<p><strong>ಕಾರವಾರ:</strong> ಅಂಗವಿಕಲರ ಶ್ರೇಯೋಭಿ ವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ, ಸರ್ಕಾರದ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ, ನಿಗದಿತ ಸಮಯಕ್ಕೆ ದೊರೆಯದಿರುವುದರಿಂದ ಜಿಲ್ಲೆಯ ಅಂಗವಿಕಲರ ಬದುಕು ಆರಕ್ಕೇರದು, ಮೂರಕ್ಕಿಳಿಯದು ಎನ್ನುವಂತಾಗಿದೆ.<br /> <br /> ಹೌದು. ಜಿಲ್ಲೆಯಲ್ಲಿ ಒಟ್ಟು 17,488 ಅಂಗವಿಕಲರಿದ್ದು, ಅಧಿಕಾರಿ ಗಳ ವಿಳಂಬ ನೀತಿಯಿಂದ ಅವರು ಸೌಲಭ್ಯ ಪಡೆಯುವುದಕ್ಕಾಗಿ ಸರ್ಕಾರಿ ಕಚೇರಿಗಳತ್ತ ಅಲೆಯುತ್ತಿದ್ದಾರೆ.<br /> <br /> ಅಂಗವಿಕಲರಲ್ಲಿ ಕೆಲವರು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡರೆ ಮತ್ತೆ ಕೆಲವರು ಸರ್ಕಾರದ ಸೌಲಭ್ಯವನ್ನು ನಿರೀಕ್ಷಿಸದೇ ಸ್ವ ಉದ್ಯೋಗ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವರು ರಸ್ತೆಬದಿಗಳಲ್ಲಿ ಸಣ್ಣಪುಟ್ಟ ಅಂಗಡಿಗಳನ್ನಿಟ್ಟುಕೊಂಡು ಸ್ವಾವಲಂಬಿಯಾಗಿ ದುಡಿಯುತ್ತಿದ್ದಾರೆ.<br /> <br /> ‘ಅಂಗವಿಕಲರಿಗೆ ಸಿಗುವ ಮಾಸಾಶನ ಕೆಲ ತಿಂಗಳಿಂದ ಸ್ವಲ್ಪ ಹೆಚ್ಚಳ ಮಾಡಲಾಗಿದೆ. ಶೇ 40–77ರಷ್ಟು ವೈಕಲ್ಯ ಇರುವವರಿಗೆ ₨ 400ರಿಂದ ₨ 500ಕ್ಕೆ ಹಾಗೂ ಶೇ 75ರಿಂದ ಶೇ 100ರಷ್ಟು ವೈಕಲ್ಯ ಇರುವವರಿಗೆ ₨ 1,000ದಿಂದ ₨ 1,200ಗೆ ಹೆಚ್ಚಳ ಮಾಡಲಾಗಿದೆ. ಆದರೆ, ಅಂಗವಿಕಲತೆ ಇರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆದುಕೊಳ್ಳಲು ಹೋದರೆ ವೈದ್ಯರು ವಿಳಂಬ ನೀತಿ ಅನುಸರಿಸು ತ್ತಾರೆ ಮತ್ತು ಲಂಚ ಕೇಳುತ್ತಾರೆ’ ಎಂದು ಹೆಸರು ಹೇಳಲಿಚ್ಛಿಸದ ಅಂಗವಿಕಲರೊಬ್ಬರು ದೂರಿದರು.<br /> <br /> ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಸೈಕಲ್, ದೃಷ್ಟಿಹೀನರಿಗೆ ಕೋಲು (ವಾಕಿಂಗ್ ಸ್ಟಿಕ್), ಕಿವುಡರಿಗೆ ಶಬ್ದ ಕೇಳುವ ಸಾಧನಗಳು ಸೇರಿದಂತೆ ವಿವಿಧ ಸಾಧನೋಪಕರಣಗಳನ್ನು ವಿತರಿಸಲಾಗುತ್ತದೆ. ಆದರೆ, ಈ ಸಾಧನಗಳನ್ನು ಪಡೆದುಕೊಳ್ಳಲು ರಾಜಕೀಯ ಲಾಬಿ ನಡೆಸಲಾಗುತ್ತಿದೆ. ಇದರಿಂದ ಹೆಚ್ಚಿನ ಅಂಗವೈಕಲ್ಯ ಇರುವವರಿಗೆ ಈ ಸೌಲಭ್ಯಗಳು ಸರಿಯಾಗಿ ಲಭ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.<br /> <br /> ‘ಅಂಗವಿಕಲರಿಗೆ ₨ 550 ಪಡೆದು ಕೆಎಸ್ಆರ್ಟಿಸಿ ಬಸ್ಪಾಸ್ ನೀಡುತ್ತಿದೆ. ಈ ಪಾಸ್ನಲ್ಲಿ 100 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಬಹುದು ಎಂಬ ನಿಯಮವಿದೆ. ಆದರೆ, 75 ಕಿ.ಮೀ.ಗಿಂತ ದೂರ ಕ್ರಮಿಸಿದರೆ ಸಾಕು ನಿರ್ವಾಹಕರು ಹಣ ಕೇಳುತ್ತಾರೆ’ ಎಂದು ಸುರೇಶ್ ತಾಂಡೇಲ್ ‘ಪ್ರಜಾವಾಣಿ’ಯೊಂದಿಗೆ ಅವಲತ್ತು ಕೊಂಡರು.<br /> <br /> <strong>17,488 ಅಂಗವಿಕಲರು: </strong> ಜಿಲ್ಲೆಯಲ್ಲಿರುವ 17, 488 ಅಂಗವಿಕಲ ರಿದ್ದು, ಈ ಪೈಕಿ ದೈಹಿಕ ಹೂನತೆ, ಅಂಧತ್ವ, ಮಂದದೃಷ್ಟಿ, ಶ್ರವಣದೋಷ, ಬುದ್ಧಿಮಾಂದ್ಯ, ಮಾನಸಿಕ ಅಸ್ವಸ್ಥರು ಸೇರಿದ್ದಾರೆ.<br /> <br /> ಒಟ್ಟು ಅಂಗವಿಕಲರ ಸಂಖ್ಯೆಯಲ್ಲಿ 9 ಸಾವಿರಕ್ಕಿಂತ ಹೆಚ್ಚು ಮಂದಿ ದೈಹಿಕ ನ್ಯೂನ್ಯತೆ ಉಳ್ಳವರಾಗಿದ್ದಾರೆ.</p>.<p><strong>ಸಮರ್ಪಕವಾಗಿ ಬಳಕೆಯಾಗದ ಅನುದಾನ</strong><br /> ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ ಸರ್ಕಾರದಿಂದ ವರ್ಷದಿಂದ ಒಂದು ಕೋಟಿ ಅನುದಾನ ಬರುತ್ತದೆ. ಇದರಲ್ಲಿ ಶೇ 3ರಷ್ಟು ಹಣವನ್ನು ಅಂಗವಿಕಲರ ಅಭಿವೃದ್ಧಿಗೆ ಬಳಸಬೇಕು ಎಂಬ ನಿಯಮವಿದೆ. ಆದರೆ, ಪಂಚಾಯ್ತಿಗಳು ಆ ಹಣವನ್ನು ಇತರೆ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ವ್ಯಯ ಮಾಡುತ್ತಿವೆ.</p>.<p><strong>-ಪ್ರವೀಣ್ಕುಮಾರ್ ಶೆಟ್ಟಿ ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಮತ್ತು ಪಾಲಕರ ಒಕ್ಕೂಟ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾರವಾರ:</strong> ಅಂಗವಿಕಲರ ಶ್ರೇಯೋಭಿ ವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಹಾಕಿಕೊಂಡಿದೆ. ಆದರೆ, ಸರ್ಕಾರದ ಸೌಲಭ್ಯಗಳು ನಿಜವಾದ ಫಲಾನುಭವಿಗಳಿಗೆ, ನಿಗದಿತ ಸಮಯಕ್ಕೆ ದೊರೆಯದಿರುವುದರಿಂದ ಜಿಲ್ಲೆಯ ಅಂಗವಿಕಲರ ಬದುಕು ಆರಕ್ಕೇರದು, ಮೂರಕ್ಕಿಳಿಯದು ಎನ್ನುವಂತಾಗಿದೆ.<br /> <br /> ಹೌದು. ಜಿಲ್ಲೆಯಲ್ಲಿ ಒಟ್ಟು 17,488 ಅಂಗವಿಕಲರಿದ್ದು, ಅಧಿಕಾರಿ ಗಳ ವಿಳಂಬ ನೀತಿಯಿಂದ ಅವರು ಸೌಲಭ್ಯ ಪಡೆಯುವುದಕ್ಕಾಗಿ ಸರ್ಕಾರಿ ಕಚೇರಿಗಳತ್ತ ಅಲೆಯುತ್ತಿದ್ದಾರೆ.<br /> <br /> ಅಂಗವಿಕಲರಲ್ಲಿ ಕೆಲವರು ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡರೆ ಮತ್ತೆ ಕೆಲವರು ಸರ್ಕಾರದ ಸೌಲಭ್ಯವನ್ನು ನಿರೀಕ್ಷಿಸದೇ ಸ್ವ ಉದ್ಯೋಗ ಮಾಡಿ ಕೊಂಡು ಜೀವನ ಸಾಗಿಸುತ್ತಿದ್ದಾರೆ. ಇನ್ನು ಕೆಲವರು ರಸ್ತೆಬದಿಗಳಲ್ಲಿ ಸಣ್ಣಪುಟ್ಟ ಅಂಗಡಿಗಳನ್ನಿಟ್ಟುಕೊಂಡು ಸ್ವಾವಲಂಬಿಯಾಗಿ ದುಡಿಯುತ್ತಿದ್ದಾರೆ.<br /> <br /> ‘ಅಂಗವಿಕಲರಿಗೆ ಸಿಗುವ ಮಾಸಾಶನ ಕೆಲ ತಿಂಗಳಿಂದ ಸ್ವಲ್ಪ ಹೆಚ್ಚಳ ಮಾಡಲಾಗಿದೆ. ಶೇ 40–77ರಷ್ಟು ವೈಕಲ್ಯ ಇರುವವರಿಗೆ ₨ 400ರಿಂದ ₨ 500ಕ್ಕೆ ಹಾಗೂ ಶೇ 75ರಿಂದ ಶೇ 100ರಷ್ಟು ವೈಕಲ್ಯ ಇರುವವರಿಗೆ ₨ 1,000ದಿಂದ ₨ 1,200ಗೆ ಹೆಚ್ಚಳ ಮಾಡಲಾಗಿದೆ. ಆದರೆ, ಅಂಗವಿಕಲತೆ ಇರುವ ಬಗ್ಗೆ ವೈದ್ಯಕೀಯ ಪ್ರಮಾಣ ಪತ್ರ ಪಡೆದುಕೊಳ್ಳಲು ಹೋದರೆ ವೈದ್ಯರು ವಿಳಂಬ ನೀತಿ ಅನುಸರಿಸು ತ್ತಾರೆ ಮತ್ತು ಲಂಚ ಕೇಳುತ್ತಾರೆ’ ಎಂದು ಹೆಸರು ಹೇಳಲಿಚ್ಛಿಸದ ಅಂಗವಿಕಲರೊಬ್ಬರು ದೂರಿದರು.<br /> <br /> ‘ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಅಂಗವಿಕಲರಿಗೆ ತ್ರಿಚಕ್ರ ಸೈಕಲ್, ದೃಷ್ಟಿಹೀನರಿಗೆ ಕೋಲು (ವಾಕಿಂಗ್ ಸ್ಟಿಕ್), ಕಿವುಡರಿಗೆ ಶಬ್ದ ಕೇಳುವ ಸಾಧನಗಳು ಸೇರಿದಂತೆ ವಿವಿಧ ಸಾಧನೋಪಕರಣಗಳನ್ನು ವಿತರಿಸಲಾಗುತ್ತದೆ. ಆದರೆ, ಈ ಸಾಧನಗಳನ್ನು ಪಡೆದುಕೊಳ್ಳಲು ರಾಜಕೀಯ ಲಾಬಿ ನಡೆಸಲಾಗುತ್ತಿದೆ. ಇದರಿಂದ ಹೆಚ್ಚಿನ ಅಂಗವೈಕಲ್ಯ ಇರುವವರಿಗೆ ಈ ಸೌಲಭ್ಯಗಳು ಸರಿಯಾಗಿ ಲಭ್ಯವಾಗುತ್ತಿಲ್ಲ’ ಎಂದು ಆರೋಪಿಸಿದರು.<br /> <br /> ‘ಅಂಗವಿಕಲರಿಗೆ ₨ 550 ಪಡೆದು ಕೆಎಸ್ಆರ್ಟಿಸಿ ಬಸ್ಪಾಸ್ ನೀಡುತ್ತಿದೆ. ಈ ಪಾಸ್ನಲ್ಲಿ 100 ಕಿ.ಮೀ ವ್ಯಾಪ್ತಿಯಲ್ಲಿ ಸಂಚರಿಸಬಹುದು ಎಂಬ ನಿಯಮವಿದೆ. ಆದರೆ, 75 ಕಿ.ಮೀ.ಗಿಂತ ದೂರ ಕ್ರಮಿಸಿದರೆ ಸಾಕು ನಿರ್ವಾಹಕರು ಹಣ ಕೇಳುತ್ತಾರೆ’ ಎಂದು ಸುರೇಶ್ ತಾಂಡೇಲ್ ‘ಪ್ರಜಾವಾಣಿ’ಯೊಂದಿಗೆ ಅವಲತ್ತು ಕೊಂಡರು.<br /> <br /> <strong>17,488 ಅಂಗವಿಕಲರು: </strong> ಜಿಲ್ಲೆಯಲ್ಲಿರುವ 17, 488 ಅಂಗವಿಕಲ ರಿದ್ದು, ಈ ಪೈಕಿ ದೈಹಿಕ ಹೂನತೆ, ಅಂಧತ್ವ, ಮಂದದೃಷ್ಟಿ, ಶ್ರವಣದೋಷ, ಬುದ್ಧಿಮಾಂದ್ಯ, ಮಾನಸಿಕ ಅಸ್ವಸ್ಥರು ಸೇರಿದ್ದಾರೆ.<br /> <br /> ಒಟ್ಟು ಅಂಗವಿಕಲರ ಸಂಖ್ಯೆಯಲ್ಲಿ 9 ಸಾವಿರಕ್ಕಿಂತ ಹೆಚ್ಚು ಮಂದಿ ದೈಹಿಕ ನ್ಯೂನ್ಯತೆ ಉಳ್ಳವರಾಗಿದ್ದಾರೆ.</p>.<p><strong>ಸಮರ್ಪಕವಾಗಿ ಬಳಕೆಯಾಗದ ಅನುದಾನ</strong><br /> ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಹಾಗೂ ಗ್ರಾಮ ಪಂಚಾಯ್ತಿಗಳಿಗೆ ಸರ್ಕಾರದಿಂದ ವರ್ಷದಿಂದ ಒಂದು ಕೋಟಿ ಅನುದಾನ ಬರುತ್ತದೆ. ಇದರಲ್ಲಿ ಶೇ 3ರಷ್ಟು ಹಣವನ್ನು ಅಂಗವಿಕಲರ ಅಭಿವೃದ್ಧಿಗೆ ಬಳಸಬೇಕು ಎಂಬ ನಿಯಮವಿದೆ. ಆದರೆ, ಪಂಚಾಯ್ತಿಗಳು ಆ ಹಣವನ್ನು ಇತರೆ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ವ್ಯಯ ಮಾಡುತ್ತಿವೆ.</p>.<p><strong>-ಪ್ರವೀಣ್ಕುಮಾರ್ ಶೆಟ್ಟಿ ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲಾ ಅಂಗವಿಕಲರ ಮತ್ತು ಪಾಲಕರ ಒಕ್ಕೂಟ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>