<p><strong>ಕಾಬೂಲ್ (ಐಎಎನ್ಎಸ್/ ಕ್ಸಿನ್ಹುವಾ/ಎಪಿ): </strong>ಆಫ್ಘಾನಿಸ್ತಾನದ ರಾಷ್ಟ್ರಪತಿ ಭವನದ ಮೇಲೆ ದಾಳಿ ನಡೆಸಿದ ತಾಲಿಬಾನ್ ಉಗ್ರಗಾಮಿಗಳನ್ನು ಮಂಗಳವಾರ ಸೇನೆ ಹತ್ಯೆಗೈದಿದೆ.<br /> <br /> ಮಂಗಳವಾರ ಬೆಳ್ಳಂಬೆಳಿಗ್ಗೆ 6.30ರ ಸಮಯದಲ್ಲಿ ನಕಲಿ ಪ್ರವೇಶ ಪತ್ರಗಳೊಂದಿಗೆ ಇಲ್ಲಿನ ರಾಷ್ಟ್ರಪತಿ ಭವನದ ಒಂದನೇ ದ್ವಾರವನ್ನು ಪ್ರವೇಶಿಸಲೆತ್ನಿಸಿದ ತಾಲಿಬಾನ್ ಉಗ್ರರಿದ್ದ ವಾಹನವನ್ನು ಭದ್ರತಾ ಪಡೆಗಳು ತಡೆದಾಗ ಉಗ್ರರು ಗುಂಡಿನ ದಾಳಿ ನಡೆಸಿದರು.<br /> <br /> ರಾಕೆಟ್ ಹಾಗೂ ಗ್ರೆನೇಡ್ಗಳಿಂದ ದಾಳಿ ನಡೆಸಲಾಯಿತೆಂದು ಹೇಳಲಾಗಿದೆ. ಅಲ್ಲದೆ ಕಾರ್ ಬಾಂಬ್ನ್ನು ಉಗ್ರರು ಸ್ಫೋಟಿಸಿದ್ದು, ಒಟ್ಟು 12 ಸ್ಫೋಟಗಳು ರಾಷ್ಟ್ರಪತಿ ಭವನದ ಆವರಣದಲ್ಲಿ ಸಂಭವಿಸಿದವೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.<br /> <br /> ತಕ್ಷಣವೇ ಸುತ್ತುವರೆದ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿ ನಾಲ್ವರು ಉಗ್ರರನ್ನು ಕೊಂದು ಹಾಕಿದರು ಎಂದು ಕಾಬೂಲ್ನ ಮುಖ್ಯ ಪೊಲೀಸ್ ಅಧಿಕಾರಿ ಮಹಮ್ಮದ್ ಅಯೂಬ್ ಸಾಲಂಗಿ ಅವರು ತಿಳಿಸಿದ್ದಾರೆ.<br /> <br /> ಕಾರ್ಯಾಚರಣೆ ವೇಳೆ ಒಬ್ಬ ರಕ್ಷಣಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಬೂಲ್ (ಐಎಎನ್ಎಸ್/ ಕ್ಸಿನ್ಹುವಾ/ಎಪಿ): </strong>ಆಫ್ಘಾನಿಸ್ತಾನದ ರಾಷ್ಟ್ರಪತಿ ಭವನದ ಮೇಲೆ ದಾಳಿ ನಡೆಸಿದ ತಾಲಿಬಾನ್ ಉಗ್ರಗಾಮಿಗಳನ್ನು ಮಂಗಳವಾರ ಸೇನೆ ಹತ್ಯೆಗೈದಿದೆ.<br /> <br /> ಮಂಗಳವಾರ ಬೆಳ್ಳಂಬೆಳಿಗ್ಗೆ 6.30ರ ಸಮಯದಲ್ಲಿ ನಕಲಿ ಪ್ರವೇಶ ಪತ್ರಗಳೊಂದಿಗೆ ಇಲ್ಲಿನ ರಾಷ್ಟ್ರಪತಿ ಭವನದ ಒಂದನೇ ದ್ವಾರವನ್ನು ಪ್ರವೇಶಿಸಲೆತ್ನಿಸಿದ ತಾಲಿಬಾನ್ ಉಗ್ರರಿದ್ದ ವಾಹನವನ್ನು ಭದ್ರತಾ ಪಡೆಗಳು ತಡೆದಾಗ ಉಗ್ರರು ಗುಂಡಿನ ದಾಳಿ ನಡೆಸಿದರು.<br /> <br /> ರಾಕೆಟ್ ಹಾಗೂ ಗ್ರೆನೇಡ್ಗಳಿಂದ ದಾಳಿ ನಡೆಸಲಾಯಿತೆಂದು ಹೇಳಲಾಗಿದೆ. ಅಲ್ಲದೆ ಕಾರ್ ಬಾಂಬ್ನ್ನು ಉಗ್ರರು ಸ್ಫೋಟಿಸಿದ್ದು, ಒಟ್ಟು 12 ಸ್ಫೋಟಗಳು ರಾಷ್ಟ್ರಪತಿ ಭವನದ ಆವರಣದಲ್ಲಿ ಸಂಭವಿಸಿದವೆಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.<br /> <br /> ತಕ್ಷಣವೇ ಸುತ್ತುವರೆದ ಭದ್ರತಾ ಪಡೆಗಳು ಪ್ರತಿ ದಾಳಿ ನಡೆಸಿ ನಾಲ್ವರು ಉಗ್ರರನ್ನು ಕೊಂದು ಹಾಕಿದರು ಎಂದು ಕಾಬೂಲ್ನ ಮುಖ್ಯ ಪೊಲೀಸ್ ಅಧಿಕಾರಿ ಮಹಮ್ಮದ್ ಅಯೂಬ್ ಸಾಲಂಗಿ ಅವರು ತಿಳಿಸಿದ್ದಾರೆ.<br /> <br /> ಕಾರ್ಯಾಚರಣೆ ವೇಳೆ ಒಬ್ಬ ರಕ್ಷಣಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>