<p><strong>ಚಿಕ್ಕಬಳ್ಳಾಪುರ:</strong> ಬಾಗೇಪಲ್ಲಿ ತಾಲ್ಲೂಕಿನ ಗಡಿಪ್ರದೇಶದಲ್ಲಿ ವಾಸವಿರುವ ಕೆಲ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕಾಡುಮೇಡುಗಳಲ್ಲಿನ ಕೆಲ ಮಳೆನೀರಿನ ಹೊಂಡಗಳನ್ನು ಆಶ್ರಯಿಸಿದ್ದಾರೆ.<br /> <br /> ಕುರಿ, ಮೇಕೆಗಳು ಮತ್ತು ಇತರೆ ಜಾನುವಾರುಗಳು ಕುಡಿಯುವ ನೀರನ್ನು ಜನರೂ ನೇರವಾಗಿ ಕುಡಿಯುವುದು ಈ ಪ್ರದೇಶದಲ್ಲಿ ಸಾಮಾನ್ಯ ಸಂಗತಿ ಎನಿಸಿದೆ.<br /> <br /> ತಾಲ್ಲೂಕಿನ ಗಡಿಭಾಗದ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಡಪಲ್ಲಿ ಗ್ರಾಮದ ಸುತ್ತಲೂ ಬೆಟ್ಟಗುಡ್ಡ, ಬಂಡೆಗಲ್ಲುಗಳಿಂದ ಆವರಿಸಿಕೊಂಡಿದ್ದು ಮಳೆಗಾಲದಲ್ಲಿ ಅಲ್ಲಲ್ಲಿ ನೀರು ಶೇಖರಣೆಯಾಗುತ್ತದೆ.<br /> <br /> ಕೊಳವೆಬಾವಿ ಬತ್ತಿದಾಗ ಅಥವಾ ದೂರದಿಂದ ನೀರು ತರಲು ಸಾಧ್ಯವಾಗದಿದ್ದಾಗ, ಇಲ್ಲಿನ ಗ್ರಾಮಸ್ಥರು ಬಕೆಟ್ ಮತ್ತು ಕೊಡಗಳಲ್ಲಿ ಇದೇ ನೀರನ್ನು ಒಯ್ದು ಬಳ್ಳಿಯೊಂದರಿಂದ ನೀರು ಶುದ್ಧೀಕರಿಸಿ ಕುಡಿಯುತ್ತಾರೆ.<br /> <br /> ಬಂಡೆಗಲ್ಲು ಮೇಲೆ ಶೇಖರಣೆಯಾಗುವ ನೀರನ್ನು ನಾವು ಕುಡಿಯುವ ವಿಚಾರ ಪಟ್ಟಣ ವಾಸಿಗಳಿಗೆ ಅಚ್ಚರಿ ತರಬಹುದು. ಆದರೆ ನಮ್ಮ ಪಾಲಿಗೆ ಇದೇ ಸರ್ವಸ್ವ. ಕುರಿಗಾಹಿಗಳು ಇದೇ ನೀರನ್ನು ನೇರವಾಗಿ ಕುಡಿದು ಬಾಯಾರಿಕೆ ತಣಿಸಿಕೊಳ್ಳುತ್ತಾರೆ ಎಂದು ಮಾಡಪಲ್ಲಿ ಗ್ರಾಮಸ್ಥ ಎಂ.ಎಲ್.ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಕೆಲ ಬೆಟ್ಟಗುಡ್ಡಗಳ ಮೇಲೆ ಎಂದಿಗೂ ಬತ್ತದ ಹೊಂಡಗಳಿವೆ. ವರ್ಷದ ಯಾವುದೇ ತಿಂಗಳಲ್ಲಿ ಹೋದರೂ ಅಲ್ಲಿ ನೀರು ಇರುತ್ತದೆ. ಖನಿಜಾಂಶದಿಂದ ಕೂಡಿರುವ ಆ ತಂಪಾದ ನೀರು ಕುಡಿಯಲು ಮನಸ್ಸಿಗೆ ಖುಷಿಯಾಗುತ್ತದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕಬಳ್ಳಾಪುರ:</strong> ಬಾಗೇಪಲ್ಲಿ ತಾಲ್ಲೂಕಿನ ಗಡಿಪ್ರದೇಶದಲ್ಲಿ ವಾಸವಿರುವ ಕೆಲ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕಾಡುಮೇಡುಗಳಲ್ಲಿನ ಕೆಲ ಮಳೆನೀರಿನ ಹೊಂಡಗಳನ್ನು ಆಶ್ರಯಿಸಿದ್ದಾರೆ.<br /> <br /> ಕುರಿ, ಮೇಕೆಗಳು ಮತ್ತು ಇತರೆ ಜಾನುವಾರುಗಳು ಕುಡಿಯುವ ನೀರನ್ನು ಜನರೂ ನೇರವಾಗಿ ಕುಡಿಯುವುದು ಈ ಪ್ರದೇಶದಲ್ಲಿ ಸಾಮಾನ್ಯ ಸಂಗತಿ ಎನಿಸಿದೆ.<br /> <br /> ತಾಲ್ಲೂಕಿನ ಗಡಿಭಾಗದ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಡಪಲ್ಲಿ ಗ್ರಾಮದ ಸುತ್ತಲೂ ಬೆಟ್ಟಗುಡ್ಡ, ಬಂಡೆಗಲ್ಲುಗಳಿಂದ ಆವರಿಸಿಕೊಂಡಿದ್ದು ಮಳೆಗಾಲದಲ್ಲಿ ಅಲ್ಲಲ್ಲಿ ನೀರು ಶೇಖರಣೆಯಾಗುತ್ತದೆ.<br /> <br /> ಕೊಳವೆಬಾವಿ ಬತ್ತಿದಾಗ ಅಥವಾ ದೂರದಿಂದ ನೀರು ತರಲು ಸಾಧ್ಯವಾಗದಿದ್ದಾಗ, ಇಲ್ಲಿನ ಗ್ರಾಮಸ್ಥರು ಬಕೆಟ್ ಮತ್ತು ಕೊಡಗಳಲ್ಲಿ ಇದೇ ನೀರನ್ನು ಒಯ್ದು ಬಳ್ಳಿಯೊಂದರಿಂದ ನೀರು ಶುದ್ಧೀಕರಿಸಿ ಕುಡಿಯುತ್ತಾರೆ.<br /> <br /> ಬಂಡೆಗಲ್ಲು ಮೇಲೆ ಶೇಖರಣೆಯಾಗುವ ನೀರನ್ನು ನಾವು ಕುಡಿಯುವ ವಿಚಾರ ಪಟ್ಟಣ ವಾಸಿಗಳಿಗೆ ಅಚ್ಚರಿ ತರಬಹುದು. ಆದರೆ ನಮ್ಮ ಪಾಲಿಗೆ ಇದೇ ಸರ್ವಸ್ವ. ಕುರಿಗಾಹಿಗಳು ಇದೇ ನೀರನ್ನು ನೇರವಾಗಿ ಕುಡಿದು ಬಾಯಾರಿಕೆ ತಣಿಸಿಕೊಳ್ಳುತ್ತಾರೆ ಎಂದು ಮಾಡಪಲ್ಲಿ ಗ್ರಾಮಸ್ಥ ಎಂ.ಎಲ್.ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.<br /> <br /> ಕೆಲ ಬೆಟ್ಟಗುಡ್ಡಗಳ ಮೇಲೆ ಎಂದಿಗೂ ಬತ್ತದ ಹೊಂಡಗಳಿವೆ. ವರ್ಷದ ಯಾವುದೇ ತಿಂಗಳಲ್ಲಿ ಹೋದರೂ ಅಲ್ಲಿ ನೀರು ಇರುತ್ತದೆ. ಖನಿಜಾಂಶದಿಂದ ಕೂಡಿರುವ ಆ ತಂಪಾದ ನೀರು ಕುಡಿಯಲು ಮನಸ್ಸಿಗೆ ಖುಷಿಯಾಗುತ್ತದೆ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>