<p><strong>ಬೆಂಗಳೂರು: </strong>ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಕಂಪೆನಿಗೆ ಸರಪಾಡಿ ಆಣೆಕಟ್ಟಿನಿಂದ 2.5 ಮಿಲಿಯನ್ ಗ್ಯಾಲನ್ ನೀರನ್ನು ಪಡೆದುಕೊಳ್ಳಲು ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. <br /> <br /> ಒಂದು ವೇಳೆ ಈ ರೀತಿಯ ನೀರು ಪೂರೈಕೆಯಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆ ಆಗುತ್ತದೆ ಎಂದಾದರೆ ನೀರು ಪೂರೈಕೆಯನ್ನು ಕಡಿತಗೊಳಿಸಬಹುದು ಎಂದು ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದ್ದಾರೆ. `ನಾಲ್ಕು ವಾರಗಳ ಕಾಲ ನೀರು ಪೂರೈಕೆ ಮಾಡಿ, ನಂತರ ಏನಾದರೂ ಸಮಸ್ಯೆ ತಲೆ ದೋರುತ್ತ ದೆಯೋ ಎಂಬುದನ್ನು ಗಮನಿಸಿ ಮುಂದಿನ ಕ್ರಮ ತೆಗೆದುಕೊಳ್ಳಿ~ ಎಂದು ಅವರು ತಿಳಿಸಿದ್ದಾರೆ.<br /> <br /> ನೀರನ್ನು ಪಡೆದುಕೊಳ್ಳದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇದೇ 11ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.<br /> ಅರ್ಜಿದಾರರು (ಎಂಆರ್ಪಿಎಲ್) ಕಚ್ಚಾತೈಲವನ್ನು ಉತ್ಪಾದಿಸುವ ಕಂಪೆನಿ. ಆದುದರಿಂದ ತಮಗೆ ನೀರಿನ ಅಗತ್ಯ ಇದೆ ಎನ್ನುವುದು ಅದರ ವಾದ. ಆದರೆ ನೀರು ಪೂರೈಕೆ ಆಗದ ಕಾರಣ ಅದರ ಕೆಲವೊಂದು ಘಟಕಗಳನ್ನು ಮುಚ್ಚಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಅರ್ಜಿಯಲ್ಲಿ ಅದು ತಿಳಿಸಿತ್ತು.<br /> <br /> `ಈ ಮೊದಲು ನಮಗೆ ನೇತ್ರಾವತಿ ನದಿಯಿಂದ 5.5 ಮಿಲಿಯನ್ ಗ್ಯಾಲನ್ ನೀರು ಪೂರೈಕೆ ಆಗುತ್ತಿತ್ತು. ಆದರೆ ಸಾರ್ವಜನಿಕರಿಗೆ ನೀರಿನ ತೊಂದರೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ನೀರು ಪೂರೈಕೆಯನ್ನು ಮೂರನೇ ಒಂದು ಭಾಗಕ್ಕೆ ಇಳಿಸಿತು. ಇದರಿಂದ ನಮಗೆ ತೀವ್ರ ತೊಂದರೆ ಆಗಿದೆ~ ಎಂದು ಅದು ಕೋರ್ಟ್ನಲ್ಲಿ ವಾದಿಸಿತ್ತು.<br /> <br /> ಇಷ್ಟೊಂದು ಪ್ರಮಾಣದ ನೀರು ಪೂರೈಕೆ ಮಾಡಿದರೆ ಮಂಗಳೂರು ನಗರಕ್ಕೆ ನೀರಿನ ವ್ಯತ್ಯಯ ಉಂಟಾಗಲಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್ ಅವರು ಪ್ರತಿವಾದಿಸಿದರು. ಆದರೆ ಅರ್ಜಿದಾರರ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು.<br /> <br /> `ಒಂದು ವೇಳೆ ಈ ಕಂಪೆನಿಯ ಘಟಕಗಳನ್ನು ಮುಚ್ಚಿ ಬಿಟ್ಟರೆ, ನೌಕರರು ಬೀದಿ ಪಾಲಾಗ ಬೇಕಾಗುತ್ತದೆ. ಮಳೆಗಾಲ ಸಮೀಪಿಸುತ್ತಿದೆ. ಕುಡಿಯುವ ನೀರಿಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ಈ ಘಟಕಗಳು ಮುಚ್ಚಿದರೆ ಕಾರ್ಮಿಕರು ಹೊಟ್ಟೆಗಿಲ್ಲದೇ ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಆದಂತೆ ಕಂಪೆನಿಯನ್ನು ಗುಜರಾತಿಗೋ, ಇನ್ನೆಲ್ಲಿಯೋ ಸ್ಥಳಾಂತರ ಮಾಡಿದರೆ ನಮ್ಮ ರಾಜ್ಯಕ್ಕೆ ನಷ್ಟವಾಗುತ್ತದೆ~ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p><strong>ನೀರು ಪೂರೈಕೆ ಸಹಜಸ್ಥಿತಿಗೆ<br /> ಮಂಗಳೂರು:</strong> ತುಂಬೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಸುಧಾರಿಸಿರುವುದರಿಂದ, ಕಳೆದ ಕೆಲವು ದಿನಗಳಿಂದ ಇದ್ದ ನೀರಿನ ಪೂರೈಕೆಯಲ್ಲಿನ ಕಡಿತ ತೆಗೆದುಹಾಕಲಾಗಿದ್ದು, ಮಾಮೂಲಿನಂತೆ ನೀರು ಪೂರೈಕೆಯಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಹರೀಶ್ ಕುಮಾರ್ ತಿಳಿಸಿದರು.<br /> <br /> ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗಿದ್ದರಿಂದ ತುಂಬೆ ಅಣೆಕಟ್ಟೆಯಲ್ಲಿ ನೀರಿನಪ್ರಮಾಣ ಬುಧವಾರ 12 ಅಡಿಗೆ ಏರಿತ್ತು. ಇದರ ಗರಿಷ್ಠ ಪ್ರಮಾಣ 13 ಅಡಿ. ನೀರಿನ ಪರಿಸ್ಥಿತಿ ಸುಧಾರಿಸಿರುವುದರಿಂದ ಎಂಆರ್ಪಿಎಲ್ಗೂ, ಮುಂದಿನ ಆದೇಶದವರೆಗೆ ಮಾಮೂಲಿನಂತೆ ನೀರು ಪೂರೈಕೆ ಮಾಡಲಾಗುವುದು ಎಂದು ಅವರು ಬುಧವಾರ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಕಂಪೆನಿಗೆ ಸರಪಾಡಿ ಆಣೆಕಟ್ಟಿನಿಂದ 2.5 ಮಿಲಿಯನ್ ಗ್ಯಾಲನ್ ನೀರನ್ನು ಪಡೆದುಕೊಳ್ಳಲು ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. <br /> <br /> ಒಂದು ವೇಳೆ ಈ ರೀತಿಯ ನೀರು ಪೂರೈಕೆಯಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆ ಆಗುತ್ತದೆ ಎಂದಾದರೆ ನೀರು ಪೂರೈಕೆಯನ್ನು ಕಡಿತಗೊಳಿಸಬಹುದು ಎಂದು ನ್ಯಾಯಮೂರ್ತಿ ಹುಲುವಾಡಿ ಜಿ.ರಮೇಶ್ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶಿಸಿದ್ದಾರೆ. `ನಾಲ್ಕು ವಾರಗಳ ಕಾಲ ನೀರು ಪೂರೈಕೆ ಮಾಡಿ, ನಂತರ ಏನಾದರೂ ಸಮಸ್ಯೆ ತಲೆ ದೋರುತ್ತ ದೆಯೋ ಎಂಬುದನ್ನು ಗಮನಿಸಿ ಮುಂದಿನ ಕ್ರಮ ತೆಗೆದುಕೊಳ್ಳಿ~ ಎಂದು ಅವರು ತಿಳಿಸಿದ್ದಾರೆ.<br /> <br /> ನೀರನ್ನು ಪಡೆದುಕೊಳ್ಳದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಇದೇ 11ರಂದು ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಕಂಪೆನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳು ನಡೆಸಿದರು.<br /> ಅರ್ಜಿದಾರರು (ಎಂಆರ್ಪಿಎಲ್) ಕಚ್ಚಾತೈಲವನ್ನು ಉತ್ಪಾದಿಸುವ ಕಂಪೆನಿ. ಆದುದರಿಂದ ತಮಗೆ ನೀರಿನ ಅಗತ್ಯ ಇದೆ ಎನ್ನುವುದು ಅದರ ವಾದ. ಆದರೆ ನೀರು ಪೂರೈಕೆ ಆಗದ ಕಾರಣ ಅದರ ಕೆಲವೊಂದು ಘಟಕಗಳನ್ನು ಮುಚ್ಚಬೇಕಾದ ಅನಿವಾರ್ಯತೆ ಉಂಟಾಗಿದೆ ಎಂದು ಅರ್ಜಿಯಲ್ಲಿ ಅದು ತಿಳಿಸಿತ್ತು.<br /> <br /> `ಈ ಮೊದಲು ನಮಗೆ ನೇತ್ರಾವತಿ ನದಿಯಿಂದ 5.5 ಮಿಲಿಯನ್ ಗ್ಯಾಲನ್ ನೀರು ಪೂರೈಕೆ ಆಗುತ್ತಿತ್ತು. ಆದರೆ ಸಾರ್ವಜನಿಕರಿಗೆ ನೀರಿನ ತೊಂದರೆ ಇರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ನೀರು ಪೂರೈಕೆಯನ್ನು ಮೂರನೇ ಒಂದು ಭಾಗಕ್ಕೆ ಇಳಿಸಿತು. ಇದರಿಂದ ನಮಗೆ ತೀವ್ರ ತೊಂದರೆ ಆಗಿದೆ~ ಎಂದು ಅದು ಕೋರ್ಟ್ನಲ್ಲಿ ವಾದಿಸಿತ್ತು.<br /> <br /> ಇಷ್ಟೊಂದು ಪ್ರಮಾಣದ ನೀರು ಪೂರೈಕೆ ಮಾಡಿದರೆ ಮಂಗಳೂರು ನಗರಕ್ಕೆ ನೀರಿನ ವ್ಯತ್ಯಯ ಉಂಟಾಗಲಿದೆ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಕೆ.ಎಂ.ನಟರಾಜ್ ಅವರು ಪ್ರತಿವಾದಿಸಿದರು. ಆದರೆ ಅರ್ಜಿದಾರರ ವಾದವನ್ನು ನ್ಯಾಯಮೂರ್ತಿಗಳು ಮಾನ್ಯ ಮಾಡಿದರು.<br /> <br /> `ಒಂದು ವೇಳೆ ಈ ಕಂಪೆನಿಯ ಘಟಕಗಳನ್ನು ಮುಚ್ಚಿ ಬಿಟ್ಟರೆ, ನೌಕರರು ಬೀದಿ ಪಾಲಾಗ ಬೇಕಾಗುತ್ತದೆ. ಮಳೆಗಾಲ ಸಮೀಪಿಸುತ್ತಿದೆ. ಕುಡಿಯುವ ನೀರಿಗೆ ಬೇರೆ ವ್ಯವಸ್ಥೆ ಮಾಡಿಕೊಳ್ಳಬಹುದು. ಆದರೆ ಈ ಘಟಕಗಳು ಮುಚ್ಚಿದರೆ ಕಾರ್ಮಿಕರು ಹೊಟ್ಟೆಗಿಲ್ಲದೇ ನಷ್ಟ ಅನುಭವಿಸಬೇಕಾಗುತ್ತದೆ. ಈ ಹಿಂದೆ ಹಲವು ಪ್ರಕರಣಗಳಲ್ಲಿ ಆದಂತೆ ಕಂಪೆನಿಯನ್ನು ಗುಜರಾತಿಗೋ, ಇನ್ನೆಲ್ಲಿಯೋ ಸ್ಥಳಾಂತರ ಮಾಡಿದರೆ ನಮ್ಮ ರಾಜ್ಯಕ್ಕೆ ನಷ್ಟವಾಗುತ್ತದೆ~ ಎಂದು ನ್ಯಾಯಮೂರ್ತಿಗಳು ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದರು.</p>.<p><strong>ನೀರು ಪೂರೈಕೆ ಸಹಜಸ್ಥಿತಿಗೆ<br /> ಮಂಗಳೂರು:</strong> ತುಂಬೆ ಅಣೆಕಟ್ಟೆಯಲ್ಲಿ ನೀರಿನ ಮಟ್ಟ ಸುಧಾರಿಸಿರುವುದರಿಂದ, ಕಳೆದ ಕೆಲವು ದಿನಗಳಿಂದ ಇದ್ದ ನೀರಿನ ಪೂರೈಕೆಯಲ್ಲಿನ ಕಡಿತ ತೆಗೆದುಹಾಕಲಾಗಿದ್ದು, ಮಾಮೂಲಿನಂತೆ ನೀರು ಪೂರೈಕೆಯಾಗಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ಹರೀಶ್ ಕುಮಾರ್ ತಿಳಿಸಿದರು.<br /> <br /> ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾಗಿದ್ದರಿಂದ ತುಂಬೆ ಅಣೆಕಟ್ಟೆಯಲ್ಲಿ ನೀರಿನಪ್ರಮಾಣ ಬುಧವಾರ 12 ಅಡಿಗೆ ಏರಿತ್ತು. ಇದರ ಗರಿಷ್ಠ ಪ್ರಮಾಣ 13 ಅಡಿ. ನೀರಿನ ಪರಿಸ್ಥಿತಿ ಸುಧಾರಿಸಿರುವುದರಿಂದ ಎಂಆರ್ಪಿಎಲ್ಗೂ, ಮುಂದಿನ ಆದೇಶದವರೆಗೆ ಮಾಮೂಲಿನಂತೆ ನೀರು ಪೂರೈಕೆ ಮಾಡಲಾಗುವುದು ಎಂದು ಅವರು ಬುಧವಾರ `ಪ್ರಜಾವಾಣಿ~ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>