<p><strong>ಕಾಸರಗೋಡು: </strong>ಮಂಜೇಶ್ವರದ ಹಾಲಿ ಶಾಸಕ ಸಿ.ಎಚ್.ಕುಞ್ಞಂಬು, ತೃಕ್ಕರಿಪುರದಲ್ಲಿ ಎಡರಂಗದ ಕೆ.ಕುಞ್ಞೆರಾಮನ್, ಕಾಞಂಗಾಡಿನಲ್ಲಿ ಎಡರಂಗದ ಇ.ಚಂದ್ರಶೇಖರನ್, ಕಾಸರಗೋಡಿನಿಂದ ಐಕ್ಯರಂಗದ ಮುಸ್ಲಿಂ ಲೀಗ್ ಅಭ್ಯರ್ಥಿ ಎನ್.ಎ.ನೆಲ್ಲಿಕುಂಜೆ, ಬಿಜೆಪಿಯ ಜಯಲಕ್ಷ್ಮಿ ಭಟ್, ಮಂಜೇಶ್ವರದಿಂದ ಐಕ್ಯರಂಗದ ಮುಸ್ಲಿಂ ಲೀಗ್ ಅಭ್ಯರ್ಥಿ ಪಿ.ಬಿ.ಅಬ್ದುಲ್ ರಸಾಕ್ ಮತ್ತು ಬಿಜೆಪಿಯ ಕೆ.ಸುರೇಂದ್ರನ್ ಗುರುವಾರ ನಾಮಪತ್ರ ಸಲ್ಲಿಸಿದರು.<br /> <br /> ಮಂಜೇಶ್ವರ ಶಾಸಕ ಸಿ.ಎಚ್.ಕುಞ್ಞಂಬು ಅವರು ಬ್ಲಾಕ್ ಆಫೀಸರ್ ಎನ್.ಮೆಹರುನ್ನೀಸಾ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು. ಸಿಪಿಎಂ ಏರಿಯಾ ಕಾರ್ಯದರ್ಶಿ ಕೆ.ಆರ್.ಜಯಾನಂದ ಡಮ್ಮಿಯಾಗಿ ನಾಮಪತ್ರ ಸಲ್ಲಿಸಿದರು.<br /> <br /> ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರದಿಂದ ಮೆರವಣಿಗೆಯಲ್ಲಿ ಕಾರ್ಯಕರ್ತರೊಂದಿಗೆ ಬಂದ ಅವರು ತಮ್ಮ ನಾಮಪತ್ರ ಸಲ್ಲಿಸಿದರು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಪಿ.ಜನಾರ್ದನನ್, ಮಂಡಲ ಅಧ್ಯಕ್ಷ ಬಿ.ವಿ.ರಾಜನ್, ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿ ಪಿ.ರಘುದೇವನ್, ಕರಿವೆಳ್ಳೂರು ವಿಜಯನ್, ಕೆ.ಎಸ್.ಫಕ್ರುದ್ದೀನ್, ಸಿ.ಅಹಮ್ಮದ್ ಕುಞ್ಞೆ, ಹಮೀದ್ ಮೊಗ್ರಾಲ್, ಸಂಜೀವ ಶೆಟ್ಟಿ, ಎಂ.ಗೋವಿಂದ ಹೆಗ್ಡೆ, ಶ್ರೀನಿವಾಸ ಭಂಡಾರಿ, ಎನ್.ಕೆ.ಅಬ್ದುಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಸರಗೋಡು: </strong>ಮಂಜೇಶ್ವರದ ಹಾಲಿ ಶಾಸಕ ಸಿ.ಎಚ್.ಕುಞ್ಞಂಬು, ತೃಕ್ಕರಿಪುರದಲ್ಲಿ ಎಡರಂಗದ ಕೆ.ಕುಞ್ಞೆರಾಮನ್, ಕಾಞಂಗಾಡಿನಲ್ಲಿ ಎಡರಂಗದ ಇ.ಚಂದ್ರಶೇಖರನ್, ಕಾಸರಗೋಡಿನಿಂದ ಐಕ್ಯರಂಗದ ಮುಸ್ಲಿಂ ಲೀಗ್ ಅಭ್ಯರ್ಥಿ ಎನ್.ಎ.ನೆಲ್ಲಿಕುಂಜೆ, ಬಿಜೆಪಿಯ ಜಯಲಕ್ಷ್ಮಿ ಭಟ್, ಮಂಜೇಶ್ವರದಿಂದ ಐಕ್ಯರಂಗದ ಮುಸ್ಲಿಂ ಲೀಗ್ ಅಭ್ಯರ್ಥಿ ಪಿ.ಬಿ.ಅಬ್ದುಲ್ ರಸಾಕ್ ಮತ್ತು ಬಿಜೆಪಿಯ ಕೆ.ಸುರೇಂದ್ರನ್ ಗುರುವಾರ ನಾಮಪತ್ರ ಸಲ್ಲಿಸಿದರು.<br /> <br /> ಮಂಜೇಶ್ವರ ಶಾಸಕ ಸಿ.ಎಚ್.ಕುಞ್ಞಂಬು ಅವರು ಬ್ಲಾಕ್ ಆಫೀಸರ್ ಎನ್.ಮೆಹರುನ್ನೀಸಾ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು. ಸಿಪಿಎಂ ಏರಿಯಾ ಕಾರ್ಯದರ್ಶಿ ಕೆ.ಆರ್.ಜಯಾನಂದ ಡಮ್ಮಿಯಾಗಿ ನಾಮಪತ್ರ ಸಲ್ಲಿಸಿದರು.<br /> <br /> ಮಂಜೇಶ್ವರ ಶ್ರೀಮದ್ ಅನಂತೇಶ್ವರ ಕ್ಷೇತ್ರದಿಂದ ಮೆರವಣಿಗೆಯಲ್ಲಿ ಕಾರ್ಯಕರ್ತರೊಂದಿಗೆ ಬಂದ ಅವರು ತಮ್ಮ ನಾಮಪತ್ರ ಸಲ್ಲಿಸಿದರು. ಸಿಪಿಎಂ ಜಿಲ್ಲಾ ಸೆಕ್ರೆಟರಿಯೇಟ್ ಸದಸ್ಯ ಪಿ.ಜನಾರ್ದನನ್, ಮಂಡಲ ಅಧ್ಯಕ್ಷ ಬಿ.ವಿ.ರಾಜನ್, ಸಿಪಿಎಂ ಕುಂಬಳೆ ಏರಿಯಾ ಕಾರ್ಯದರ್ಶಿ ಪಿ.ರಘುದೇವನ್, ಕರಿವೆಳ್ಳೂರು ವಿಜಯನ್, ಕೆ.ಎಸ್.ಫಕ್ರುದ್ದೀನ್, ಸಿ.ಅಹಮ್ಮದ್ ಕುಞ್ಞೆ, ಹಮೀದ್ ಮೊಗ್ರಾಲ್, ಸಂಜೀವ ಶೆಟ್ಟಿ, ಎಂ.ಗೋವಿಂದ ಹೆಗ್ಡೆ, ಶ್ರೀನಿವಾಸ ಭಂಡಾರಿ, ಎನ್.ಕೆ.ಅಬ್ದುಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>