<p><strong>ಭದ್ರಾವತಿ: </strong>‘ಕಳೆದ ಎಂಟು ತಿಂಗಳಿನಿಂದ ವಿಐಎಸ್ಎಲ್ನಲ್ಲಿ ಸ್ಥಗಿತ ಗೊಂಡಿರುವ ಉತ್ಪಾದನೆ ಕೂಡಲೇ ಆರಂಭಿಸಬೇಕು’ ಎಂದು ಸಿಐಟಿಯು ಮುಖಂಡ ಗುರುಪ್ರಸಾದ್ ಬ್ಯಾನರ್ಜಿ ಆಗ್ರಹಿಸಿದರು.<br /> <br /> ಇಲ್ಲಿನ ವಿಐಎಸ್ಎಲ್ ಕಾರ್ಖಾನೆ ಮುಂಭಾಗದಲ್ಲಿ ಕಳೆದ 51 ದಿನದಿಂದ ನಡೆಯುತ್ತಿರುವ ಖಾಸಗೀಕರಣ ಹಾಗೂ ಸಹಭಾಗಿತ್ವ ವಿರುದ್ಧ ಧರಣಿ ಸ್ಥಳದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ಉತ್ಪಾದನೆ ಸ್ಥಗಿತ ಮಾಡುವ ಮೂಲಕ ಇಲ್ಲಿನ ಆಡಳಿತ ಗುತ್ತಿಗೆ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇದಕ್ಕೆ ಅವಕಾಶ ನೀಡದ ರೀತಿಯಲ್ಲಿ ಕೂಡಲೇ ಉತ್ಪಾದನೆ ಆರಂಭಿಸಬೇಕು ಎಂಬ ಒತ್ತಾಯವನ್ನು ಅಧಿಕಾರಿಗಳ ಮುಂದೆ ಮಂಡಿಸಿದ್ದೇವೆ ಎಂದು ಘೋಷಿಸಿದರು.<br /> <br /> ಸೇಲಂ ಪ್ಲಾಂಟ್ ಕಾರ್ಮಿಕ ಮುಖಂಡ ಹಾಗೂ ಸ್ಟೀಲ್ ವರ್ಕರ್ಸ್ ಫೆಡರೇಷನ್ ಮುಖಂಡ ಪನ್ನೀರಸೆಲ್ವಂ ಮಾತನಾಡಿ, ಸೈಲ್ ಮಲತಾಯಿ ಧೋರಣೆ ಅನುಸರಿಸಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.<br /> <br /> ಈ ತಿಂಗಳ 9 ಮತ್ತು 10ರಂದು ನಮ್ಮ ತಂಡ ಸೈಲ್ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಿದೆ. ಅಲ್ಲಿ ವಿಐಎಸ್ಎಲ್ ಕಾರ್ಖಾನೆ ಖಾಸಗೀಕರಣ ಹಾಗೂ ಸಹಭಾಗಿತ್ವ ಯೋಜನೆಗೆ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿ ಕಾರ್ಖಾನೆ ಉಳಿಸುತ್ತೇವೆ ಎಂದು ಘೋಷಿಸಿದರು.<br /> <br /> ಸಭೆಯಲ್ಲಿ ಸಿಐಟಿಯು ಮುಖಂಡರಾದ ಅಲೆಗ್ಸಾಂಡರ್, ಕಾಳಿಸಂಗರ್, ಇಲ್ಲಿನ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಜೆ.ಎನ್. ಚಂದ್ರಹಾಸ, ಎಸ್.ಸಿ.ಓ. ಶ್ರೀನಿವಾಸ್, ಹೊನ್ನಯ್ಯ, ಶ್ರೀಧರ್, ರೇವಣ್ಣ, ರಂಗೇಗೌಡ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭದ್ರಾವತಿ: </strong>‘ಕಳೆದ ಎಂಟು ತಿಂಗಳಿನಿಂದ ವಿಐಎಸ್ಎಲ್ನಲ್ಲಿ ಸ್ಥಗಿತ ಗೊಂಡಿರುವ ಉತ್ಪಾದನೆ ಕೂಡಲೇ ಆರಂಭಿಸಬೇಕು’ ಎಂದು ಸಿಐಟಿಯು ಮುಖಂಡ ಗುರುಪ್ರಸಾದ್ ಬ್ಯಾನರ್ಜಿ ಆಗ್ರಹಿಸಿದರು.<br /> <br /> ಇಲ್ಲಿನ ವಿಐಎಸ್ಎಲ್ ಕಾರ್ಖಾನೆ ಮುಂಭಾಗದಲ್ಲಿ ಕಳೆದ 51 ದಿನದಿಂದ ನಡೆಯುತ್ತಿರುವ ಖಾಸಗೀಕರಣ ಹಾಗೂ ಸಹಭಾಗಿತ್ವ ವಿರುದ್ಧ ಧರಣಿ ಸ್ಥಳದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.<br /> <br /> ಉತ್ಪಾದನೆ ಸ್ಥಗಿತ ಮಾಡುವ ಮೂಲಕ ಇಲ್ಲಿನ ಆಡಳಿತ ಗುತ್ತಿಗೆ ಕಾರ್ಮಿಕರನ್ನು ನಿರ್ಲಕ್ಷ್ಯ ಮಾಡುತ್ತಿದೆ. ಇದಕ್ಕೆ ಅವಕಾಶ ನೀಡದ ರೀತಿಯಲ್ಲಿ ಕೂಡಲೇ ಉತ್ಪಾದನೆ ಆರಂಭಿಸಬೇಕು ಎಂಬ ಒತ್ತಾಯವನ್ನು ಅಧಿಕಾರಿಗಳ ಮುಂದೆ ಮಂಡಿಸಿದ್ದೇವೆ ಎಂದು ಘೋಷಿಸಿದರು.<br /> <br /> ಸೇಲಂ ಪ್ಲಾಂಟ್ ಕಾರ್ಮಿಕ ಮುಖಂಡ ಹಾಗೂ ಸ್ಟೀಲ್ ವರ್ಕರ್ಸ್ ಫೆಡರೇಷನ್ ಮುಖಂಡ ಪನ್ನೀರಸೆಲ್ವಂ ಮಾತನಾಡಿ, ಸೈಲ್ ಮಲತಾಯಿ ಧೋರಣೆ ಅನುಸರಿಸಿರುವುದು ಸರಿಯಲ್ಲ’ ಎಂದು ಕಿಡಿಕಾರಿದರು.<br /> <br /> ಈ ತಿಂಗಳ 9 ಮತ್ತು 10ರಂದು ನಮ್ಮ ತಂಡ ಸೈಲ್ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚೆ ನಡೆಸಲಿದೆ. ಅಲ್ಲಿ ವಿಐಎಸ್ಎಲ್ ಕಾರ್ಖಾನೆ ಖಾಸಗೀಕರಣ ಹಾಗೂ ಸಹಭಾಗಿತ್ವ ಯೋಜನೆಗೆ ಸೇರ್ಪಡೆ ಮಾಡಬಾರದು ಎಂದು ಒತ್ತಾಯಿಸಿ ಕಾರ್ಖಾನೆ ಉಳಿಸುತ್ತೇವೆ ಎಂದು ಘೋಷಿಸಿದರು.<br /> <br /> ಸಭೆಯಲ್ಲಿ ಸಿಐಟಿಯು ಮುಖಂಡರಾದ ಅಲೆಗ್ಸಾಂಡರ್, ಕಾಳಿಸಂಗರ್, ಇಲ್ಲಿನ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಜೆ.ಎನ್. ಚಂದ್ರಹಾಸ, ಎಸ್.ಸಿ.ಓ. ಶ್ರೀನಿವಾಸ್, ಹೊನ್ನಯ್ಯ, ಶ್ರೀಧರ್, ರೇವಣ್ಣ, ರಂಗೇಗೌಡ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>