<p>ಕೇವಲ ನಾಲ್ಕು ವರ್ಷಗಳ ಹಿಂದೆ ಆರಂಭವಾದ `ಇಂಡಿಯನ್ ಪ್ರೀಮಿಯರ್ ಲೀಗ್~ ಎಂಬ ಮಾಯೆಯ ಬೆನ್ನತ್ತಿ ಹೋಗುತ್ತಿದೆ ಕ್ರೀಡಾಲೋಕ. ಈ ಆಟಕ್ಕೆ ಸಿಕ್ಕ ಮನ್ನಣೆ ಅಪಾರ. ಹೊಸ ಪ್ರತಿಭೆಗಳ ಶೋಧಕ್ಕೂ ಇದು ನೆರವಾಗಿದೆ. <br /> <br /> ಆದ್ದರಿಂದ ಚುಟುಕು ಆಟದ ಮಾದರಿಯತ್ತ ಒಲವು ಹೆಚ್ಚಾಗುತ್ತಿದೆ. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನ ಸವಿ ಮಾತ್ರ ಅನುಭವಿಸುತ್ತಿದ್ದ ಕ್ರೀಡಾಪ್ರೇಮಿಗಳಿಗೆ ಐಪಿಎಲ್ ಮಾಡಿದ ಮೋಡಿ ಮೆಚ್ಚುವಂತದ್ದು. <br /> <br /> ಇದರ ಮುಂದುವರಿದ ಭಾಗವಾಗಿ ಚಾಂಪಿಯನ್ಸ್ ಲೀಗ್ಗೂ ಸಹ ಹೆಚ್ಚಿನ ಪ್ರಾಮುಖ್ಯತೆ ಲಭಿಸುತ್ತಿದೆ. ಇದಾದ ನಂತರ ಈಗ ಚೊಚ್ಚಲ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್ (ಕೆಬಿಎಲ್) ಸರದಿ. </p>.<p>ಐಪಿಎಲ್ ಆಟಗಾರರಿಗೆ ಯಾವಾಗ ಖ್ಯಾತಿ ಸಿಕ್ಕಿತೋ, ಹಣದ ಹೊಳೆ ಹರಿಯಿತೋ ಆಗ ಕೆಲವರಿಗೆ ಇದ್ದ ನೋವೆಲ್ಲಾ ಮಾಯವಾಯಿತು. <br /> <br /> ಗಾಯದ ಸಮಸ್ಯೆ ಹೇಳಿಕೊಂಡು ರಾಷ್ಟ್ರೀಯ ತಂಡದಿಂದ ದೂರವಿದ್ದವರು ದಿಢೀರನೇ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. 50 ಓವರ್ಗಳ ಕ್ರಿಕೆಟ್ನ ಸೊಬಗಿಗೆ ದಕ್ಕೆ ತರುವಂಥಹ ಜನಪ್ರಿಯತೆ, ಆಕರ್ಷಣೆ, ಹಣ ಇದಕ್ಕೆ ಹರಿದು ಬಂದಿದೆ.<br /> <br /> ಈಗಲೂ ಬರುತ್ತಿದೆ. ಅದಕ್ಕಾಗಿಯೇ ಆಟಗಾರರು ದೇಶವನ್ನು ಪ್ರತಿನಿಧಿಸಲು ಗಾಯದ ಸಮಸ್ಯೆ ಹೇಳಿಕೊಳ್ಳುತ್ತಾರೆ. ಆದರೆ ಚುಟುಕು ಆಟಕ್ಕೆ ಮಾತ್ರ ಯಾವುದೇ ಸಮಸ್ಯೆ ಇಲ್ಲವಂತೆ!<br /> <br /> ಚುಟುಕು ಆಟದ ಮಾದರಿಗೆ ಸಿಕ್ಕ ಜನಪ್ರಿಯತೆಯಿಂದ ಕುಸ್ತಿ ಹಾಗೂ ವಾಲಿಬಾಲ್ ಸಹ ಇದೇ ಮಾದರಿಯಲ್ಲಿ ಹೆಜ್ಜೆ ಹಾಕಿದವು. ಇದೇ ವರ್ಷದಲ್ಲಿ ನಡೆದ ಇಂಡಿಯನ್ ವಾಲಿ ಲೀಗ್ (ಐವಿಎಲ್) ಚೊಚ್ಚಲ ಆವೃತ್ತಿ ನಡೆದದ್ದು ಅದಕ್ಕೆ ಸಾಕ್ಷಿ. <br /> <br /> ಐವಿಎಲ್ನ ಮೊದಲ ಆವೃತ್ತಿಯಲ್ಲಿ ಆರು ತಂಡಗಳ 90 ಆಟಗಾರರು ಭಾಗವಹಿಸಿದ್ದರು. ಆದರೆ, ಈ ಸಲ ನಡೆಯುವ ಐವಿಎಲ್ಗೆ ಮತ್ತಷ್ಟು ತಂಡಗಳು ಸೇರ್ಪಡೆಯಾಗಲಿವೆ. ಅದೇ ರೀತಿ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್ (ಕೆಬಿಎಲ್) ಸಹ ಈ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ. ಚೊಚ್ಚಲ ಕೆಬಿಎಲ್ ನವೆಂಬರ್ 5ರಿಂದ ಆರಂಭವಾಗಲಿದೆ. <br /> <br /> ಐಪಿಎಲ್, ಐವಿಎಲ್ನ ಎಲ್ಲಾ ಪಂದ್ಯಗಳು ಕೇವಲ ಉದ್ಯಾನ ನಗರಿಯಲ್ಲಿ ಮಾತ್ರ ನಡೆದವು. ಈ ಆಟದ ಮೋಜು ಸವಿಯಲು ಬೆಂಗಳೂರಿನ ಜನರಿಗೆ ಮಾತ್ರ ಸಾಧ್ಯವಾಯಿತು.<br /> <br /> ಇದರಿಂದ ನಿರಾಸೆ ಅನುಭವಿಸಿದ್ದು ಸಾಕಷ್ಟು ಅಭಿಮಾನಿಗಳು. ಆದ್ದರಿಂದ ಈ ಸಲದ ಕೆಬಿಎಲ್ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಂಡಿಲ್ಲ. <br /> <br /> ಮಂಡ್ಯ, ಮೈಸೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಬೆಳಗಾವಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಯೋಜನೆ ಸಿದ್ದಗೊಳ್ಳುತ್ತಿದೆ. ಇದರಿಂದ ರಾಜ್ಯದ ಎಲ್ಲಾ ಮೂಲೆಗಳಲ್ಲಿ ಬ್ಯಾಡ್ಮಿಂಟನ್ ಪ್ರೀತಿ ಹೆಚ್ಚಾಗಲು ಸಾಧ್ಯವಾಗಬಹುದು. <br /> <br /> ಚೊಚ್ಚಲ ಆವೃತ್ತಿಯಲ್ಲಿ ಎಂಟು ತಂಡಗಳು ಪಾಲ್ಗೊಳ್ಳಲಿದ್ದು, 128 ಸ್ಪರ್ಧಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. <br /> <br /> ಐಪಿಎಲ್ನಲ್ಲಿ ಆಟಗಾರರನ್ನು ಹರಾಜು ಮಾಡುವಂತೆ ಇಲ್ಲಿಯು ಹರಾಜು ಮಾಡಲಾಗುತ್ತದೆ ಒಟ್ಟು ಎಂಟು ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸುತ್ತಾರೆ. ಕನಿಷ್ಠ 2.50 ಲಕ್ಷ ರೂ. ಯಿಂದ ಮೂರು ಲಕ್ಷದವರೆಗೂ ಆಟಗಾರರನ್ನು ಕೊಂಡುಕೊಳ್ಳಲಾಗುತ್ತದೆ. <br /> <br /> ಅನೂಪ್ ಶ್ರೀಧರ್, ರೋಹನ್ ಕ್ಯಾಸ್ಟೆಲಿನೊ, ಆದಿತ್ಯ ಪ್ರಕಾಶ್, ಗುರು ಪ್ರಸಾದ್, ಜಗದೀಶ್ ಯಾದವ್, ಜಿ. ನಿಶ್ಚಿತಾ ಹಾಗೂ ಸಿಂಧು ಭಾರದ್ವಾಜ್ ಸೇರಿದಂತೆ ಇತರ ಪ್ರಮುಖ ಆಟಗಾರರು ಕೆಬಿಎಲ್ನಲ್ಲಿ ಪಾಲ್ಗೊಳ್ಳಲಿದ್ದಾರೆ. <br /> <br /> ರಾಷ್ಟ್ರೀಯ ಚಾಂಪಿಯನ್ ಅರವಿಂದ್ ಭಟ್, ಅಂತರರಾಷ್ಟ್ರೀಯ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರು ಸಹ ಆಡುವ ವಿಷಯ ಖಚಿತ ಪಡಿಸಿದ್ದಾರೆ. ಇದರಿಂದ ಇವರು ಅಭಿಮಾನಿಗಳ ಸಂಭ್ರಮಕ್ಕೆ ರಂಗು ತುಂಬಲಿದ್ದಾರೆ. <br /> <br /> ಐಪಿಎಲ್, ಚಾಂಪಿಯನ್ಸ್ ಲೀಗ್ ಈಗ ಕೇವಲ ಆಟವಾಗಿ ಉಳಿದಿಲ್ಲ. ಅದು ಪಕ್ಕಾ ವ್ಯವಹಾರ ಎನ್ನುವುದರಲ್ಲಿಯೂ ಯಾವ ಸಂಶಯವಿಲ್ಲ. ಇದಕ್ಕೆ ಬಣ್ಣದ ಲೋಕದ ತಾರೆಯರು ಪ್ರವೇಶ ಮಾಡಿದ್ದು, ಇನ್ನೂ ಹೆಚ್ಚಿನ ರಂಗು ಬರಲು ಕಾರಣ. <br /> <br /> ಫ್ರಾಂಚೈಸಿಗಳ ತಾಳಕ್ಕೆ ಆಟಗಾರರು ಕುಣಿಯುತ್ತಿದ್ದಾರೋ, ಆಟಗಾರರಿಗೆ ತಕ್ಕಂತೆ ಫ್ರಾಂಚೈಸಿಗಳು ಕೇಳುತ್ತಿದ್ದಾರೋ ಒಂದೂ ಗೊತ್ತಾಗುತ್ತಿಲ್ಲ. ಆದರೆ ಚೊಚ್ಚಲ ಬ್ಯಾಡ್ಮಿಂಟನ್ ಲೀಗ್ಗೆ ಇಂಥದ್ದೊಂದು ಯಶಸ್ಸು ಸಾಧ್ಯನಾ ಎನ್ನುವ ಪ್ರಶ್ನೆಗೆ ಭವಿಷ್ಯದ ದಿನಗಳಲ್ಲಿ ಉತ್ತರ ಸಿಗಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೇವಲ ನಾಲ್ಕು ವರ್ಷಗಳ ಹಿಂದೆ ಆರಂಭವಾದ `ಇಂಡಿಯನ್ ಪ್ರೀಮಿಯರ್ ಲೀಗ್~ ಎಂಬ ಮಾಯೆಯ ಬೆನ್ನತ್ತಿ ಹೋಗುತ್ತಿದೆ ಕ್ರೀಡಾಲೋಕ. ಈ ಆಟಕ್ಕೆ ಸಿಕ್ಕ ಮನ್ನಣೆ ಅಪಾರ. ಹೊಸ ಪ್ರತಿಭೆಗಳ ಶೋಧಕ್ಕೂ ಇದು ನೆರವಾಗಿದೆ. <br /> <br /> ಆದ್ದರಿಂದ ಚುಟುಕು ಆಟದ ಮಾದರಿಯತ್ತ ಒಲವು ಹೆಚ್ಚಾಗುತ್ತಿದೆ. ಏಕದಿನ ಹಾಗೂ ಟೆಸ್ಟ್ ಕ್ರಿಕೆಟ್ನ ಸವಿ ಮಾತ್ರ ಅನುಭವಿಸುತ್ತಿದ್ದ ಕ್ರೀಡಾಪ್ರೇಮಿಗಳಿಗೆ ಐಪಿಎಲ್ ಮಾಡಿದ ಮೋಡಿ ಮೆಚ್ಚುವಂತದ್ದು. <br /> <br /> ಇದರ ಮುಂದುವರಿದ ಭಾಗವಾಗಿ ಚಾಂಪಿಯನ್ಸ್ ಲೀಗ್ಗೂ ಸಹ ಹೆಚ್ಚಿನ ಪ್ರಾಮುಖ್ಯತೆ ಲಭಿಸುತ್ತಿದೆ. ಇದಾದ ನಂತರ ಈಗ ಚೊಚ್ಚಲ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್ (ಕೆಬಿಎಲ್) ಸರದಿ. </p>.<p>ಐಪಿಎಲ್ ಆಟಗಾರರಿಗೆ ಯಾವಾಗ ಖ್ಯಾತಿ ಸಿಕ್ಕಿತೋ, ಹಣದ ಹೊಳೆ ಹರಿಯಿತೋ ಆಗ ಕೆಲವರಿಗೆ ಇದ್ದ ನೋವೆಲ್ಲಾ ಮಾಯವಾಯಿತು. <br /> <br /> ಗಾಯದ ಸಮಸ್ಯೆ ಹೇಳಿಕೊಂಡು ರಾಷ್ಟ್ರೀಯ ತಂಡದಿಂದ ದೂರವಿದ್ದವರು ದಿಢೀರನೇ ಕ್ರೀಡಾಂಗಣದಲ್ಲಿ ಕಾಣಿಸಿಕೊಂಡರು. 50 ಓವರ್ಗಳ ಕ್ರಿಕೆಟ್ನ ಸೊಬಗಿಗೆ ದಕ್ಕೆ ತರುವಂಥಹ ಜನಪ್ರಿಯತೆ, ಆಕರ್ಷಣೆ, ಹಣ ಇದಕ್ಕೆ ಹರಿದು ಬಂದಿದೆ.<br /> <br /> ಈಗಲೂ ಬರುತ್ತಿದೆ. ಅದಕ್ಕಾಗಿಯೇ ಆಟಗಾರರು ದೇಶವನ್ನು ಪ್ರತಿನಿಧಿಸಲು ಗಾಯದ ಸಮಸ್ಯೆ ಹೇಳಿಕೊಳ್ಳುತ್ತಾರೆ. ಆದರೆ ಚುಟುಕು ಆಟಕ್ಕೆ ಮಾತ್ರ ಯಾವುದೇ ಸಮಸ್ಯೆ ಇಲ್ಲವಂತೆ!<br /> <br /> ಚುಟುಕು ಆಟದ ಮಾದರಿಗೆ ಸಿಕ್ಕ ಜನಪ್ರಿಯತೆಯಿಂದ ಕುಸ್ತಿ ಹಾಗೂ ವಾಲಿಬಾಲ್ ಸಹ ಇದೇ ಮಾದರಿಯಲ್ಲಿ ಹೆಜ್ಜೆ ಹಾಕಿದವು. ಇದೇ ವರ್ಷದಲ್ಲಿ ನಡೆದ ಇಂಡಿಯನ್ ವಾಲಿ ಲೀಗ್ (ಐವಿಎಲ್) ಚೊಚ್ಚಲ ಆವೃತ್ತಿ ನಡೆದದ್ದು ಅದಕ್ಕೆ ಸಾಕ್ಷಿ. <br /> <br /> ಐವಿಎಲ್ನ ಮೊದಲ ಆವೃತ್ತಿಯಲ್ಲಿ ಆರು ತಂಡಗಳ 90 ಆಟಗಾರರು ಭಾಗವಹಿಸಿದ್ದರು. ಆದರೆ, ಈ ಸಲ ನಡೆಯುವ ಐವಿಎಲ್ಗೆ ಮತ್ತಷ್ಟು ತಂಡಗಳು ಸೇರ್ಪಡೆಯಾಗಲಿವೆ. ಅದೇ ರೀತಿ ಕರ್ನಾಟಕ ಬ್ಯಾಡ್ಮಿಂಟನ್ ಲೀಗ್ (ಕೆಬಿಎಲ್) ಸಹ ಈ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ. ಚೊಚ್ಚಲ ಕೆಬಿಎಲ್ ನವೆಂಬರ್ 5ರಿಂದ ಆರಂಭವಾಗಲಿದೆ. <br /> <br /> ಐಪಿಎಲ್, ಐವಿಎಲ್ನ ಎಲ್ಲಾ ಪಂದ್ಯಗಳು ಕೇವಲ ಉದ್ಯಾನ ನಗರಿಯಲ್ಲಿ ಮಾತ್ರ ನಡೆದವು. ಈ ಆಟದ ಮೋಜು ಸವಿಯಲು ಬೆಂಗಳೂರಿನ ಜನರಿಗೆ ಮಾತ್ರ ಸಾಧ್ಯವಾಯಿತು.<br /> <br /> ಇದರಿಂದ ನಿರಾಸೆ ಅನುಭವಿಸಿದ್ದು ಸಾಕಷ್ಟು ಅಭಿಮಾನಿಗಳು. ಆದ್ದರಿಂದ ಈ ಸಲದ ಕೆಬಿಎಲ್ ಕೇವಲ ಬೆಂಗಳೂರಿಗೆ ಮಾತ್ರ ಸೀಮಿತಗೊಂಡಿಲ್ಲ. <br /> <br /> ಮಂಡ್ಯ, ಮೈಸೂರು, ಹುಬ್ಬಳ್ಳಿ, ಧಾರವಾಡ, ದಾವಣಗೆರೆ, ಬೆಳಗಾವಿ ಹಾಗೂ ಮಂಗಳೂರು ಜಿಲ್ಲೆಗಳಲ್ಲಿ ಪಂದ್ಯಗಳನ್ನು ಆಯೋಜಿಸಲು ಯೋಜನೆ ಸಿದ್ದಗೊಳ್ಳುತ್ತಿದೆ. ಇದರಿಂದ ರಾಜ್ಯದ ಎಲ್ಲಾ ಮೂಲೆಗಳಲ್ಲಿ ಬ್ಯಾಡ್ಮಿಂಟನ್ ಪ್ರೀತಿ ಹೆಚ್ಚಾಗಲು ಸಾಧ್ಯವಾಗಬಹುದು. <br /> <br /> ಚೊಚ್ಚಲ ಆವೃತ್ತಿಯಲ್ಲಿ ಎಂಟು ತಂಡಗಳು ಪಾಲ್ಗೊಳ್ಳಲಿದ್ದು, 128 ಸ್ಪರ್ಧಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. <br /> <br /> ಐಪಿಎಲ್ನಲ್ಲಿ ಆಟಗಾರರನ್ನು ಹರಾಜು ಮಾಡುವಂತೆ ಇಲ್ಲಿಯು ಹರಾಜು ಮಾಡಲಾಗುತ್ತದೆ ಒಟ್ಟು ಎಂಟು ಫ್ರಾಂಚೈಸಿಗಳು ಆಟಗಾರರನ್ನು ಖರೀದಿಸುತ್ತಾರೆ. ಕನಿಷ್ಠ 2.50 ಲಕ್ಷ ರೂ. ಯಿಂದ ಮೂರು ಲಕ್ಷದವರೆಗೂ ಆಟಗಾರರನ್ನು ಕೊಂಡುಕೊಳ್ಳಲಾಗುತ್ತದೆ. <br /> <br /> ಅನೂಪ್ ಶ್ರೀಧರ್, ರೋಹನ್ ಕ್ಯಾಸ್ಟೆಲಿನೊ, ಆದಿತ್ಯ ಪ್ರಕಾಶ್, ಗುರು ಪ್ರಸಾದ್, ಜಗದೀಶ್ ಯಾದವ್, ಜಿ. ನಿಶ್ಚಿತಾ ಹಾಗೂ ಸಿಂಧು ಭಾರದ್ವಾಜ್ ಸೇರಿದಂತೆ ಇತರ ಪ್ರಮುಖ ಆಟಗಾರರು ಕೆಬಿಎಲ್ನಲ್ಲಿ ಪಾಲ್ಗೊಳ್ಳಲಿದ್ದಾರೆ. <br /> <br /> ರಾಷ್ಟ್ರೀಯ ಚಾಂಪಿಯನ್ ಅರವಿಂದ್ ಭಟ್, ಅಂತರರಾಷ್ಟ್ರೀಯ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರು ಸಹ ಆಡುವ ವಿಷಯ ಖಚಿತ ಪಡಿಸಿದ್ದಾರೆ. ಇದರಿಂದ ಇವರು ಅಭಿಮಾನಿಗಳ ಸಂಭ್ರಮಕ್ಕೆ ರಂಗು ತುಂಬಲಿದ್ದಾರೆ. <br /> <br /> ಐಪಿಎಲ್, ಚಾಂಪಿಯನ್ಸ್ ಲೀಗ್ ಈಗ ಕೇವಲ ಆಟವಾಗಿ ಉಳಿದಿಲ್ಲ. ಅದು ಪಕ್ಕಾ ವ್ಯವಹಾರ ಎನ್ನುವುದರಲ್ಲಿಯೂ ಯಾವ ಸಂಶಯವಿಲ್ಲ. ಇದಕ್ಕೆ ಬಣ್ಣದ ಲೋಕದ ತಾರೆಯರು ಪ್ರವೇಶ ಮಾಡಿದ್ದು, ಇನ್ನೂ ಹೆಚ್ಚಿನ ರಂಗು ಬರಲು ಕಾರಣ. <br /> <br /> ಫ್ರಾಂಚೈಸಿಗಳ ತಾಳಕ್ಕೆ ಆಟಗಾರರು ಕುಣಿಯುತ್ತಿದ್ದಾರೋ, ಆಟಗಾರರಿಗೆ ತಕ್ಕಂತೆ ಫ್ರಾಂಚೈಸಿಗಳು ಕೇಳುತ್ತಿದ್ದಾರೋ ಒಂದೂ ಗೊತ್ತಾಗುತ್ತಿಲ್ಲ. ಆದರೆ ಚೊಚ್ಚಲ ಬ್ಯಾಡ್ಮಿಂಟನ್ ಲೀಗ್ಗೆ ಇಂಥದ್ದೊಂದು ಯಶಸ್ಸು ಸಾಧ್ಯನಾ ಎನ್ನುವ ಪ್ರಶ್ನೆಗೆ ಭವಿಷ್ಯದ ದಿನಗಳಲ್ಲಿ ಉತ್ತರ ಸಿಗಲಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>