<p><strong>ನವದೆಹಲಿ(ಪಿಟಿಐ): </strong>ನೌಕರರ ಭವಿಷ್ಯನಿಧಿಯ ಬಡ್ಡಿದರವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 8.6ಕ್ಕೆ ಏರಿಸಲಾಗುವುದು. ಇದರಿಂದ ದೇಶದ 5 ಕೋಟಿ ನೌಕರರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.<br /> <br /> ರಾಜ್ಯಸಭೆಯಲ್ಲಿ ಗುರುವಾರ ತಮ್ಮ ಖಾತೆಗೆ ಸಂಬಂಧಿಸಿದ ಚರ್ಚೆ ವೇಳೆ ಮಾತನಾಡಿದ ಅವರು, ಭವಿಷ್ಯನಿಧಿ ಯಲ್ಲಿನ ಹಣವನ್ನು ವಿಶೇಷ ಠೇವಣಿ ಯೋಜನೆಗಳಲ್ಲಿ ಹೂಡಿದ್ದರಿಂದ ಕಡಿಮೆ ಆದಾಯ ಬಂದಿತು. ಇದರಿಂದ ಬಡ್ಡಿದರ (ಶೇ. 8.25) ಕಡಿಮೆ ಮಾಡಲಾಯಿತು. ಇಲ್ಲಿ ಕನಿಷ್ಠ-ಗರಿಷ್ಠ ಬಡ್ಡಿದರದ ಪ್ರಶ್ನೆ ಎದುರಾಗದು. ಮುಂದಿನ ದಿನಗಳಲ್ಲಿ ಶೇ. 8.6ಕ್ಕೆ ಏರಿಸಲಾಗುವುದು ಎಂದರು.<br /> <br /> <strong>ಪ್ರತಿ ಬ್ಲಾಕ್ನಲ್ಲೂ ಎಲ್ಪಿಜಿ ಏಜೆನ್ಸಿ: ಕೇಂದ್ರ ಚಿಂತನೆ<br /> </strong><br /> <strong>ನವದೆಹಲಿ (ಪಿಟಿಐ): </strong>ಪ್ರತಿಯೊಬ್ಬರಿಗೂ ಎಲ್ಪಿಜಿ ಅಡುಗೆ ಸಿಲಿಂಡರ್ ತಲುಪಿಸುವ ಗುರಿಯೊಂದಿಗೆ ರಾಷ್ಟ್ರದ ಪ್ರತಿ ಬ್ಲಾಕ್ನಲ್ಲೂ ಸಿಲಿಂಡರ್ ವಿತರಣಾ ಏಜೆನ್ಸಿ ತೆರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.<br /> ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಆರ್ಪಿಎನ್ ಸಿಂಗ್ ಗುರುವಾರ ಲೋಕಸಭೆಯಲ್ಲಿ ಪ್ರಶೋತ್ತರ ವೇಳೆ ಇದನ್ನು ತಿಳಿಸಿದರು.<br /> <br /> 2009-12ರ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು 905 ಸಾಮಾನ್ಯ ಎಲ್ಪಿಜಿ ವಿತರಣಾ ಏಜೆನ್ಸಿಗಳನ್ನು ಹಾಗೂ 1026 ರಾಜೀವ್ ಗಾಂಧಿ ಗ್ರಾಮೀಣ ಎಲ್ಪಿಜಿ ವಿತರಣಾ ಏಜೆನ್ಸಿಗಳನ್ನು ಆರಂಭಿಸಿವೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ(ಪಿಟಿಐ): </strong>ನೌಕರರ ಭವಿಷ್ಯನಿಧಿಯ ಬಡ್ಡಿದರವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ. 8.6ಕ್ಕೆ ಏರಿಸಲಾಗುವುದು. ಇದರಿಂದ ದೇಶದ 5 ಕೋಟಿ ನೌಕರರಿಗೆ ಅನುಕೂಲವಾಗಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ್ದಾರೆ.<br /> <br /> ರಾಜ್ಯಸಭೆಯಲ್ಲಿ ಗುರುವಾರ ತಮ್ಮ ಖಾತೆಗೆ ಸಂಬಂಧಿಸಿದ ಚರ್ಚೆ ವೇಳೆ ಮಾತನಾಡಿದ ಅವರು, ಭವಿಷ್ಯನಿಧಿ ಯಲ್ಲಿನ ಹಣವನ್ನು ವಿಶೇಷ ಠೇವಣಿ ಯೋಜನೆಗಳಲ್ಲಿ ಹೂಡಿದ್ದರಿಂದ ಕಡಿಮೆ ಆದಾಯ ಬಂದಿತು. ಇದರಿಂದ ಬಡ್ಡಿದರ (ಶೇ. 8.25) ಕಡಿಮೆ ಮಾಡಲಾಯಿತು. ಇಲ್ಲಿ ಕನಿಷ್ಠ-ಗರಿಷ್ಠ ಬಡ್ಡಿದರದ ಪ್ರಶ್ನೆ ಎದುರಾಗದು. ಮುಂದಿನ ದಿನಗಳಲ್ಲಿ ಶೇ. 8.6ಕ್ಕೆ ಏರಿಸಲಾಗುವುದು ಎಂದರು.<br /> <br /> <strong>ಪ್ರತಿ ಬ್ಲಾಕ್ನಲ್ಲೂ ಎಲ್ಪಿಜಿ ಏಜೆನ್ಸಿ: ಕೇಂದ್ರ ಚಿಂತನೆ<br /> </strong><br /> <strong>ನವದೆಹಲಿ (ಪಿಟಿಐ): </strong>ಪ್ರತಿಯೊಬ್ಬರಿಗೂ ಎಲ್ಪಿಜಿ ಅಡುಗೆ ಸಿಲಿಂಡರ್ ತಲುಪಿಸುವ ಗುರಿಯೊಂದಿಗೆ ರಾಷ್ಟ್ರದ ಪ್ರತಿ ಬ್ಲಾಕ್ನಲ್ಲೂ ಸಿಲಿಂಡರ್ ವಿತರಣಾ ಏಜೆನ್ಸಿ ತೆರೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.<br /> ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ಸಚಿವ ಆರ್ಪಿಎನ್ ಸಿಂಗ್ ಗುರುವಾರ ಲೋಕಸಭೆಯಲ್ಲಿ ಪ್ರಶೋತ್ತರ ವೇಳೆ ಇದನ್ನು ತಿಳಿಸಿದರು.<br /> <br /> 2009-12ರ ಅವಧಿಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು 905 ಸಾಮಾನ್ಯ ಎಲ್ಪಿಜಿ ವಿತರಣಾ ಏಜೆನ್ಸಿಗಳನ್ನು ಹಾಗೂ 1026 ರಾಜೀವ್ ಗಾಂಧಿ ಗ್ರಾಮೀಣ ಎಲ್ಪಿಜಿ ವಿತರಣಾ ಏಜೆನ್ಸಿಗಳನ್ನು ಆರಂಭಿಸಿವೆ ಎಂದು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>