಪ್ರತಿಕ್ರಿಯೆಯ ನಂತರ ಕ್ಷಮೆಯಾಚಿಸಿ ದುಷ್ಕೃತ್ಯವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ.<br /> <br /> ಮೀನುಗಾರರ ದೋಣಿಯನ್ನು ಶತ್ರುಸೇನೆ ಎಂದು ತಪ್ಪಾಗಿ ತಿಳಿದುಕೊಳ್ಳಲು ಅಮೆರಿಕವನ್ನು ಕಾಡುತ್ತಿರುವ ಅಪರಾಧಿ ಮನೋಭಾವ ಕೂಡಾ ಕಾರಣ. ಇರಾನ್ ಮೇಲೆ ರಾಜತಾಂತ್ರಿಕ ಒತ್ತಡ ಹೇರುವುದಕ್ಕಾಗಿ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ನೌಕಾಸೇನೆಯನ್ನು ಜಮಾವಣೆ ಮಾಡುತ್ತಿರುವ ಅಮೆರಿಕ ಸಹಜವಾಗಿಯೇ ಶತ್ರುವಿನಿಂದ ದಾಳಿಯ ಭೀತಿಯನ್ನು ಎದುರಿಸುತ್ತಿದೆ. <br /> <br /> ಹಗ್ಗ ಕಂಡರೂ ಹಾವೆಂದು ಭ್ರಮಿಸುವ ಭೀತಿಗ್ರಸ್ತ ಮನಸ್ಸಿನಿಂದಾಗುವ ಎಡವಟ್ಟು ಕೂಡಾ ಈ ದುರ್ಘಟನೆಗೆ ಕಾರಣವಾಗಿರಬಹುದು. ಆದರೆ ಅಮೆರಿಕದಂತಹ ದೊಡ್ಡ ದೇಶದ ಸೇನೆ ಹೊಣೆಗೇಡಿಯಂತೆ ಅಸಹಾಯಕರ ಮೇಲೆ ಗುಂಡುಹಾರಿಸುವಂತಹ ಅತಿರೇಕದ ಕ್ರಮಗಳಿಗೆ ಮುಂದಾಗುವುದು ಸರಿಯಲ್ಲ. ಮೀನುಗಾರರ ಮೇಲೆ ನಿರ್ದಿಷ್ಟ ಆರೋಪಗಳಿದ್ದರೆ ಅವರನ್ನು ವಶಕ್ಕೆ ತೆಗೆದುಕೊಂಡು ಕಾನೂನು ಪ್ರಕಾರ ವಿಚಾರಣೆಗೊಳಪಡಿಸಬೇಕು. <br /> <br /> ಇಂತಹ ಘಟನೆಗಳು ಪುನರಾವರ್ತನೆಗೊಳ್ಳುತ್ತಿರುವುದರಿಂದ ಭಾರತ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅಮೆರಿಕದ ಒಂದು ಕ್ಷಮೆಯಾಚನೆಗೆ ತಲೆದೂಗಿ ಈ ದುಷ್ಕೃತ್ಯವನ್ನು ಮರೆತುಬಿಡಬಾರದು. ಇದನ್ನು ಒಂದು ಹತ್ಯೆಯೆಂದೇ ಪರಿಗಣಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.<br /> <br /> ಸಾವಿಗೀಡಾದ ಮೀನುಗಾರನ ಕುಟುಂಬಕ್ಕೆ ಪರಿಹಾರವನ್ನು ಅಮೆರಿಕ ಸರ್ಕಾರದಿಂದಲೇ ಕೊಡಿಸಬೇಕು. ಅಮೆರಿಕವೂ ಸೇರಿದಂತೆ ನೆರೆಯ ದೇಶಗಳ ಜತೆ ಮಾತುಕತೆ ನಡೆಸಿ ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>