<p><strong>ಕೀವ್ (ಉಕ್ರೇನ್) (ಎಪಿ)</strong>: ಉಕ್ರೇನ್ನಲ್ಲಿ ಕಳೆದ ಕೆಲವು ತಿಂಗಳಿನಿಂದ ಉದ್ಭವಿ-ಸಿರುವ ರಾಜಕೀಯ ಅಸ್ಥಿರತೆಗೆ ಪರಿಹಾರ ಕಂಡು ಹಿಡಿಯುವ ಉದ್ದೇಶದೊಂದಿಗೆ ಪಾಶ್ಚಾತ್ಯ ರಾಷ್ಟ್ರಗಳ ಪ್ರಮುಖ ರಾಜತಾಂತ್ರಿಕರು ರಾಜಧಾನಿ ಕೀವ್ಗೆ ದೌಡಾಯಿಸಿದ್ದಾರೆ.<br /> <br /> ಉಕ್ರೇನ್ ಅಧ್ಯಕ್ಷ ವಿಕ್ಟರ್ ಯನುಕೋವಿಚ್ ವಿರುದ್ಧ ಆರಂಭವಾಗಿರುವ ಬಂಡಾಯದಿಂದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದ್ದು, ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.<br /> <br /> ಯೂರೋಪ್ ಒಕ್ಕೂಟದ ಮುಕ್ತ ವಾಣಿಜ್ಯ ವಲಯ ಸೇರಲು ನಿರಾಕರಿಸಿ, ರಷ್ಯಾದತ್ತ ವಾಲುತ್ತಿರುವ ಉಕ್ರೇನ್ ಅಧ್ಯಕ್ಷ ವಿಕ್ಟರ್ ಯನುಕೋವಿಚ್ ನಿಲುವನ್ನು ವಿರೋಧಿಸಿ ಸಾವಿರಾರು ನಾಗರಿಕರು ಬೀದಿಗೆ ಇಳಿದಿದ್ದಾರೆ.<br /> <br /> ಯನುಕೋವಿಚ್ ವಿರುದ್ಧ ಬಂಡೆದ್ದಿರುವ ಪ್ರತಿಭಟನಾಕಾರರು ಅವರ ರಾಜೀನಾಮೆಗೆ ಒತ್ತಾಯಿಸಿ ಅನೇಕ ಸರ್ಕಾರಿ ಕಟ್ಟಡಗಳಿಗೆ ಮುತ್ತಿಗೆ ಹಾಕಿದ್ದಾರೆ. ಪ್ರತಿಭಟನಾಕಾರರನ್ನು ತೆರವುಗೊಳಿಸಲು ಸರ್ಕಾರಿ ಪಡೆಗಳು ರಾತ್ರಿ ವೇಳೆ ಏಕಾಏಕಿ ದಾಳಿ ನಡೆಸಿವೆ. ಈ ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.<br /> <br /> ಒಂದು ವಾರದಿಂದ ಪ್ರತಿಭಟನಾಕಾರರು ಮತ್ತು ಸರ್ಕಾರಿ ಪಡೆಗಳ ನಡುವೆ ನಿತ್ಯ ಕಾದಾಟ ನಡೆದಿದ್ದು, ರಾಜಧಾನಿ ಕೀವ್ ಹೃದಯಭಾಗದಲ್ಲಿ ಅವರು ಬೀಡುಬಿಟ್ಟಿದ್ದಾರೆ. ಹಗಲು, ರಾತ್ರಿ ಎನ್ನದೇ ಜನರು ಇಲ್ಲಿ ಸೇರಿರುತ್ತಾರೆ.<br /> <br /> ಯುರೋಪ್ ಒಕ್ಕೂಟದ ಮುಕ್ತ ವಾಣಿಜ್ಯ ವಲಯ ಸೇರುವ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿರುವ ಯನುಕೋವಿಚ್ ರಷ್ಯಾ ಜೊತೆ ಸಂಬಂಧ ಕಡಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರಿಂದಾಗಿ ಪ್ರತಿಭಟನಾಕಾರರ ಕೋಪ ಮತ್ತಷ್ಟು ಭುಗಿಲೆದ್ದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೀವ್ (ಉಕ್ರೇನ್) (ಎಪಿ)</strong>: ಉಕ್ರೇನ್ನಲ್ಲಿ ಕಳೆದ ಕೆಲವು ತಿಂಗಳಿನಿಂದ ಉದ್ಭವಿ-ಸಿರುವ ರಾಜಕೀಯ ಅಸ್ಥಿರತೆಗೆ ಪರಿಹಾರ ಕಂಡು ಹಿಡಿಯುವ ಉದ್ದೇಶದೊಂದಿಗೆ ಪಾಶ್ಚಾತ್ಯ ರಾಷ್ಟ್ರಗಳ ಪ್ರಮುಖ ರಾಜತಾಂತ್ರಿಕರು ರಾಜಧಾನಿ ಕೀವ್ಗೆ ದೌಡಾಯಿಸಿದ್ದಾರೆ.<br /> <br /> ಉಕ್ರೇನ್ ಅಧ್ಯಕ್ಷ ವಿಕ್ಟರ್ ಯನುಕೋವಿಚ್ ವಿರುದ್ಧ ಆರಂಭವಾಗಿರುವ ಬಂಡಾಯದಿಂದ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದ್ದು, ದೇಶದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ.<br /> <br /> ಯೂರೋಪ್ ಒಕ್ಕೂಟದ ಮುಕ್ತ ವಾಣಿಜ್ಯ ವಲಯ ಸೇರಲು ನಿರಾಕರಿಸಿ, ರಷ್ಯಾದತ್ತ ವಾಲುತ್ತಿರುವ ಉಕ್ರೇನ್ ಅಧ್ಯಕ್ಷ ವಿಕ್ಟರ್ ಯನುಕೋವಿಚ್ ನಿಲುವನ್ನು ವಿರೋಧಿಸಿ ಸಾವಿರಾರು ನಾಗರಿಕರು ಬೀದಿಗೆ ಇಳಿದಿದ್ದಾರೆ.<br /> <br /> ಯನುಕೋವಿಚ್ ವಿರುದ್ಧ ಬಂಡೆದ್ದಿರುವ ಪ್ರತಿಭಟನಾಕಾರರು ಅವರ ರಾಜೀನಾಮೆಗೆ ಒತ್ತಾಯಿಸಿ ಅನೇಕ ಸರ್ಕಾರಿ ಕಟ್ಟಡಗಳಿಗೆ ಮುತ್ತಿಗೆ ಹಾಕಿದ್ದಾರೆ. ಪ್ರತಿಭಟನಾಕಾರರನ್ನು ತೆರವುಗೊಳಿಸಲು ಸರ್ಕಾರಿ ಪಡೆಗಳು ರಾತ್ರಿ ವೇಳೆ ಏಕಾಏಕಿ ದಾಳಿ ನಡೆಸಿವೆ. ಈ ಘಟನೆಯಲ್ಲಿ ಹಲವಾರು ಜನರು ಗಾಯಗೊಂಡಿದ್ದಾರೆ.<br /> <br /> ಒಂದು ವಾರದಿಂದ ಪ್ರತಿಭಟನಾಕಾರರು ಮತ್ತು ಸರ್ಕಾರಿ ಪಡೆಗಳ ನಡುವೆ ನಿತ್ಯ ಕಾದಾಟ ನಡೆದಿದ್ದು, ರಾಜಧಾನಿ ಕೀವ್ ಹೃದಯಭಾಗದಲ್ಲಿ ಅವರು ಬೀಡುಬಿಟ್ಟಿದ್ದಾರೆ. ಹಗಲು, ರಾತ್ರಿ ಎನ್ನದೇ ಜನರು ಇಲ್ಲಿ ಸೇರಿರುತ್ತಾರೆ.<br /> <br /> ಯುರೋಪ್ ಒಕ್ಕೂಟದ ಮುಕ್ತ ವಾಣಿಜ್ಯ ವಲಯ ಸೇರುವ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿರುವ ಯನುಕೋವಿಚ್ ರಷ್ಯಾ ಜೊತೆ ಸಂಬಂಧ ಕಡಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಇದರಿಂದಾಗಿ ಪ್ರತಿಭಟನಾಕಾರರ ಕೋಪ ಮತ್ತಷ್ಟು ಭುಗಿಲೆದ್ದಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>