<p><strong>ಮುಂಬೈ (ಪಿಟಿಐ): </strong>ಕಳಂಕಿತ ಆದರ್ಶ ಸಂಸ್ಥೆಯ ಸದಸ್ಯರು ತಮ್ಮ ತಪ್ಪನ್ನು ಅರಿತುಕೊಂಡು, ವಿವಾದಾತ್ಮಕ ವಸತಿ ಸಮುಚ್ಛಯವನ್ನು ರಕ್ಷಣಾ ಸಚಿವಾಲಯಕ್ಕೆ ಒಪ್ಪಿಸುವಂತೆ ಗುರುವಾರ ಸಲಹೆ ನೀಡಿರುವ ಬಾಂಬೆ ಹೈಕೋರ್ಟ್, `ದೇಶದ ಭದ್ರತೆಗೆ ಪ್ರಥಮ ಪ್ರಾಮುಖ್ಯತೆ~ ನೀಡಲು ಸೂಚಿಸಿದೆ.<br /> <br /> `ಸಂಸ್ಥೆ ತಪ್ಪನ್ನು ಒಪ್ಪಿಕೊಂಡು, ವಿವಾದಿತ ಕಟ್ಟಡವನ್ನು ಸಂಬಂಧಿಸಿದವರಿಗೆ ವಾಪಸು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನೀವು ತಪ್ಪು ಮಾಡಿರಬಹುದು. ಆದರೆ ಹೃದಯವನ್ನು ಬದಲಿಸಿಕೊಳ್ಳಲು ಅವಕಾಶವಿದೆ. ನೀವು ಕೊಲೆಗಾರರಲ್ಲ ಅಥವಾ ಉಗ್ರಗಾಮಿಗಳಲ್ಲ ಅಥವಾ ಕಟ್ಟಾ ಅಪರಾಧಿಗಳಲ್ಲ. ಆದ್ದರಿಂದ ಕಟ್ಟಡವನ್ನು ರಕ್ಷಣಾ ಸಚಿವಾಲಯಕ್ಕೆ ಹಿಂತಿರುಗಿಸಿ~ ಎಂದು ನ್ಯಾಯಮೂರ್ತಿಗಳಾದ ಪಿ.ಬಿ. ಮಜುಂದಾರ್ ಮತ್ತು ಆರ್.ಡಿ. ಧನುಕಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಕಿವಿಮಾತು ಹೇಳಿತು.<br /> <br /> `ನಾವು ಉಗ್ರರ ದಾಳಿಯಿಂದ ಪಾಠ ಕಲಿಯಬೇಕಿದೆ. ಉಗ್ರರು ತಾಜ್ ಹೋಟೆಲ್ ತನಕ ಈಗಾಗಲೇ ಬಂದಿದ್ದಾರೆ. ನಾಳೆ ಅವರು ಸೂಕ್ಷ್ಮ ರಕ್ಷಣಾ ತಾಣಗಳ ಮೇಲೆ ದಾಳಿ ನಡೆಸಬಹುದು. ದೇಶದ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು~ <br /> <br /> `ಆದರ್ಶ ಸಂಸ್ಥೆಗೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಮತ್ತು ಯೋಜನಾ ಪ್ರಾಧಿಕಾರ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ ನ್ಯಾಯಪೀಠ, `ರಕ್ಷಣಾ ಸಚಿವಾಲಯದಿಂದ ಏಕೆ ನಿರಾಕ್ಷೇಪಣಾಪತ್ರ ಕೇಳಲಿಲ್ಲ? ಈ ಭೂಮಿ ರಕ್ಷಣಾ ನೆಲೆಗಳಿಗೆ ಬಹಳ ಸಮೀಪದಲ್ಲಿದ್ದು, ಆಡಳಿತವು ಅನುಮತಿ ಮಂಜೂರು ಮಾಡುವ ಮುನ್ನ ಭದ್ರತಾ ಅಂಶ ಪರಿಶೀಲಿಸಬೇಕಿತ್ತು~ ಎಂದು ನ್ಯಾಯಪೀಠ ಹೇಳಿದೆ.</p>.<p><strong>ಅಧಿಕಾರಿಗಳ ಅಮಾನತು<br /> ಮುಂಬೈ (ಪಿಟಿಐ): </strong>ತಮ್ಮ ಹತ್ತಿರದ ಬಂಧುಗಳು ಮತ್ತು ಇತರ ಅನರ್ಹರಿಗೆ ಸದಸ್ಯತ್ವ ಮಂಜೂರು ಸೇರಿದಂತೆ ಆದರ್ಶ ವಸತಿ ಹಗರಣದಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರ ಸರ್ಕಾರದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ಗುರುವಾರ ಅಮಾನತು ಮಾಡಲಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): </strong>ಕಳಂಕಿತ ಆದರ್ಶ ಸಂಸ್ಥೆಯ ಸದಸ್ಯರು ತಮ್ಮ ತಪ್ಪನ್ನು ಅರಿತುಕೊಂಡು, ವಿವಾದಾತ್ಮಕ ವಸತಿ ಸಮುಚ್ಛಯವನ್ನು ರಕ್ಷಣಾ ಸಚಿವಾಲಯಕ್ಕೆ ಒಪ್ಪಿಸುವಂತೆ ಗುರುವಾರ ಸಲಹೆ ನೀಡಿರುವ ಬಾಂಬೆ ಹೈಕೋರ್ಟ್, `ದೇಶದ ಭದ್ರತೆಗೆ ಪ್ರಥಮ ಪ್ರಾಮುಖ್ಯತೆ~ ನೀಡಲು ಸೂಚಿಸಿದೆ.<br /> <br /> `ಸಂಸ್ಥೆ ತಪ್ಪನ್ನು ಒಪ್ಪಿಕೊಂಡು, ವಿವಾದಿತ ಕಟ್ಟಡವನ್ನು ಸಂಬಂಧಿಸಿದವರಿಗೆ ವಾಪಸು ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನೀವು ತಪ್ಪು ಮಾಡಿರಬಹುದು. ಆದರೆ ಹೃದಯವನ್ನು ಬದಲಿಸಿಕೊಳ್ಳಲು ಅವಕಾಶವಿದೆ. ನೀವು ಕೊಲೆಗಾರರಲ್ಲ ಅಥವಾ ಉಗ್ರಗಾಮಿಗಳಲ್ಲ ಅಥವಾ ಕಟ್ಟಾ ಅಪರಾಧಿಗಳಲ್ಲ. ಆದ್ದರಿಂದ ಕಟ್ಟಡವನ್ನು ರಕ್ಷಣಾ ಸಚಿವಾಲಯಕ್ಕೆ ಹಿಂತಿರುಗಿಸಿ~ ಎಂದು ನ್ಯಾಯಮೂರ್ತಿಗಳಾದ ಪಿ.ಬಿ. ಮಜುಂದಾರ್ ಮತ್ತು ಆರ್.ಡಿ. ಧನುಕಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ಕಿವಿಮಾತು ಹೇಳಿತು.<br /> <br /> `ನಾವು ಉಗ್ರರ ದಾಳಿಯಿಂದ ಪಾಠ ಕಲಿಯಬೇಕಿದೆ. ಉಗ್ರರು ತಾಜ್ ಹೋಟೆಲ್ ತನಕ ಈಗಾಗಲೇ ಬಂದಿದ್ದಾರೆ. ನಾಳೆ ಅವರು ಸೂಕ್ಷ್ಮ ರಕ್ಷಣಾ ತಾಣಗಳ ಮೇಲೆ ದಾಳಿ ನಡೆಸಬಹುದು. ದೇಶದ ಭದ್ರತೆಗೆ ಮೊದಲ ಆದ್ಯತೆ ನೀಡಬೇಕು~ <br /> <br /> `ಆದರ್ಶ ಸಂಸ್ಥೆಗೆ ಬೃಹತ್ ಮುಂಬೈ ಮಹಾನಗರ ಪಾಲಿಕೆ ಮತ್ತು ಯೋಜನಾ ಪ್ರಾಧಿಕಾರ ಅನುಮತಿ ನೀಡಿರುವುದನ್ನು ಪ್ರಶ್ನಿಸಿದ ನ್ಯಾಯಪೀಠ, `ರಕ್ಷಣಾ ಸಚಿವಾಲಯದಿಂದ ಏಕೆ ನಿರಾಕ್ಷೇಪಣಾಪತ್ರ ಕೇಳಲಿಲ್ಲ? ಈ ಭೂಮಿ ರಕ್ಷಣಾ ನೆಲೆಗಳಿಗೆ ಬಹಳ ಸಮೀಪದಲ್ಲಿದ್ದು, ಆಡಳಿತವು ಅನುಮತಿ ಮಂಜೂರು ಮಾಡುವ ಮುನ್ನ ಭದ್ರತಾ ಅಂಶ ಪರಿಶೀಲಿಸಬೇಕಿತ್ತು~ ಎಂದು ನ್ಯಾಯಪೀಠ ಹೇಳಿದೆ.</p>.<p><strong>ಅಧಿಕಾರಿಗಳ ಅಮಾನತು<br /> ಮುಂಬೈ (ಪಿಟಿಐ): </strong>ತಮ್ಮ ಹತ್ತಿರದ ಬಂಧುಗಳು ಮತ್ತು ಇತರ ಅನರ್ಹರಿಗೆ ಸದಸ್ಯತ್ವ ಮಂಜೂರು ಸೇರಿದಂತೆ ಆದರ್ಶ ವಸತಿ ಹಗರಣದಲ್ಲಿ ಅವ್ಯವಹಾರ ನಡೆಸಿದ ಆರೋಪದ ಮೇಲೆ ಮಹಾರಾಷ್ಟ್ರ ಸರ್ಕಾರದ ಇಬ್ಬರು ಹಿರಿಯ ಐಎಎಸ್ ಅಧಿಕಾರಿಗಳನ್ನು ಗುರುವಾರ ಅಮಾನತು ಮಾಡಲಾಗಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>