<p>ಆ. 1ರ ಸಂಚಿಕೆಯ `ಸಂಗತ~ದಲ್ಲಿ ಪ್ರಕಟವಾದ ಆರೆಸ್ಸೆಸ್ ಪ್ರಮುಖ ವಿ. ನಾಗರಾಜ್ರ `ರಾಜಕೀಯ ಏರಿಳಿತ: ಆರೆಸ್ಸೆಸ್ ಆಘಾತ~ ಲೇಖನ ಓದಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಿಜೆಪಿ ಗೊಂದಲ ಅಥವಾ ಅದನ್ನು ಪರಿಹರಿಸುವ ದಿಸೆಯಲ್ಲಿ ಆರೆಸ್ಸೆಸ್ಸ್ ಪಾತ್ರದ ಬಗ್ಗೆ ಅವರ ಅಭಿಪ್ರಾಯ ಅತ್ಯಂತ ಸೂಕ್ತ. ಬಿಜೆಪಿಯ ಹೆಚ್ಚಿನ ನಾಯಕರು, ಕಾರ್ಯಕರ್ತರು ಸಂಘದ ಸ್ವಯಂ ಸೇವಕರಾಗಿರಬಹುದು. ಆ ಪಕ್ಷದ ಇತ್ತೀಚಿನ ನಾಯಕರನ್ನು ಕುರಿತು ಇದನ್ನು ಹೇಳುವುದು ಅಸಾಧ್ಯ.<br /> <br /> ಇವೆಲ್ಲದರ ಸ್ಪಷ್ಟ ಅಭಿಪ್ರಾಯ - ಬಿಜೆಪಿ ಅಥವಾ ಸಂಘದ ಹಿನ್ನೆಲೆಯಿಂದ ಬಂದ ಯಾವುದೇ ಸಂಘಟನೆಯಾಗಲೀ ಸರಿದಾರಿಯಲ್ಲಿ ನಡೆಯದಿದ್ದರೆ ಅದರ ಪರಿಣಾಮ ಅವರೇ ಅನುಭವಿಸಬೇಕೇ ಹೊರತು ಅದಕ್ಕೆ ಆರೆಸ್ಸೆಸ್ ಕಾರಣವೂ ಅಲ್ಲ. ಅದನ್ನು ಸರಿಪಡಿಸುವ ಹೊಣೆಗಾರಿಕೆ ಸಂಘದ್ದೂ ಅಲ್ಲ ಎಂಬುದಾಗಿದೆ.<br /> <br /> ಹಾಗಾಗಿ ಬಿಜೆಪಿಯ ಎಲ್ಲಾ ಗೊಂದಲಗಳನ್ನೂ ಸಂಘದ ಹಿರಿಯರು ಬಗೆಹರಿಸಬೇಕು ಎಂದು ಜನ ಅಪೇಕ್ಷೆ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ. ಬಿಜೆಪಿಗೆ ತನ್ನದೇ ಆದ ನೀತಿ, ಮಾರ್ಗ ಇದೆ - ಅದರಂತೆ ನಡೆದರೆ ಜನ ಅದನ್ನು ಬೆಂಬಲಿಸುತ್ತಾರೆ. ಇಲ್ಲದಿದ್ದರೆ ಮುಂದೆ ಪಾಠ ಕಲಿಸುತ್ತಾರೆ. ಇದು ಆರೆಸ್ಸೆಸ್ಸಿನ ಸ್ಪಷ್ಟ ನಿರ್ಧಾರ ಎಂಬುದನ್ನು ಲೇಖಕರು ಯಾವುದೇ ಸಂಶಯಕ್ಕೆ ಅವಕಾಶವಿಲ್ಲದಂತೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಆ. 1ರ ಸಂಚಿಕೆಯ `ಸಂಗತ~ದಲ್ಲಿ ಪ್ರಕಟವಾದ ಆರೆಸ್ಸೆಸ್ ಪ್ರಮುಖ ವಿ. ನಾಗರಾಜ್ರ `ರಾಜಕೀಯ ಏರಿಳಿತ: ಆರೆಸ್ಸೆಸ್ ಆಘಾತ~ ಲೇಖನ ಓದಿದೆ. ರಾಜ್ಯ ಹಾಗೂ ರಾಷ್ಟ್ರಮಟ್ಟದ ಬಿಜೆಪಿ ಗೊಂದಲ ಅಥವಾ ಅದನ್ನು ಪರಿಹರಿಸುವ ದಿಸೆಯಲ್ಲಿ ಆರೆಸ್ಸೆಸ್ಸ್ ಪಾತ್ರದ ಬಗ್ಗೆ ಅವರ ಅಭಿಪ್ರಾಯ ಅತ್ಯಂತ ಸೂಕ್ತ. ಬಿಜೆಪಿಯ ಹೆಚ್ಚಿನ ನಾಯಕರು, ಕಾರ್ಯಕರ್ತರು ಸಂಘದ ಸ್ವಯಂ ಸೇವಕರಾಗಿರಬಹುದು. ಆ ಪಕ್ಷದ ಇತ್ತೀಚಿನ ನಾಯಕರನ್ನು ಕುರಿತು ಇದನ್ನು ಹೇಳುವುದು ಅಸಾಧ್ಯ.<br /> <br /> ಇವೆಲ್ಲದರ ಸ್ಪಷ್ಟ ಅಭಿಪ್ರಾಯ - ಬಿಜೆಪಿ ಅಥವಾ ಸಂಘದ ಹಿನ್ನೆಲೆಯಿಂದ ಬಂದ ಯಾವುದೇ ಸಂಘಟನೆಯಾಗಲೀ ಸರಿದಾರಿಯಲ್ಲಿ ನಡೆಯದಿದ್ದರೆ ಅದರ ಪರಿಣಾಮ ಅವರೇ ಅನುಭವಿಸಬೇಕೇ ಹೊರತು ಅದಕ್ಕೆ ಆರೆಸ್ಸೆಸ್ ಕಾರಣವೂ ಅಲ್ಲ. ಅದನ್ನು ಸರಿಪಡಿಸುವ ಹೊಣೆಗಾರಿಕೆ ಸಂಘದ್ದೂ ಅಲ್ಲ ಎಂಬುದಾಗಿದೆ.<br /> <br /> ಹಾಗಾಗಿ ಬಿಜೆಪಿಯ ಎಲ್ಲಾ ಗೊಂದಲಗಳನ್ನೂ ಸಂಘದ ಹಿರಿಯರು ಬಗೆಹರಿಸಬೇಕು ಎಂದು ಜನ ಅಪೇಕ್ಷೆ ಪಡುವುದರಲ್ಲಿ ಯಾವುದೇ ಅರ್ಥವಿಲ್ಲ. ಬಿಜೆಪಿಗೆ ತನ್ನದೇ ಆದ ನೀತಿ, ಮಾರ್ಗ ಇದೆ - ಅದರಂತೆ ನಡೆದರೆ ಜನ ಅದನ್ನು ಬೆಂಬಲಿಸುತ್ತಾರೆ. ಇಲ್ಲದಿದ್ದರೆ ಮುಂದೆ ಪಾಠ ಕಲಿಸುತ್ತಾರೆ. ಇದು ಆರೆಸ್ಸೆಸ್ಸಿನ ಸ್ಪಷ್ಟ ನಿರ್ಧಾರ ಎಂಬುದನ್ನು ಲೇಖಕರು ಯಾವುದೇ ಸಂಶಯಕ್ಕೆ ಅವಕಾಶವಿಲ್ಲದಂತೆ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>