<p><strong>ಕೋಲಾರ: </strong>2012ರ ವಿಶ್ವ ಜಲ ದಿನ ಬಂದಿದೆ. ಈ ಸಂದರ್ಭದಲ್ಲಿ ಇಡೀ ಜಿಲ್ಲೆ ಬೇಸಿಗೆ ಶುರುವಾಗುವ ಮುನ್ನವೇ ನೀರಿನ ಕೊರತೆಯಿಂದ ಬಳಲುತ್ತಿದೆ. 520 ಗ್ರಾಮಗಳಲ್ಲಿ ನೀರಿನ ಕೊರತೆಯ ಸಮಸ್ಯೆ ತೀವ್ರವಾಗಿದೆ. ಹಲವೆಡೆ ಜನರಿಗೆ ನೀರು ಪೂರೈಸಲು ಖಾಸಗಿ ತೋಟಗಳನ್ನೆ ಜಿಲ್ಲಾಡಳಿತ ಅವಲಂಬಿಸಿದೆ.<br /> <br /> ನಗರ- ಪಟ್ಟಣ ಪ್ರದೇಶಗಳಲ್ಲೂ ನೀರಿಗೆ ಹಳ್ಳಿಗಳನ್ನೆ ಅವಲಂಬಿಸ ಲಾಗಿದೆ. ಹೊಸ ಕೊಳವೆಬಾವಿಗಳು ವಿಫಲವಾ ಗುತ್ತಿವೆ. ಸಫಲವಾದರೂ ನೀರು ಹೆಚ್ಚು ದಿನ ದೊರಕುವ ಭರವಸೆ ಇಲ್ಲವಾಗಿದೆ. <br /> <br /> ಇದೇ ವೇಳೆ ನೀರು ಪೂರೈಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತಿ ಆವರಣದಲ್ಲಿ ಗ್ರಾಮಸ್ಥರು ಸತತ ಧರಣಿ, ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಈ ನಡುವೆ, ನಗರಸಭೆಯನ್ನು ನೆಚ್ಚಿಕೊಂಡು ಜನರಿಗೆ ನೀರು ಪೂರೈಸಿದರೆ ಕೋಟ್ಯಂತರ ಹಣ ಸಂದಾಯ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸ ಲಾಗುತ್ತಿದೆ ಎಂದು ಟ್ಯಾಂಕರ್ ಮಾಲೀಕರು ಹಲವು ತಿಂಗಳಿಂದ ನಗರಸಭೆ ಆವರಣದಲ್ಲಿ ಧರಣಿ ನಡೆಸುತ್ತಲೇ ಇದ್ದಾರೆ. <br /> <br /> ನಗರದ ವಿವಿಧ ಬಡಾವಣೆ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದು ಹೆಚ್ಚಾಗುತ್ತಲೇ ಇವೆ. <br /> ಕುಡಿಯುವ ನೀರಿಗೆ ಬಿಡುಗಡೆ ಮಾಡುವ ಕೋಟ್ಯಂತರ ಹಣವನ್ನು ಸದ್ಬಳಕೆ ಮಾಡಬೇಕು. ಸ್ಪಂದಿಸದ, ಕೆಲಸ ಮಾಡದ ಅಧಿಕಾರಿಗಳನ್ನು ಅಮಾನತು ಮಾಡಲಾಗವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಶ್ರೀನಿವಾಸಾಚಾರಿ ಎಚ್ಚರಿಕೆಯನ್ನೂ ಪ್ರಗತಿ ಪರಿಶೀಲನೆ ಸಭೆಯಲ್ಲಿ ನೀಡಿದ್ದಾರೆ. <br /> <br /> ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅವರು ಇತ್ತೀಚಿನ ಪ್ರಗತಿ ಪರಿಶೀಲನೆ ಸಭೆಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.520 ಗ್ರಾಮ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸ್ತುತ 520 ಹಳ್ಳಿಗಳನ್ನು ನೀರಿನ ವಿಚಾರದಲ್ಲಿ ಸಮಸ್ಯಾತ್ಮಕ ಎಂದು ಗುರುತಿಸಲಾಗಿದೆ. ತಿಂಗ ಳಿಂದ ತಿಂಗಳಿಗೆ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ಹೆಚ್ಚುತ್ತಿದೆ.<br /> <br /> ಕೆಲವು ತಿಂಗಳ ಹಿಂದೆ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ 300 ದಾಟಿತ್ತು. ಆದರೆ ಈಗ 500 ದಾಟಿದೆ. ವಿಪರ್ಯಾಸವೆಂದರೆ ಜಲಸಂಪ ನ್ಮೂಲಗಳ ನಿರ್ವಹಣೆ ಮತ್ತು ಸಂರಕ್ಷಣೆಯಿಂದ ಗಮನ ಸೆಳೆದಿರುವ ಮುಳಬಾಗಿಲು ತಾಲ್ಲೂಕಿನಲ್ಲಿ 120 ಸಮಸ್ಯಾತ್ಮಕ ಗ್ರಾಮಗಳಿವೆ. <br /> <br /> ಸಮಸ್ಯಾತ್ಮಕ ಗ್ರಾಮಗಳು ಹೆಚ್ಚಿರುವ ಜಿಲ್ಲೆಯ ತಾಲ್ಲೂಕುಗಳ ಪೈಕಿ ಈ ತಾಲ್ಲೂಕು ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಬಂಗಾರಪೇಟೆ, 3ನೇ ಸ್ಥಾನದಲ್ಲಿ ಮಾಲೂರು ತಾಲ್ಲೂಕು ಇದೆ. ಕೋಲಾರ ತಾಲ್ಲೂಕಿನಲ್ಲಿ ಬಹಳಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲ.<br /> <br /> ಜಿಲ್ಲೆಯಲ್ಲಿ ಸ್ಥಳೀಯ ಆಡಳಿತದಿಂದ ಕೊರೆದಿ ರುವ ಕೊಳವೆ ಬಾವಿಗಳು ವಿಫಲವಾಗಿರುವ ಮತ್ತು ನೀರಿನ ಕೊರತೆ ಇರುವ ಕಡೆ ಖಾಸಗಿ ತೋಟಗಳಿಂದಲೂ ನೀರು ಪಡೆಯಲಾಗುತ್ತಿದೆ. ಒಟ್ಟು 72 ಗ್ರಾಮಗಳಲ್ಲಿ ಖಾಸಗಿಯವರಿಂದ ನೀರು ಪಡೆದು ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮನೋಜ್ಕುಮಾರ್ ಮೀನಾ ತಿಳಿಸಿದ್ದಾರೆ.<br /> <br /> ಒಂದು ಹೊಸ ಕೊಳವೆ ಬಾವಿಗೆ 5-6 ಲಕ್ಷ ರೂಪಾಯಿ ಖರ್ಚು ಮಾಡಿದರೂ ನೀರು ಸಿಗುವ ಬಗ್ಗೆ ಖಾತರಿ ಇಲ್ಲ. ಹೀಗಾಗಿ ಮುಂದಿನ 3 ತಿಂಗಳಿಗೆ 60- 70 ಸಾವಿರ ರೂಪಾಯಿ ನೀಡಿ ಖಾಸಗಿಯವರಿಂದ ನೀರು ಪಡೆಯಲು ನಿರ್ಧರಿಸಲಾಗಿದೆ. ಮಾಲೂರಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಜಿಲ್ಲಾಡಳಿತದೊಡನೆ ಉತ್ಸಾಹದಿಂದ ಕೈ ಜೋಡಿಸಿದ್ದಾರೆ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> ಕಳೆದ ಡಿಸೆಂಬರ್ ಬಳಿಕ ಕುಡಿಯುವ ನೀರಿಗಾಗಿ ಯೇ ಸುಮಾರು ರೂ 7- 8 ಕೋಟಿ ಖರ್ಚಾಗಿದೆ. 100 ಹೊಸ ಕೊಳವೆಬಾವಿ ಕೊರೆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೆಲವೆಡೆ ಇನ್ನೂ ಆಳಕ್ಕೆ ಕೊರೆಯಲು ಸೂಚಿಸಲಾಗಿದೆ. ಇಂಥ ಸಂದರ್ಭದಲ್ಲಿ ಜನರ ಮುಂದೆ ಇರುವ ಸದ್ಯದ ಪರಿಹಾರ ಎಂದರೆ ಲಭ್ಯವಿರುವ ನೀರನ್ನು ಪೋಲಾಗದಂತೆ ಬಳಸುವುದೇ ಆಗಿದೆ ಎಂಬುದು ಅವರ ಸಲಹೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>2012ರ ವಿಶ್ವ ಜಲ ದಿನ ಬಂದಿದೆ. ಈ ಸಂದರ್ಭದಲ್ಲಿ ಇಡೀ ಜಿಲ್ಲೆ ಬೇಸಿಗೆ ಶುರುವಾಗುವ ಮುನ್ನವೇ ನೀರಿನ ಕೊರತೆಯಿಂದ ಬಳಲುತ್ತಿದೆ. 520 ಗ್ರಾಮಗಳಲ್ಲಿ ನೀರಿನ ಕೊರತೆಯ ಸಮಸ್ಯೆ ತೀವ್ರವಾಗಿದೆ. ಹಲವೆಡೆ ಜನರಿಗೆ ನೀರು ಪೂರೈಸಲು ಖಾಸಗಿ ತೋಟಗಳನ್ನೆ ಜಿಲ್ಲಾಡಳಿತ ಅವಲಂಬಿಸಿದೆ.<br /> <br /> ನಗರ- ಪಟ್ಟಣ ಪ್ರದೇಶಗಳಲ್ಲೂ ನೀರಿಗೆ ಹಳ್ಳಿಗಳನ್ನೆ ಅವಲಂಬಿಸ ಲಾಗಿದೆ. ಹೊಸ ಕೊಳವೆಬಾವಿಗಳು ವಿಫಲವಾ ಗುತ್ತಿವೆ. ಸಫಲವಾದರೂ ನೀರು ಹೆಚ್ಚು ದಿನ ದೊರಕುವ ಭರವಸೆ ಇಲ್ಲವಾಗಿದೆ. <br /> <br /> ಇದೇ ವೇಳೆ ನೀರು ಪೂರೈಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾ ಪಂಚಾಯತಿ ಆವರಣದಲ್ಲಿ ಗ್ರಾಮಸ್ಥರು ಸತತ ಧರಣಿ, ಪ್ರತಿಭಟನೆ ನಡೆಸುತ್ತಲೇ ಇದ್ದಾರೆ. ಈ ನಡುವೆ, ನಗರಸಭೆಯನ್ನು ನೆಚ್ಚಿಕೊಂಡು ಜನರಿಗೆ ನೀರು ಪೂರೈಸಿದರೆ ಕೋಟ್ಯಂತರ ಹಣ ಸಂದಾಯ ಮಾಡುವಲ್ಲಿ ನಿರ್ಲಕ್ಷ್ಯ ಧೋರಣೆ ಅನುಸರಿಸ ಲಾಗುತ್ತಿದೆ ಎಂದು ಟ್ಯಾಂಕರ್ ಮಾಲೀಕರು ಹಲವು ತಿಂಗಳಿಂದ ನಗರಸಭೆ ಆವರಣದಲ್ಲಿ ಧರಣಿ ನಡೆಸುತ್ತಲೇ ಇದ್ದಾರೆ. <br /> <br /> ನಗರದ ವಿವಿಧ ಬಡಾವಣೆ ನಿವಾಸಿಗಳು ನಗರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದು ಹೆಚ್ಚಾಗುತ್ತಲೇ ಇವೆ. <br /> ಕುಡಿಯುವ ನೀರಿಗೆ ಬಿಡುಗಡೆ ಮಾಡುವ ಕೋಟ್ಯಂತರ ಹಣವನ್ನು ಸದ್ಬಳಕೆ ಮಾಡಬೇಕು. ಸ್ಪಂದಿಸದ, ಕೆಲಸ ಮಾಡದ ಅಧಿಕಾರಿಗಳನ್ನು ಅಮಾನತು ಮಾಡಲಾಗವುದು ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಶ್ರೀನಿವಾಸಾಚಾರಿ ಎಚ್ಚರಿಕೆಯನ್ನೂ ಪ್ರಗತಿ ಪರಿಶೀಲನೆ ಸಭೆಯಲ್ಲಿ ನೀಡಿದ್ದಾರೆ. <br /> <br /> ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅವರು ಇತ್ತೀಚಿನ ಪ್ರಗತಿ ಪರಿಶೀಲನೆ ಸಭೆಗಳಲ್ಲಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.520 ಗ್ರಾಮ: ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಸ್ತುತ 520 ಹಳ್ಳಿಗಳನ್ನು ನೀರಿನ ವಿಚಾರದಲ್ಲಿ ಸಮಸ್ಯಾತ್ಮಕ ಎಂದು ಗುರುತಿಸಲಾಗಿದೆ. ತಿಂಗ ಳಿಂದ ತಿಂಗಳಿಗೆ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ ಹೆಚ್ಚುತ್ತಿದೆ.<br /> <br /> ಕೆಲವು ತಿಂಗಳ ಹಿಂದೆ ಸಮಸ್ಯಾತ್ಮಕ ಗ್ರಾಮಗಳ ಸಂಖ್ಯೆ 300 ದಾಟಿತ್ತು. ಆದರೆ ಈಗ 500 ದಾಟಿದೆ. ವಿಪರ್ಯಾಸವೆಂದರೆ ಜಲಸಂಪ ನ್ಮೂಲಗಳ ನಿರ್ವಹಣೆ ಮತ್ತು ಸಂರಕ್ಷಣೆಯಿಂದ ಗಮನ ಸೆಳೆದಿರುವ ಮುಳಬಾಗಿಲು ತಾಲ್ಲೂಕಿನಲ್ಲಿ 120 ಸಮಸ್ಯಾತ್ಮಕ ಗ್ರಾಮಗಳಿವೆ. <br /> <br /> ಸಮಸ್ಯಾತ್ಮಕ ಗ್ರಾಮಗಳು ಹೆಚ್ಚಿರುವ ಜಿಲ್ಲೆಯ ತಾಲ್ಲೂಕುಗಳ ಪೈಕಿ ಈ ತಾಲ್ಲೂಕು ಎರಡನೇ ಸ್ಥಾನದಲ್ಲಿದೆ. ಮೊದಲನೇ ಸ್ಥಾನದಲ್ಲಿ ಬಂಗಾರಪೇಟೆ, 3ನೇ ಸ್ಥಾನದಲ್ಲಿ ಮಾಲೂರು ತಾಲ್ಲೂಕು ಇದೆ. ಕೋಲಾರ ತಾಲ್ಲೂಕಿನಲ್ಲಿ ಬಹಳಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇಲ್ಲ.<br /> <br /> ಜಿಲ್ಲೆಯಲ್ಲಿ ಸ್ಥಳೀಯ ಆಡಳಿತದಿಂದ ಕೊರೆದಿ ರುವ ಕೊಳವೆ ಬಾವಿಗಳು ವಿಫಲವಾಗಿರುವ ಮತ್ತು ನೀರಿನ ಕೊರತೆ ಇರುವ ಕಡೆ ಖಾಸಗಿ ತೋಟಗಳಿಂದಲೂ ನೀರು ಪಡೆಯಲಾಗುತ್ತಿದೆ. ಒಟ್ಟು 72 ಗ್ರಾಮಗಳಲ್ಲಿ ಖಾಸಗಿಯವರಿಂದ ನೀರು ಪಡೆದು ಪೂರೈಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಮನೋಜ್ಕುಮಾರ್ ಮೀನಾ ತಿಳಿಸಿದ್ದಾರೆ.<br /> <br /> ಒಂದು ಹೊಸ ಕೊಳವೆ ಬಾವಿಗೆ 5-6 ಲಕ್ಷ ರೂಪಾಯಿ ಖರ್ಚು ಮಾಡಿದರೂ ನೀರು ಸಿಗುವ ಬಗ್ಗೆ ಖಾತರಿ ಇಲ್ಲ. ಹೀಗಾಗಿ ಮುಂದಿನ 3 ತಿಂಗಳಿಗೆ 60- 70 ಸಾವಿರ ರೂಪಾಯಿ ನೀಡಿ ಖಾಸಗಿಯವರಿಂದ ನೀರು ಪಡೆಯಲು ನಿರ್ಧರಿಸಲಾಗಿದೆ. ಮಾಲೂರಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರು ಜಿಲ್ಲಾಡಳಿತದೊಡನೆ ಉತ್ಸಾಹದಿಂದ ಕೈ ಜೋಡಿಸಿದ್ದಾರೆ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> ಕಳೆದ ಡಿಸೆಂಬರ್ ಬಳಿಕ ಕುಡಿಯುವ ನೀರಿಗಾಗಿ ಯೇ ಸುಮಾರು ರೂ 7- 8 ಕೋಟಿ ಖರ್ಚಾಗಿದೆ. 100 ಹೊಸ ಕೊಳವೆಬಾವಿ ಕೊರೆದರೂ ಪ್ರಯೋಜನವಾಗಿಲ್ಲ. ಹೀಗಾಗಿ ಕೆಲವೆಡೆ ಇನ್ನೂ ಆಳಕ್ಕೆ ಕೊರೆಯಲು ಸೂಚಿಸಲಾಗಿದೆ. ಇಂಥ ಸಂದರ್ಭದಲ್ಲಿ ಜನರ ಮುಂದೆ ಇರುವ ಸದ್ಯದ ಪರಿಹಾರ ಎಂದರೆ ಲಭ್ಯವಿರುವ ನೀರನ್ನು ಪೋಲಾಗದಂತೆ ಬಳಸುವುದೇ ಆಗಿದೆ ಎಂಬುದು ಅವರ ಸಲಹೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>