<p><strong>ವಿಜಾಪುರ:</strong> ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಆನಂದ ಮಹಲ್ ಸಮೀಪ ಒಳಚರಂಡಿ ಕಾಮಗಾರಿಗೆ ನೆಲ ಅಗೆಯುವ ಸಂದರ್ಭದಲ್ಲಿ ಆದಿಲ್ಶಾಹಿ ಕಾಲದ ನೀರಿನ ಕಾಲುವೆ (ಸುರಂಗ ಮಾರ್ಗ) ಪತ್ತೆಯಾಗಿದೆ.<br /> <br /> ಈಗಿರುವ ರಸ್ತೆಯ ತಳಭಾಗದಲ್ಲಿ ಅಡ್ಡಲಾಗಿ ಇರುವ ಈ ಸುರಂಗ ಮಾರ್ಗ ಅಂದಾಜು ಐದು ಅಡಿಯಷ್ಟು ಅಗಲ, 2-3 ಅಡಿಯಷ್ಟು ಎತ್ತರವಿದೆ. ಜೆಸಿಬಿ ಯಂತ್ರದ ಸಹಾಯದಿಂದ ನೆಲ ಅಗೆಯುವ ಸಂದರ್ಭದಲ್ಲಿ ಪತ್ತೆಯಾದ ಈ ಸುರಂಗ ಮಾರ್ಗ ನೋಡಲು ಜನ ಮುಗಿಬಿದ್ದರು. ಕೆಲವರು ನಿಧಿ ಇದೆಯೇ? ನಿಧಿ ದೊರೆತಿದೆಯೇ? ಎಂದು ಇಣುಕಿ ಇಣುಕಿ ನೋಡುತ್ತಿದ್ದರು.<br /> <br /> `ಮೊದಲ ಅಲಿ ಆದಿಲ್ಶಾಹಿ ಕಾಲದಲ್ಲಿ ಅಂದರೆ 1570ರಿಂದ 1580ರ ಅವಧಿಯಲ್ಲಿ ನಿರ್ಮಾಣ ಗೊಂಡ ನೀರಿನ ಕಾಲುವೆ (ಸುರಂಗ ಮಾರ್ಗ) ಇದು. ಆಗ ಪೈಪ್ಲೈನ್ನ ಪರಿಕಲ್ಪನೆ ಇರಲಿಲ್ಲ. ಹೀಗಾಗಿ ಭೂಮಿಯಲ್ಲಿ ಸುರಂಗ ಮಾರ್ಗ ಕೊರೆದು ಕಾಲುವೆ ನಿರ್ಮಿಸಿ ಅದರಿಂದ ನೀರು ತರುತ್ತಿದ್ದರು~ ಎಂದು ಇಲ್ಲಿಯ ಹಿರಿಯ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.<br /> <br /> `ಈಗಿನ ಆನಂದ ಮಹಲ್ ಆಗ ಅರಸರ ಅರಮನೆಯಾಗಿತ್ತು. ತೊರವಿಯಿಂದ ನೀರಿನ ಒಂದು ಮಾರ್ಗ ಅರಮನೆಯ ವರೆಗೆ ಬಂದಿದೆ. ಇನ್ನೊಂದು ಮಾರ್ಗ ಚಾಂದ್ ಬಾವಡಿ ವರೆಗೆ ಬಂದಿದೆ. ಈಗ ಪತ್ತೆಯಾಗಿರುವ ಸುರಂಗ ಕಾಲುವೆ ಅರಮನೆಗೆ ನೀರು ಪೂರೈಸಲು ನಿರ್ಮಸಲಾಗಿತ್ತು~ ಎಂಬುದು ಅವರ ವಿವರಣೆ.<br /> <br /> `1650ರ ನಂತರ ಬೇಗಂ ತಾಲಾಬ್ನಿಂದ ನೀರು ಪೂರೈಕೆ ವ್ಯವಸ್ಥೆ ಮಾಡುವ ಹೊತ್ತಿಗೆ ಮಣ್ಣಿನ ಪೈಪ್ಗಳನ್ನು ತಯಾರಿಸುವ ಪರಿಕಲ್ಪನೆ ಬಂದಿತ್ತು. ಈ ಸಂದರ್ಭದಲ್ಲಿ ಮಣ್ಣಿನಿಂದ ತಯಾರಿಸಿದ ಪೈಪ್ಗಳನ್ನು ಅಳವಡಿಸಲಾಗಿದೆ~ ಎಂದು ಡಾ.ಕುಲಕರ್ಣಿ ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಿಜಾಪುರ:</strong> ಇಲ್ಲಿಯ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಆನಂದ ಮಹಲ್ ಸಮೀಪ ಒಳಚರಂಡಿ ಕಾಮಗಾರಿಗೆ ನೆಲ ಅಗೆಯುವ ಸಂದರ್ಭದಲ್ಲಿ ಆದಿಲ್ಶಾಹಿ ಕಾಲದ ನೀರಿನ ಕಾಲುವೆ (ಸುರಂಗ ಮಾರ್ಗ) ಪತ್ತೆಯಾಗಿದೆ.<br /> <br /> ಈಗಿರುವ ರಸ್ತೆಯ ತಳಭಾಗದಲ್ಲಿ ಅಡ್ಡಲಾಗಿ ಇರುವ ಈ ಸುರಂಗ ಮಾರ್ಗ ಅಂದಾಜು ಐದು ಅಡಿಯಷ್ಟು ಅಗಲ, 2-3 ಅಡಿಯಷ್ಟು ಎತ್ತರವಿದೆ. ಜೆಸಿಬಿ ಯಂತ್ರದ ಸಹಾಯದಿಂದ ನೆಲ ಅಗೆಯುವ ಸಂದರ್ಭದಲ್ಲಿ ಪತ್ತೆಯಾದ ಈ ಸುರಂಗ ಮಾರ್ಗ ನೋಡಲು ಜನ ಮುಗಿಬಿದ್ದರು. ಕೆಲವರು ನಿಧಿ ಇದೆಯೇ? ನಿಧಿ ದೊರೆತಿದೆಯೇ? ಎಂದು ಇಣುಕಿ ಇಣುಕಿ ನೋಡುತ್ತಿದ್ದರು.<br /> <br /> `ಮೊದಲ ಅಲಿ ಆದಿಲ್ಶಾಹಿ ಕಾಲದಲ್ಲಿ ಅಂದರೆ 1570ರಿಂದ 1580ರ ಅವಧಿಯಲ್ಲಿ ನಿರ್ಮಾಣ ಗೊಂಡ ನೀರಿನ ಕಾಲುವೆ (ಸುರಂಗ ಮಾರ್ಗ) ಇದು. ಆಗ ಪೈಪ್ಲೈನ್ನ ಪರಿಕಲ್ಪನೆ ಇರಲಿಲ್ಲ. ಹೀಗಾಗಿ ಭೂಮಿಯಲ್ಲಿ ಸುರಂಗ ಮಾರ್ಗ ಕೊರೆದು ಕಾಲುವೆ ನಿರ್ಮಿಸಿ ಅದರಿಂದ ನೀರು ತರುತ್ತಿದ್ದರು~ ಎಂದು ಇಲ್ಲಿಯ ಹಿರಿಯ ಸಂಶೋಧಕ ಡಾ.ಕೃಷ್ಣ ಕೊಲ್ಹಾರ ಕುಲಕರ್ಣಿ ಹೇಳಿದರು.<br /> <br /> `ಈಗಿನ ಆನಂದ ಮಹಲ್ ಆಗ ಅರಸರ ಅರಮನೆಯಾಗಿತ್ತು. ತೊರವಿಯಿಂದ ನೀರಿನ ಒಂದು ಮಾರ್ಗ ಅರಮನೆಯ ವರೆಗೆ ಬಂದಿದೆ. ಇನ್ನೊಂದು ಮಾರ್ಗ ಚಾಂದ್ ಬಾವಡಿ ವರೆಗೆ ಬಂದಿದೆ. ಈಗ ಪತ್ತೆಯಾಗಿರುವ ಸುರಂಗ ಕಾಲುವೆ ಅರಮನೆಗೆ ನೀರು ಪೂರೈಸಲು ನಿರ್ಮಸಲಾಗಿತ್ತು~ ಎಂಬುದು ಅವರ ವಿವರಣೆ.<br /> <br /> `1650ರ ನಂತರ ಬೇಗಂ ತಾಲಾಬ್ನಿಂದ ನೀರು ಪೂರೈಕೆ ವ್ಯವಸ್ಥೆ ಮಾಡುವ ಹೊತ್ತಿಗೆ ಮಣ್ಣಿನ ಪೈಪ್ಗಳನ್ನು ತಯಾರಿಸುವ ಪರಿಕಲ್ಪನೆ ಬಂದಿತ್ತು. ಈ ಸಂದರ್ಭದಲ್ಲಿ ಮಣ್ಣಿನಿಂದ ತಯಾರಿಸಿದ ಪೈಪ್ಗಳನ್ನು ಅಳವಡಿಸಲಾಗಿದೆ~ ಎಂದು ಡಾ.ಕುಲಕರ್ಣಿ ಹೇಳಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>