<p><br /> ಕರ್ನಾಟಕದ ಏಕೀಕರಣವನ್ನು ದಿನಾಂಕ 1ನವೆಂಬರ್ 1956 ರಂದು ಆಗಿನ ರಾಷ್ಟ್ರಪತಿಗಳಾಗಿದ್ದ ರಾಜೇಂದ್ರಪ್ರಸಾದರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಉದ್ಘಾಟಿಸಿದರು.<br /> <br /> ಏಕೀಕರಣದ ಹೋರಾಟಕ್ಕೆ ಸ್ಫೂರ್ತಿ ನೀಡಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಪಾಂಡೇಶ್ವರ ಕಾಳಿಂಗರಾಯರು ಹಾಡಿ ಸಭೆಯಲ್ಲಿನ ಜನಸಾಗರವನ್ನು ರೋಮಾಂಚನ ಗೊಳಿಸಿದರು.<br /> <br /> ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂದ, ಆ ಐತಿಹಾಸಿಕ ಘೋಷಣೆಯಾದ ಆ ಸ್ಥಳ ನಿಜಕ್ಕೂ ಕನ್ನಡ ಜನಸಮುದಾಯ ಕಂಡ ಅಪೂರ್ವ ಕ್ಷಣಗಳ, ಸಂಭ್ರಮದ ಸಾಕ್ಷಿ ಭೂಮಿ.<br /> <br /> ಕರ್ನಾಟಕ ಏಕೀಕರಣ ಹೋರಾಟದ ಹಾಗೂ ಹೋರಾಟಗಾರರ ಐತಿಹಾಸಿಕ ವೀರಗಾಥೆ, ಕೇವಲ ಗ್ರಂಥಗಳಲ್ಲಿವೆ. ಆದರೆ ಏಕೀಕರಣ ಅಧಿಕೃತವಾಗಿ ಉದ್ಘಾಟನೆಯಾದ ಆ ಸ್ಥಳದಲ್ಲಿ, ಆ ಐತಿಹಾಸಿಕ ನೆನಪಿನ ಯಾವ ಕುರುಹು, ಸ್ಮಾರಕವೂ ಇಲ್ಲದಿರುವುದು ಐತಿಹಾಸಿಕ ವಿಪರ್ಯಾಸವೆನಿಸುತ್ತದೆ. ಆ ಕ್ರೀಡಾಂಗಣದಲ್ಲಿ ಸೂಕ್ತವಾದ ರೀತಿಯಲ್ಲಿ ಏಕೀಕರಣದ ಮಹತ್ವದ ಘಟನೆಗಳ ಸಂಕ್ಷಿಪ್ತ ವಿವರಗಳೊಂದಿಗೆ ಸ್ಮಾರಕ ಸ್ತಂಭವನ್ನು ನಿರ್ಮಿಸಬೇಕು. ಈ ಹಿಂದೆ ಎಸ್. ಎಂ. ಕೃಷ್ಣ ಅವರ ಸರ್ಕಾರ ಸ್ಮಾರಕ ಸ್ತಂಭವನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. ಆದರೆ ಆ ಘೋಷಣೆ ಘೋಷಣೆಯಾಗಿಯೇ ಉಳಿಯಿತು.<br /> <br /> ಆನಂತರ ಸರ್ಕಾರ ಸುವರ್ಣ ಕರ್ನಾಟಕ ಸಂಭ್ರಮಾಚರಣೆಗೆ ನೂರಾರು ಕೋಟಿ ರೂ. ಗಳನ್ನು ವೆಚ್ಚ ಮಾಡಿತು. ಆ ಸಂದರ್ಭದಲ್ಲೂ ಸಹ ಸರ್ಕಾರಕ್ಕೆ ಈ ಸಾರ್ಥಕ ಕಾರ್ಯದ ನೆನಪೇ ಬರಲಿಲ್ಲ. ಕನ್ನಡಿಗರು ಇಂತಹ ಮಹತ್ವದ ಇತಿಹಾಸವನ್ನು ಹಾಗೂ ಸಾರ್ಥಕ ಕರ್ತವ್ಯಗಳನ್ನು ಮರೆಯುವುದನ್ನು ಕಂಡೇ ಗಳಗನಾಥರು ಕನ್ನಡಿಗರ ಕರ್ಮ ಕಥೆಯನ್ನು ಬರೆದಂತೆ ಅನಿಸುತ್ತದೆ.<br /> <br /> ಇದೀಗ ಇದೇ ಬೆಂಗಳೂರಿನಲ್ಲಿ 77ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುತ್ತಿರುವ ನಾಡೋಜ ಜಿ. ವೆಂಕಟಸುಬ್ಬಯ್ಯನವರು ಏಕೀಕರಣದ ಸ್ಮಾರಕ ಸ್ತಂಭವನ್ನು ಆ ಸ್ಥಳದಲ್ಲಿ ನಿರ್ಮಿಸುವಂತೆ ಸಮ್ಮೇಳನದ ಮೂಲಕ ಸರ್ಕಾರವನ್ನು ಆಗ್ರಹಿಸಬೇಕೆಂದು ವಿನಮ್ರ ಮನವಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ಕರ್ನಾಟಕದ ಏಕೀಕರಣವನ್ನು ದಿನಾಂಕ 1ನವೆಂಬರ್ 1956 ರಂದು ಆಗಿನ ರಾಷ್ಟ್ರಪತಿಗಳಾಗಿದ್ದ ರಾಜೇಂದ್ರಪ್ರಸಾದರು, ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಉದ್ಘಾಟಿಸಿದರು.<br /> <br /> ಏಕೀಕರಣದ ಹೋರಾಟಕ್ಕೆ ಸ್ಫೂರ್ತಿ ನೀಡಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಯನ್ನು ಪಾಂಡೇಶ್ವರ ಕಾಳಿಂಗರಾಯರು ಹಾಡಿ ಸಭೆಯಲ್ಲಿನ ಜನಸಾಗರವನ್ನು ರೋಮಾಂಚನ ಗೊಳಿಸಿದರು.<br /> <br /> ಅಖಂಡ ಕರ್ನಾಟಕ ಅಸ್ತಿತ್ವಕ್ಕೆ ಬಂದ, ಆ ಐತಿಹಾಸಿಕ ಘೋಷಣೆಯಾದ ಆ ಸ್ಥಳ ನಿಜಕ್ಕೂ ಕನ್ನಡ ಜನಸಮುದಾಯ ಕಂಡ ಅಪೂರ್ವ ಕ್ಷಣಗಳ, ಸಂಭ್ರಮದ ಸಾಕ್ಷಿ ಭೂಮಿ.<br /> <br /> ಕರ್ನಾಟಕ ಏಕೀಕರಣ ಹೋರಾಟದ ಹಾಗೂ ಹೋರಾಟಗಾರರ ಐತಿಹಾಸಿಕ ವೀರಗಾಥೆ, ಕೇವಲ ಗ್ರಂಥಗಳಲ್ಲಿವೆ. ಆದರೆ ಏಕೀಕರಣ ಅಧಿಕೃತವಾಗಿ ಉದ್ಘಾಟನೆಯಾದ ಆ ಸ್ಥಳದಲ್ಲಿ, ಆ ಐತಿಹಾಸಿಕ ನೆನಪಿನ ಯಾವ ಕುರುಹು, ಸ್ಮಾರಕವೂ ಇಲ್ಲದಿರುವುದು ಐತಿಹಾಸಿಕ ವಿಪರ್ಯಾಸವೆನಿಸುತ್ತದೆ. ಆ ಕ್ರೀಡಾಂಗಣದಲ್ಲಿ ಸೂಕ್ತವಾದ ರೀತಿಯಲ್ಲಿ ಏಕೀಕರಣದ ಮಹತ್ವದ ಘಟನೆಗಳ ಸಂಕ್ಷಿಪ್ತ ವಿವರಗಳೊಂದಿಗೆ ಸ್ಮಾರಕ ಸ್ತಂಭವನ್ನು ನಿರ್ಮಿಸಬೇಕು. ಈ ಹಿಂದೆ ಎಸ್. ಎಂ. ಕೃಷ್ಣ ಅವರ ಸರ್ಕಾರ ಸ್ಮಾರಕ ಸ್ತಂಭವನ್ನು ಸ್ಥಾಪಿಸುವುದಾಗಿ ಘೋಷಿಸಿತ್ತು. ಆದರೆ ಆ ಘೋಷಣೆ ಘೋಷಣೆಯಾಗಿಯೇ ಉಳಿಯಿತು.<br /> <br /> ಆನಂತರ ಸರ್ಕಾರ ಸುವರ್ಣ ಕರ್ನಾಟಕ ಸಂಭ್ರಮಾಚರಣೆಗೆ ನೂರಾರು ಕೋಟಿ ರೂ. ಗಳನ್ನು ವೆಚ್ಚ ಮಾಡಿತು. ಆ ಸಂದರ್ಭದಲ್ಲೂ ಸಹ ಸರ್ಕಾರಕ್ಕೆ ಈ ಸಾರ್ಥಕ ಕಾರ್ಯದ ನೆನಪೇ ಬರಲಿಲ್ಲ. ಕನ್ನಡಿಗರು ಇಂತಹ ಮಹತ್ವದ ಇತಿಹಾಸವನ್ನು ಹಾಗೂ ಸಾರ್ಥಕ ಕರ್ತವ್ಯಗಳನ್ನು ಮರೆಯುವುದನ್ನು ಕಂಡೇ ಗಳಗನಾಥರು ಕನ್ನಡಿಗರ ಕರ್ಮ ಕಥೆಯನ್ನು ಬರೆದಂತೆ ಅನಿಸುತ್ತದೆ.<br /> <br /> ಇದೀಗ ಇದೇ ಬೆಂಗಳೂರಿನಲ್ಲಿ 77ನೇ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಈ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸುತ್ತಿರುವ ನಾಡೋಜ ಜಿ. ವೆಂಕಟಸುಬ್ಬಯ್ಯನವರು ಏಕೀಕರಣದ ಸ್ಮಾರಕ ಸ್ತಂಭವನ್ನು ಆ ಸ್ಥಳದಲ್ಲಿ ನಿರ್ಮಿಸುವಂತೆ ಸಮ್ಮೇಳನದ ಮೂಲಕ ಸರ್ಕಾರವನ್ನು ಆಗ್ರಹಿಸಬೇಕೆಂದು ವಿನಮ್ರ ಮನವಿ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>