<p><strong>ಸಿದ್ದಾಪುರ:</strong> `ಇಂಧನದ ವಿಷಯದಲ್ಲಿ ನಾವು ಸ್ವಾವಲಂಬಿಯಾಗಲು ಜೈವಿಕ ಇಂಧನದ ಸಸ್ಯಗಳನ್ನು ಬೆಳೆಸಬೇಕು. ಕೃಷಿಯಲ್ಲಿ ಉಪಯೋಗಿಸುವ ಯಂತ್ರಗಳಿಗೆ ಬೇಕಾದ ಇಂಧನವನ್ನು ಜೈವಿಕ ಸಸ್ಯಗಳ ಮೂಲಕ ಪಡೆಯಲು ಪ್ರಯತ್ನ ಮಾಡಬೇಕು~ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಿ.ಎಸ್.ಹೆಗಡೆ ಹೇಳಿದರು.<br /> <br /> ಜೈವಿಕ ಇಂಧನದ ಬಳಕೆ ಮತ್ತು ಉತ್ಪಾದನೆ ಕುರಿತಂತೆ ಬಿಸ್ವಾ ಪ್ರತಿಷ್ಠಾನದ ಆಶ್ರಯದಲ್ಲಿ ಗುರುವಾರ ಪಟ್ಟಣದ ತಾ.ಪಂ. ಸಭಾಭವನದಲ್ಲಿ ಏರ್ಪಡಿದ್ದ ಜೈವಿಕ ಇಂಧನ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಇಂಧನದ ವಿಷಯದಲ್ಲಿ ನಾವು ಸಂಪೂರ್ಣ ಪರಾವಲಂಬಿಯಾಗಿದ್ದೇವೆ. ನಮ್ಮ ದೇಶದಲ್ಲಿ ಕೇವಲ ಶೇ 20ರಷ್ಟು ಇಂಧನ ಮಾತ್ರ ದೊರೆಯುತ್ತಿದ್ದು, ಶೇ 80ರಷ್ಟು ಇಂಧನಕ್ಕೆ ಹೊರದೇಶಗಳನ್ನು ಅವಲಂಬಿಸಬೇಕಾಗಿದೆ~ ಎಂದರು.<br /> <br /> ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಶಿರಸಿಯ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಪ್ರಾಧ್ಯಾಪಕ ಡಾ.ಪಿ ರಮಣ ಮತ್ತು ಸಾಮಾಜಿಕ ಅರಣ್ಯ ವಿಭಾಗದ ಆರ್ಎಫ್ಒ ಆರ್.ವಿ.ಹೆಗಡೆ ಜೈವಿಕ ಇಂಧನದ ಕುರಿತು ಮಾಹಿತಿ ನೀಡಿದರು.<br /> <br /> ತಾ.ಪಂ. ಉಪಾಧ್ಯಕ್ಷ ನೀಲಕಂಠ ಗೌಡರ್ ಮಾತನಾಡಿ, `ನಮ್ಮ ಹಳ್ಳಿಗಳ ಪ್ರದೇಶದಲ್ಲಿಯೂ ಈಗ ಅರಣ್ಯ ಕಡಿಮೆಯಾಗಿದೆ. ಅರಣ್ಯ ಸಂಪತ್ತನ್ನು ಉರವಲಾಗಿ ಉಪಯೋಗ ಮಾಡುತ್ತಿದ್ದೇವೆ. ಆದ್ದರಿಂದ ಹೊಂಗೆ ಮರದಂತಹ ಸಸ್ಯಗಳಿಂದ ಜೈವಿಕ ಇಂಧನ ಪಡೆಯುವುದಕ್ಕೆ ಪ್ರಾಮುಖ್ಯ ನೀಡಬೇಕು~ ಎಂದರು. <br /> <br /> ತಾ.ಪಂ.ಅಧ್ಯಕ್ಷೆ ಮಹಾದೇವಿ ರಾಮ ಗೌಡ ಅಧ್ಯಕ್ಷತೆ ವಹಿಸಿದ್ದರು.ಎಸ್.ಜಿ.ಹೆಗಡೆ ಸ್ವಾಗತಿಸಿದರು. ಗುರುರಾಜ ಶಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಭಟ್ಟ ವಂದಿಸಿದರು. ನಾಗಭೂಷಣ ಕೊಂಡ್ಲಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ದಾಪುರ:</strong> `ಇಂಧನದ ವಿಷಯದಲ್ಲಿ ನಾವು ಸ್ವಾವಲಂಬಿಯಾಗಲು ಜೈವಿಕ ಇಂಧನದ ಸಸ್ಯಗಳನ್ನು ಬೆಳೆಸಬೇಕು. ಕೃಷಿಯಲ್ಲಿ ಉಪಯೋಗಿಸುವ ಯಂತ್ರಗಳಿಗೆ ಬೇಕಾದ ಇಂಧನವನ್ನು ಜೈವಿಕ ಸಸ್ಯಗಳ ಮೂಲಕ ಪಡೆಯಲು ಪ್ರಯತ್ನ ಮಾಡಬೇಕು~ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ವಿ.ಎಸ್.ಹೆಗಡೆ ಹೇಳಿದರು.<br /> <br /> ಜೈವಿಕ ಇಂಧನದ ಬಳಕೆ ಮತ್ತು ಉತ್ಪಾದನೆ ಕುರಿತಂತೆ ಬಿಸ್ವಾ ಪ್ರತಿಷ್ಠಾನದ ಆಶ್ರಯದಲ್ಲಿ ಗುರುವಾರ ಪಟ್ಟಣದ ತಾ.ಪಂ. ಸಭಾಭವನದಲ್ಲಿ ಏರ್ಪಡಿದ್ದ ಜೈವಿಕ ಇಂಧನ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಇಂಧನದ ವಿಷಯದಲ್ಲಿ ನಾವು ಸಂಪೂರ್ಣ ಪರಾವಲಂಬಿಯಾಗಿದ್ದೇವೆ. ನಮ್ಮ ದೇಶದಲ್ಲಿ ಕೇವಲ ಶೇ 20ರಷ್ಟು ಇಂಧನ ಮಾತ್ರ ದೊರೆಯುತ್ತಿದ್ದು, ಶೇ 80ರಷ್ಟು ಇಂಧನಕ್ಕೆ ಹೊರದೇಶಗಳನ್ನು ಅವಲಂಬಿಸಬೇಕಾಗಿದೆ~ ಎಂದರು.<br /> <br /> ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಶಿರಸಿಯ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಪ್ರಾಧ್ಯಾಪಕ ಡಾ.ಪಿ ರಮಣ ಮತ್ತು ಸಾಮಾಜಿಕ ಅರಣ್ಯ ವಿಭಾಗದ ಆರ್ಎಫ್ಒ ಆರ್.ವಿ.ಹೆಗಡೆ ಜೈವಿಕ ಇಂಧನದ ಕುರಿತು ಮಾಹಿತಿ ನೀಡಿದರು.<br /> <br /> ತಾ.ಪಂ. ಉಪಾಧ್ಯಕ್ಷ ನೀಲಕಂಠ ಗೌಡರ್ ಮಾತನಾಡಿ, `ನಮ್ಮ ಹಳ್ಳಿಗಳ ಪ್ರದೇಶದಲ್ಲಿಯೂ ಈಗ ಅರಣ್ಯ ಕಡಿಮೆಯಾಗಿದೆ. ಅರಣ್ಯ ಸಂಪತ್ತನ್ನು ಉರವಲಾಗಿ ಉಪಯೋಗ ಮಾಡುತ್ತಿದ್ದೇವೆ. ಆದ್ದರಿಂದ ಹೊಂಗೆ ಮರದಂತಹ ಸಸ್ಯಗಳಿಂದ ಜೈವಿಕ ಇಂಧನ ಪಡೆಯುವುದಕ್ಕೆ ಪ್ರಾಮುಖ್ಯ ನೀಡಬೇಕು~ ಎಂದರು. <br /> <br /> ತಾ.ಪಂ.ಅಧ್ಯಕ್ಷೆ ಮಹಾದೇವಿ ರಾಮ ಗೌಡ ಅಧ್ಯಕ್ಷತೆ ವಹಿಸಿದ್ದರು.ಎಸ್.ಜಿ.ಹೆಗಡೆ ಸ್ವಾಗತಿಸಿದರು. ಗುರುರಾಜ ಶಾನಭಾಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಭಟ್ಟ ವಂದಿಸಿದರು. ನಾಗಭೂಷಣ ಕೊಂಡ್ಲಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>