<p>ನವದೆಹಲಿ/ ವಿಶಾಖಪಟ್ಟಣ (ಪಿಟಿಐ/ ಐಎಎನ್ಎಸ್): ಭಾರತೀಯ ಸೇನೆಯ ಎರಡು ಪ್ರಮುಖ ತುಕಡಿಗಳು ಸರ್ಕಾರಕ್ಕೆ ಪೂರ್ವಭಾವಿಯಾಗಿ ತಿಳಿಸದೆ ಜನವರಿ 16-17ರ ಮಧ್ಯರಾತ್ರಿ ರಾಜಧಾನಿ ನವದೆಹಲಿಯೆಡೆಗೆ ಅನುಮಾನಾಸ್ಪದವಾಗಿ ಧಾವಿಸುತ್ತಿದ್ದವು ಎಂಬ ಮಾಧ್ಯಮ ವರದಿಯು ಸಂಪೂರ್ಣ ಆಧಾರರಹಿತ ಹಾಗೂ ಅನಗತ್ಯವಾಗಿ ಗಾಬರಿ ಹುಟ್ಟಿಸುವಂಥದ್ದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದ್ದಾರೆ.<br /> <br /> ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಸುದ್ದಿಗಾರರ ಜತೆ ಮಾತನಾಡಿ, ಕ್ಷಿಪ್ರಕ್ರಾಂತಿ ನಡೆಸುವ ಉದ್ದೇಶದಿಂದ ಸೇನಾಪಡೆಯ ತುಕಡಿಗಳು ರಾಷ್ಟ್ರದ ಅಧಿಕಾರ ಶಕ್ತಿಕೇಂದ್ರವಾದ ರಾಜಧಾನಿಯೆಡೆಗೆ ಹೀಗೆ ಧಾವಿಸುತ್ತಿದ್ದವು ಎಂಬ ಅರ್ಥ ಮೂಡಿಸಿರುವ ಈ ವರದಿಯನ್ನು ಜನತೆ ಯಥಾವತ್ ನಂಬಬಾರದು ಎಂದೂ ಕೋರಿದ್ದಾರೆ.<br /> <br /> ಇದೇ ವೇಳೆ ಪ್ರಧಾನಿಯವರು ಸರ್ಕಾರ ಹಾಗೂ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರ ನಡುವಿನ ಸಂಘರ್ಷದ ಬಗ್ಗೆಯೂ ಮಾತನಾಡಿದರು.<br /> <br /> `ಸೇನಾ ಮುಖ್ಯಸ್ಥರ ಕಚೇರಿಗೆ ತನ್ನದೇ ಹಿರಿಮೆ ಇದೆ. ಅದರ ಘನತೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲೂ ಇದೆ~ ಎಂದರು.<br /> <br /> ವಿಶಾಖಪಟ್ಟಣದಲ್ಲಿ ಅಣ್ವಸ್ತ್ರ ಚಾಲಿತ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸಮರ್ಪಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಕ್ಷಣಾ ಸಚಿವ ಎ.ಕೆ.ಆಂಟನಿ, ವರದಿಯನ್ನು ಸಂಪೂರ್ಣ ಆಧಾರರಹಿತ ಎಂದಿದ್ದಾರೆ.<br /> <br /> `ಸೇನಾ ಪಡೆಗಳು ಹೀಗೆ ಧಾವಿಸುವುದು ಸಾಮಾನ್ಯ. ಇದರಲ್ಲಿ ವಿಶೇಷವೇನೂ ಇಲ್ಲ. ನಮ್ಮ ಸಶಸ್ತ್ರ ಪಡೆಗಳ ರಾಷ್ಟ್ರಪ್ರೇಮದ ಬಗ್ಗೆ ಅನುಮಾನ ಪಡುವ ಅಗತ್ಯವೇ ಇಲ್ಲ~ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.ರಾಷ್ಟ್ರಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಯೋಧರ ರಾಷ್ಟ್ರಪ್ರೇಮವನ್ನು ಪ್ರಶ್ನಿಸಬಾರದು ಎಂದು ಆಂಟನಿ ಇದೇ ವೇಳೆ ಮಾಧ್ಯಮಗಳಿಗೆ ಮನವಿ ಮಾಡಿದರು.<br /> <br /> ಇದಕ್ಕೆ ಮುನ್ನ ರಕ್ಷಣಾ ಇಲಾಖೆ ವಕ್ತಾರ ಸೀತಾಂಶು ಕೌರ್ ಕೂಡ ವರದಿಯನ್ನು ಆಧಾರರಹಿತ ಹಾಗೂ ದೋಷಪೂರ್ಣ ಎಂದು ತಳ್ಳಿಹಾಕಿದ್ದರು.<br /> <br /> ಇದಕ್ಕೆ ಮುನ್ನ, ಬಿಜೆಪಿಯ ಪ್ರಧಾನಿಯವರನ್ನು, ಜ16-17ರ ನಡುವಿನ ರಾತ್ರಿ ನಿಜವಾಗಿ ಏನು ನಡೆಯಿತೆಂಬುದರ ಬಗ್ಗೆ ವಿವರಿಸಲು ಒತ್ತಾಯಿಸಿತು.ಬಿಜೆಪಿ ನಾಯಕ ಬಲಬೀರ್ ಪುಂಜ್ ಅವರು, ಸೇನೆ ಹಾಗೂ ಸರ್ಕಾರದ ನಡುವೆ ವಿಶ್ವಾಸಕ್ಕೆ ಭಂಗ ಬಂದಿದೆ ಎಂದು ಟೀಕಿಸಿದರು.<br /> <br /> <strong>ವರದಿಯಲ್ಲಿ ಇದ್ದದ್ದು ಏನು?: </strong>ಹರಿಯಾಣದ ಹಿಸಾರ್ ನೆಲೆಯ ವಾಹನ ಸಜ್ಜಿತ ಪದಾತಿದಳ ಹಾಗೂ ಆಗ್ರಾದಲ್ಲಿ ನೆಲೆಯಾಗಿರುವ ಪ್ಯಾರಾ ಬ್ರಿಗೇಡ್ ವೈಮಾನಿಕ ತುಕಡಿಗಳು ರಕ್ಷಣಾ ಸಚಿವಾಲಯಕ್ಕೆ ಮುಂಚಿತವಾಗಿ ತಿಳಿಸದೇ ರಾಜಧಾನಿಯತ್ತ ಧಾವಿಸುತ್ತಿದ್ದವು ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು.<br /> <br /> ಅದೇ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರು ತಮ್ಮ ಜನ್ಮದಿನಾಂಕ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರಿಂದ, ಸೇನಾ ಪಡೆಗಳ ಈ ಚಲನೆಯು ದೆಹಲಿಯಲ್ಲಿ ಶಂಕೆ ಹಾಗೂ ಆತಂಕವನ್ನು ಹುಟ್ಟುಹಾಕಿತ್ತು ಎಂದು ವರದಿ ವಿವರಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ/ ವಿಶಾಖಪಟ್ಟಣ (ಪಿಟಿಐ/ ಐಎಎನ್ಎಸ್): ಭಾರತೀಯ ಸೇನೆಯ ಎರಡು ಪ್ರಮುಖ ತುಕಡಿಗಳು ಸರ್ಕಾರಕ್ಕೆ ಪೂರ್ವಭಾವಿಯಾಗಿ ತಿಳಿಸದೆ ಜನವರಿ 16-17ರ ಮಧ್ಯರಾತ್ರಿ ರಾಜಧಾನಿ ನವದೆಹಲಿಯೆಡೆಗೆ ಅನುಮಾನಾಸ್ಪದವಾಗಿ ಧಾವಿಸುತ್ತಿದ್ದವು ಎಂಬ ಮಾಧ್ಯಮ ವರದಿಯು ಸಂಪೂರ್ಣ ಆಧಾರರಹಿತ ಹಾಗೂ ಅನಗತ್ಯವಾಗಿ ಗಾಬರಿ ಹುಟ್ಟಿಸುವಂಥದ್ದು ಎಂದು ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಕ್ಷಣಾ ಸಚಿವ ಎ.ಕೆ.ಆಂಟನಿ ಹೇಳಿದ್ದಾರೆ.<br /> <br /> ರಾಷ್ಟ್ರಪತಿ ಭವನದಲ್ಲಿ ಪದ್ಮ ಪ್ರಶಸ್ತಿಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಸುದ್ದಿಗಾರರ ಜತೆ ಮಾತನಾಡಿ, ಕ್ಷಿಪ್ರಕ್ರಾಂತಿ ನಡೆಸುವ ಉದ್ದೇಶದಿಂದ ಸೇನಾಪಡೆಯ ತುಕಡಿಗಳು ರಾಷ್ಟ್ರದ ಅಧಿಕಾರ ಶಕ್ತಿಕೇಂದ್ರವಾದ ರಾಜಧಾನಿಯೆಡೆಗೆ ಹೀಗೆ ಧಾವಿಸುತ್ತಿದ್ದವು ಎಂಬ ಅರ್ಥ ಮೂಡಿಸಿರುವ ಈ ವರದಿಯನ್ನು ಜನತೆ ಯಥಾವತ್ ನಂಬಬಾರದು ಎಂದೂ ಕೋರಿದ್ದಾರೆ.<br /> <br /> ಇದೇ ವೇಳೆ ಪ್ರಧಾನಿಯವರು ಸರ್ಕಾರ ಹಾಗೂ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರ ನಡುವಿನ ಸಂಘರ್ಷದ ಬಗ್ಗೆಯೂ ಮಾತನಾಡಿದರು.<br /> <br /> `ಸೇನಾ ಮುಖ್ಯಸ್ಥರ ಕಚೇರಿಗೆ ತನ್ನದೇ ಹಿರಿಮೆ ಇದೆ. ಅದರ ಘನತೆಗೆ ಚ್ಯುತಿ ಬಾರದಂತೆ ನೋಡಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲೂ ಇದೆ~ ಎಂದರು.<br /> <br /> ವಿಶಾಖಪಟ್ಟಣದಲ್ಲಿ ಅಣ್ವಸ್ತ್ರ ಚಾಲಿತ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸಮರ್ಪಿಸಿದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಕ್ಷಣಾ ಸಚಿವ ಎ.ಕೆ.ಆಂಟನಿ, ವರದಿಯನ್ನು ಸಂಪೂರ್ಣ ಆಧಾರರಹಿತ ಎಂದಿದ್ದಾರೆ.<br /> <br /> `ಸೇನಾ ಪಡೆಗಳು ಹೀಗೆ ಧಾವಿಸುವುದು ಸಾಮಾನ್ಯ. ಇದರಲ್ಲಿ ವಿಶೇಷವೇನೂ ಇಲ್ಲ. ನಮ್ಮ ಸಶಸ್ತ್ರ ಪಡೆಗಳ ರಾಷ್ಟ್ರಪ್ರೇಮದ ಬಗ್ಗೆ ಅನುಮಾನ ಪಡುವ ಅಗತ್ಯವೇ ಇಲ್ಲ~ ಎಂದು ಸಚಿವರು ಸಮರ್ಥಿಸಿಕೊಂಡಿದ್ದಾರೆ.ರಾಷ್ಟ್ರಕ್ಕಾಗಿ ಪ್ರಾಣದ ಹಂಗು ತೊರೆದು ಹೋರಾಡುತ್ತಿರುವ ಯೋಧರ ರಾಷ್ಟ್ರಪ್ರೇಮವನ್ನು ಪ್ರಶ್ನಿಸಬಾರದು ಎಂದು ಆಂಟನಿ ಇದೇ ವೇಳೆ ಮಾಧ್ಯಮಗಳಿಗೆ ಮನವಿ ಮಾಡಿದರು.<br /> <br /> ಇದಕ್ಕೆ ಮುನ್ನ ರಕ್ಷಣಾ ಇಲಾಖೆ ವಕ್ತಾರ ಸೀತಾಂಶು ಕೌರ್ ಕೂಡ ವರದಿಯನ್ನು ಆಧಾರರಹಿತ ಹಾಗೂ ದೋಷಪೂರ್ಣ ಎಂದು ತಳ್ಳಿಹಾಕಿದ್ದರು.<br /> <br /> ಇದಕ್ಕೆ ಮುನ್ನ, ಬಿಜೆಪಿಯ ಪ್ರಧಾನಿಯವರನ್ನು, ಜ16-17ರ ನಡುವಿನ ರಾತ್ರಿ ನಿಜವಾಗಿ ಏನು ನಡೆಯಿತೆಂಬುದರ ಬಗ್ಗೆ ವಿವರಿಸಲು ಒತ್ತಾಯಿಸಿತು.ಬಿಜೆಪಿ ನಾಯಕ ಬಲಬೀರ್ ಪುಂಜ್ ಅವರು, ಸೇನೆ ಹಾಗೂ ಸರ್ಕಾರದ ನಡುವೆ ವಿಶ್ವಾಸಕ್ಕೆ ಭಂಗ ಬಂದಿದೆ ಎಂದು ಟೀಕಿಸಿದರು.<br /> <br /> <strong>ವರದಿಯಲ್ಲಿ ಇದ್ದದ್ದು ಏನು?: </strong>ಹರಿಯಾಣದ ಹಿಸಾರ್ ನೆಲೆಯ ವಾಹನ ಸಜ್ಜಿತ ಪದಾತಿದಳ ಹಾಗೂ ಆಗ್ರಾದಲ್ಲಿ ನೆಲೆಯಾಗಿರುವ ಪ್ಯಾರಾ ಬ್ರಿಗೇಡ್ ವೈಮಾನಿಕ ತುಕಡಿಗಳು ರಕ್ಷಣಾ ಸಚಿವಾಲಯಕ್ಕೆ ಮುಂಚಿತವಾಗಿ ತಿಳಿಸದೇ ರಾಜಧಾನಿಯತ್ತ ಧಾವಿಸುತ್ತಿದ್ದವು ಎಂದು ಮಾಧ್ಯಮದಲ್ಲಿ ವರದಿಯಾಗಿತ್ತು.<br /> <br /> ಅದೇ ಸಂದರ್ಭದಲ್ಲಿ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರು ತಮ್ಮ ಜನ್ಮದಿನಾಂಕ ವಿವಾದಕ್ಕೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಏರಿದ್ದರಿಂದ, ಸೇನಾ ಪಡೆಗಳ ಈ ಚಲನೆಯು ದೆಹಲಿಯಲ್ಲಿ ಶಂಕೆ ಹಾಗೂ ಆತಂಕವನ್ನು ಹುಟ್ಟುಹಾಕಿತ್ತು ಎಂದು ವರದಿ ವಿವರಿಸಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>