<p><strong>ಮುಂಬೈ (ಪಿಟಿಐ): </strong>ಬಹುಕೋಟಿ ಆದರ್ಶ ವಸತಿ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್ ಸೇರಿದಂತೆ 13 ಜನರ ವಿರುದ್ಧ ಸಿಬಿಐ ಬುಧವಾರ ಆರೋಪ ಪಟ್ಟಿ ದಾಖಲಿಸಿದೆ. <br /> <br /> ಪ್ರಕರಣ ದಾಖಲಿಸಿದ ಸುಮಾರು 18 ತಿಂಗಳುಗಳ ನಂತರ ಹತ್ತು ಸಾವಿರ ಪುಟಗಳನ್ನು ಒಳಗೊಂಡ ಆರೋಪ ಪಟ್ಟಿಯನ್ನು ಸಿಬಿಐ ಪೊಲೀಸರು ಇಲ್ಲಿಯ ಸೆಷನ್ಸ್ ಕೋರ್ಟ್ ರಿಜಿಸ್ಟ್ರಾರ್ಗೆ ಸಲ್ಲಿಸಿದರು. ಚವಾಣ್ ರಾಜೀನಾಮೆಗೆ ಕಾರಣವಾದ ಈ ಹಗರಣ ಮಹಾರಾಷ್ಟ್ರ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು.<br /> <br /> ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಳೆದ ವರ್ಷದ ಜನವರಿ 29ರಂದು ಚವಾಣ್, ಅಧಿಕಾರಿಗಳು ಹಾಗೂ ನಿವೃತ್ತ ಸೇನಾ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. ಹಗರಣದಲ್ಲಿ ಆರೋಪಿತ 14 ಜನರಲ್ಲಿ ಸಿಬಿಐ ಈಗಾಗಲೆ 9 ಜನರನ್ನು ಬಂಧಿಸಿತ್ತು. ಅವರೆಲ್ಲ ಜಾಮೀನಿನ ಮೇಲೆ ಹೊರಬಂದಿದ್ದಾರೆ. <br /> <br /> ಈ ನಡುವೆ ಹಗರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆಯ ಮಧ್ಯಪ್ರವೇಶಕ್ಕೆ ಅನುಮತಿ ನೀಡಿರುವ ಬಾಂಬೆ ಹೈಕೋರ್ಟ್, ಈ ಹಗರಣವನ್ನು ಸಿಬಿಐ ಕೈಗೆತ್ತಿಕೊಳ್ಳಬಾರದು ಎಂಬ ಮಹಾರಾಷ್ಟ್ರ ಸರ್ಕಾರದ ನಿಲುವಿನ ಕುರಿತು ಎರಡು ವಾರದೊಳಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿದೆ.<br /> <br /> ಆದರ್ಶ ವಸತಿ ಸಮುಚ್ಚಯದ ಜಾಗ ತನ್ನ ವ್ಯಾಪ್ತಿಯದ್ದಾಗಿರುವುದರಿಂದ ಈ ಸಂಬಂಧದ ತನಿಖೆಯನ್ನು ಸಿಬಿಐ ಕೈಗೊಳ್ಳುವಂತಿಲ್ಲ ಎಂಬ ಮಹಾರಾಷ್ಟ್ರ ಸರ್ಕಾರದ ವಾದವನ್ನು ರಕ್ಷಣಾ ಇಲಾಖೆಯ ವಕೀಲ ಕೆವಿಕ್ ಸೆತಲ್ವಾಡ್ ವಿರೋಧಿಸಿದ್ದಾರೆ. ಸೆತಾಲ್ವಾಡ್ ಮನವಿ ಮೇರೆಗೆ ರಕ್ಷಣಾ ಇಲಾಖೆಯ ಮಧ್ಯಪ್ರವೇಶಕ್ಕೆ ಕೋರ್ಟ್ ಇದೀಗ ಅನುಮತಿ ನೀಡಿದೆ.<br /> <br /> <strong>ವಿರೋಧಿಗಳ ಸಂಚು: </strong>ಸಿಬಿಐ ಕ್ರಮದ ಕುರಿತು ಪ್ರತಿಕ್ರಿಯಿಸಿರುವ ಅಶೋಕ ಚವಾಣ್, `ತಮ್ಮನ್ನು ಮೂಲೆಗುಂಪು ಮಾಡಲು ವಿರೋಧಿಗಳು ಹೆಣೆದ ಸಂಚು ಇದಾಗಿದ್ದು, ಆರೋಪ ಪಟ್ಟಿ ಸಲ್ಲಿಸಿದ್ದು ಅನಿರೀಕ್ಷಿತ, ದುರದೃಷ್ಟಕರ~ ಎಂದಿದ್ದಾರೆ.<br /> <br /> ಈ ನಡುವೆ ಹಗರಣದಲ್ಲಿ ಭಾಗಿಯಾದ ಮತ್ತಷ್ಟು ಹಿರಿಯ ಕಾಂಗ್ರೆಸ್ ಮುಖಂಡರ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖಂಡ ಏಕನಾಥ ಖಡ್ಸೆ ಆಗ್ರಹಿಸಿದ್ದಾರೆ.<br /> <br /> <strong>ಏನಿದು `ಆದರ್ಶ~ ಹಗರಣ?</strong><br /> ಮುಂಬೈನ ಕೊಲಾಬಾದಲ್ಲಿ ತಲೆ ಎತ್ತಿ ನಿಂತಿರುವ ಆದರ್ಶ ಗೃಹನಿರ್ಮಾಣ ಸಂಘಕ್ಕೆ ಸೇರಿದ ಬಹುಮಹಡಿಗಳ ವಸತಿ ಸಮುಚ್ಚಯ `ಭ್ರಷ್ಟಾಚಾರದ ಸ್ಮಾರಕ~ ಎಂದೇ ಬಣ್ಣಿಸಲಾಗುತ್ತಿದೆ. <br /> <br /> ರಕ್ಷಣಾ ಇಲಾಖೆ ಸಿಬ್ಬಂದಿ ನಿರ್ಮಿಸಿಕೊಂಡ ಆದರ್ಶ ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ ರಾಜ್ಯ ಸರ್ಕಾರ ಜಾಗ ನೀಡಿತ್ತು. ಕಾರ್ಗಿಲ್ ಕಾಳಗದಲ್ಲಿ ಮೃತಪಟ್ಟ ಯೋಧರ ಪತ್ನಿಯರಿಗಾಗಿ ಹಾಗೂ ಕಾಳಗದಲ್ಲಿ ಪಾಲ್ಗೊಂಡ ಯೋಧರಿಗಾಗಿಯೇ ಈ ವಸತಿ ಸಮುಚ್ಚಯ ನಿರ್ಮಿಸುವ ಉದ್ದೇಶ ಹೊಂದಲಾಗಿತ್ತು. <br /> <br /> ವಸತಿ ಸಮುಚ್ಚಯದಲ್ಲಿ ಸೇನಾ ಸಿಬ್ಬಂದಿ ಜತೆಗೆ ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕಡಿಮೆ ದರದಲ್ಲಿ ಫ್ಲ್ಯಾಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಶೇ 40 ರಷ್ಟು ರಕ್ಷಣಾ ಇಲಾಖೆಯೇತರ ಜನರಿಗೆ ಫ್ಲ್ಯಾಟ್ ಪಡೆಯಲು ಆಗಿನ ಮುಖ್ಯಮಂತ್ರಿ ಅಶೋಕ್ ಚವಾಣ್ ಅನುಮತಿ ನೀಡಿದ ಆರೋಪ ಇದೆ. <br /> <br /> ಪ್ರಕರಣದ ತನಿಖೆ ಕೈಗೊಂಡ ಸಿಬಿಐ, ಮಾಜಿ ಮುಖ್ಯಮಂತ್ರಿಗಳಾದ ಸುಶೀಲಕುಮಾರ ಸಿಂಧೆ, ವಿಲಾಸರಾವ್ ದೇಶಮುಖ ಹಾಗೂ ಅಶೋಕ್ ಚವಾಣ್ ವಿರುದ್ಧವೂ ಆರೋಪ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ): </strong>ಬಹುಕೋಟಿ ಆದರ್ಶ ವಸತಿ ಹಗರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ್ ಸೇರಿದಂತೆ 13 ಜನರ ವಿರುದ್ಧ ಸಿಬಿಐ ಬುಧವಾರ ಆರೋಪ ಪಟ್ಟಿ ದಾಖಲಿಸಿದೆ. <br /> <br /> ಪ್ರಕರಣ ದಾಖಲಿಸಿದ ಸುಮಾರು 18 ತಿಂಗಳುಗಳ ನಂತರ ಹತ್ತು ಸಾವಿರ ಪುಟಗಳನ್ನು ಒಳಗೊಂಡ ಆರೋಪ ಪಟ್ಟಿಯನ್ನು ಸಿಬಿಐ ಪೊಲೀಸರು ಇಲ್ಲಿಯ ಸೆಷನ್ಸ್ ಕೋರ್ಟ್ ರಿಜಿಸ್ಟ್ರಾರ್ಗೆ ಸಲ್ಲಿಸಿದರು. ಚವಾಣ್ ರಾಜೀನಾಮೆಗೆ ಕಾರಣವಾದ ಈ ಹಗರಣ ಮಹಾರಾಷ್ಟ್ರ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು.<br /> <br /> ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕಳೆದ ವರ್ಷದ ಜನವರಿ 29ರಂದು ಚವಾಣ್, ಅಧಿಕಾರಿಗಳು ಹಾಗೂ ನಿವೃತ್ತ ಸೇನಾ ಸಿಬ್ಬಂದಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ. ಹಗರಣದಲ್ಲಿ ಆರೋಪಿತ 14 ಜನರಲ್ಲಿ ಸಿಬಿಐ ಈಗಾಗಲೆ 9 ಜನರನ್ನು ಬಂಧಿಸಿತ್ತು. ಅವರೆಲ್ಲ ಜಾಮೀನಿನ ಮೇಲೆ ಹೊರಬಂದಿದ್ದಾರೆ. <br /> <br /> ಈ ನಡುವೆ ಹಗರಣಕ್ಕೆ ಸಂಬಂಧಿಸಿದಂತೆ ರಕ್ಷಣಾ ಇಲಾಖೆಯ ಮಧ್ಯಪ್ರವೇಶಕ್ಕೆ ಅನುಮತಿ ನೀಡಿರುವ ಬಾಂಬೆ ಹೈಕೋರ್ಟ್, ಈ ಹಗರಣವನ್ನು ಸಿಬಿಐ ಕೈಗೆತ್ತಿಕೊಳ್ಳಬಾರದು ಎಂಬ ಮಹಾರಾಷ್ಟ್ರ ಸರ್ಕಾರದ ನಿಲುವಿನ ಕುರಿತು ಎರಡು ವಾರದೊಳಗೆ ಪ್ರಮಾಣಪತ್ರ ಸಲ್ಲಿಸಲು ಸೂಚಿಸಿದೆ.<br /> <br /> ಆದರ್ಶ ವಸತಿ ಸಮುಚ್ಚಯದ ಜಾಗ ತನ್ನ ವ್ಯಾಪ್ತಿಯದ್ದಾಗಿರುವುದರಿಂದ ಈ ಸಂಬಂಧದ ತನಿಖೆಯನ್ನು ಸಿಬಿಐ ಕೈಗೊಳ್ಳುವಂತಿಲ್ಲ ಎಂಬ ಮಹಾರಾಷ್ಟ್ರ ಸರ್ಕಾರದ ವಾದವನ್ನು ರಕ್ಷಣಾ ಇಲಾಖೆಯ ವಕೀಲ ಕೆವಿಕ್ ಸೆತಲ್ವಾಡ್ ವಿರೋಧಿಸಿದ್ದಾರೆ. ಸೆತಾಲ್ವಾಡ್ ಮನವಿ ಮೇರೆಗೆ ರಕ್ಷಣಾ ಇಲಾಖೆಯ ಮಧ್ಯಪ್ರವೇಶಕ್ಕೆ ಕೋರ್ಟ್ ಇದೀಗ ಅನುಮತಿ ನೀಡಿದೆ.<br /> <br /> <strong>ವಿರೋಧಿಗಳ ಸಂಚು: </strong>ಸಿಬಿಐ ಕ್ರಮದ ಕುರಿತು ಪ್ರತಿಕ್ರಿಯಿಸಿರುವ ಅಶೋಕ ಚವಾಣ್, `ತಮ್ಮನ್ನು ಮೂಲೆಗುಂಪು ಮಾಡಲು ವಿರೋಧಿಗಳು ಹೆಣೆದ ಸಂಚು ಇದಾಗಿದ್ದು, ಆರೋಪ ಪಟ್ಟಿ ಸಲ್ಲಿಸಿದ್ದು ಅನಿರೀಕ್ಷಿತ, ದುರದೃಷ್ಟಕರ~ ಎಂದಿದ್ದಾರೆ.<br /> <br /> ಈ ನಡುವೆ ಹಗರಣದಲ್ಲಿ ಭಾಗಿಯಾದ ಮತ್ತಷ್ಟು ಹಿರಿಯ ಕಾಂಗ್ರೆಸ್ ಮುಖಂಡರ ವಿರುದ್ಧವೂ ಆರೋಪ ಪಟ್ಟಿ ಸಲ್ಲಿಸಬೇಕು ಎಂದು ವಿಧಾನಸಭೆ ವಿರೋಧ ಪಕ್ಷದ ಮುಖಂಡ ಏಕನಾಥ ಖಡ್ಸೆ ಆಗ್ರಹಿಸಿದ್ದಾರೆ.<br /> <br /> <strong>ಏನಿದು `ಆದರ್ಶ~ ಹಗರಣ?</strong><br /> ಮುಂಬೈನ ಕೊಲಾಬಾದಲ್ಲಿ ತಲೆ ಎತ್ತಿ ನಿಂತಿರುವ ಆದರ್ಶ ಗೃಹನಿರ್ಮಾಣ ಸಂಘಕ್ಕೆ ಸೇರಿದ ಬಹುಮಹಡಿಗಳ ವಸತಿ ಸಮುಚ್ಚಯ `ಭ್ರಷ್ಟಾಚಾರದ ಸ್ಮಾರಕ~ ಎಂದೇ ಬಣ್ಣಿಸಲಾಗುತ್ತಿದೆ. <br /> <br /> ರಕ್ಷಣಾ ಇಲಾಖೆ ಸಿಬ್ಬಂದಿ ನಿರ್ಮಿಸಿಕೊಂಡ ಆದರ್ಶ ಗೃಹ ನಿರ್ಮಾಣ ಸಹಕಾರಿ ಸಂಘಕ್ಕೆ ರಾಜ್ಯ ಸರ್ಕಾರ ಜಾಗ ನೀಡಿತ್ತು. ಕಾರ್ಗಿಲ್ ಕಾಳಗದಲ್ಲಿ ಮೃತಪಟ್ಟ ಯೋಧರ ಪತ್ನಿಯರಿಗಾಗಿ ಹಾಗೂ ಕಾಳಗದಲ್ಲಿ ಪಾಲ್ಗೊಂಡ ಯೋಧರಿಗಾಗಿಯೇ ಈ ವಸತಿ ಸಮುಚ್ಚಯ ನಿರ್ಮಿಸುವ ಉದ್ದೇಶ ಹೊಂದಲಾಗಿತ್ತು. <br /> <br /> ವಸತಿ ಸಮುಚ್ಚಯದಲ್ಲಿ ಸೇನಾ ಸಿಬ್ಬಂದಿ ಜತೆಗೆ ಪ್ರಭಾವಿ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಕಡಿಮೆ ದರದಲ್ಲಿ ಫ್ಲ್ಯಾಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಶೇ 40 ರಷ್ಟು ರಕ್ಷಣಾ ಇಲಾಖೆಯೇತರ ಜನರಿಗೆ ಫ್ಲ್ಯಾಟ್ ಪಡೆಯಲು ಆಗಿನ ಮುಖ್ಯಮಂತ್ರಿ ಅಶೋಕ್ ಚವಾಣ್ ಅನುಮತಿ ನೀಡಿದ ಆರೋಪ ಇದೆ. <br /> <br /> ಪ್ರಕರಣದ ತನಿಖೆ ಕೈಗೊಂಡ ಸಿಬಿಐ, ಮಾಜಿ ಮುಖ್ಯಮಂತ್ರಿಗಳಾದ ಸುಶೀಲಕುಮಾರ ಸಿಂಧೆ, ವಿಲಾಸರಾವ್ ದೇಶಮುಖ ಹಾಗೂ ಅಶೋಕ್ ಚವಾಣ್ ವಿರುದ್ಧವೂ ಆರೋಪ ಮಾಡಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>