<p><strong>ಗದಗ: </strong>ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳ ಸಾವಿರಾರು ಜನರು ವಿದ್ಯಾದಾನ ಸಮಿತಿ ಮೈದಾನಕ್ಕೆ ಮಂಗಳವಾರ ನದಿಯೋಪಾದಿಯಲ್ಲಿ ಆಗಮಿಸುತ್ತಲೇ ಇದ್ದರು ಬೆಳಿಗ್ಗೆ ಹೊತ್ತು ಮೂಡಿದಾಗ ಪ್ರಾರಂಭವಾದ ಈ ಪ್ರವಾಹ ಸೂರ್ಯ ನೆತ್ತಿಯ ಮೇಲೆ ಬರುವವರೆಗೂ ಮುಂದುವರೆದಿತ್ತು. <br /> <br /> ಎಲ್ಲರೂ ಮಾಜಿ ಸಚಿವ ಬಿ.ಶ್ರೀರಾಮುಲು ಸರ್ಕಾರಕ್ಕೆ ಕೇಳಿದ 108 ಪ್ರಶ್ನೆಗಳ ಧ್ವನಿಗೆ ತಮ್ಮ ಧ್ವನಿಯನ್ನು ಸೇರಿಸಲು ಓಡೋಡಿ ಬಂದಿದ್ದರು.ಬಳ್ಳಾರಿ, ವಿಜಾಪುರ,ಕೊಪ್ಪಳ, ರಾಯಚೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದಲೂ ಜನರು ಬಸ್, ಕ್ರೂಸರ್,ಗೂಡ್ಸ್ ಆಟೋ, ಕಾರು, ಜೀಪುಗಳಲ್ಲಿ ಆಗಮಿಸಿದ್ದರು. <br /> <br /> ಜನರನ್ನು ಕರೆದುಕೊಂಡು ಬಂದ ವಾಹನಗಳು ಎಪಿಎಂಸಿ ಆವರಣದ ಅಲ್ಲಲ್ಲಿ ಇದ್ದ ಮರದ ನೆರಳಿನಲ್ಲಿ ನಿಂತಿದ್ದವು.ಈ ವಾಹನಗಳಿಗೆ ಸಂಭಾಪುರ ರಸ್ತೆಯಿಂದ ಹೋಗುವ-ಬರುವ ಅನುಕೂಲವನ್ನು ಪೊಲೀಸರು ಈ ಸಂದರ್ಭದಲ್ಲಿ ಕಲ್ಪಿಸಿಕೊಟ್ಟಿದ್ದರು.<br /> <br /> <strong>ಊಟವಾಯಿತು: ಹೊರಟು ಬಿಟ್ಟರು<br /> </strong>ಉತ್ತರಕ್ಕಾಗಿ ಉಪವಾಸ ಕಾರ್ಯಕ್ರಮ ಬೆಳಿಗ್ಗೆ ಪ್ರಾರಂಭ ವಾದರೂ ಮುಖ್ಯವಾಗಿ ಶ್ರೀರಾಮುಲು ಮಾತನಾಡುವ ವೇಳೆಗೆ ಊಟದ ಸಮಯವಾಗಿತ್ತು. ಆ ಹೊತ್ತಿಗಾಗಲೇ ಹಲವಾರು ಮಂದಿ ಸ್ವಾಮಿ ವಿವೇಕಾನಂದ ಸಭಾಂಗಣದ ಎದುರಿಗೆ ಇರುವ ಮೈದಾನದತ್ತ ಹೆಜ್ಜೆ ಹಾಕಿದರು. <br /> <br /> ಅಲ್ಲಿ ನೂಕು ನುಗ್ಗಲಿನಲ್ಲಿ ಊಟ ಮಾಡಿದರು. ಸ್ವಲ್ಪ ಜನರು ಹೊರಡುತ್ತಿದ್ದಂತೆ ಸಭೆಯಲ್ಲಿ ಇದ್ದ ಮಿಕ್ಕ ಜನರಿಗೂ ಅತ್ತ ಕಡೆಯೇ ಗಮನವಿತ್ತು. ಶ್ರೀರಾಮುಲು ಭಾಷಣ ಮುಗಿದ ಕೂಡಲೇ ತಿರುವು ಪಡೆದುಕೊಂಡ ನದಿಯಂತೆ ಎಲ್ಲರೂ ಊಟದ ಕಡೆಗೆ ದಾಳಿ ಮಾಡಿದರು.ಊಟ ಮಾಡಿದ ಬಳಿಕ ತಮ್ಮ-ತಮ್ಮ ಬಸ್ಗಳಿಗೆ ಹತ್ತಿದರು; ಊರ ಕಡೆ ಹೊರಟೇ ಬಿಟ್ಟರು.<br /> <br /> <strong>ವೈನ್ ಸ್ಟೋರ್ ಭರ್ತಿ<br /> </strong>ವಿದ್ಯಾದಾನ ಸಮಿತಿ ಮೈದಾನಕ್ಕೆ ಕೂಗಳತೆಯಲ್ಲಿ ಇದ್ದ ವೈನ್ಸ್ಟೋರ್ಗಳು ಭರ್ತಿಯಾಗಿದ್ದು. ಮದ್ಯಪ್ರಿಯರು ಜೇನುನೋಣದ ಹಾಗೆ ಮುತ್ತಿಕೊಂಡು ಮದ್ಯವನ್ನು ಹೀರಿದರು.ಇದಲ್ಲದೇ ತಂಪು ಪಾನೀಯ, ಕಲ್ಲಂಗಡಿ, ಐಸ್ಕ್ರೀಮ್, ಸೋಡಾ ವ್ಯಾಪಾರವೂ ಕೂಡಾ ಭರ್ಜರಿಯಾಗಿ ಈ ಸಂದರ್ಭದಲ್ಲಿ ನಡೆಯಿತು.<br /> <br /> <strong>ರಕ್ಷಿತಾ ಕ್ರೇಜ್</strong><br /> ಸೆಕ್ಸಿ ತಾರೆ ಎಂದು ಖ್ಯಾತಿಗಳಿಸಿರುವ ಚಿತ್ರನಟಿ ರಕ್ಷಿತಾ ಅವರನ್ನು ಇಲ್ಲಿವರೆಗೂ ಬೆಳ್ಳಿತೆರೆಯ ಮೇಲೆ ನೋಡುತ್ತಿದ್ದ ಜನರು, ಮಂಗಳವಾರ ಕಣ್ಣಾರೆ ಕಂಡು ಆನಂದಕ್ಕೆ ಒಳಗಾದರು. <br /> <br /> ಸ್ವಾಗತಕಾರರು ರಕ್ಷಿತಾ ಹೆಸರು ಹೇಳಿದ ತಕ್ಷಣವೇ ಇಡೀ ಸಭಾಂಗಣಕ್ಕೆ ಸಭಾಂಗಣವೇ ಕೇಕೆ ಹಾಕಿ ಸಂಭ್ರಮಿಸಿತು.ಚಕ್ಕಡಿ ಮೇಲೆ ನಿಂತು ಮೆರವಣಿಗೆ ಸಾಗಿದಾಗಲೂ ಜನರು ರಕ್ಷಿತಾ ಅವರತ್ತ ಕೈ ಬೀಸಿ ಕೂಗುತ್ತಿದ್ದರು.<br /> <br /> <strong>ರೈತ ದಂಪತಿ ಚಾಲನೆ</strong><br /> ಉತ್ತರಕ್ಕಾಗಿ ಉಪವಾಸ ಕಾರ್ಯಕ್ರಮವನ್ನು ರೈತ ದಂಪತಿ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು. <br /> ಹಳೇ ಮೈಸೂರು ಪ್ರಾಂತ್ಯದ ಹಲವಾರು ಸ್ವಾಮೀಜಿಗಳು ಆಗಮಿಸಿ ಶ್ರೀರಾಮುಲು ಅವರನ್ನು ಆಶೀರ್ವದಿಸಿದರು. ಕಾರ್ಯಕ್ರಮ ಹಲವು ವಿಶೇಷಗಳಿಂದ ಕೂಡಿದ್ದು, ಎಲ್ಲರ ಗಮನ ಸೆಳೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ: </strong>ಉತ್ತರ ಕರ್ನಾಟಕದ ಐದಾರು ಜಿಲ್ಲೆಗಳ ಸಾವಿರಾರು ಜನರು ವಿದ್ಯಾದಾನ ಸಮಿತಿ ಮೈದಾನಕ್ಕೆ ಮಂಗಳವಾರ ನದಿಯೋಪಾದಿಯಲ್ಲಿ ಆಗಮಿಸುತ್ತಲೇ ಇದ್ದರು ಬೆಳಿಗ್ಗೆ ಹೊತ್ತು ಮೂಡಿದಾಗ ಪ್ರಾರಂಭವಾದ ಈ ಪ್ರವಾಹ ಸೂರ್ಯ ನೆತ್ತಿಯ ಮೇಲೆ ಬರುವವರೆಗೂ ಮುಂದುವರೆದಿತ್ತು. <br /> <br /> ಎಲ್ಲರೂ ಮಾಜಿ ಸಚಿವ ಬಿ.ಶ್ರೀರಾಮುಲು ಸರ್ಕಾರಕ್ಕೆ ಕೇಳಿದ 108 ಪ್ರಶ್ನೆಗಳ ಧ್ವನಿಗೆ ತಮ್ಮ ಧ್ವನಿಯನ್ನು ಸೇರಿಸಲು ಓಡೋಡಿ ಬಂದಿದ್ದರು.ಬಳ್ಳಾರಿ, ವಿಜಾಪುರ,ಕೊಪ್ಪಳ, ರಾಯಚೂರು ಸೇರಿದಂತೆ ಇನ್ನಿತರ ಜಿಲ್ಲೆಗಳಿಂದಲೂ ಜನರು ಬಸ್, ಕ್ರೂಸರ್,ಗೂಡ್ಸ್ ಆಟೋ, ಕಾರು, ಜೀಪುಗಳಲ್ಲಿ ಆಗಮಿಸಿದ್ದರು. <br /> <br /> ಜನರನ್ನು ಕರೆದುಕೊಂಡು ಬಂದ ವಾಹನಗಳು ಎಪಿಎಂಸಿ ಆವರಣದ ಅಲ್ಲಲ್ಲಿ ಇದ್ದ ಮರದ ನೆರಳಿನಲ್ಲಿ ನಿಂತಿದ್ದವು.ಈ ವಾಹನಗಳಿಗೆ ಸಂಭಾಪುರ ರಸ್ತೆಯಿಂದ ಹೋಗುವ-ಬರುವ ಅನುಕೂಲವನ್ನು ಪೊಲೀಸರು ಈ ಸಂದರ್ಭದಲ್ಲಿ ಕಲ್ಪಿಸಿಕೊಟ್ಟಿದ್ದರು.<br /> <br /> <strong>ಊಟವಾಯಿತು: ಹೊರಟು ಬಿಟ್ಟರು<br /> </strong>ಉತ್ತರಕ್ಕಾಗಿ ಉಪವಾಸ ಕಾರ್ಯಕ್ರಮ ಬೆಳಿಗ್ಗೆ ಪ್ರಾರಂಭ ವಾದರೂ ಮುಖ್ಯವಾಗಿ ಶ್ರೀರಾಮುಲು ಮಾತನಾಡುವ ವೇಳೆಗೆ ಊಟದ ಸಮಯವಾಗಿತ್ತು. ಆ ಹೊತ್ತಿಗಾಗಲೇ ಹಲವಾರು ಮಂದಿ ಸ್ವಾಮಿ ವಿವೇಕಾನಂದ ಸಭಾಂಗಣದ ಎದುರಿಗೆ ಇರುವ ಮೈದಾನದತ್ತ ಹೆಜ್ಜೆ ಹಾಕಿದರು. <br /> <br /> ಅಲ್ಲಿ ನೂಕು ನುಗ್ಗಲಿನಲ್ಲಿ ಊಟ ಮಾಡಿದರು. ಸ್ವಲ್ಪ ಜನರು ಹೊರಡುತ್ತಿದ್ದಂತೆ ಸಭೆಯಲ್ಲಿ ಇದ್ದ ಮಿಕ್ಕ ಜನರಿಗೂ ಅತ್ತ ಕಡೆಯೇ ಗಮನವಿತ್ತು. ಶ್ರೀರಾಮುಲು ಭಾಷಣ ಮುಗಿದ ಕೂಡಲೇ ತಿರುವು ಪಡೆದುಕೊಂಡ ನದಿಯಂತೆ ಎಲ್ಲರೂ ಊಟದ ಕಡೆಗೆ ದಾಳಿ ಮಾಡಿದರು.ಊಟ ಮಾಡಿದ ಬಳಿಕ ತಮ್ಮ-ತಮ್ಮ ಬಸ್ಗಳಿಗೆ ಹತ್ತಿದರು; ಊರ ಕಡೆ ಹೊರಟೇ ಬಿಟ್ಟರು.<br /> <br /> <strong>ವೈನ್ ಸ್ಟೋರ್ ಭರ್ತಿ<br /> </strong>ವಿದ್ಯಾದಾನ ಸಮಿತಿ ಮೈದಾನಕ್ಕೆ ಕೂಗಳತೆಯಲ್ಲಿ ಇದ್ದ ವೈನ್ಸ್ಟೋರ್ಗಳು ಭರ್ತಿಯಾಗಿದ್ದು. ಮದ್ಯಪ್ರಿಯರು ಜೇನುನೋಣದ ಹಾಗೆ ಮುತ್ತಿಕೊಂಡು ಮದ್ಯವನ್ನು ಹೀರಿದರು.ಇದಲ್ಲದೇ ತಂಪು ಪಾನೀಯ, ಕಲ್ಲಂಗಡಿ, ಐಸ್ಕ್ರೀಮ್, ಸೋಡಾ ವ್ಯಾಪಾರವೂ ಕೂಡಾ ಭರ್ಜರಿಯಾಗಿ ಈ ಸಂದರ್ಭದಲ್ಲಿ ನಡೆಯಿತು.<br /> <br /> <strong>ರಕ್ಷಿತಾ ಕ್ರೇಜ್</strong><br /> ಸೆಕ್ಸಿ ತಾರೆ ಎಂದು ಖ್ಯಾತಿಗಳಿಸಿರುವ ಚಿತ್ರನಟಿ ರಕ್ಷಿತಾ ಅವರನ್ನು ಇಲ್ಲಿವರೆಗೂ ಬೆಳ್ಳಿತೆರೆಯ ಮೇಲೆ ನೋಡುತ್ತಿದ್ದ ಜನರು, ಮಂಗಳವಾರ ಕಣ್ಣಾರೆ ಕಂಡು ಆನಂದಕ್ಕೆ ಒಳಗಾದರು. <br /> <br /> ಸ್ವಾಗತಕಾರರು ರಕ್ಷಿತಾ ಹೆಸರು ಹೇಳಿದ ತಕ್ಷಣವೇ ಇಡೀ ಸಭಾಂಗಣಕ್ಕೆ ಸಭಾಂಗಣವೇ ಕೇಕೆ ಹಾಕಿ ಸಂಭ್ರಮಿಸಿತು.ಚಕ್ಕಡಿ ಮೇಲೆ ನಿಂತು ಮೆರವಣಿಗೆ ಸಾಗಿದಾಗಲೂ ಜನರು ರಕ್ಷಿತಾ ಅವರತ್ತ ಕೈ ಬೀಸಿ ಕೂಗುತ್ತಿದ್ದರು.<br /> <br /> <strong>ರೈತ ದಂಪತಿ ಚಾಲನೆ</strong><br /> ಉತ್ತರಕ್ಕಾಗಿ ಉಪವಾಸ ಕಾರ್ಯಕ್ರಮವನ್ನು ರೈತ ದಂಪತಿ ಉದ್ಘಾಟನೆ ಮಾಡಿದ್ದು ವಿಶೇಷವಾಗಿತ್ತು. <br /> ಹಳೇ ಮೈಸೂರು ಪ್ರಾಂತ್ಯದ ಹಲವಾರು ಸ್ವಾಮೀಜಿಗಳು ಆಗಮಿಸಿ ಶ್ರೀರಾಮುಲು ಅವರನ್ನು ಆಶೀರ್ವದಿಸಿದರು. ಕಾರ್ಯಕ್ರಮ ಹಲವು ವಿಶೇಷಗಳಿಂದ ಕೂಡಿದ್ದು, ಎಲ್ಲರ ಗಮನ ಸೆಳೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>