<p><strong>ಉಡುಪಿ: </strong>ವಿಶ್ವ ಕಾರ್ಮಿಕ ಕಾರ್ಯಾಚರಣೆ ದಿನದ ಅಂಗವಾಗಿ ಉಡುಪಿ ಜೋಡುಕಟ್ಟೆಯಿಂದ ನಗರದ ಸರ್ವಿಸ್ ಬಸ್ನಿಲ್ದಾಣದವರೆಗೆ ವಿವಿಧ ಕಾರ್ಮಿಕರ ಸಂಘಟನೆಗಳ ಕಾಯಕರ್ತರು ಸೋಮವಾರ ಮೆರವಣಿಗೆ ನಡೆಸಿದರು.<br /> ನಗರದ ಕ್ಲಾಕ್ ಟವರ್ ಬಳಿ ಎಲ್ಲ ಸಂಘಟನೆಗಳ ಸದಸ್ಯರು ಸೇರಿ ವಿಶ್ವ ಕಾರ್ಮಿಕ ಕಾರ್ಯಾಚರಣೆ ದಿನದ ಬೇಡಿಕೆಗಳನ್ನು ಮುಂದಿಟ್ಟರು.<br /> <br /> ಜಾಗತೀಕರಣ ಮತ್ತು ಉದಾರೀಕರಣ ನೀತಿಗಳಿಂದ ಜಾಗತಿಕ ಮಟ್ಟದಲ್ಲಿ ದುಡಿಯುವ ಜನರ ಶೋಷಣೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ಇಂತಹ ರ್ಯಾಲಿ ಅಗತ್ಯ~ ಎಂದು ಸಂಘಟನೆ ಮುಖಂಡರು ಅಭಿಪ್ರಾಯಪಟ್ಟರು.<br /> <br /> ಉಡುಪಿ ಜಿಲ್ಲಾ ಸಿಐಟಿಯು ಮುಖಂಡ ಪಿ.ವಿಶ್ವನಾಥ ರೈ ಮಾತನಾಡಿ, `ಜಾಗತೀಕರಣದ ನೀತಿಯಿಂದಾಗಿ ಶ್ರೀಮಂತರು ಮತ್ತು ಬಡವರ ನಡುವಣ ಅಂತರ ಹೆಚ್ಚಿದೆ. ಬಹುತೇಕ ಜನರ ಜೀವನ ಮಟ್ಟದಲ್ಲಿ ಸುಧಾರಣೆ ಆಗಿಲ್ಲ. ಅಸಂಘಟಿತ ಕಾರ್ಮಿಕರಿಗೆ ಉತ್ತಮ ಬದುಕು ಕನಸಾಗಿದ್ದು, ಪಿಂಚಣಿಕೂಡ ದೊರೆಯುತ್ತಿಲ್ಲ~ ಎಂದು ವಿಷಾದಿಸಿದರು.<br /> <br /> `ಕಾರ್ಮಿಕರಿಗೆ ಊಟ, ವಸತಿ, ಶಿಕ್ಷಣ, ಆರೋಗ್ಯ ಸರಿಯಾಗಿ ನಿರ್ವಹಿಸಲು ಅಗತ್ಯದ ವೇತನ ಕೂಡ ದೊರೆಯುತ್ತಿಲ್ಲ. ಕೆಲಸದ ಅಭದ್ರತೆ ಕಾಡುತ್ತಿದೆ. ಕೆಲಸದ ಅವಧಿ ಕಾರ್ಮಿಕರನ್ನು ನುಂಗಿ ಹಾಕುತ್ತಿದೆ~ ಎಂದರು. ಮುಖಂಡರಾದ ಕೆ.ಶಂಕರ್, ಶಶಿಧರ ಗೊಲ್ಲ, ಪುಷ್ಪಾ ಮಲ್ಲಾರ್, ಬಿಲ್ಕೀಸ್ ಬಾನು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಡುಪಿ: </strong>ವಿಶ್ವ ಕಾರ್ಮಿಕ ಕಾರ್ಯಾಚರಣೆ ದಿನದ ಅಂಗವಾಗಿ ಉಡುಪಿ ಜೋಡುಕಟ್ಟೆಯಿಂದ ನಗರದ ಸರ್ವಿಸ್ ಬಸ್ನಿಲ್ದಾಣದವರೆಗೆ ವಿವಿಧ ಕಾರ್ಮಿಕರ ಸಂಘಟನೆಗಳ ಕಾಯಕರ್ತರು ಸೋಮವಾರ ಮೆರವಣಿಗೆ ನಡೆಸಿದರು.<br /> ನಗರದ ಕ್ಲಾಕ್ ಟವರ್ ಬಳಿ ಎಲ್ಲ ಸಂಘಟನೆಗಳ ಸದಸ್ಯರು ಸೇರಿ ವಿಶ್ವ ಕಾರ್ಮಿಕ ಕಾರ್ಯಾಚರಣೆ ದಿನದ ಬೇಡಿಕೆಗಳನ್ನು ಮುಂದಿಟ್ಟರು.<br /> <br /> ಜಾಗತೀಕರಣ ಮತ್ತು ಉದಾರೀಕರಣ ನೀತಿಗಳಿಂದ ಜಾಗತಿಕ ಮಟ್ಟದಲ್ಲಿ ದುಡಿಯುವ ಜನರ ಶೋಷಣೆಯಾಗುತ್ತಿದ್ದು, ಇದನ್ನು ತಡೆಗಟ್ಟಲು ಇಂತಹ ರ್ಯಾಲಿ ಅಗತ್ಯ~ ಎಂದು ಸಂಘಟನೆ ಮುಖಂಡರು ಅಭಿಪ್ರಾಯಪಟ್ಟರು.<br /> <br /> ಉಡುಪಿ ಜಿಲ್ಲಾ ಸಿಐಟಿಯು ಮುಖಂಡ ಪಿ.ವಿಶ್ವನಾಥ ರೈ ಮಾತನಾಡಿ, `ಜಾಗತೀಕರಣದ ನೀತಿಯಿಂದಾಗಿ ಶ್ರೀಮಂತರು ಮತ್ತು ಬಡವರ ನಡುವಣ ಅಂತರ ಹೆಚ್ಚಿದೆ. ಬಹುತೇಕ ಜನರ ಜೀವನ ಮಟ್ಟದಲ್ಲಿ ಸುಧಾರಣೆ ಆಗಿಲ್ಲ. ಅಸಂಘಟಿತ ಕಾರ್ಮಿಕರಿಗೆ ಉತ್ತಮ ಬದುಕು ಕನಸಾಗಿದ್ದು, ಪಿಂಚಣಿಕೂಡ ದೊರೆಯುತ್ತಿಲ್ಲ~ ಎಂದು ವಿಷಾದಿಸಿದರು.<br /> <br /> `ಕಾರ್ಮಿಕರಿಗೆ ಊಟ, ವಸತಿ, ಶಿಕ್ಷಣ, ಆರೋಗ್ಯ ಸರಿಯಾಗಿ ನಿರ್ವಹಿಸಲು ಅಗತ್ಯದ ವೇತನ ಕೂಡ ದೊರೆಯುತ್ತಿಲ್ಲ. ಕೆಲಸದ ಅಭದ್ರತೆ ಕಾಡುತ್ತಿದೆ. ಕೆಲಸದ ಅವಧಿ ಕಾರ್ಮಿಕರನ್ನು ನುಂಗಿ ಹಾಕುತ್ತಿದೆ~ ಎಂದರು. ಮುಖಂಡರಾದ ಕೆ.ಶಂಕರ್, ಶಶಿಧರ ಗೊಲ್ಲ, ಪುಷ್ಪಾ ಮಲ್ಲಾರ್, ಬಿಲ್ಕೀಸ್ ಬಾನು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>