<p><strong>ಶ್ರೀರಾಮನಗರ, (ಗಂಗಾವತಿ):</strong> ಕನ್ನಡದ ಆದಿಕವಿ ಪಂಪನಿಂದ ಹಿಡಿದು ಅಧುನಿಕ ಕವಿಯ ವರೆಗಿನ ಎಲ್ಲ ಪ್ರಕಾರದ ಕವಿಗಳಲ್ಲಿ ದಲಿತ ಬಲಿತ ಎಂಬ ಬೇಧವಿಲ್ಲದೆ ಎಲ್ಲ ವರ್ಗಕ್ಕೂ ಸಾಹಿತ್ಯದಲ್ಲಿ ಸಮಾನತೆಯ ಅವಕಾಶ ಸಿಕ್ಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೊಗಳ್ಳಿ ಗಣೇಶ ಅಭಿಪ್ರಾಯಪಟ್ಟರು.<br /> <br /> ತಾಲ್ಲೂಕಿನ ಶ್ರೀರಾಮನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೊಪ್ಪಳ ಜಿಲ್ಲೆಯ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಚಿದಾನಂದ ಅವಧೂತರ ಮಂಟಪದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮುಖ್ಯವೇದಿಕೆ ಯಲ್ಲಿ ಸೋಮವಾರ ಕನ್ನಡ ದಲಿತ ಬಂಡಾ ಸಾಹಿತ್ಯದ ಗೋಷ್ಠಿಯಲ್ಲಿ ಮಾತನಾಡಿದರು.<br /> <br /> ದಲಿತ ಸಾಹಿತ್ಯ ಅಥವಾ ಬಂಡಾಯ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಬಹುತೇಕ ಎಲ್ಲ ಸಮ್ಮೇಳನಗಳಲ್ಲಿ ಅವಕಾಶ ನೀಡುವ ನಿರಂತರ ಹಮ್ಮಿಕೊಳ್ಳುವ ಮೂಲಕ ಒಂದು ಪರಂಪರೆಯಂತೆ ರೂಢಿಸಿಕೊಂಡು ಬಂದಿದೆ ಎಂದು ಮೋಗಳ್ಳಿ ಪರಿಷತತ್ತಿನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.<br /> <br /> ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸಿ.ಎಚ್. ನಾರಿನಾಳ ಮಾತನಾಡಿ, ದಲಿತರ ಉದ್ಧಾರ ಯಾರಿಂದಲೂ ಸಾಧ್ಯವಿಲ್ಲ. ಮೈಕೊಡವಿಕೊಂಡು ಮೇಲೆದ್ದಾಗ ಸ್ವಯಂ ಉನ್ನತ ಸಾಧ್ಯವೇ ವಿನಃ ಯಾರೋ ಬಂದು ಇನ್ಯಾರನ್ನೋ ಸಮಾಜದ ಮೂಲಕ ಮೇಲಕ್ಕೆತ್ತಲು ಯತ್ನಿಸುತ್ತಾರೆ ಎಂಬ ಆಶಾಭಾವ ಸರಿಯಲ್ಲ ಎಂದರು.<br /> <br /> ಸಾಹಿತಿ ಅಲ್ಲಾಗಿರಿರಾಜ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಶಶಿಧರಗೌಡ ಪಾಟೀಲ್, ಮರಿಯಪ್ಪ ಕುಂಟೋಜಿ, ದೇವಪ್ಪ ಕಾಮದಡೊಡಿ, ಸುಕನ್ಯಾ ಮಾರುತಿ, ಕರಿಯಪ್ಪ ಢಣಾಪುರ, ಯಮನೂರಪ್ಪ ಉಪ್ಪಿನ, ಕೌಜಲಗಿ ವೇದಿಕೆಯಲ್ಲಿದ್ದರು. ಶಿ.ಕಾ ಬಡಿಗೇರ ಸ್ವಾಗತಿಸಿದರು. ಮೈಲಾರಗೌಡ ಹೊಸಮನಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಶ್ರೀರಾಮನಗರ, (ಗಂಗಾವತಿ):</strong> ಕನ್ನಡದ ಆದಿಕವಿ ಪಂಪನಿಂದ ಹಿಡಿದು ಅಧುನಿಕ ಕವಿಯ ವರೆಗಿನ ಎಲ್ಲ ಪ್ರಕಾರದ ಕವಿಗಳಲ್ಲಿ ದಲಿತ ಬಲಿತ ಎಂಬ ಬೇಧವಿಲ್ಲದೆ ಎಲ್ಲ ವರ್ಗಕ್ಕೂ ಸಾಹಿತ್ಯದಲ್ಲಿ ಸಮಾನತೆಯ ಅವಕಾಶ ಸಿಕ್ಕಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮೊಗಳ್ಳಿ ಗಣೇಶ ಅಭಿಪ್ರಾಯಪಟ್ಟರು.<br /> <br /> ತಾಲ್ಲೂಕಿನ ಶ್ರೀರಾಮನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಕೊಪ್ಪಳ ಜಿಲ್ಲೆಯ 7ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಚಿದಾನಂದ ಅವಧೂತರ ಮಂಟಪದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಮುಖ್ಯವೇದಿಕೆ ಯಲ್ಲಿ ಸೋಮವಾರ ಕನ್ನಡ ದಲಿತ ಬಂಡಾ ಸಾಹಿತ್ಯದ ಗೋಷ್ಠಿಯಲ್ಲಿ ಮಾತನಾಡಿದರು.<br /> <br /> ದಲಿತ ಸಾಹಿತ್ಯ ಅಥವಾ ಬಂಡಾಯ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ತನ್ನ ಬಹುತೇಕ ಎಲ್ಲ ಸಮ್ಮೇಳನಗಳಲ್ಲಿ ಅವಕಾಶ ನೀಡುವ ನಿರಂತರ ಹಮ್ಮಿಕೊಳ್ಳುವ ಮೂಲಕ ಒಂದು ಪರಂಪರೆಯಂತೆ ರೂಢಿಸಿಕೊಂಡು ಬಂದಿದೆ ಎಂದು ಮೋಗಳ್ಳಿ ಪರಿಷತತ್ತಿನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.<br /> <br /> ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಸಿ.ಎಚ್. ನಾರಿನಾಳ ಮಾತನಾಡಿ, ದಲಿತರ ಉದ್ಧಾರ ಯಾರಿಂದಲೂ ಸಾಧ್ಯವಿಲ್ಲ. ಮೈಕೊಡವಿಕೊಂಡು ಮೇಲೆದ್ದಾಗ ಸ್ವಯಂ ಉನ್ನತ ಸಾಧ್ಯವೇ ವಿನಃ ಯಾರೋ ಬಂದು ಇನ್ಯಾರನ್ನೋ ಸಮಾಜದ ಮೂಲಕ ಮೇಲಕ್ಕೆತ್ತಲು ಯತ್ನಿಸುತ್ತಾರೆ ಎಂಬ ಆಶಾಭಾವ ಸರಿಯಲ್ಲ ಎಂದರು.<br /> <br /> ಸಾಹಿತಿ ಅಲ್ಲಾಗಿರಿರಾಜ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಶಶಿಧರಗೌಡ ಪಾಟೀಲ್, ಮರಿಯಪ್ಪ ಕುಂಟೋಜಿ, ದೇವಪ್ಪ ಕಾಮದಡೊಡಿ, ಸುಕನ್ಯಾ ಮಾರುತಿ, ಕರಿಯಪ್ಪ ಢಣಾಪುರ, ಯಮನೂರಪ್ಪ ಉಪ್ಪಿನ, ಕೌಜಲಗಿ ವೇದಿಕೆಯಲ್ಲಿದ್ದರು. ಶಿ.ಕಾ ಬಡಿಗೇರ ಸ್ವಾಗತಿಸಿದರು. ಮೈಲಾರಗೌಡ ಹೊಸಮನಿ ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>