<p>ಹರಿಹರ: ನಗರದ ಜೀವನದಿ ತುಂಗಭದ್ರ ನದಿಯ ನೀರಿನ ಹರಿವು ಕಡಿಮೆಯಾಗಿದ್ದು, ಬೇಸಿಗೆ ಹಂಗಾಮಿನಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಬರ ಕಾಡುವ ಭೀತಿ ಎದುರಾಗಿದೆ.<br /> <br /> ನಗರಸಭೆಯಿಂದ ನಗರಕ್ಕೆ ಕುಡಿಯವ ನೀರು ಸರಬರಾಜು ಮಾಡಲು ರಾಣೇಬೇನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮದ ಬಳಿ ಜಾಕ್ವೆಲ್ ನಿರ್ಮಿಸಲಾಗಿದೆ. ನದಿ ನೀರು ಜಾಕ್ವೆಲ್ನ ಕಿಟಕಿಯ ಮೂಲಕ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾದ ನೀರನ್ನು ಪೈಪ್ಲೈನ್ ಮುಖಾಂತರ ಶುದ್ಧೀಕರಣ ಘಟಕಕ್ಕೆ ಸರಬರಾಜು ಮಾಡಲಾಗುತ್ತದೆ.<br /> <br /> ಮರಳುಗಾರಿಕೆಯಿಂದ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿ. ನದಿಯ ನೀರಿನ ಮಟ್ಟದ ಜಾಕ್ವೆಲ್ ಕಿಟಕಿಗಳ ಅರ್ಧಕ್ಕಿಂತ ಕೆಳಗೆ ಇಳಿದಿದೆ. ನೀರಿನ ಹರಿವು ಕಡಿಮೆಯಾಗುವ ಮುನ್ನ ಜಾಕ್ವೆಲ್ ಸುತ್ತಲಿನ ಪ್ರದೇಶದಲ್ಲಿ ಮರಳಿನ ಚೀಲಗಳನ್ನು ಹಾಕಿಸಿ ತಡೆ ಗೋಡೆ ಅಥವಾ ತಾತ್ಕಾಲಿಕ ಚೆಕ್-ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸುವ ಕಾರ್ಯ ಆರಂಭವಾಗಬೇಕಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.<br /> <br /> ಇದರ ಜತೆಗೆ ಜಾಕ್ವೆಲ್ ಸುತ್ತಮುತ್ತ ಬಟ್ಟೆ ಹಾಗೂ ಜಾನುವಾರು ಶುಚಿಗೊಳಿಸುವ ಗ್ರಾಮಸ್ಥರಿಂದ ಮಲಿನ ನೀರು ಜಾಕ್ವೆಲ್ ಸೇರುವ ಸಾಧ್ಯತೆ ಹೆಚ್ಚಾಗಿದೆ.<br /> <br /> ಜಾಕ್ವೆಲ್ ಸುತ್ತ ಸುಮಾರು ನಾಲ್ಕೈದು ಮೀಟರ್ ಸುತ್ತಳತೆಯಲ್ಲಿ ಬಟ್ಟೆ ಹಾಗೂ ಜಾನುವಾರು ಶುಚಿಗೊಳಿಸುವ ಕಾರ್ಯ ಕಡಿವಾಣ ಹಾಕಲು ಬೇಲಿ ನಿರ್ಮಾಣ ಮಾಡಬೇಕು.<br /> <br /> ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುವ ಮೊದಲೇ, ಹರಿದು ಪೋಲಾಗುತ್ತಿರುವ ನೀರನ್ನು ತಡೆದು ನೀರು ಸಂಗ್ರಹಿಸುವ ತಾತ್ಕಾಲಿಕ ಚೆಕ್ ಡ್ಯಾಂ ನಿರ್ಮಾಣಕ್ಕೆ ನಗರಸಭೆಯಿಂದ ಯಾವುದೇ ಕ್ರಮಗಳ ನಡೆಯದಿರುವುದು, ಅಧಿಕಾರಿ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.<br /> <br /> ಈ ವರ್ಷದ ಮಳೆಗಾಲ ಉತ್ತಮವಾಗಿದ್ದು ನೀರಿನ ಕೊರತೆ ಕಾಡುವುದಿಲ್ಲ ಎಂಬುದು ಸಾರ್ವಜನಿಕರ ನಂಬಿಕೆ ಹುಸಿಯಾಗುವ ಮೊದಲೇ ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲಿ ಎಂಬುವುದು ಸಾರ್ವಜನಿಕರ ಆಶಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹರಿಹರ: ನಗರದ ಜೀವನದಿ ತುಂಗಭದ್ರ ನದಿಯ ನೀರಿನ ಹರಿವು ಕಡಿಮೆಯಾಗಿದ್ದು, ಬೇಸಿಗೆ ಹಂಗಾಮಿನಲ್ಲಿ ನಗರದ ಜನತೆಗೆ ಕುಡಿಯುವ ನೀರಿನ ಬರ ಕಾಡುವ ಭೀತಿ ಎದುರಾಗಿದೆ.<br /> <br /> ನಗರಸಭೆಯಿಂದ ನಗರಕ್ಕೆ ಕುಡಿಯವ ನೀರು ಸರಬರಾಜು ಮಾಡಲು ರಾಣೇಬೇನ್ನೂರು ತಾಲ್ಲೂಕಿನ ಕವಲೆತ್ತು ಗ್ರಾಮದ ಬಳಿ ಜಾಕ್ವೆಲ್ ನಿರ್ಮಿಸಲಾಗಿದೆ. ನದಿ ನೀರು ಜಾಕ್ವೆಲ್ನ ಕಿಟಕಿಯ ಮೂಲಕ ಸಂಗ್ರಹವಾಗುತ್ತದೆ. ಹೀಗೆ ಸಂಗ್ರಹವಾದ ನೀರನ್ನು ಪೈಪ್ಲೈನ್ ಮುಖಾಂತರ ಶುದ್ಧೀಕರಣ ಘಟಕಕ್ಕೆ ಸರಬರಾಜು ಮಾಡಲಾಗುತ್ತದೆ.<br /> <br /> ಮರಳುಗಾರಿಕೆಯಿಂದ ನದಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿ. ನದಿಯ ನೀರಿನ ಮಟ್ಟದ ಜಾಕ್ವೆಲ್ ಕಿಟಕಿಗಳ ಅರ್ಧಕ್ಕಿಂತ ಕೆಳಗೆ ಇಳಿದಿದೆ. ನೀರಿನ ಹರಿವು ಕಡಿಮೆಯಾಗುವ ಮುನ್ನ ಜಾಕ್ವೆಲ್ ಸುತ್ತಲಿನ ಪ್ರದೇಶದಲ್ಲಿ ಮರಳಿನ ಚೀಲಗಳನ್ನು ಹಾಕಿಸಿ ತಡೆ ಗೋಡೆ ಅಥವಾ ತಾತ್ಕಾಲಿಕ ಚೆಕ್-ಡ್ಯಾಂ ನಿರ್ಮಿಸಿ ನೀರು ಸಂಗ್ರಹಿಸುವ ಕಾರ್ಯ ಆರಂಭವಾಗಬೇಕಿದೆ. ಈ ಬಗ್ಗೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.<br /> <br /> ಇದರ ಜತೆಗೆ ಜಾಕ್ವೆಲ್ ಸುತ್ತಮುತ್ತ ಬಟ್ಟೆ ಹಾಗೂ ಜಾನುವಾರು ಶುಚಿಗೊಳಿಸುವ ಗ್ರಾಮಸ್ಥರಿಂದ ಮಲಿನ ನೀರು ಜಾಕ್ವೆಲ್ ಸೇರುವ ಸಾಧ್ಯತೆ ಹೆಚ್ಚಾಗಿದೆ.<br /> <br /> ಜಾಕ್ವೆಲ್ ಸುತ್ತ ಸುಮಾರು ನಾಲ್ಕೈದು ಮೀಟರ್ ಸುತ್ತಳತೆಯಲ್ಲಿ ಬಟ್ಟೆ ಹಾಗೂ ಜಾನುವಾರು ಶುಚಿಗೊಳಿಸುವ ಕಾರ್ಯ ಕಡಿವಾಣ ಹಾಕಲು ಬೇಲಿ ನಿರ್ಮಾಣ ಮಾಡಬೇಕು.<br /> <br /> ನಗರದ ಸಾರ್ವಜನಿಕರಿಗೆ ಕುಡಿಯುವ ನೀರಿನ ಸಮಸ್ಯೆ ಕಾಡುವ ಮೊದಲೇ, ಹರಿದು ಪೋಲಾಗುತ್ತಿರುವ ನೀರನ್ನು ತಡೆದು ನೀರು ಸಂಗ್ರಹಿಸುವ ತಾತ್ಕಾಲಿಕ ಚೆಕ್ ಡ್ಯಾಂ ನಿರ್ಮಾಣಕ್ಕೆ ನಗರಸಭೆಯಿಂದ ಯಾವುದೇ ಕ್ರಮಗಳ ನಡೆಯದಿರುವುದು, ಅಧಿಕಾರಿ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.<br /> <br /> ಈ ವರ್ಷದ ಮಳೆಗಾಲ ಉತ್ತಮವಾಗಿದ್ದು ನೀರಿನ ಕೊರತೆ ಕಾಡುವುದಿಲ್ಲ ಎಂಬುದು ಸಾರ್ವಜನಿಕರ ನಂಬಿಕೆ ಹುಸಿಯಾಗುವ ಮೊದಲೇ ನಗರಸಭೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲಿ ಎಂಬುವುದು ಸಾರ್ವಜನಿಕರ ಆಶಯವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>