<p><strong>ನ್ಯೂಯಾರ್ಕ್ (ಪಿಟಿಐ):</strong> 2001ರಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟ ಭಾರತೀಯರ ಕುಟುಂಬಗಳು ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ.<br /> <br /> ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ ಸತ್ತ ಮೂರು ಸಾವಿರ ಜನರ ಪೈಕಿ ನ್ಯೂಜರ್ಸಿಯ ನಿವಾಸಿ ಅರ್ಜುನ್ ಮೀರ್ಪುರಿ ಅವರ 30 ವರ್ಷದ ಮಗ ರಾಜೇಶ್ ಸಹ ಒಬ್ಬರು.<br /> <br /> `ನನ್ನ ಮಗ ವಿಶ್ವ ವಾಣಿಜ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಬದಲಾಗಿ ಅಲ್ಲಿ ನಡೆಯುತ್ತಿದ್ದ ವಾಣಿಜ್ಯ ಪ್ರದರ್ಶನವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ. 9/11 ನಮ್ಮ ಜೀವನದ ಅತ್ಯಂತ ಕರಾಳ ದಿನಗಳಲ್ಲಿ ಒಂದು~ ಎಂದು ಮೀರ್ಪುರಿ ಅಂದಿನ ಕರಾಳ ದಿನವನ್ನು ಸ್ಮರಿಸುತ್ತಾರೆ.<br /> <br /> `ಘಟನೆ ನಡೆದು ದಶಕ ಉರುಳಿದ್ದರೂ ಸಹ ಮಗನನ್ನು ಕಳೆದುಕೊಂಡ ನೋವು ಕಡಿಮೆ ಆಗಿಲ್ಲ~ ಎಂದು ಮರುಗುತ್ತಾರೆ.<br /> <br /> `ಅಂದಿನ ಘಟನೆ ಅತ್ಯಂತ ಘೋರವಾದದ್ದು, ಅದು ನಡೆಯಬಾರದಿತ್ತು. ನಾವಿನ್ನೂ ಸಂಕಷ್ಟದಲ್ಲಿ ಇದ್ದೇವೆ. ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದೇವೆ~ ಎನ್ನುತ್ತಾರೆ. ತಮ್ಮ ಮಗನ ಸಾವಿನ ಹತ್ತನೇ ವಾರ್ಷಿಕೋತ್ಸವ ಅಂಗವಾಗಿ ಮೀರ್ಪುರಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು.<br /> <br /> ವೈದ್ಯ ಡಾ.ಜಾನ್ ಮಥಾಯ್ ತಮ್ಮ ಕಿರಿಯ ಸಹೋದರನನ್ನು ಕಳೆದುಕೊಂಡಿದ್ದಾರೆ. ಘಟನೆ ನಡೆದು ದಶಕ ಗತಿಸಿದರೂ ಸಹ ಅವರು ತಮ್ಮ ವೇದನೆಯಿಂದ ಹೊರಬಂದಿಲ್ಲ.<br /> <br /> ವಾಣಿಜ್ಯ ಕಟ್ಟಡದಲ್ಲಿ ಸಭೆಯೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ತಂತ್ರಜ್ಞ ಜೋಸೆಫ್ ತಮ್ಮ ಪತ್ನಿ ತೆರೇಸಾ ಜತೆ ಕೊನೆಯದಾಗಿ ಮಾತನಾಡಿ, ಕಟ್ಟಡದಲ್ಲಿ ಹೊಗೆ ಬರುತ್ತಿದೆ. ಹೊರ ಹೋಗಲು ನೀಡುವ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದರು. ಅವರು ಕಟ್ಟಡದಿಂದ ಹೊರ ಬರಲು ಸಾಧ್ಯವಾಗಲೇ ಇಲ್ಲ. ಈ ದುಃಖ ಪತ್ನಿಯನ್ನು ಇನ್ನೂ ಕಾಡುತ್ತಿದೆ.<br /> <br /> ಅಟಾರ್ನಿ ಉಮಾಂಗ್ ಶಾಸ್ತ್ರಿ ತಮ್ಮ ಸಹೋದರ ನೇಲ್ನನ್ನು ಕಳೆದುಕೊಂಡರು. ಕೇವಲ ಮೂರು ತಿಂಗಳ ಮೊದಲು ಅವರು ಮದುವೆಯಾಗಿದ್ದರು.<br /> <br /> ಈಗ ಅವರ ಕುಟುಂಬ ನೇಲ್ ಜಿ.ಶಾಸ್ತ್ರಿ ಫೌಂಡೇಷನ್ ಸ್ಥಾಪಿಸಿದೆ. ಇದರ ಉದ್ದೇಶ ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವುದು. ಇದುವರೆಗೆ 95 ಸಾವಿರ ಡಾಲರ್ ಹಣವನ್ನು ವಿವಿಧ ಸಂಘ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯೂಯಾರ್ಕ್ (ಪಿಟಿಐ):</strong> 2001ರಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಮೃತಪಟ್ಟ ಭಾರತೀಯರ ಕುಟುಂಬಗಳು ಇನ್ನೂ ಆ ಆಘಾತದಿಂದ ಹೊರ ಬಂದಿಲ್ಲ.<br /> <br /> ವಿಶ್ವ ವಾಣಿಜ್ಯ ಕೇಂದ್ರದ ಮೇಲೆ ನಡೆದ ದಾಳಿಯಲ್ಲಿ ಸತ್ತ ಮೂರು ಸಾವಿರ ಜನರ ಪೈಕಿ ನ್ಯೂಜರ್ಸಿಯ ನಿವಾಸಿ ಅರ್ಜುನ್ ಮೀರ್ಪುರಿ ಅವರ 30 ವರ್ಷದ ಮಗ ರಾಜೇಶ್ ಸಹ ಒಬ್ಬರು.<br /> <br /> `ನನ್ನ ಮಗ ವಿಶ್ವ ವಾಣಿಜ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿರಲಿಲ್ಲ. ಬದಲಾಗಿ ಅಲ್ಲಿ ನಡೆಯುತ್ತಿದ್ದ ವಾಣಿಜ್ಯ ಪ್ರದರ್ಶನವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ. 9/11 ನಮ್ಮ ಜೀವನದ ಅತ್ಯಂತ ಕರಾಳ ದಿನಗಳಲ್ಲಿ ಒಂದು~ ಎಂದು ಮೀರ್ಪುರಿ ಅಂದಿನ ಕರಾಳ ದಿನವನ್ನು ಸ್ಮರಿಸುತ್ತಾರೆ.<br /> <br /> `ಘಟನೆ ನಡೆದು ದಶಕ ಉರುಳಿದ್ದರೂ ಸಹ ಮಗನನ್ನು ಕಳೆದುಕೊಂಡ ನೋವು ಕಡಿಮೆ ಆಗಿಲ್ಲ~ ಎಂದು ಮರುಗುತ್ತಾರೆ.<br /> <br /> `ಅಂದಿನ ಘಟನೆ ಅತ್ಯಂತ ಘೋರವಾದದ್ದು, ಅದು ನಡೆಯಬಾರದಿತ್ತು. ನಾವಿನ್ನೂ ಸಂಕಷ್ಟದಲ್ಲಿ ಇದ್ದೇವೆ. ಘಟನೆಯಿಂದ ಆಘಾತಕ್ಕೆ ಒಳಗಾಗಿದ್ದೇವೆ~ ಎನ್ನುತ್ತಾರೆ. ತಮ್ಮ ಮಗನ ಸಾವಿನ ಹತ್ತನೇ ವಾರ್ಷಿಕೋತ್ಸವ ಅಂಗವಾಗಿ ಮೀರ್ಪುರಿ ಧಾರ್ಮಿಕ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು.<br /> <br /> ವೈದ್ಯ ಡಾ.ಜಾನ್ ಮಥಾಯ್ ತಮ್ಮ ಕಿರಿಯ ಸಹೋದರನನ್ನು ಕಳೆದುಕೊಂಡಿದ್ದಾರೆ. ಘಟನೆ ನಡೆದು ದಶಕ ಗತಿಸಿದರೂ ಸಹ ಅವರು ತಮ್ಮ ವೇದನೆಯಿಂದ ಹೊರಬಂದಿಲ್ಲ.<br /> <br /> ವಾಣಿಜ್ಯ ಕಟ್ಟಡದಲ್ಲಿ ಸಭೆಯೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದ ತಂತ್ರಜ್ಞ ಜೋಸೆಫ್ ತಮ್ಮ ಪತ್ನಿ ತೆರೇಸಾ ಜತೆ ಕೊನೆಯದಾಗಿ ಮಾತನಾಡಿ, ಕಟ್ಟಡದಲ್ಲಿ ಹೊಗೆ ಬರುತ್ತಿದೆ. ಹೊರ ಹೋಗಲು ನೀಡುವ ನಿರ್ದೇಶನಕ್ಕಾಗಿ ಕಾಯುತ್ತಿದ್ದೇವೆ ಎಂದಿದ್ದರು. ಅವರು ಕಟ್ಟಡದಿಂದ ಹೊರ ಬರಲು ಸಾಧ್ಯವಾಗಲೇ ಇಲ್ಲ. ಈ ದುಃಖ ಪತ್ನಿಯನ್ನು ಇನ್ನೂ ಕಾಡುತ್ತಿದೆ.<br /> <br /> ಅಟಾರ್ನಿ ಉಮಾಂಗ್ ಶಾಸ್ತ್ರಿ ತಮ್ಮ ಸಹೋದರ ನೇಲ್ನನ್ನು ಕಳೆದುಕೊಂಡರು. ಕೇವಲ ಮೂರು ತಿಂಗಳ ಮೊದಲು ಅವರು ಮದುವೆಯಾಗಿದ್ದರು.<br /> <br /> ಈಗ ಅವರ ಕುಟುಂಬ ನೇಲ್ ಜಿ.ಶಾಸ್ತ್ರಿ ಫೌಂಡೇಷನ್ ಸ್ಥಾಪಿಸಿದೆ. ಇದರ ಉದ್ದೇಶ ಬಡ ಮಕ್ಕಳಿಗೆ ಶಿಕ್ಷಣ ಒದಗಿಸುವುದು. ಇದುವರೆಗೆ 95 ಸಾವಿರ ಡಾಲರ್ ಹಣವನ್ನು ವಿವಿಧ ಸಂಘ ಸಂಸ್ಥೆಗಳಿಗೆ ದೇಣಿಗೆಯಾಗಿ ನೀಡಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>