<p><strong>ಬಳ್ಳಾರಿ:</strong> ನಗರದ ಹೃದಯ ಭಾಗದಲ್ಲಿರುವ ಮುನಿಸಿಪಲ್ ಕಾಲೇಜಿನ ಹಿಂಭಾಗದಲ್ಲಿರುವ ಆಟದ ಮೈದಾನವು, ಕೇವಲ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ನಗರದ ಅನೇಕ ಬಡಾವಣೆಗಳ ಯುವಕರಿಗೆ ಆಟವಾಡಲು ಇರುವ ಏಕೈಕ ಮೈದಾನವಾಗಿದೆ. ಆದರೆ, ಇರುವ ಒಂದು ಆಟದ ಮೈದಾನದಲ್ಲಿ ಕ್ರೀಡಾಪಟುಗಳಿಗೆ ಆಟವಾಡಲೂ ಭಯದ ವಾತಾವರಣ ಇದೆ.<br /> <br /> ಮದ್ಯವ್ಯಸನಿಗಳ ತಾಣವಾಗಿರುವ ಈ ಆಟದ ಮೈದಾನದಲ್ಲಿ ರಾತ್ರಿ ನಡೆಯುವ ಅನೈತಿಕ ಚಟುವಟಿಕೆಗಳೇ ಇದಕ್ಕೆ ಕಾರಣ. ಮದ್ಯ ಕುಡಿದು ಖಾಲಿ ಬಾಟಲುಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುವ ಕುಡುಕರಿಂದಾಗಿ ಕಾಲಲ್ಲಿ ಚಪ್ಪಲಿ ಅಥವಾ ಶೂಗಳಿಲ್ಲದೆ ಆಟವಾಡದಂತಹ ಸ್ಥಿತಿ ಇಲ್ಲಿದೆ.<br /> <br /> ನಿತ್ಯ ಬೆಳಿಗ್ಗೆ ಈ ಆಟದ ಮೈದಾನಕ್ಕೆ ಕ್ರಿಕೆಟ್ ಮತ್ತಿತರ ಆಟವಾಡಲು ಆಗಮಿಸಿ ಬರಿಗಾಲಲ್ಲಿ ಆಟವಾಡುವ ನೂರಾರು ಜನ ಯುವಕರಿಗೆ ರಾಶಿ ರಾಶಿಯಾಗಿ ಬಿದ್ದಿರುವ ಗಾಜಿನ ಚೂರುಗಳು ಗಾಯಗೊಳ್ಳುವಂತೆ ಮಾಡುತ್ತಿವೆ.<br /> <br /> ಬೆಳಗಿನ ಜಾವ ಎಳೆ ಬಿಸಿಲಲ್ಲಿ ವ್ಯಾಯಾಮ ಮಾಡಲು ಆಗಮಿಸುವ ಜನತೆ ಅತ್ಯಂತ ಎಚ್ಚರಿಕೆಯಿಂದಲೇ ಹೆಜ್ಜೆ ಇರಿಸುವಂತಹ ದುಃಸ್ಥಿತಿ ಇದೆ. ಚಿಕ್ಕ ಮಕ್ಕಳಿಂದ ಹಿಡಿದು, ಯುವಕರು ಹಾಗೂ ವೃದ್ಧರು ಬೆಳಿಗ್ಗೆ ಮತ್ತು ಸಂಜೆ ಜಾಗಿಂಗ್ ಮಾಡಲು ಈ ಮೈದಾನಕ್ಕೇ ಆಗಮಿಸುತ್ತಾರೆ. ಮೈದಾನದ ತುಂಬ ಬಿದ್ದಿರುವ ಖಾಲಿ ಮಧ್ಯದ ಬಾಟಲಿಗಳು ಮುಜುಗರಕ್ಕೆ ಒಳಗಾಗುವಂತೆ ಮಾಡಿವೆಯಲ್ಲದೆ, ಗಾಯಗೊಳ್ಳಲೂ ಕಾರಣವಾಗುತ್ತಿವೆ.<br /> <br /> ಮುನಿಸಿಪಾಲ್ ಪ್ರೌಢಶಾಲೆ ಹಾಗೂ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪದವಿ ಕಾಲೇಜಿನ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲೇ ಆಟವಾಡುತ್ತಾರೆ. ಅಷ್ಟೇ ಅಲ್ಲದೆ, ನಗರದ ವಿವಿಧೆಡೆ ಇರುವ ಬಡಾವಣೆಗಳ ಯುವಕರಿಗೂ ಇದೇ ಮೈದಾನ ಆಟಕ್ಕೆ ಆಸರೆ.<br /> <br /> ಈ ಮೈದಾನದ ಸುತ್ತ ಕಂಪೌಂಡ್ ಕಟ್ಟಲಾಗಿದ್ದು, ಸುತ್ತಲೂ ಗೇಟ್ ಅಳವಡಿಸಿ, ಕೀಲಿ ಜಡಿದರೂ ಅವುಗಳನ್ನು ಎಗರಿ ಬರುವ ಕುಡುಕರ ಪಡೆ ರಾತ್ರಿಯಾಯಿತೆಂದರೆ ಮದ್ಯದ ಬಾಟಲಿ ಸಮೇತ ಇಲ್ಲಿಗೆ ಹಾಜರಾಗಿ ಕುಡಿದು ಮೋಜುಮಾಡಿ ಎಲ್ಲೆಂದರಲ್ಲಿ ಖಾಲಿ ಬಾಟಲಿ ಎಸೆದು ಹೋಗುತ್ತದೆ.<br /> <br /> ಮೈದಾನದಲ್ಲಿ ಬೆಳಿಗ್ಗೆಯೇ ಬರುವ ಕೆಲವು ಕಿಡಿಗೇಡಿ ಯುವಕರು ಖಾಲಿ ಬಾಟಲುಗಳನ್ನು ಎಲ್ಲೆಂದರಲ್ಲಿ ತೂರುತ್ತ ಪುಡಿಪುಡಿ ಮಾಡುವುದರಿಂದ ಕಾಲಿಗೆ ಗಾಜಿನ ಚೂರುಗಳು ಚುಚ್ಚುವ ಅಪಾಯವಿದೆ. ಹೀಗಾಗಿ ಅತಿ ಎಚ್ಚರದಿಂದಲೇ ಆಟವಾಡುವ ಅನಿವಾರ್ಯತೆ ಇದೆ ಎಂದು ನಿತ್ಯವೂ ಕ್ರಿಕೆಟ್ ಆಡಲು ಬರುವ ಶಶಿಧರ ಅವರು `ಪ್ರಜಾವಾಣಿ~ಗೆ ವಿವರಿಸಿದರು.<br /> <br /> ಬೆಳಿಗ್ಗೆಯೇ ಖಾಲಿ ಬಾಟಲು ಆಯುವ ಚಿಕ್ಕಮಕ್ಕಳೂ ಇಲ್ಲಿಗೆ ಬಂದು ಕೈಗೆ ಸಿಕ್ಕಷ್ಟು ಬಾಟಲುಗಳನ್ನು ಆಯ್ದು ಕೊಂಡೊಯ್ಯುತ್ತಾರಾದರೂ ಅಲ್ಲೇ ಉಳಿಯುವ ಗಾಜಿನ ಚೂರುಗಳಿಂದ ಅಪಾಯ ಹೆಚ್ಚು ಎಂಬುದು ಅವರ ಅನಿಸಿಕೆ.<br /> <br /> ನಗರದ ಮಧ್ಯ ಭಾಗದಲ್ಲಿರುವ ಈ ಏಕೈಕ ಆಟದ ಮೈದಾನಕ್ಕೆ ಸಾಕಷ್ಟು ಭದ್ರತೆ ಕಲ್ಪಿಸಿ, ಸ್ವಚ್ಛತೆಗೆ ಆದ್ಯತೆ ನೀಡಿ, ಯುವಕರು ನಿರ್ಭೀತಿಯಿಂದ ಆಟವಾಡುವಂತೆ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಶರಣಯ್ಯ, ವೆಂಕಟೇಶ, ನೂರ್ ಅಹಮದ್ ಮತ್ತಿತರರು ಆಗ್ರಹಿಸುತ್ತಾರೆ.<br /> <br /> ಈ ಆಟದ ಮೈದಾನದಲ್ಲಿ ತಿಂಗಳಿಗೊಮ್ಮೆ ವಿವಿಧ ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸುವುದರಿಂದ ವ್ಯಾಪಾರ ವಹಿವಾಟು ನಡೆಸಲಾಗುತ್ತದೆ. ಇದರಿಂದ ಯುವಕರಿಗೆ ಆಟಕ್ಕೆ ಮೈದಾನವೇ ಇಲ್ಲದಂತಾಗುತ್ತದೆ. ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿರುವ ಈ ಆಟದ ಮೈದಾನದಲ್ಲಿ ಅನಗತ್ಯವಾಗಿ ವಾಣಿಜ್ಯ ಸಂಬಂಧಿ ಚಟುವಟಿಕೆಗೆ ಅವಕಾಶ ನೀಡಬಾರದು ಎಂಬುದು ಅನೇಕರ ಕೋರಿಕೆಯಾಗಿದೆ.<br /> <br /> ಅಲ್ಲದೆ, ಪಕ್ಕದಲ್ಲಿರುವ ಬಿಡಿಎಎ ಆಟದ ಮೈದಾನದಲ್ಲೂ ಮಳೆ ಸುರಿದರೆ ಸಾಕಷ್ಟು ನೀರು ನಿಂತು ಫುಟ್ಬಾಲ್ ಆಡುವುದಕ್ಕೂ ಸಾಧ್ಯವಾಗುವುದಿಲ್ಲ. ಎರಡು ತಿಂಗಳ ಹಿಂದೆಯೇ ಈ ಕ್ರೀಡಾಂಗಣದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರೂ ಈವರೆಗೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂಬುದೂ ಫುಟ್ಬಾಲ್ ಪ್ರೇಮಿಗಳ ಆರೋಪವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ನಗರದ ಹೃದಯ ಭಾಗದಲ್ಲಿರುವ ಮುನಿಸಿಪಲ್ ಕಾಲೇಜಿನ ಹಿಂಭಾಗದಲ್ಲಿರುವ ಆಟದ ಮೈದಾನವು, ಕೇವಲ ಈ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ, ನಗರದ ಅನೇಕ ಬಡಾವಣೆಗಳ ಯುವಕರಿಗೆ ಆಟವಾಡಲು ಇರುವ ಏಕೈಕ ಮೈದಾನವಾಗಿದೆ. ಆದರೆ, ಇರುವ ಒಂದು ಆಟದ ಮೈದಾನದಲ್ಲಿ ಕ್ರೀಡಾಪಟುಗಳಿಗೆ ಆಟವಾಡಲೂ ಭಯದ ವಾತಾವರಣ ಇದೆ.<br /> <br /> ಮದ್ಯವ್ಯಸನಿಗಳ ತಾಣವಾಗಿರುವ ಈ ಆಟದ ಮೈದಾನದಲ್ಲಿ ರಾತ್ರಿ ನಡೆಯುವ ಅನೈತಿಕ ಚಟುವಟಿಕೆಗಳೇ ಇದಕ್ಕೆ ಕಾರಣ. ಮದ್ಯ ಕುಡಿದು ಖಾಲಿ ಬಾಟಲುಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗುವ ಕುಡುಕರಿಂದಾಗಿ ಕಾಲಲ್ಲಿ ಚಪ್ಪಲಿ ಅಥವಾ ಶೂಗಳಿಲ್ಲದೆ ಆಟವಾಡದಂತಹ ಸ್ಥಿತಿ ಇಲ್ಲಿದೆ.<br /> <br /> ನಿತ್ಯ ಬೆಳಿಗ್ಗೆ ಈ ಆಟದ ಮೈದಾನಕ್ಕೆ ಕ್ರಿಕೆಟ್ ಮತ್ತಿತರ ಆಟವಾಡಲು ಆಗಮಿಸಿ ಬರಿಗಾಲಲ್ಲಿ ಆಟವಾಡುವ ನೂರಾರು ಜನ ಯುವಕರಿಗೆ ರಾಶಿ ರಾಶಿಯಾಗಿ ಬಿದ್ದಿರುವ ಗಾಜಿನ ಚೂರುಗಳು ಗಾಯಗೊಳ್ಳುವಂತೆ ಮಾಡುತ್ತಿವೆ.<br /> <br /> ಬೆಳಗಿನ ಜಾವ ಎಳೆ ಬಿಸಿಲಲ್ಲಿ ವ್ಯಾಯಾಮ ಮಾಡಲು ಆಗಮಿಸುವ ಜನತೆ ಅತ್ಯಂತ ಎಚ್ಚರಿಕೆಯಿಂದಲೇ ಹೆಜ್ಜೆ ಇರಿಸುವಂತಹ ದುಃಸ್ಥಿತಿ ಇದೆ. ಚಿಕ್ಕ ಮಕ್ಕಳಿಂದ ಹಿಡಿದು, ಯುವಕರು ಹಾಗೂ ವೃದ್ಧರು ಬೆಳಿಗ್ಗೆ ಮತ್ತು ಸಂಜೆ ಜಾಗಿಂಗ್ ಮಾಡಲು ಈ ಮೈದಾನಕ್ಕೇ ಆಗಮಿಸುತ್ತಾರೆ. ಮೈದಾನದ ತುಂಬ ಬಿದ್ದಿರುವ ಖಾಲಿ ಮಧ್ಯದ ಬಾಟಲಿಗಳು ಮುಜುಗರಕ್ಕೆ ಒಳಗಾಗುವಂತೆ ಮಾಡಿವೆಯಲ್ಲದೆ, ಗಾಯಗೊಳ್ಳಲೂ ಕಾರಣವಾಗುತ್ತಿವೆ.<br /> <br /> ಮುನಿಸಿಪಾಲ್ ಪ್ರೌಢಶಾಲೆ ಹಾಗೂ ಸರಳಾದೇವಿ ಸತೀಶ್ಚಂದ್ರ ಅಗರ್ವಾಲ್ ಸರ್ಕಾರಿ ಪದವಿ ಕಾಲೇಜಿನ 5 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇಲ್ಲೇ ಆಟವಾಡುತ್ತಾರೆ. ಅಷ್ಟೇ ಅಲ್ಲದೆ, ನಗರದ ವಿವಿಧೆಡೆ ಇರುವ ಬಡಾವಣೆಗಳ ಯುವಕರಿಗೂ ಇದೇ ಮೈದಾನ ಆಟಕ್ಕೆ ಆಸರೆ.<br /> <br /> ಈ ಮೈದಾನದ ಸುತ್ತ ಕಂಪೌಂಡ್ ಕಟ್ಟಲಾಗಿದ್ದು, ಸುತ್ತಲೂ ಗೇಟ್ ಅಳವಡಿಸಿ, ಕೀಲಿ ಜಡಿದರೂ ಅವುಗಳನ್ನು ಎಗರಿ ಬರುವ ಕುಡುಕರ ಪಡೆ ರಾತ್ರಿಯಾಯಿತೆಂದರೆ ಮದ್ಯದ ಬಾಟಲಿ ಸಮೇತ ಇಲ್ಲಿಗೆ ಹಾಜರಾಗಿ ಕುಡಿದು ಮೋಜುಮಾಡಿ ಎಲ್ಲೆಂದರಲ್ಲಿ ಖಾಲಿ ಬಾಟಲಿ ಎಸೆದು ಹೋಗುತ್ತದೆ.<br /> <br /> ಮೈದಾನದಲ್ಲಿ ಬೆಳಿಗ್ಗೆಯೇ ಬರುವ ಕೆಲವು ಕಿಡಿಗೇಡಿ ಯುವಕರು ಖಾಲಿ ಬಾಟಲುಗಳನ್ನು ಎಲ್ಲೆಂದರಲ್ಲಿ ತೂರುತ್ತ ಪುಡಿಪುಡಿ ಮಾಡುವುದರಿಂದ ಕಾಲಿಗೆ ಗಾಜಿನ ಚೂರುಗಳು ಚುಚ್ಚುವ ಅಪಾಯವಿದೆ. ಹೀಗಾಗಿ ಅತಿ ಎಚ್ಚರದಿಂದಲೇ ಆಟವಾಡುವ ಅನಿವಾರ್ಯತೆ ಇದೆ ಎಂದು ನಿತ್ಯವೂ ಕ್ರಿಕೆಟ್ ಆಡಲು ಬರುವ ಶಶಿಧರ ಅವರು `ಪ್ರಜಾವಾಣಿ~ಗೆ ವಿವರಿಸಿದರು.<br /> <br /> ಬೆಳಿಗ್ಗೆಯೇ ಖಾಲಿ ಬಾಟಲು ಆಯುವ ಚಿಕ್ಕಮಕ್ಕಳೂ ಇಲ್ಲಿಗೆ ಬಂದು ಕೈಗೆ ಸಿಕ್ಕಷ್ಟು ಬಾಟಲುಗಳನ್ನು ಆಯ್ದು ಕೊಂಡೊಯ್ಯುತ್ತಾರಾದರೂ ಅಲ್ಲೇ ಉಳಿಯುವ ಗಾಜಿನ ಚೂರುಗಳಿಂದ ಅಪಾಯ ಹೆಚ್ಚು ಎಂಬುದು ಅವರ ಅನಿಸಿಕೆ.<br /> <br /> ನಗರದ ಮಧ್ಯ ಭಾಗದಲ್ಲಿರುವ ಈ ಏಕೈಕ ಆಟದ ಮೈದಾನಕ್ಕೆ ಸಾಕಷ್ಟು ಭದ್ರತೆ ಕಲ್ಪಿಸಿ, ಸ್ವಚ್ಛತೆಗೆ ಆದ್ಯತೆ ನೀಡಿ, ಯುವಕರು ನಿರ್ಭೀತಿಯಿಂದ ಆಟವಾಡುವಂತೆ ಮಹಾನಗರ ಪಾಲಿಕೆ ಕ್ರಮ ಕೈಗೊಳ್ಳಬೇಕು ಎಂದು ಶರಣಯ್ಯ, ವೆಂಕಟೇಶ, ನೂರ್ ಅಹಮದ್ ಮತ್ತಿತರರು ಆಗ್ರಹಿಸುತ್ತಾರೆ.<br /> <br /> ಈ ಆಟದ ಮೈದಾನದಲ್ಲಿ ತಿಂಗಳಿಗೊಮ್ಮೆ ವಿವಿಧ ಮಾರಾಟ ಮಳಿಗೆಗಳಿಗೆ ಅವಕಾಶ ಕಲ್ಪಿಸುವುದರಿಂದ ವ್ಯಾಪಾರ ವಹಿವಾಟು ನಡೆಸಲಾಗುತ್ತದೆ. ಇದರಿಂದ ಯುವಕರಿಗೆ ಆಟಕ್ಕೆ ಮೈದಾನವೇ ಇಲ್ಲದಂತಾಗುತ್ತದೆ. ಕ್ರೀಡಾ ಪ್ರತಿಭೆಗಳಿಗೆ ಸೂಕ್ತ ವೇದಿಕೆಯಾಗಿರುವ ಈ ಆಟದ ಮೈದಾನದಲ್ಲಿ ಅನಗತ್ಯವಾಗಿ ವಾಣಿಜ್ಯ ಸಂಬಂಧಿ ಚಟುವಟಿಕೆಗೆ ಅವಕಾಶ ನೀಡಬಾರದು ಎಂಬುದು ಅನೇಕರ ಕೋರಿಕೆಯಾಗಿದೆ.<br /> <br /> ಅಲ್ಲದೆ, ಪಕ್ಕದಲ್ಲಿರುವ ಬಿಡಿಎಎ ಆಟದ ಮೈದಾನದಲ್ಲೂ ಮಳೆ ಸುರಿದರೆ ಸಾಕಷ್ಟು ನೀರು ನಿಂತು ಫುಟ್ಬಾಲ್ ಆಡುವುದಕ್ಕೂ ಸಾಧ್ಯವಾಗುವುದಿಲ್ಲ. ಎರಡು ತಿಂಗಳ ಹಿಂದೆಯೇ ಈ ಕ್ರೀಡಾಂಗಣದ ಅಭಿವೃದ್ಧಿಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ಶಂಕುಸ್ಥಾಪನೆ ನೆರವೇರಿಸಿದ್ದರೂ ಈವರೆಗೆ ಕಾಮಗಾರಿ ಮಾತ್ರ ಆರಂಭವಾಗಿಲ್ಲ ಎಂಬುದೂ ಫುಟ್ಬಾಲ್ ಪ್ರೇಮಿಗಳ ಆರೋಪವಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>