<p>ಬೆಂಗಳೂರು: ‘ಖಾಸಗಿ ಆಸ್ಪತ್ರೆಗಳು ಕೈಗೆಟುಕುವ ದರದಲ್ಲಿ ಸಾಮಾನ್ಯರಿಗೆ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವಂತಾಗಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.<br /> <br /> ನಗರದಲ್ಲಿ ಮಂಗಳವಾರ ಚೆನ್ನೈ ಮೂಲದ ಡಾ. ಅಗರವಾಲ್ಸ್ ಅವರ ಐದು ಕಣ್ಣಿನ ಆಸ್ಪತ್ರೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> ‘ಸಾಮಾನ್ಯರು ಉತ್ತಮ ದರ್ಜೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಬದ್ಧತೆ ತೋರಿಸುವುದು ಅಗತ್ಯವಾಗಿದೆ. ಇಂತಹ ಆಶಯಗಳಿಂದ ಸಮಾಜಕ್ಕೆ ಒಳಿತಾಗಲಿದೆ’ ಎಂದರು.<br /> <br /> ‘ಮನುಷ್ಯನ ಅತಿ ಮುಖ್ಯ ಇಂದ್ರೀಯವಾದ ಕಣ್ಣಿನ ಚಿಕಿತ್ಸೆ ನೀಡುತ್ತಿರುವ ಅಗರ್ವಾಲ್ಸ್ ಆಸ್ಪತ್ರೆಗೆ ಸರ್ಕಾರದ ವತಿಯಿಂದ ಅಗತ್ಯ ಬೆಂಬಲ ನೀಡಲಾಗುವುದು. ವಿಶ್ವದರ್ಜೆಯ ಚಿಕಿತ್ಸೆ ನೀಡುವ ಆಸ್ಪತ್ರೆಯ ಆಶಯ ಶ್ಲಾಘನೀಯ’ ಎಂದು ಹೇಳಿದರು.<br /> <br /> ಆಸ್ಪತ್ರೆಯ ಮುಖ್ಯಸ್ಥ ಡಾ.ಅಮರ್ ಅಗರ್ವಾಲ್ ಮಾತನಾಡಿ ‘ಬನ್ನೇರುಘಟ್ಟ ರಸ್ತೆ, ಬಸವೇಶ್ವರ ನಗರ, ಕೋರಮಂಗಲ, ಬಸವನಗುಡಿ, ಪದ್ಮನಾಭನಗರಗಳಲ್ಲಿ ಏಕಕಾಲಕ್ಕೆ ಐದು ಆಸ್ಪತ್ರೆಗಳನ್ನು ಉದ್ಘಾಟನೆ ಮಾಡಲಾಗಿದೆ. ಕೋಲ್ಸ್ಪಾರ್ಕ್, ಯಲಹಂಕ ನ್ಯೂಟೌನ್, ಆರ್.ಟಿ.ನಗರ ಹಾಗೂ ಮಾರತ್ಹಳ್ಳಿಯಲ್ಲಿ ಮಾರ್ಚ್ ವೇಳೆಗೆ ನಾಲ್ಕು ಆಸ್ಪತ್ರೆಗಳು ಕಾರ್ಯಾರಂಭ ಮಾಡಲಿವೆ’ ಎಂದರು.<br /> <br /> ‘ದೇಶದಲ್ಲಿ ಕ್ಯಾಟರಾಕ್ಟ್ ಸಮಸ್ಯೆಯಿಂದಾಗಿ 1.8 ಕೋಟಿ ಜನ ಅಂಧರಾಗಿದ್ದು ಆಸ್ಪತ್ರೆ ಮಾನವ ಅಂಗಾಂಶ ಕಸಿಯಿಂದ ಕಣ್ಣಿಗೆ ಲೆನ್ಸ್ ಅಳವಡಿಸುತ್ತಿದೆ. ಮಧುಮೇಹದಿಂದ ಅಂಧರಾಗುವುದನ್ನು ತಪ್ಪಿಸಲು ನಗರದಲ್ಲಿ ಆಸ್ಪತ್ರೆ ಪ್ರತ್ಯೇಕ ಪ್ರತಿಷ್ಠಾನ ತೆರೆಯುವ ಉದ್ದೇಶ ಹೊಂದಿದೆ’ ಎಂದರು.<br /> <br /> ಗೃಹ ಸಚಿವ ಆರ್.ಅಶೋಕ, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಖಾಸಗಿ ಆಸ್ಪತ್ರೆಗಳು ಕೈಗೆಟುಕುವ ದರದಲ್ಲಿ ಸಾಮಾನ್ಯರಿಗೆ ಚಿಕಿತ್ಸಾ ಸೌಲಭ್ಯವನ್ನು ಒದಗಿಸುವಂತಾಗಬೇಕು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.<br /> <br /> ನಗರದಲ್ಲಿ ಮಂಗಳವಾರ ಚೆನ್ನೈ ಮೂಲದ ಡಾ. ಅಗರವಾಲ್ಸ್ ಅವರ ಐದು ಕಣ್ಣಿನ ಆಸ್ಪತ್ರೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.<br /> ‘ಸಾಮಾನ್ಯರು ಉತ್ತಮ ದರ್ಜೆಯ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವಂತೆ ವೈದ್ಯರು ಬದ್ಧತೆ ತೋರಿಸುವುದು ಅಗತ್ಯವಾಗಿದೆ. ಇಂತಹ ಆಶಯಗಳಿಂದ ಸಮಾಜಕ್ಕೆ ಒಳಿತಾಗಲಿದೆ’ ಎಂದರು.<br /> <br /> ‘ಮನುಷ್ಯನ ಅತಿ ಮುಖ್ಯ ಇಂದ್ರೀಯವಾದ ಕಣ್ಣಿನ ಚಿಕಿತ್ಸೆ ನೀಡುತ್ತಿರುವ ಅಗರ್ವಾಲ್ಸ್ ಆಸ್ಪತ್ರೆಗೆ ಸರ್ಕಾರದ ವತಿಯಿಂದ ಅಗತ್ಯ ಬೆಂಬಲ ನೀಡಲಾಗುವುದು. ವಿಶ್ವದರ್ಜೆಯ ಚಿಕಿತ್ಸೆ ನೀಡುವ ಆಸ್ಪತ್ರೆಯ ಆಶಯ ಶ್ಲಾಘನೀಯ’ ಎಂದು ಹೇಳಿದರು.<br /> <br /> ಆಸ್ಪತ್ರೆಯ ಮುಖ್ಯಸ್ಥ ಡಾ.ಅಮರ್ ಅಗರ್ವಾಲ್ ಮಾತನಾಡಿ ‘ಬನ್ನೇರುಘಟ್ಟ ರಸ್ತೆ, ಬಸವೇಶ್ವರ ನಗರ, ಕೋರಮಂಗಲ, ಬಸವನಗುಡಿ, ಪದ್ಮನಾಭನಗರಗಳಲ್ಲಿ ಏಕಕಾಲಕ್ಕೆ ಐದು ಆಸ್ಪತ್ರೆಗಳನ್ನು ಉದ್ಘಾಟನೆ ಮಾಡಲಾಗಿದೆ. ಕೋಲ್ಸ್ಪಾರ್ಕ್, ಯಲಹಂಕ ನ್ಯೂಟೌನ್, ಆರ್.ಟಿ.ನಗರ ಹಾಗೂ ಮಾರತ್ಹಳ್ಳಿಯಲ್ಲಿ ಮಾರ್ಚ್ ವೇಳೆಗೆ ನಾಲ್ಕು ಆಸ್ಪತ್ರೆಗಳು ಕಾರ್ಯಾರಂಭ ಮಾಡಲಿವೆ’ ಎಂದರು.<br /> <br /> ‘ದೇಶದಲ್ಲಿ ಕ್ಯಾಟರಾಕ್ಟ್ ಸಮಸ್ಯೆಯಿಂದಾಗಿ 1.8 ಕೋಟಿ ಜನ ಅಂಧರಾಗಿದ್ದು ಆಸ್ಪತ್ರೆ ಮಾನವ ಅಂಗಾಂಶ ಕಸಿಯಿಂದ ಕಣ್ಣಿಗೆ ಲೆನ್ಸ್ ಅಳವಡಿಸುತ್ತಿದೆ. ಮಧುಮೇಹದಿಂದ ಅಂಧರಾಗುವುದನ್ನು ತಪ್ಪಿಸಲು ನಗರದಲ್ಲಿ ಆಸ್ಪತ್ರೆ ಪ್ರತ್ಯೇಕ ಪ್ರತಿಷ್ಠಾನ ತೆರೆಯುವ ಉದ್ದೇಶ ಹೊಂದಿದೆ’ ಎಂದರು.<br /> <br /> ಗೃಹ ಸಚಿವ ಆರ್.ಅಶೋಕ, ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>