<p><strong>ನವದೆಹಲಿ (ಐಎಎನ್ಎಸ್):</strong> ದೇಶದಾದ್ಯಂತ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಇನ್ನೂ ಎರಡು ಲಕ್ಷ ಸೀಟುಗಳ ಹೆಚ್ಚಿನ ಪ್ರವೇಶಾವಕಾಶಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.<br /> <br /> ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಸುಧಾರಣೆ ನೀತಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಗುರುವಾರ ತಿಳಿಸಿದ್ದಾರೆ.<br /> <br /> ಮ್ಯಾನೇಜ್ಮೆಂಟ್ ಕೋರ್ಸುಗಳಲ್ಲಿಯೂ ಸಹಾ ಇನ್ನೂ 80 ಸಾವಿರ ಹೆಚ್ಚುವರಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು. ಅಂತೆಯೇ ವಾಸ್ತುವಿನ್ಯಾಸ (ಆರ್ಕಿಟೆಕ್ಚರ್) ಕೋರ್ಸುಗಳಲ್ಲಿ ಮತ್ತೆ 2,200 ಸಾವಿರ ಸೀಟುಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ಸಿಬಲ್ ವಿವರಿಸಿದ್ದಾರೆ.<br /> <br /> ಎಂಜಿನಿಯರಿಂಗ್ ಕಾಲೇಜುಗಳಿಗೆ ಅಗತ್ಯವಿರುವ ಭೂಮಿ ಮಿತಿಯ ಕುರಿತಂತೆಯೂ ಸರ್ಕಾರ ತನ್ನ ನೀತಿಯಲ್ಲಿ ಉದಾರ ಧೋರಣೆ ತಳೆಯಲು ಮುಂದಾಗಿದೆ. ಇನ್ನು ಮುಂದೆ ಹೊಸ ಎಂಜಿನಿಯರಿಂಗ್ ಕಾಲೇಜುಗಳಿಗೆ ಈ ಹಿಂದಿನಂತೆ ಹೆಚ್ಚಿನ ಸ್ಥಳ ಅವಶ್ಯಕತೆಯಿರುವುದಿಲ್ಲ ಎಂದು ಸಿಬಲ್ ಇದೇ ವೇಳೆ ಹೇಳಿದ್ದಾರೆ. <br /> <br /> ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜಿಗೆ 10 ಎಕರೆ ಭೂಪ್ರದೇಶದ ಅಗತ್ಯವಿರಬೇಕೆಂಬ ನಿಯಮವಿದ್ದರೆ ನಗರ ಪ್ರದೇಶಗಳಲ್ಲಿ ಈ ಮಿತಿ 2.5 ಎಕರೆಗೆ ಸೀಮಿತವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಐಎಎನ್ಎಸ್):</strong> ದೇಶದಾದ್ಯಂತ ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಇನ್ನೂ ಎರಡು ಲಕ್ಷ ಸೀಟುಗಳ ಹೆಚ್ಚಿನ ಪ್ರವೇಶಾವಕಾಶಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.<br /> <br /> ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಸುಧಾರಣೆ ನೀತಿಗೆ ಅನುಗುಣವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಗುರುವಾರ ತಿಳಿಸಿದ್ದಾರೆ.<br /> <br /> ಮ್ಯಾನೇಜ್ಮೆಂಟ್ ಕೋರ್ಸುಗಳಲ್ಲಿಯೂ ಸಹಾ ಇನ್ನೂ 80 ಸಾವಿರ ಹೆಚ್ಚುವರಿ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುವುದು. ಅಂತೆಯೇ ವಾಸ್ತುವಿನ್ಯಾಸ (ಆರ್ಕಿಟೆಕ್ಚರ್) ಕೋರ್ಸುಗಳಲ್ಲಿ ಮತ್ತೆ 2,200 ಸಾವಿರ ಸೀಟುಗಳಿಗೆ ಪ್ರವೇಶಾವಕಾಶ ಕಲ್ಪಿಸಲಾಗುವುದು ಎಂದು ಸಿಬಲ್ ವಿವರಿಸಿದ್ದಾರೆ.<br /> <br /> ಎಂಜಿನಿಯರಿಂಗ್ ಕಾಲೇಜುಗಳಿಗೆ ಅಗತ್ಯವಿರುವ ಭೂಮಿ ಮಿತಿಯ ಕುರಿತಂತೆಯೂ ಸರ್ಕಾರ ತನ್ನ ನೀತಿಯಲ್ಲಿ ಉದಾರ ಧೋರಣೆ ತಳೆಯಲು ಮುಂದಾಗಿದೆ. ಇನ್ನು ಮುಂದೆ ಹೊಸ ಎಂಜಿನಿಯರಿಂಗ್ ಕಾಲೇಜುಗಳಿಗೆ ಈ ಹಿಂದಿನಂತೆ ಹೆಚ್ಚಿನ ಸ್ಥಳ ಅವಶ್ಯಕತೆಯಿರುವುದಿಲ್ಲ ಎಂದು ಸಿಬಲ್ ಇದೇ ವೇಳೆ ಹೇಳಿದ್ದಾರೆ. <br /> <br /> ಪ್ರಸ್ತುತ ಗ್ರಾಮೀಣ ಪ್ರದೇಶದಲ್ಲಿ ಒಂದು ಎಂಜಿನಿಯರಿಂಗ್ ಕಾಲೇಜಿಗೆ 10 ಎಕರೆ ಭೂಪ್ರದೇಶದ ಅಗತ್ಯವಿರಬೇಕೆಂಬ ನಿಯಮವಿದ್ದರೆ ನಗರ ಪ್ರದೇಶಗಳಲ್ಲಿ ಈ ಮಿತಿ 2.5 ಎಕರೆಗೆ ಸೀಮಿತವಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>