<p><strong>ಬೆಂಗಳೂರು: </strong>`ಯುವ ಸಚಿವರಿಗೆ ಐ.ಟಿ/ಬಿ.ಟಿ ಖಾತೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಹೇಳುವುದರ ಮೂಲಕ ವಿವಾದಕ್ಕೆ ಒಳಗಾಗಿರುವ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಅವರು ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ ಅವರನ್ನು ಸೋಮವಾರ ಭೇಟಿ ಮಾಡುವ ಸಾಧ್ಯತೆ ಇದೆ.<br /> <br /> `ಮಜುಂದಾರ್ ಅವರು ಪತ್ರದ ಮೂಲಕ ಸಚಿವ ಪಾಟೀಲರ ಕ್ಷಮೆ ಕೋರಿದ್ದಾರೆ. ಖುದ್ದು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದು, ಸೋಮವಾರ ಆ ಭೇಟಿ ನಡೆಯಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.<br /> <br /> `65 ವರ್ಷದ ಪಾಟೀಲರ ಬದಲಿಗೆ ಕೃಷ್ಣ ಬೈರೇಗೌಡ ಅಥವಾ ದಿನೇಶ ಗುಂಡೂರಾವ್ ಅವರಂತಹ ಯುವಕರಿಗೆ ಈ ಖಾತೆ ಡಬೇಕಿತ್ತು' ಎಂದು ಮಜುಂದಾರ್ ಹೇಳಿದ್ದರು. ಇದೇ ಧಾಟಿಯಲ್ಲಿ ಮಣಿಪಾಲ್ ಗ್ಲೋಬಲ್ ಎಜುಕೇಷನ್ ಅಧ್ಯಕ್ಷ .ವಿ.ಮೋಹನ್ದಾಸ್ ಪೈ ಕೂಡ ಅಸಮಾಧಾನ ಹೊರ ಹಾಕಿದ್ದರು. `ಪಾಟೀಲ್ ಅವರನ್ನು ಐ.ಟಿ ಸಚಿವರನ್ನಾಗಿ ನೇಮಕ ಮಾಡಿದ ದಿನ ಬೇಸರದ ದಿನ' ಎಂದು ಟ್ವೀಟ್ ಮಾಡಿದ್ದರು.<br /> <br /> ಈ ಇಬ್ಬರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ವ್ಯಾಪಕ ಚರ್ಚೆಗಳು ನಡೆದವು. ಸಚಿವ ಪಾಟೀಲ್ ಅವರೇ ಸ್ವತಃ ಆಕ್ಷೇಪ ಎತ್ತಿದರು. `ನನಗೆ 65 ವರ್ಷ ಆಗಿದ್ದರೂ ಮನಸ್ಸು ಮತ್ತು ಹೃದಯ ಯುವಕರ ಹಾಗೆ ಇದೆ' ಎಂದು ಹೇಳುವುದರ ಮೂಲಕ ತಿರುಗೇಟು ನೀಡಿದ್ದರು.<br /> <br /> `ನಾನೇನೂ ಐಟಿ ಖಾತೆ ಕೊಡಿ ಎಂದು ಮುಖ್ಯಮಂತ್ರಿ ಅವರನ್ನು ಕೇಳಿರಲಿಲ್ಲ. ಅವರು ಕೊಟ್ಟ ಖಾತೆ ನಿಭಾಯಿಸುವ ಶಕ್ತಿ ರೂಡಿಸಿಕೊಳ್ಳುತ್ತೇನೆ. ಐಟಿ ಸಚಿವರಿಗೆ ಸಾಫ್ಟ್ವೇರ್ ಅಭಿವೃದ್ಧಿ ಗೊತ್ತಿರಬೇಕು; ರೈಲ್ವೆ ಸಚಿವರಿಗೆ ರೈಲು ಓಡಿಸುವುದು ಬರಬೇಕು ಎನ್ನುವ ಧೋರಣೆ ಸರಿಯಲ್ಲ' ಎಂದು ಅವರು ಆಕ್ಷೇಪಿಸಿದ್ದರು.<br /> <br /> ಈ ವಿವಾದ ಒಂದೊಂದು ದಿನ ಒಂದೊಂದು ರೀತಿಯ ತಿರುವು ಪಡೆಯುತ್ತಿದ್ದನ್ನು ಗಮನಿಸಿದ ಈ ಇಬ್ಬರೂ, ಸಚಿವ ಪಾಟೀಲರ ಕ್ಷಮೆ ಕೋರಿದ್ದಾರೆ. ಪೈ ಶುಕ್ರವಾರ ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. `ನನ್ನ ಉದ್ದೇಶ ತಮಗೆ ಅಗೌರವ ಸೂಚಿಸುವುದು ಆಗಿರಲಿಲ್ಲ' ಎಂದಿದ್ದಾರೆ. ನಗರದಲ್ಲಿ ಇರಲಿಲ್ಲ ಎನ್ನುವ ಕಾರಣ ಕೊಟ್ಟು ಮಜುಂದಾರ್ ಪತ್ರದ ಮೂಲಕ ಕ್ಷಮೆ ಕೋರಿದ್ದಾರೆ.<br /> <br /> <strong>ಬೆಳೆಸುವುದು ಬೇಡ:</strong> `ಇದನ್ನು ಇಲ್ಲಿಗೇ ಬಿಟ್ಟು ಬಿಡೋಣ. ಅವರಿಗೂ ತಮ್ಮ ತಪ್ಪಿನ ಅರಿವಾಗಿದೆ. ಕ್ಷಮೆ ಕೇಳಿದ ನಂತರ ಅದನ್ನು ಮತ್ತಷ್ಟು ಬೆಳೆಸುವುದು ಬೇಡ' ಎಂದು ಪಾಟೀಲರು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.<br /> <br /> `ಐ.ಟಿ/ಬಿ.ಟಿ ಕ್ಷೇತ್ರದ ಅಭಿವೃದ್ಧಿಗೆ ಗಮನ ನೀಡುತ್ತೇನೆ. ಅದರ ಪ್ರಯೋಜನ ಗ್ರಾಮೀಣ ಜನರಿಗೂ ಸಿಗುವ ಹಾಗೆ ಮಾಡುತ್ತೇನೆ. ಅದರ ನೆರವಿನಿಂದ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಪ್ರಯತ್ನಿಸುತ್ತೇನೆ' ಎಂದರು.<br /> <br /> ಕೃಷ್ಣ ಬೈರೇಗೌಡ ಅಥವಾ ದಿನೇಶ ಗುಂಡೂರಾವ್ ಅವರನ್ನು ಐ.ಟಿ ಸಚಿವರನ್ನಾಗಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಅವರ ಹೇಳಿಕೆ ಹಿಂದೆ ಯಾವುದಾದರೂ ಲಾಬಿ ಇದೆಯೇ ಎಂಬ ಪ್ರಶ್ನೆಗೆ `ನನಗೇನೂ ಗೊತ್ತಿಲ್ಲ. ಆದರೆ, ಜನ ಆ ರೀತಿ ಮಾತನಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಯುವ ಸಚಿವರಿಗೆ ಐ.ಟಿ/ಬಿ.ಟಿ ಖಾತೆ ಕೊಟ್ಟಿದ್ದರೆ ಚೆನ್ನಾಗಿರುತ್ತಿತ್ತು' ಎಂದು ಹೇಳುವುದರ ಮೂಲಕ ವಿವಾದಕ್ಕೆ ಒಳಗಾಗಿರುವ ಬಯೋಕಾನ್ ಅಧ್ಯಕ್ಷೆ ಕಿರಣ್ ಮಜುಂದಾರ್ ಅವರು ಮಾಹಿತಿ ತಂತ್ರಜ್ಞಾನ ಸಚಿವ ಎಸ್.ಆರ್.ಪಾಟೀಲ ಅವರನ್ನು ಸೋಮವಾರ ಭೇಟಿ ಮಾಡುವ ಸಾಧ್ಯತೆ ಇದೆ.<br /> <br /> `ಮಜುಂದಾರ್ ಅವರು ಪತ್ರದ ಮೂಲಕ ಸಚಿವ ಪಾಟೀಲರ ಕ್ಷಮೆ ಕೋರಿದ್ದಾರೆ. ಖುದ್ದು ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದು, ಸೋಮವಾರ ಆ ಭೇಟಿ ನಡೆಯಲಿದೆ ಎಂದು ಸಚಿವಾಲಯದ ಮೂಲಗಳು ತಿಳಿಸಿವೆ.<br /> <br /> `65 ವರ್ಷದ ಪಾಟೀಲರ ಬದಲಿಗೆ ಕೃಷ್ಣ ಬೈರೇಗೌಡ ಅಥವಾ ದಿನೇಶ ಗುಂಡೂರಾವ್ ಅವರಂತಹ ಯುವಕರಿಗೆ ಈ ಖಾತೆ ಡಬೇಕಿತ್ತು' ಎಂದು ಮಜುಂದಾರ್ ಹೇಳಿದ್ದರು. ಇದೇ ಧಾಟಿಯಲ್ಲಿ ಮಣಿಪಾಲ್ ಗ್ಲೋಬಲ್ ಎಜುಕೇಷನ್ ಅಧ್ಯಕ್ಷ .ವಿ.ಮೋಹನ್ದಾಸ್ ಪೈ ಕೂಡ ಅಸಮಾಧಾನ ಹೊರ ಹಾಕಿದ್ದರು. `ಪಾಟೀಲ್ ಅವರನ್ನು ಐ.ಟಿ ಸಚಿವರನ್ನಾಗಿ ನೇಮಕ ಮಾಡಿದ ದಿನ ಬೇಸರದ ದಿನ' ಎಂದು ಟ್ವೀಟ್ ಮಾಡಿದ್ದರು.<br /> <br /> ಈ ಇಬ್ಬರ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿದ್ದವು. ವ್ಯಾಪಕ ಚರ್ಚೆಗಳು ನಡೆದವು. ಸಚಿವ ಪಾಟೀಲ್ ಅವರೇ ಸ್ವತಃ ಆಕ್ಷೇಪ ಎತ್ತಿದರು. `ನನಗೆ 65 ವರ್ಷ ಆಗಿದ್ದರೂ ಮನಸ್ಸು ಮತ್ತು ಹೃದಯ ಯುವಕರ ಹಾಗೆ ಇದೆ' ಎಂದು ಹೇಳುವುದರ ಮೂಲಕ ತಿರುಗೇಟು ನೀಡಿದ್ದರು.<br /> <br /> `ನಾನೇನೂ ಐಟಿ ಖಾತೆ ಕೊಡಿ ಎಂದು ಮುಖ್ಯಮಂತ್ರಿ ಅವರನ್ನು ಕೇಳಿರಲಿಲ್ಲ. ಅವರು ಕೊಟ್ಟ ಖಾತೆ ನಿಭಾಯಿಸುವ ಶಕ್ತಿ ರೂಡಿಸಿಕೊಳ್ಳುತ್ತೇನೆ. ಐಟಿ ಸಚಿವರಿಗೆ ಸಾಫ್ಟ್ವೇರ್ ಅಭಿವೃದ್ಧಿ ಗೊತ್ತಿರಬೇಕು; ರೈಲ್ವೆ ಸಚಿವರಿಗೆ ರೈಲು ಓಡಿಸುವುದು ಬರಬೇಕು ಎನ್ನುವ ಧೋರಣೆ ಸರಿಯಲ್ಲ' ಎಂದು ಅವರು ಆಕ್ಷೇಪಿಸಿದ್ದರು.<br /> <br /> ಈ ವಿವಾದ ಒಂದೊಂದು ದಿನ ಒಂದೊಂದು ರೀತಿಯ ತಿರುವು ಪಡೆಯುತ್ತಿದ್ದನ್ನು ಗಮನಿಸಿದ ಈ ಇಬ್ಬರೂ, ಸಚಿವ ಪಾಟೀಲರ ಕ್ಷಮೆ ಕೋರಿದ್ದಾರೆ. ಪೈ ಶುಕ್ರವಾರ ಪಾಟೀಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. `ನನ್ನ ಉದ್ದೇಶ ತಮಗೆ ಅಗೌರವ ಸೂಚಿಸುವುದು ಆಗಿರಲಿಲ್ಲ' ಎಂದಿದ್ದಾರೆ. ನಗರದಲ್ಲಿ ಇರಲಿಲ್ಲ ಎನ್ನುವ ಕಾರಣ ಕೊಟ್ಟು ಮಜುಂದಾರ್ ಪತ್ರದ ಮೂಲಕ ಕ್ಷಮೆ ಕೋರಿದ್ದಾರೆ.<br /> <br /> <strong>ಬೆಳೆಸುವುದು ಬೇಡ:</strong> `ಇದನ್ನು ಇಲ್ಲಿಗೇ ಬಿಟ್ಟು ಬಿಡೋಣ. ಅವರಿಗೂ ತಮ್ಮ ತಪ್ಪಿನ ಅರಿವಾಗಿದೆ. ಕ್ಷಮೆ ಕೇಳಿದ ನಂತರ ಅದನ್ನು ಮತ್ತಷ್ಟು ಬೆಳೆಸುವುದು ಬೇಡ' ಎಂದು ಪಾಟೀಲರು `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.<br /> <br /> `ಐ.ಟಿ/ಬಿ.ಟಿ ಕ್ಷೇತ್ರದ ಅಭಿವೃದ್ಧಿಗೆ ಗಮನ ನೀಡುತ್ತೇನೆ. ಅದರ ಪ್ರಯೋಜನ ಗ್ರಾಮೀಣ ಜನರಿಗೂ ಸಿಗುವ ಹಾಗೆ ಮಾಡುತ್ತೇನೆ. ಅದರ ನೆರವಿನಿಂದ ಭ್ರಷ್ಟಾಚಾರ ಮುಕ್ತ ಆಡಳಿತ ನೀಡಲು ಪ್ರಯತ್ನಿಸುತ್ತೇನೆ' ಎಂದರು.<br /> <br /> ಕೃಷ್ಣ ಬೈರೇಗೌಡ ಅಥವಾ ದಿನೇಶ ಗುಂಡೂರಾವ್ ಅವರನ್ನು ಐ.ಟಿ ಸಚಿವರನ್ನಾಗಿ ಮಾಡಿದ್ದರೆ ಚೆನ್ನಾಗಿರುತ್ತಿತ್ತು ಎನ್ನುವ ಅವರ ಹೇಳಿಕೆ ಹಿಂದೆ ಯಾವುದಾದರೂ ಲಾಬಿ ಇದೆಯೇ ಎಂಬ ಪ್ರಶ್ನೆಗೆ `ನನಗೇನೂ ಗೊತ್ತಿಲ್ಲ. ಆದರೆ, ಜನ ಆ ರೀತಿ ಮಾತನಾಡಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕಲಾಗದು' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>