ಆನೆ ದಂತ ಮಾರಾಟ: ಆರೋಪಿಗಳ ಬಂಧನ
ಆನೇಕಲ್: ಆನೆ ದಂತ ಮಾರಾಟ ಮಾಡುತ್ತಿದ್ದ ಏಳು ಮಂದಿಯನ್ನು ಬಂಧಿಸಿ ಆರೋಪಿಗಳಿಂದ ಆರು ದಂತ ಹಾಗೂ ಒಂದು ನಾಡಬಂದೂಕನ್ನು ಹೆಬ್ಬಗೋಡಿ ಪೊಲೀಸರು ಶನಿವಾರ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡಿನ ಡೆಂಕಣಿಕೋಟೆ ಮೂಲದ ಚಂದ್ರಯ್ಯ (20), ಬಸವರಾಜು (38), ಬಸವಲಿಂಗಯ್ಯ (30), ಮುರುಗನ್ (32), ಬೆಂಗಳೂರಿನ ಜೀವನ್ ಭೀಮಾ ನಗರದ ಕ್ರಿಸ್ತದಾಸ್ (28), ಶೇಖರ್ (45), ಅಂತೋಣಿಸ್ವಾಮಿ (25) ಬಂಧಿತರು. ತಾಲ್ಲೂಕಿನ ಚಂದಾಪುರ ಸಂತೆಯಲ್ಲಿ ಆನೆ ದಂತ ವ್ಯಾಪಾರ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಹೆಬ್ಬಗೋಡಿ ಪಿಎಸ್ಸೈ ಶಶಿಧರ್ ನೇತೃತ್ವದಲ್ಲಿ ಈ ದಾಳಿ ನಡೆಸಲಾಗಿದೆ.
ಹೆಬ್ಬಗೋಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.