<p>ರಂಗಶಂಕರದಲ್ಲಿ ಶನಿವಾರ ಮತ್ತು ಭಾನುವಾರ (ಏ.21 ಹಾಗೂ 22) ಏನ್ ಹುಚ್ಚೂರೀ... ಯಾಕ್ಹಿಂಗಾಡ್ತೀರಿ... ನಾಟಕ ಪ್ರದರ್ಶನ. <br /> <br /> ಪ್ರಖ್ಯಾತ ಫ್ರೆಂಚ್ ಪ್ರಹಸನಕಾರ ಮೋಲಿಯರ್ ಅವರದ್ದೊಂದು ನಾಟಕವಿದೆ. ಜಂಟಲ್ಮನ್ ಆಗಲಿಕ್ಕೆ ಹೊರಟ ಬೂರ್ಜ್ವಾ ಎಂದು ಅದರ ಹೆಸರು. ಇಂದಿನ ಪರಿಸ್ಥಿತಿಗೆ ಹೇಳಿಮಾಡಿಸಿದ ಪ್ರಹಸನವದು. ಆ ನಾಟಕವನ್ನು, `ಏನ್ ಹುಚ್ಚೂರೀ... ಯಾಕ್ಹಿಂಗಾಡ್ತೀರಿ~ ಎಂದು ಕನ್ನಡಕ್ಕೆ ಅಳವಡಿಸಿ ನಿರ್ದೇಶಿಸಿದ್ದಾರೆ ಖ್ಯಾತ ನಿರ್ದೇಶಕ ಪ್ರಸನ್ನ.<br /> <br /> ಬದಲಾದ ಪರಿಸ್ಥಿತಿ, ಏನದು ಬದಲಾದ ಪರಿಸ್ಥಿತಿ? ವ್ಯವಹಾರ ಚುರುಕಾಗಿದೆ, ಸ್ಪರ್ಧಾ ಗುಣ ಮೇಲೆದ್ದು ಬಂದಿದೆ. ಮುನ್ನುಗ್ಗಬೇಕು ಪ್ರತಿಸ್ಪರ್ಧಿಗಳನ್ನು ಬಡಿದುರುಳಿಸಬೇಕು, ರಕ್ತಹೀರಬೇಕು ಎಂಬ ಮನೋವೃತ್ತಿ ಜಾಗೃತವಾಗಿದೆ. <br /> <br /> ಸಿದ್ಧಾಂತ, ಸೈದ್ಧಾಂತಿಕತೆ, ಸಮಾಜವಾದ, ರಾಷ್ಟ್ರಪ್ರೇಮ, ತ್ಯಾಗ, ವೈರಾಗ್ಯ, ಅಹಿಂಸೆ ಮೊದಲಾದ ಮೌಲ್ಯಗಳು ಸಪ್ಪೆಯಾಗಿ ಕಾಣತೊಡಗಿದೆ. ತನ್ನ ಹಕ್ಕು, ತನ್ನ ಸವಲತ್ತು, ತನ್ನ ಆಸ್ತಿ ಹಾಗೂ ತನಗಾಗುತ್ತಿರಬಹುದಾದ ಅನ್ಯಾಯಗಳು ಹೊಸ ಸಾಹುಕಾರರ ಕಾಳಜಿಗಳಾಗಿವೆ. ಅಂತಸ್ತಿನ ಪ್ರಜ್ಞೆ, ಅಹಂಕಾರ, ಸ್ವಾಭಿಮಾನ ಹಾಗೂ ಬಾಹ್ಯಾಡಂಬರಗಳು ಇವರ ಲಕ್ಷಣಗಳಾಗಿವೆ.<br /> <br /> ಇತ್ತ ಸಂಸ್ಕೃತಿಯೂ ಬದಲಾಗಿದೆ: ಸಂಸ್ಕೃತಿ ಎಡಬಿಡಂಗಿಯಾಗಿದೆ. ಭಾಷೆ ಎಡಬಿಡಂಗಿಯಾಗಿದೆ. ವೇಷ ಎಡಬಿಡಂಗಿಯಾಗಿದೆ, ವ್ಯವಹಾರ ಎಡಬಿಡಂಗಿಯಾಗಿದೆ. ಈ ಹೊಸ ಸಾವ್ಕಾರರಿಗೆ ಅರಿವಿನ ಗಂಭೀರ ಕೊರತೆಯಿದೆ. ಮೋಲಿಯರನ ನಾಟಕವು ವಿಡಂಬನೆ ಮಾಡುವುದು ಇದೇ ತಲೆಕೆಳಗು ಸಭ್ಯತೆಯನ್ನು. <br /> <br /> ಇಡೀ ಪರಿಸ್ಥಿತಿಯನ್ನು ವಿಡಂಬನಾತ್ಮಕವಾಗಿ ಚಿತ್ರಿಸಿ, ತಾನೂ ನಕ್ಕು ಇತರರನ್ನೂ ನಗಿಸುತ್ತಾನೆ ಮೋಲಿಯರ್. ನಾಟಕ ಮತ್ತೇನು ಮಾಡಲು ಸಾಧ್ಯ ಹೇಳಿ? ಯಾರಮೇಲೆ ಆಕ್ರೋಶ ವ್ಯಕ್ತಪಡಿಸುತ್ತೀರಿ? ಹೊಸ ಸಾವ್ಕಾರರು ನಮ್ಮವರೇ ತಾನೆ? ನಮ್ಮದೇ ಊರು-ಮನೆಯವರು. ನಮ್ಮದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಫಲಗಳು. <br /> <br /> <strong>ಸ್ಥಳ; </strong>ರಂಗಶಂಕರ, ಜೆ.ಪಿ. ನಗರ. ಶನಿವಾರ ಸಂಜೆ 7.30 ಹಾಗೂ ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಂಗಶಂಕರದಲ್ಲಿ ಶನಿವಾರ ಮತ್ತು ಭಾನುವಾರ (ಏ.21 ಹಾಗೂ 22) ಏನ್ ಹುಚ್ಚೂರೀ... ಯಾಕ್ಹಿಂಗಾಡ್ತೀರಿ... ನಾಟಕ ಪ್ರದರ್ಶನ. <br /> <br /> ಪ್ರಖ್ಯಾತ ಫ್ರೆಂಚ್ ಪ್ರಹಸನಕಾರ ಮೋಲಿಯರ್ ಅವರದ್ದೊಂದು ನಾಟಕವಿದೆ. ಜಂಟಲ್ಮನ್ ಆಗಲಿಕ್ಕೆ ಹೊರಟ ಬೂರ್ಜ್ವಾ ಎಂದು ಅದರ ಹೆಸರು. ಇಂದಿನ ಪರಿಸ್ಥಿತಿಗೆ ಹೇಳಿಮಾಡಿಸಿದ ಪ್ರಹಸನವದು. ಆ ನಾಟಕವನ್ನು, `ಏನ್ ಹುಚ್ಚೂರೀ... ಯಾಕ್ಹಿಂಗಾಡ್ತೀರಿ~ ಎಂದು ಕನ್ನಡಕ್ಕೆ ಅಳವಡಿಸಿ ನಿರ್ದೇಶಿಸಿದ್ದಾರೆ ಖ್ಯಾತ ನಿರ್ದೇಶಕ ಪ್ರಸನ್ನ.<br /> <br /> ಬದಲಾದ ಪರಿಸ್ಥಿತಿ, ಏನದು ಬದಲಾದ ಪರಿಸ್ಥಿತಿ? ವ್ಯವಹಾರ ಚುರುಕಾಗಿದೆ, ಸ್ಪರ್ಧಾ ಗುಣ ಮೇಲೆದ್ದು ಬಂದಿದೆ. ಮುನ್ನುಗ್ಗಬೇಕು ಪ್ರತಿಸ್ಪರ್ಧಿಗಳನ್ನು ಬಡಿದುರುಳಿಸಬೇಕು, ರಕ್ತಹೀರಬೇಕು ಎಂಬ ಮನೋವೃತ್ತಿ ಜಾಗೃತವಾಗಿದೆ. <br /> <br /> ಸಿದ್ಧಾಂತ, ಸೈದ್ಧಾಂತಿಕತೆ, ಸಮಾಜವಾದ, ರಾಷ್ಟ್ರಪ್ರೇಮ, ತ್ಯಾಗ, ವೈರಾಗ್ಯ, ಅಹಿಂಸೆ ಮೊದಲಾದ ಮೌಲ್ಯಗಳು ಸಪ್ಪೆಯಾಗಿ ಕಾಣತೊಡಗಿದೆ. ತನ್ನ ಹಕ್ಕು, ತನ್ನ ಸವಲತ್ತು, ತನ್ನ ಆಸ್ತಿ ಹಾಗೂ ತನಗಾಗುತ್ತಿರಬಹುದಾದ ಅನ್ಯಾಯಗಳು ಹೊಸ ಸಾಹುಕಾರರ ಕಾಳಜಿಗಳಾಗಿವೆ. ಅಂತಸ್ತಿನ ಪ್ರಜ್ಞೆ, ಅಹಂಕಾರ, ಸ್ವಾಭಿಮಾನ ಹಾಗೂ ಬಾಹ್ಯಾಡಂಬರಗಳು ಇವರ ಲಕ್ಷಣಗಳಾಗಿವೆ.<br /> <br /> ಇತ್ತ ಸಂಸ್ಕೃತಿಯೂ ಬದಲಾಗಿದೆ: ಸಂಸ್ಕೃತಿ ಎಡಬಿಡಂಗಿಯಾಗಿದೆ. ಭಾಷೆ ಎಡಬಿಡಂಗಿಯಾಗಿದೆ. ವೇಷ ಎಡಬಿಡಂಗಿಯಾಗಿದೆ, ವ್ಯವಹಾರ ಎಡಬಿಡಂಗಿಯಾಗಿದೆ. ಈ ಹೊಸ ಸಾವ್ಕಾರರಿಗೆ ಅರಿವಿನ ಗಂಭೀರ ಕೊರತೆಯಿದೆ. ಮೋಲಿಯರನ ನಾಟಕವು ವಿಡಂಬನೆ ಮಾಡುವುದು ಇದೇ ತಲೆಕೆಳಗು ಸಭ್ಯತೆಯನ್ನು. <br /> <br /> ಇಡೀ ಪರಿಸ್ಥಿತಿಯನ್ನು ವಿಡಂಬನಾತ್ಮಕವಾಗಿ ಚಿತ್ರಿಸಿ, ತಾನೂ ನಕ್ಕು ಇತರರನ್ನೂ ನಗಿಸುತ್ತಾನೆ ಮೋಲಿಯರ್. ನಾಟಕ ಮತ್ತೇನು ಮಾಡಲು ಸಾಧ್ಯ ಹೇಳಿ? ಯಾರಮೇಲೆ ಆಕ್ರೋಶ ವ್ಯಕ್ತಪಡಿಸುತ್ತೀರಿ? ಹೊಸ ಸಾವ್ಕಾರರು ನಮ್ಮವರೇ ತಾನೆ? ನಮ್ಮದೇ ಊರು-ಮನೆಯವರು. ನಮ್ಮದೇ ಪ್ರಜಾಪ್ರಭುತ್ವ ವ್ಯವಸ್ಥೆಯ ಫಲಗಳು. <br /> <br /> <strong>ಸ್ಥಳ; </strong>ರಂಗಶಂಕರ, ಜೆ.ಪಿ. ನಗರ. ಶನಿವಾರ ಸಂಜೆ 7.30 ಹಾಗೂ ಭಾನುವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>