<p><strong>ಬೆಂಗಳೂರು:</strong> `ಸಾಹಿತ್ಯದಲ್ಲಿ ಆತ್ಮಕತೆಯ ಪ್ರಕಾರ ಹಾಗೂ ಆತ್ಮಕತೆಗಳ ಬಗ್ಗೆ ಹೆಚ್ಚಿನ ಚರ್ಚೆಯೇ ನಡೆಯದಿರುವುದು ದುರದೃಷ್ಟಕರ~ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ವಿಷಾದಿಸಿದರು.<br /> <br /> ಅಂಕಿತ ಪುಸ್ತಕವು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ `ಅಕ್ಕಚ್ಚುವಿನ ಅರಣ್ಯಪರ್ವ~ ಹಾಗೂ ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥರಾವ್ ಅವರ `ಇವತ್ತು- ನಿನ್ನೆ~ ಕಥಾ ಸಂಕಲನ ಕುರಿತು ಮಾತನಾಡಿದರು.<br /> <br /> `ಆತ್ಮಕತೆ ಬರೆಯುವುದೆಂದರೆ ಸರಳವಾದ ಕಾರ್ಯವಲ್ಲ, ಅದು ಸವಾಲಿನ ಕೆಲಸ. ಭೂತಕಾಲ ಮತ್ತು ವಾಸ್ತವದೊಂದಿಗೆ ಮುಖಾಮುಖಿಯಾಗಬೇಕಾಗುತ್ತದೆ. ಜೀವನದಲ್ಲಿ ನಡೆದ ಆಘಾತಕರ ಕ್ಷಣಗಳು, ದಾರುಣ ಘಟನೆಗಳನ್ನು ಸ್ಮರಿಸುತ್ತಾ ಮತ್ತೊಮ್ಮೆ ಬದುಕಿ ಬರೆಯಬೇಕಾಗುತ್ತದೆ~ ಎಂದರು.<br /> <br /> `ಪಾಶ್ಚಾತ್ಯ ದೇಶಗಳಲ್ಲಿ ಆತ್ಮಕತೆ ಬರಹವು ಬೌದ್ಧಿಕ ವಾಗ್ವಾದದ ನೆಲೆಯ ಮೇಲೆ ರೂಪುಗೊಳ್ಳುತ್ತದೆ. ಆದರೆ ಭಾರತೀಯ ಆತ್ಮಕತೆಗಳು ಸಾಂಸ್ಕೃತಿಕ ಸಂವಾದದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಪಾಶ್ಚಾತ್ಯ ಹಾಗೂ ಭಾರತೀಯ ಆತ್ಮಕತೆಗಳ ಅನುಭವದಲ್ಲಿ ಸಾಕಷ್ಟು ವ್ಯತ್ಯಾಸವಿದೆ~ ಎಂದು ಅಭಿಪ್ರಾಯಪಟ್ಟರು.<br /> <br /> `ವೆಂಕಟೇಶಮೂರ್ತಿ ಅವರು ಬಹುಪಾಲು ರೂಪಕ ಭಾಷೆಯ ಮೂಲಕ ಈ ಆತ್ಮಕತೆಯನ್ನು ಬರೆದಿದ್ದಾರೆ. ಇಲ್ಲಿ ಬರುವ ಅನೇಕ ಪಾತ್ರಗಳು ವೈಯಕ್ತಿಕತೆಯನ್ನು ಮೀರಿದ ಪಾತ್ರಗಳಾಗಿವೆ. ಲೋಕಾನುಭವ, ಕಾವ್ಯಾನುಭವ ನೀಡುವ ಪ್ರಯತ್ನ ಹೊಸ ಬಗೆಯ ಅನುಭವ ನೀಡುತ್ತದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> `ನಾಡಿನ ಸಂಸ್ಕೃತಿಯನ್ನು ರೂಪಿಸುವಲ್ಲಿ `ಪ್ರಜಾವಾಣಿ~ ಪತ್ರಿಕೆಯ ಪಾತ್ರ ಮಹತ್ವದ್ದು. ಅನೇಕ ಕತೆಗಾರರು, ಲೇಖಕರು, ವಿಮರ್ಶಕರನ್ನು ರೂಪಿಸಿದ ರಂಗನಾಥರಾವ್ ಅವರನ್ನು ಸಂಸ್ಕೃತಿಯ ಪೋಷಕರು ಎನ್ನಬಹುದು. ನವ್ಯ ಸಾಹಿತ್ಯದ ಬೆಳವಣಿಗೆಯ ಚರಿತ್ರೆಯನ್ನು ಬರೆಯಲು ಅವರು ಸಮರ್ಥರು~ ಎಂದರು.<br /> <br /> `ನಿರ್ದಿಷ್ಟ ಪ್ರಕಾರಗಳ ಹಂಗನ್ನು ಮುರಿಯುವುದು 21ನೇ ಶತಮಾನದ ಮುಖ್ಯ ಲಕ್ಷಣ. ರಂಗನಾಥರಾವ್ ಅವರು ಇದೇ ಪ್ರಯತ್ನ ಮಾಡಿದ್ದು, ಈ ಕತೆಗಳು ವಿಮರ್ಶೆಗೆ ಸವಾಲೊಡ್ಡುವ ರೀತಿಯಲ್ಲಿವೆ~ ಎಂದು ಹೇಳಿದರು.<br /> <br /> ಲೋಕಾರ್ಪಣೆಗೊಂಡ ಗೀತಾ ವಸಂತ ಅವರ `ಚೌಕಟ್ಟಿನಾಚೆಯವರು~ ಹಾಗೂ ಟಿ.ಆರ್. ಅನಂತರಾಮ್ ಅವರ `ಮರ್ಫಿಲಾ~ ಕೃತಿಗಳ ಕುರಿತು ಮಾತನಾಡಿದ ಎಚ್.ಎಸ್. ವೆಂಕಟೇಶಮೂರ್ತಿ, `ಅನಂತರಾಮ್ ಕೃತಿಯಲ್ಲಿ ಕನ್ನಡದ ಸೊಗಸನ್ನು ತೋರುವ ಚಾರುಕ್ತಿಗಳನ್ನು ಕಾಣಬಹುದು. ಅವರ ಬರಹದಲ್ಲಿ ಮೇಲ್ನೋಟಕ್ಕೆ ವ್ಯಂಗ್ಯ ಕಂಡರೂ ಜೀವನದ ಬಗ್ಗೆ ಗಂಭೀರ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ~ ಎಂದರು.<br /> <br /> `ಗೀತಾ ಹೆಣ್ಣು ಮಕ್ಕಳನ್ನೇ ಕೇಂದ್ರವಾಗಿಟ್ಟುಕೊಂಡು ಅವರ ನೋವು, ಮಾನಸಿಕ ತೊಳಲಾಟವನ್ನು ಆಳವಾಗಿ ಬಿಟ್ಟಿಡುವ ಪ್ರಯತ್ನ ಮಾಡಿದ್ದಾರೆ. ಸಿದ್ಧ ಚೌಕಟ್ಟನ್ನು ಮೀರಿದ ಅವರ ಬರವಣಿಗೆ ಆಕರ್ಷಕವಾಗಿದೆ~ ಎಂದು ಹೇಳಿದರು. ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ, ಜಿ.ಎನ್. ರಂಗನಾಥರಾವ್, ಟಿ.ಆರ್. ಅನಂತರಾಮ್ ಹಾಗೂ ಗೀತಾ ವಸಂತ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> `ಸಾಹಿತ್ಯದಲ್ಲಿ ಆತ್ಮಕತೆಯ ಪ್ರಕಾರ ಹಾಗೂ ಆತ್ಮಕತೆಗಳ ಬಗ್ಗೆ ಹೆಚ್ಚಿನ ಚರ್ಚೆಯೇ ನಡೆಯದಿರುವುದು ದುರದೃಷ್ಟಕರ~ ಎಂದು ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ವಿಷಾದಿಸಿದರು.<br /> <br /> ಅಂಕಿತ ಪುಸ್ತಕವು ನಗರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಂಡ ಕವಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರ `ಅಕ್ಕಚ್ಚುವಿನ ಅರಣ್ಯಪರ್ವ~ ಹಾಗೂ ಹಿರಿಯ ಪತ್ರಕರ್ತ ಜಿ.ಎನ್. ರಂಗನಾಥರಾವ್ ಅವರ `ಇವತ್ತು- ನಿನ್ನೆ~ ಕಥಾ ಸಂಕಲನ ಕುರಿತು ಮಾತನಾಡಿದರು.<br /> <br /> `ಆತ್ಮಕತೆ ಬರೆಯುವುದೆಂದರೆ ಸರಳವಾದ ಕಾರ್ಯವಲ್ಲ, ಅದು ಸವಾಲಿನ ಕೆಲಸ. ಭೂತಕಾಲ ಮತ್ತು ವಾಸ್ತವದೊಂದಿಗೆ ಮುಖಾಮುಖಿಯಾಗಬೇಕಾಗುತ್ತದೆ. ಜೀವನದಲ್ಲಿ ನಡೆದ ಆಘಾತಕರ ಕ್ಷಣಗಳು, ದಾರುಣ ಘಟನೆಗಳನ್ನು ಸ್ಮರಿಸುತ್ತಾ ಮತ್ತೊಮ್ಮೆ ಬದುಕಿ ಬರೆಯಬೇಕಾಗುತ್ತದೆ~ ಎಂದರು.<br /> <br /> `ಪಾಶ್ಚಾತ್ಯ ದೇಶಗಳಲ್ಲಿ ಆತ್ಮಕತೆ ಬರಹವು ಬೌದ್ಧಿಕ ವಾಗ್ವಾದದ ನೆಲೆಯ ಮೇಲೆ ರೂಪುಗೊಳ್ಳುತ್ತದೆ. ಆದರೆ ಭಾರತೀಯ ಆತ್ಮಕತೆಗಳು ಸಾಂಸ್ಕೃತಿಕ ಸಂವಾದದ ರೂಪದಲ್ಲಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಪಾಶ್ಚಾತ್ಯ ಹಾಗೂ ಭಾರತೀಯ ಆತ್ಮಕತೆಗಳ ಅನುಭವದಲ್ಲಿ ಸಾಕಷ್ಟು ವ್ಯತ್ಯಾಸವಿದೆ~ ಎಂದು ಅಭಿಪ್ರಾಯಪಟ್ಟರು.<br /> <br /> `ವೆಂಕಟೇಶಮೂರ್ತಿ ಅವರು ಬಹುಪಾಲು ರೂಪಕ ಭಾಷೆಯ ಮೂಲಕ ಈ ಆತ್ಮಕತೆಯನ್ನು ಬರೆದಿದ್ದಾರೆ. ಇಲ್ಲಿ ಬರುವ ಅನೇಕ ಪಾತ್ರಗಳು ವೈಯಕ್ತಿಕತೆಯನ್ನು ಮೀರಿದ ಪಾತ್ರಗಳಾಗಿವೆ. ಲೋಕಾನುಭವ, ಕಾವ್ಯಾನುಭವ ನೀಡುವ ಪ್ರಯತ್ನ ಹೊಸ ಬಗೆಯ ಅನುಭವ ನೀಡುತ್ತದೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.<br /> <br /> `ನಾಡಿನ ಸಂಸ್ಕೃತಿಯನ್ನು ರೂಪಿಸುವಲ್ಲಿ `ಪ್ರಜಾವಾಣಿ~ ಪತ್ರಿಕೆಯ ಪಾತ್ರ ಮಹತ್ವದ್ದು. ಅನೇಕ ಕತೆಗಾರರು, ಲೇಖಕರು, ವಿಮರ್ಶಕರನ್ನು ರೂಪಿಸಿದ ರಂಗನಾಥರಾವ್ ಅವರನ್ನು ಸಂಸ್ಕೃತಿಯ ಪೋಷಕರು ಎನ್ನಬಹುದು. ನವ್ಯ ಸಾಹಿತ್ಯದ ಬೆಳವಣಿಗೆಯ ಚರಿತ್ರೆಯನ್ನು ಬರೆಯಲು ಅವರು ಸಮರ್ಥರು~ ಎಂದರು.<br /> <br /> `ನಿರ್ದಿಷ್ಟ ಪ್ರಕಾರಗಳ ಹಂಗನ್ನು ಮುರಿಯುವುದು 21ನೇ ಶತಮಾನದ ಮುಖ್ಯ ಲಕ್ಷಣ. ರಂಗನಾಥರಾವ್ ಅವರು ಇದೇ ಪ್ರಯತ್ನ ಮಾಡಿದ್ದು, ಈ ಕತೆಗಳು ವಿಮರ್ಶೆಗೆ ಸವಾಲೊಡ್ಡುವ ರೀತಿಯಲ್ಲಿವೆ~ ಎಂದು ಹೇಳಿದರು.<br /> <br /> ಲೋಕಾರ್ಪಣೆಗೊಂಡ ಗೀತಾ ವಸಂತ ಅವರ `ಚೌಕಟ್ಟಿನಾಚೆಯವರು~ ಹಾಗೂ ಟಿ.ಆರ್. ಅನಂತರಾಮ್ ಅವರ `ಮರ್ಫಿಲಾ~ ಕೃತಿಗಳ ಕುರಿತು ಮಾತನಾಡಿದ ಎಚ್.ಎಸ್. ವೆಂಕಟೇಶಮೂರ್ತಿ, `ಅನಂತರಾಮ್ ಕೃತಿಯಲ್ಲಿ ಕನ್ನಡದ ಸೊಗಸನ್ನು ತೋರುವ ಚಾರುಕ್ತಿಗಳನ್ನು ಕಾಣಬಹುದು. ಅವರ ಬರಹದಲ್ಲಿ ಮೇಲ್ನೋಟಕ್ಕೆ ವ್ಯಂಗ್ಯ ಕಂಡರೂ ಜೀವನದ ಬಗ್ಗೆ ಗಂಭೀರ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ~ ಎಂದರು.<br /> <br /> `ಗೀತಾ ಹೆಣ್ಣು ಮಕ್ಕಳನ್ನೇ ಕೇಂದ್ರವಾಗಿಟ್ಟುಕೊಂಡು ಅವರ ನೋವು, ಮಾನಸಿಕ ತೊಳಲಾಟವನ್ನು ಆಳವಾಗಿ ಬಿಟ್ಟಿಡುವ ಪ್ರಯತ್ನ ಮಾಡಿದ್ದಾರೆ. ಸಿದ್ಧ ಚೌಕಟ್ಟನ್ನು ಮೀರಿದ ಅವರ ಬರವಣಿಗೆ ಆಕರ್ಷಕವಾಗಿದೆ~ ಎಂದು ಹೇಳಿದರು. ರಾಷ್ಟ್ರಕವಿ ಡಾ.ಜಿ.ಎಸ್. ಶಿವರುದ್ರಪ್ಪ, ಜಿ.ಎನ್. ರಂಗನಾಥರಾವ್, ಟಿ.ಆರ್. ಅನಂತರಾಮ್ ಹಾಗೂ ಗೀತಾ ವಸಂತ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>