<p>ಬೆಂಗಳೂರು: ಅಂತರ್ಜಲವನ್ನು ಉಳಿಸುವ ಸಲುವಾಗಿ ಚಾಮರಾಜಪೇಟೆ ವಾರ್ಡ್ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹಲವು ಕಡೆಗಳಲ್ಲಿ ಇಂಗು ಗುಂಡಿಗಳನ್ನು ತೆರೆದಿದ್ದು, ಇಲ್ಲಿಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಈಗಾಗಲೇ ಇಂಗುಗುಂಡಿಗೆ ಚಾಲನೆ ದೊರೆತಿದೆ. <br /> <br /> ಪ್ರತಿ ವಾರ್ಡ್ಗಳಲ್ಲಿರುವ ಉದ್ಯಾನ, ಬಿಬಿಎಂಪಿ ಕಟ್ಟಡ, ಶಾಲೆ, ಮೈದಾನ ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಮಳೆ ನೀರಿನ ಸಂಗ್ರಹ, ಅಂತರ್ಜಲ ಹೆಚ್ಚಳಕ್ಕೆ ಇಂಗುಗುಂಡಿಗಳನ್ನು ನಿರ್ಮಿಸುವ ಬಗ್ಗೆ ಈಚೆಗಷ್ಟೆ ಪಾಲಿಕೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಮಕ್ಕಳ ಕೂಟ, ಸರ್.ಎಂ. ವಿಶ್ವೇಶ್ವರಯ್ಯ ಬಿಬಿಎಂಪಿ ಕಾಲೇಜು ಹಾಗೂ ವಾರ್ಡ್ ಕಾಮಗಾರಿ ಕಚೇರಿಯ ಆವರಣದಲ್ಲಿ ಇಂಗುಗುಂಡಿಗಳ ನಿರ್ಮಾಣಕ್ಕೆ ತಯಾರಿ ನಡೆದಿದೆ.<br /> <br /> ಸುಮಾರು ಅರ್ಧ ಎಕರೆ ಜಾಗದಲ್ಲಿರುವ ಬಿಬಿಎಂಪಿ ಹೆರಿಗೆ ಆಸ್ಪತ್ರೆಯ ಆವರಣದ ಇಳಿಜಾರು ಭಾಗದಲ್ಲಿ ಎರಡು ಇಂಗುಗುಂಡಿಗಳನ್ನು ತೆಗೆಯಲಾಗಿದೆ. ಮಳೆ ನೀರು ಸರಾಗವಾಗಿ ಹರಿದು ಈ ಗುಂಡಿಗಳಿಗೆ ಬೀಳುತ್ತದೆ. ಸುಮಾರು ಏಳು ಅಡಿಗಿಂತಲೂ ಹೆಚ್ಚು ಆಳವಿರುವ ಈ ಗುಂಡಿಗಳಿಗೆ ಕಾಂಕ್ರೀಟ್ನ ರಿಂಗ್ಗಳನ್ನು ಅಳವಡಿಸಲಾಗಿದೆ. ನೀರು ಹೆಚ್ಚು ಶೇಖರಣೆಗೊಂಡು ಆಸ್ಪತ್ರೆಯ ತಡೆಗೋಡೆ ಕುಸಿದು ಬೀಳುವ ಸಂಭವ ಇರುವುದರಿಂದ ಈ ತಂತ್ರವನ್ನು ಬಳಸಲಾಗಿದೆ. ಇಂಗುಗುಂಡಿಗೆ ಬೀಳುವ ನೀರು ನೇರವಾಗಿ ಭೂಮಿಯ ಪದರವನ್ನು ತಲುಪಿ ಇಂಗುತ್ತದೆ. ಹೆಚ್ಚಾಗಿ ಗುಂಡಿಯಿಂದ ಆಚೆಗೆ ನಿಂತ ನೀರು ಸೊಳ್ಳೆ ವೃದ್ಧಿಗೆ ಕಾರಣವಾಗಬಾರದೆಂಬ ಉದ್ದೇಶದಿಂದ ಗುಂಡಿಯ ಒಳಗೆ ಜಲ್ಲಿ ಕಲ್ಲುಗಳನ್ನು ತುಂಬಲಾಗಿದೆ. <br /> <br /> ಸ್ಮಶಾನದಲ್ಲೂ ಇಂಗುಗುಂಡಿ: ಮಳೆ ನೀರು ಭೂಮಿಯ ಮೇಲೆ ಹರಿದು ಚರಂಡಿಗಳನ್ನು ಸೇರುವುದಕ್ಕಿಂತ ಇಂಗುವ ಪ್ರಕ್ರಿಯೆಯಿಂದ ಅಂತರ್ಜಲ ವೃದ್ಧಿಗೆ ಸಹಕಾರಿ. ಆದ್ದರಿಂದ ಈ ವಾರ್ಡ್ ವ್ಯಾಪ್ತಿಯಲ್ಲಿರುವ ಸ್ಮಶಾನದ ಆವರಣದಲ್ಲೂ ಮಳೆ ನೀರು ಪೋಲಾಗದಂತೆ ಸುಮಾರು ನಾಲ್ಕು ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. <br /> <br /> ಇದರೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿರುವ ಕಾಲುವೆಗಳ ಮಧ್ಯ ಭಾಗದಲ್ಲೂ ಇಂಗು ಗುಂಡಿಗಳನ್ನು ತೆರೆಯಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಇಂಗಲು ಸಹಾಯವಾಗುತ್ತದೆ. ಅಲ್ಲದೇ ನೀರು ಗುಂಡಿಗಳಲ್ಲಿ ಮಾತ್ರವಲ್ಲದೇ ಅದು ಹರಿಯುವ ಜಾಗದ ಮಧ್ಯಭಾಗಗಳಲ್ಲಿ ಇಂಗುವಂತೆ ಯೋಜನೆ ರೂಪಿಸಲಾಗಿದೆ. <br /> <br /> ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಚಾಮರಾಜಪೇಟೆ ವಾರ್ಡ್ ಸದಸ್ಯ ಬಿ.ವಿ.ಗಣೇಶ್, `ವರ್ಷದಿಂದ ವರ್ಷಕ್ಕೆ ಮಳೆಯು ನಿಗದಿತ ಸಮಯಕ್ಕೆ ಬಾರದೇ ಕೈಕೊಡುತ್ತಿರುವುದರಿಂದ ಇರುವ ಅಂತರ್ಜಲವನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಪಾಲಿಕೆ ಅಧಿಸೂಚನೆ ಹೊರಡಿಸುವ ಮುನ್ನವೇ ವಿಶೇಷ ಆಸಕ್ತಿ ತೆಗೆದುಕೊಂಡು ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಲಾಗಿದೆ~ ಎಂದರು. <br /> <br /> `ಸಾರ್ವಜನಿಕ ಸ್ಥಳದಲ್ಲಿ ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಯೋಜನೆಯನ್ನು ಅಳವಡಿಸಲಾಗುವುದು. ಮಳೆ ನೀರು ಸಂಗ್ರಹಿಸಿದರೂ ಅದು ಇಂಗದಿದ್ದರೆ ಸೊಳ್ಳೆಯ ಮೂಲಕ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತವೆ. <br /> <br /> ನಗರದಲ್ಲಿ ಕ್ರಾಂಕೀಟ್ ನೆಲವೇ ಹೆಚ್ಚಾಗಿರುವುದರಿಂದ ನೀರು ಇಂಗದೇ ಚರಂಡಿಗಳಿಗೆ ಹರಿಯುತ್ತದೆ. ಇದನ್ನು ತಪ್ಪಿಸಲು ಸಾಧ್ಯವಾದಷ್ಟು ಇಂಗುಗುಂಡಿಗಳನ್ನು ತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು~ ಎಂದು ಅವರು ಹೇಳಿದರು.<br /> <br /> <br /> <strong>ಎರಡಕ್ಕಿಂತ ಹೆಚ್ಚು ಪದ್ಧತಿ ಅಳವಡಿಕೆಗೆ ಚಿಂತನೆ</strong><br /> ಚಾಮರಾಜಪೇಟೆಯ ವಾರ್ಡ್ ಕಾಮಗಾರಿ ಕಚೇರಿ, ಮಕ್ಕಳ ಕೂಟ, ಸರ್.ಎಂ. ವಿಶ್ವೇಶ್ವರಯ್ಯ ಬಿಬಿಎಂಪಿ ಕಾಲೇಜಿನ ಆವರಣದಲ್ಲೂ ಸಹ ಇಂಗುಗುಂಡಿ ನಿರ್ಮಾಣದ ಜತೆ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹದ ಯೋಜನೆಯನ್ನು ರೂಪಿಸಲಾಗಿದೆ. ಸ್ಥಳಾವಕಾಶದ ಆಧಾರದ ಮೇಲೆ ಈ ಸ್ಥಳಗಳಲ್ಲಿ ಎರಡಕ್ಕಿಂತ ಹೆಚ್ಚು ಮಳೆ ನೀರು ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ಅಂತರ್ಜಲವನ್ನು ಉಳಿಸುವ ಸಲುವಾಗಿ ಚಾಮರಾಜಪೇಟೆ ವಾರ್ಡ್ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಹಲವು ಕಡೆಗಳಲ್ಲಿ ಇಂಗು ಗುಂಡಿಗಳನ್ನು ತೆರೆದಿದ್ದು, ಇಲ್ಲಿಯ ಬಿಬಿಎಂಪಿ ಹೆರಿಗೆ ಆಸ್ಪತ್ರೆಯ ಆವರಣದಲ್ಲಿ ಈಗಾಗಲೇ ಇಂಗುಗುಂಡಿಗೆ ಚಾಲನೆ ದೊರೆತಿದೆ. <br /> <br /> ಪ್ರತಿ ವಾರ್ಡ್ಗಳಲ್ಲಿರುವ ಉದ್ಯಾನ, ಬಿಬಿಎಂಪಿ ಕಟ್ಟಡ, ಶಾಲೆ, ಮೈದಾನ ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಮಳೆ ನೀರಿನ ಸಂಗ್ರಹ, ಅಂತರ್ಜಲ ಹೆಚ್ಚಳಕ್ಕೆ ಇಂಗುಗುಂಡಿಗಳನ್ನು ನಿರ್ಮಿಸುವ ಬಗ್ಗೆ ಈಚೆಗಷ್ಟೆ ಪಾಲಿಕೆ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಮಕ್ಕಳ ಕೂಟ, ಸರ್.ಎಂ. ವಿಶ್ವೇಶ್ವರಯ್ಯ ಬಿಬಿಎಂಪಿ ಕಾಲೇಜು ಹಾಗೂ ವಾರ್ಡ್ ಕಾಮಗಾರಿ ಕಚೇರಿಯ ಆವರಣದಲ್ಲಿ ಇಂಗುಗುಂಡಿಗಳ ನಿರ್ಮಾಣಕ್ಕೆ ತಯಾರಿ ನಡೆದಿದೆ.<br /> <br /> ಸುಮಾರು ಅರ್ಧ ಎಕರೆ ಜಾಗದಲ್ಲಿರುವ ಬಿಬಿಎಂಪಿ ಹೆರಿಗೆ ಆಸ್ಪತ್ರೆಯ ಆವರಣದ ಇಳಿಜಾರು ಭಾಗದಲ್ಲಿ ಎರಡು ಇಂಗುಗುಂಡಿಗಳನ್ನು ತೆಗೆಯಲಾಗಿದೆ. ಮಳೆ ನೀರು ಸರಾಗವಾಗಿ ಹರಿದು ಈ ಗುಂಡಿಗಳಿಗೆ ಬೀಳುತ್ತದೆ. ಸುಮಾರು ಏಳು ಅಡಿಗಿಂತಲೂ ಹೆಚ್ಚು ಆಳವಿರುವ ಈ ಗುಂಡಿಗಳಿಗೆ ಕಾಂಕ್ರೀಟ್ನ ರಿಂಗ್ಗಳನ್ನು ಅಳವಡಿಸಲಾಗಿದೆ. ನೀರು ಹೆಚ್ಚು ಶೇಖರಣೆಗೊಂಡು ಆಸ್ಪತ್ರೆಯ ತಡೆಗೋಡೆ ಕುಸಿದು ಬೀಳುವ ಸಂಭವ ಇರುವುದರಿಂದ ಈ ತಂತ್ರವನ್ನು ಬಳಸಲಾಗಿದೆ. ಇಂಗುಗುಂಡಿಗೆ ಬೀಳುವ ನೀರು ನೇರವಾಗಿ ಭೂಮಿಯ ಪದರವನ್ನು ತಲುಪಿ ಇಂಗುತ್ತದೆ. ಹೆಚ್ಚಾಗಿ ಗುಂಡಿಯಿಂದ ಆಚೆಗೆ ನಿಂತ ನೀರು ಸೊಳ್ಳೆ ವೃದ್ಧಿಗೆ ಕಾರಣವಾಗಬಾರದೆಂಬ ಉದ್ದೇಶದಿಂದ ಗುಂಡಿಯ ಒಳಗೆ ಜಲ್ಲಿ ಕಲ್ಲುಗಳನ್ನು ತುಂಬಲಾಗಿದೆ. <br /> <br /> ಸ್ಮಶಾನದಲ್ಲೂ ಇಂಗುಗುಂಡಿ: ಮಳೆ ನೀರು ಭೂಮಿಯ ಮೇಲೆ ಹರಿದು ಚರಂಡಿಗಳನ್ನು ಸೇರುವುದಕ್ಕಿಂತ ಇಂಗುವ ಪ್ರಕ್ರಿಯೆಯಿಂದ ಅಂತರ್ಜಲ ವೃದ್ಧಿಗೆ ಸಹಕಾರಿ. ಆದ್ದರಿಂದ ಈ ವಾರ್ಡ್ ವ್ಯಾಪ್ತಿಯಲ್ಲಿರುವ ಸ್ಮಶಾನದ ಆವರಣದಲ್ಲೂ ಮಳೆ ನೀರು ಪೋಲಾಗದಂತೆ ಸುಮಾರು ನಾಲ್ಕು ಇಂಗುಗುಂಡಿಗಳನ್ನು ನಿರ್ಮಿಸಲಾಗಿದೆ. <br /> <br /> ಇದರೊಂದಿಗೆ ರಸ್ತೆಯ ಇಕ್ಕೆಲಗಳಲ್ಲಿರುವ ಕಾಲುವೆಗಳ ಮಧ್ಯ ಭಾಗದಲ್ಲೂ ಇಂಗು ಗುಂಡಿಗಳನ್ನು ತೆರೆಯಲಾಗಿದ್ದು, ಹೆಚ್ಚಿನ ಪ್ರಮಾಣದಲ್ಲಿ ನೀರು ಇಂಗಲು ಸಹಾಯವಾಗುತ್ತದೆ. ಅಲ್ಲದೇ ನೀರು ಗುಂಡಿಗಳಲ್ಲಿ ಮಾತ್ರವಲ್ಲದೇ ಅದು ಹರಿಯುವ ಜಾಗದ ಮಧ್ಯಭಾಗಗಳಲ್ಲಿ ಇಂಗುವಂತೆ ಯೋಜನೆ ರೂಪಿಸಲಾಗಿದೆ. <br /> <br /> ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಚಾಮರಾಜಪೇಟೆ ವಾರ್ಡ್ ಸದಸ್ಯ ಬಿ.ವಿ.ಗಣೇಶ್, `ವರ್ಷದಿಂದ ವರ್ಷಕ್ಕೆ ಮಳೆಯು ನಿಗದಿತ ಸಮಯಕ್ಕೆ ಬಾರದೇ ಕೈಕೊಡುತ್ತಿರುವುದರಿಂದ ಇರುವ ಅಂತರ್ಜಲವನ್ನು ಉಳಿಸಿಕೊಳ್ಳುವ ಅಗತ್ಯವಿದೆ. ಪಾಲಿಕೆ ಅಧಿಸೂಚನೆ ಹೊರಡಿಸುವ ಮುನ್ನವೇ ವಿಶೇಷ ಆಸಕ್ತಿ ತೆಗೆದುಕೊಂಡು ಸುಮಾರು ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ರೂಪಿಸಲಾಗಿದೆ~ ಎಂದರು. <br /> <br /> `ಸಾರ್ವಜನಿಕ ಸ್ಥಳದಲ್ಲಿ ಲಭ್ಯವಿರುವ ಸ್ಥಳಾವಕಾಶಕ್ಕೆ ಅನುಗುಣವಾಗಿ ಯೋಜನೆಯನ್ನು ಅಳವಡಿಸಲಾಗುವುದು. ಮಳೆ ನೀರು ಸಂಗ್ರಹಿಸಿದರೂ ಅದು ಇಂಗದಿದ್ದರೆ ಸೊಳ್ಳೆಯ ಮೂಲಕ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತವೆ. <br /> <br /> ನಗರದಲ್ಲಿ ಕ್ರಾಂಕೀಟ್ ನೆಲವೇ ಹೆಚ್ಚಾಗಿರುವುದರಿಂದ ನೀರು ಇಂಗದೇ ಚರಂಡಿಗಳಿಗೆ ಹರಿಯುತ್ತದೆ. ಇದನ್ನು ತಪ್ಪಿಸಲು ಸಾಧ್ಯವಾದಷ್ಟು ಇಂಗುಗುಂಡಿಗಳನ್ನು ತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಅಳವಡಿಸುವ ಬಗ್ಗೆ ಹೆಚ್ಚಿನ ಒತ್ತು ನೀಡಲಾಗುವುದು~ ಎಂದು ಅವರು ಹೇಳಿದರು.<br /> <br /> <br /> <strong>ಎರಡಕ್ಕಿಂತ ಹೆಚ್ಚು ಪದ್ಧತಿ ಅಳವಡಿಕೆಗೆ ಚಿಂತನೆ</strong><br /> ಚಾಮರಾಜಪೇಟೆಯ ವಾರ್ಡ್ ಕಾಮಗಾರಿ ಕಚೇರಿ, ಮಕ್ಕಳ ಕೂಟ, ಸರ್.ಎಂ. ವಿಶ್ವೇಶ್ವರಯ್ಯ ಬಿಬಿಎಂಪಿ ಕಾಲೇಜಿನ ಆವರಣದಲ್ಲೂ ಸಹ ಇಂಗುಗುಂಡಿ ನಿರ್ಮಾಣದ ಜತೆ ದೊಡ್ಡ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹದ ಯೋಜನೆಯನ್ನು ರೂಪಿಸಲಾಗಿದೆ. ಸ್ಥಳಾವಕಾಶದ ಆಧಾರದ ಮೇಲೆ ಈ ಸ್ಥಳಗಳಲ್ಲಿ ಎರಡಕ್ಕಿಂತ ಹೆಚ್ಚು ಮಳೆ ನೀರು ಸಂಗ್ರಹ ಪದ್ಧತಿಯನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>