<p><strong>ತುಮಕೂರು: </strong>ಪಾವಗಡ ಕ್ಷಯರೋಗ ಚಿಕಿತ್ಸಾ ಘಟಕ ವ್ಯಾಪ್ತಿಯ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ 30ರಂದು ರಾಜ್ಯದ ಮೊಟ್ಟ ಮೊದಲಿಗೆ ಕ್ಷಯ ರೋಗ ಪತ್ತೆ ಮಾಡುವ `ಜೀನ್ ಎಕ್ಸ್ಪರ್ಟ್~ ಉಪಕರಣ ಅಳವಡಿಸಲಾಗುತ್ತದೆ.<br /> <br /> ಪ್ರಸ್ತುತ ಇಡಿ ದೇಶದಲ್ಲಿ ಕೇವಲ 17 ಆರೋಗ್ಯ ಕೇಂದ್ರಗಳಲ್ಲಿ ಮಾತ್ರ `ಜೀನ್ ಎಕ್ಸ್ಪರ್ಟ್~ ಕಾರ್ಯನಿರ್ವಹಿಸುತ್ತಿದೆ. ಪಾವಗಡ ಚಿಕಿತ್ಸಾ ಘಟಕದ ವಿವೇಕಾನಂದ ಸಂಸ್ಥೆ 18ನೇ ಕೇಂದ್ರವಾಗಿ ದೇಶದ ಆರೋಗ್ಯ ಭೂಪಟದಲ್ಲಿ ಸ್ಥಾನ ಪಡೆಯಲಿದೆ.<br /> <br /> ಆಂಧ್ರ ಗಡಿಗೆ ಹೊಂದಿಕೊಂಡಂತಿರುವ ಪಾವಗಡ ಆರೋಗ್ಯ ಕೇಂದ್ರದಲ್ಲಿ ದಾಖಲಾಗುತ್ತಿರುವ ಟಿಬಿ, ಎಚ್ಐವಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಹಾಗೂ ಎರಡೂ ರಾಜ್ಯದ ರಾಜಧಾನಿಯಿಂದ ಪಾವಗಡ ಸಾಕಷ್ಟು ದೂರದಲ್ಲಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ವಿಶ್ವಸಂಸ್ಥೆ ಮತ್ತು `ಫೈಂಡ್~ ಸರ್ಕಾರೇತರ ಸಂಸ್ಥೆಗಳು ಉಪಕರಣವನ್ನು ಕೊಡುಗೆಯಾಗಿ ನೀಡಿವೆ.<br /> <br /> ಹಾಲಿ ಅಸ್ತಿತ್ವದಲ್ಲಿರುವ `ಸಾಲಿಡ್ ಕಲ್ಚರ್~ ಮಾದರಿಯ ಕಫ ಪರೀಕ್ಷೆಯಲ್ಲಿ ಕಫದಲ್ಲಿರುವ ಕ್ಷಯ ರೋಗಾಣುಗಳನ್ನು ಸಾಲಿಡ್ ಕಲ್ಚರ್ ಮೇಲೆ ಬೆಳೆಸಿ- ವಿಶ್ಲೇಷಿಸಿ ಅನಂತರ ಔಷಧ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಜೀನ್ ಎಕ್ಸ್ಪರ್ಟ್ ಯಂತ್ರವು `ಕಾಟ್ರಿಡ್ಜ್~ ಮಾದರಿಯಲ್ಲಿ ರೋಗಾಣುಗಳ ವಂಶವಾಹಿಯನ್ನೇ ಪರೀಕ್ಷೆಗೆ ಒಳಪಡಿಸುತ್ತದೆ. <br /> <br /> ರೋಗದ ತೀವ್ರತೆ ಮತ್ತು ಔಷಧದ ಪರಿಣಾಮ ಕುರಿತು ಕೇವಲ 2 ಗಂಟೆಯಲ್ಲಿ ತನ್ನ ವರದಿ ನೀಡುತ್ತದೆ. ಹೀಗಾಗಿ ಮುಂದಿನ ಚಿಕಿತ್ಸಾ ವಿಧಾನವನ್ನು ನಿರ್ಧರಿಸಲು ಹಾಗೂ ರೋಗದ ಶೀಘ್ರ ಉಪಶಮನಕ್ಕೆ ಇದು ಸಹಕಾರಿಯಾಗುತ್ತದೆ ಎನ್ನುತ್ತಾರೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅಸ್ಮಾ ತಬಸ್ಸುಮ್.<br /> <br /> ರೂ. 30 ಲಕ್ಷ ಮೌಲ್ಯದ ಈ ಉಪಕರಣದಲ್ಲಿ ಪ್ರತಿ ಕಫ ಪರೀಕ್ಷೆಗೆ ರೂ. 800 ಖರ್ಚಾಗುತ್ತದೆ. ಪ್ರಸ್ತುತ ಕೇವಲ ಪಾವಗಡ ಆರೋಗ್ಯ ಕೇಂದ್ರ ವ್ಯಾಪ್ತಿಯ ಕ್ಷಯ ರೋಗಿಗಳ ಕಫವನ್ನು ಮಾತ್ರ ಇಲ್ಲಿ ಪರೀಕ್ಷಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಪಾವಗಡ ಕ್ಷಯರೋಗ ಚಿಕಿತ್ಸಾ ಘಟಕ ವ್ಯಾಪ್ತಿಯ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರದಲ್ಲಿ ಮಾರ್ಚ್ 30ರಂದು ರಾಜ್ಯದ ಮೊಟ್ಟ ಮೊದಲಿಗೆ ಕ್ಷಯ ರೋಗ ಪತ್ತೆ ಮಾಡುವ `ಜೀನ್ ಎಕ್ಸ್ಪರ್ಟ್~ ಉಪಕರಣ ಅಳವಡಿಸಲಾಗುತ್ತದೆ.<br /> <br /> ಪ್ರಸ್ತುತ ಇಡಿ ದೇಶದಲ್ಲಿ ಕೇವಲ 17 ಆರೋಗ್ಯ ಕೇಂದ್ರಗಳಲ್ಲಿ ಮಾತ್ರ `ಜೀನ್ ಎಕ್ಸ್ಪರ್ಟ್~ ಕಾರ್ಯನಿರ್ವಹಿಸುತ್ತಿದೆ. ಪಾವಗಡ ಚಿಕಿತ್ಸಾ ಘಟಕದ ವಿವೇಕಾನಂದ ಸಂಸ್ಥೆ 18ನೇ ಕೇಂದ್ರವಾಗಿ ದೇಶದ ಆರೋಗ್ಯ ಭೂಪಟದಲ್ಲಿ ಸ್ಥಾನ ಪಡೆಯಲಿದೆ.<br /> <br /> ಆಂಧ್ರ ಗಡಿಗೆ ಹೊಂದಿಕೊಂಡಂತಿರುವ ಪಾವಗಡ ಆರೋಗ್ಯ ಕೇಂದ್ರದಲ್ಲಿ ದಾಖಲಾಗುತ್ತಿರುವ ಟಿಬಿ, ಎಚ್ಐವಿ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಹಾಗೂ ಎರಡೂ ರಾಜ್ಯದ ರಾಜಧಾನಿಯಿಂದ ಪಾವಗಡ ಸಾಕಷ್ಟು ದೂರದಲ್ಲಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ವಿಶ್ವಸಂಸ್ಥೆ ಮತ್ತು `ಫೈಂಡ್~ ಸರ್ಕಾರೇತರ ಸಂಸ್ಥೆಗಳು ಉಪಕರಣವನ್ನು ಕೊಡುಗೆಯಾಗಿ ನೀಡಿವೆ.<br /> <br /> ಹಾಲಿ ಅಸ್ತಿತ್ವದಲ್ಲಿರುವ `ಸಾಲಿಡ್ ಕಲ್ಚರ್~ ಮಾದರಿಯ ಕಫ ಪರೀಕ್ಷೆಯಲ್ಲಿ ಕಫದಲ್ಲಿರುವ ಕ್ಷಯ ರೋಗಾಣುಗಳನ್ನು ಸಾಲಿಡ್ ಕಲ್ಚರ್ ಮೇಲೆ ಬೆಳೆಸಿ- ವಿಶ್ಲೇಷಿಸಿ ಅನಂತರ ಔಷಧ ಸಾಮರ್ಥ್ಯವನ್ನು ಅಳೆಯಲಾಗುತ್ತದೆ. ಜೀನ್ ಎಕ್ಸ್ಪರ್ಟ್ ಯಂತ್ರವು `ಕಾಟ್ರಿಡ್ಜ್~ ಮಾದರಿಯಲ್ಲಿ ರೋಗಾಣುಗಳ ವಂಶವಾಹಿಯನ್ನೇ ಪರೀಕ್ಷೆಗೆ ಒಳಪಡಿಸುತ್ತದೆ. <br /> <br /> ರೋಗದ ತೀವ್ರತೆ ಮತ್ತು ಔಷಧದ ಪರಿಣಾಮ ಕುರಿತು ಕೇವಲ 2 ಗಂಟೆಯಲ್ಲಿ ತನ್ನ ವರದಿ ನೀಡುತ್ತದೆ. ಹೀಗಾಗಿ ಮುಂದಿನ ಚಿಕಿತ್ಸಾ ವಿಧಾನವನ್ನು ನಿರ್ಧರಿಸಲು ಹಾಗೂ ರೋಗದ ಶೀಘ್ರ ಉಪಶಮನಕ್ಕೆ ಇದು ಸಹಕಾರಿಯಾಗುತ್ತದೆ ಎನ್ನುತ್ತಾರೆ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಅಸ್ಮಾ ತಬಸ್ಸುಮ್.<br /> <br /> ರೂ. 30 ಲಕ್ಷ ಮೌಲ್ಯದ ಈ ಉಪಕರಣದಲ್ಲಿ ಪ್ರತಿ ಕಫ ಪರೀಕ್ಷೆಗೆ ರೂ. 800 ಖರ್ಚಾಗುತ್ತದೆ. ಪ್ರಸ್ತುತ ಕೇವಲ ಪಾವಗಡ ಆರೋಗ್ಯ ಕೇಂದ್ರ ವ್ಯಾಪ್ತಿಯ ಕ್ಷಯ ರೋಗಿಗಳ ಕಫವನ್ನು ಮಾತ್ರ ಇಲ್ಲಿ ಪರೀಕ್ಷಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>