<p>ಗಂಗಾವತಿ: ಒಂದೇ ಆಸ್ತಿ ಇಬ್ಬರು ವಾರಸುದಾರರನ್ನು ಹಾಗೂ ಎರಡು ದಾಖಲೆಗಳನ್ನು ಸೃಷ್ಟಿಸುವ ಮೂಲಕ ಇಲ್ಲಿನ ನಗರಸಭೆಯ ಕಂದಾಯ ವಿಭಾಗದ ಸಿಬ್ಬಂದಿ, ಆಸ್ತಿಯ ಮೂಲ ವಾರಸುದಾರರನ್ನು ವಂಚಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.<br /> <br /> ಆಸ್ತಿಯ ಮೂಲ ವಾರಸುದಾರರು ಎನ್ನಲಾದ ಅಂಬಮ್ಮ ಗಂಡ ಲಿಂಗಪ್ಪ ಕೋರಿ, ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆ, ತೆರಿಗೆ ಪಾವತಿ ರಸೀದಿ ಸಂಗ್ರಹಿಸಿ ಇದೀಗ ನಗರಸಭೆಯ ವಿರುದ್ಧ ಕಾನೂನು ಸಮರದ ಮೊರೆ ಹೋಗುತ್ತಿರುವುದರಿಂದ ಪ್ರಕರಣ ಬಯಲಿಗೆ ಬಂದಿದೆ.<br /> <br /> ಪ್ರಕರಣದ ವಿವರ: ನಗರಸಭಾ ವ್ಯಾಪ್ತಿಯ ಮುರಹರಿ ನಗರದ ಕುರಿ ಕಮೇಲಿ ಸಮೀಪ ಬ್ಲಾಕ್ ನಂಬರ್ ಪ್ಲಾಟ್ ನಂಬರ್ 23ನ್ನು ನಗರಸಭೆ, 1992ರಲ್ಲಿ 15X20 ಸೈಜಿನ ಟಿಎಂಜಿ/ ಪ್ಲಾಟ್/48/91–92 ನಿವೇಶನವನ್ನು ಅಂಬಮ್ಮ ಅವರಿಗೆ ₨ 900 ಪಡೆದು ವಿತರಿಸಿತ್ತು.<br /> <br /> ಆರ್ಥಿಕ ದುರ್ಬಲರ ಕೋಟಾದಡಿ ಅಂಬಮ್ಮರಿಗೆ 1992ರ ಜೂನ್ 17ರಂದು ನಗರಸಭೆಯು ನಿವೇಶನಕ್ಕೆ ಸಂಬಂಧಿಸಿದ ಹಕ್ಕುನ್ನು ಖರೀದಿ ಪತ್ರದ ಮೂಲಕ ಬಿಟ್ಟು ಕೊಟ್ಟಿತ್ತು. ನಿವೇಶನದ ಸುತ್ತಲಿನ ಚಕ್ಕುಬಂದಿಯ ಮಾಹಿತಿಯನ್ನು ಹಕ್ಕುಪತ್ರದಲ್ಲಿ ವಿವರಿಸಲಾಗಿತ್ತು.<br /> <br /> 1992ರಿಂದ 2013ರ ನವೆಂಬರ್ವರೆಗೂ ಅಂಬಮ್ಮರ ಹೆಸರಲ್ಲಿರುವ ನಿವೇಶನಕ್ಕೆ ವಾರಸುದಾರರು ತೆರಿಗೆ ಪಾವತಿಸುತ್ತಾ ಬಂದಿದ್ದಾರೆ. ಸದರಿ ಪ್ಲಾಟ್ನ ದಾಖಲೆಗಳನ್ನು ಪರಿಶೀಲಿಸಿದ ನಗರಸಭೆಯ ಪೌರಾಯುಕ್ತ, ನಿವೇಶನ ಅಂಬಮ್ಮರಿಗೆ ಸೇರಿದ್ದು ಎಂದು 24.10.2013ರಂದು ದೃಢೀಕರಣ ನೀಡಿದ್ದಾರೆ. <br /> <br /> ಮತ್ತೊಬ್ಬರ ಸೃಷ್ಟಿ: ಆದರೆ ನಗರಸಭೆಯ ಕಂದಾಯ ವಿಭಾಗದ ಸಿಬ್ಬಂದಿಯು ನಗರಸಭೆಯಿಂದ ಅಂಬಮ್ಮರಿಗೆ ಮಂಜೂರಾಗಿದ್ದ ನಿವೇನಕ್ಕೆ ಫಾತೀಮಾ ಗಂಡ ಇಮಾಮ್ಸಾಬರನ್ನು ವಾರಸುದಾರರಾಗಿ ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಬೆಣಕಲ್ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ಒಂದೇ ಆಸ್ತಿ ಇಬ್ಬರು ವಾರಸುದಾರರನ್ನು ಹಾಗೂ ಎರಡು ದಾಖಲೆಗಳನ್ನು ಸೃಷ್ಟಿಸುವ ಮೂಲಕ ಇಲ್ಲಿನ ನಗರಸಭೆಯ ಕಂದಾಯ ವಿಭಾಗದ ಸಿಬ್ಬಂದಿ, ಆಸ್ತಿಯ ಮೂಲ ವಾರಸುದಾರರನ್ನು ವಂಚಿಸಲು ಯತ್ನಿಸಿರುವ ಘಟನೆ ಬೆಳಕಿಗೆ ಬಂದಿದೆ.<br /> <br /> ಆಸ್ತಿಯ ಮೂಲ ವಾರಸುದಾರರು ಎನ್ನಲಾದ ಅಂಬಮ್ಮ ಗಂಡ ಲಿಂಗಪ್ಪ ಕೋರಿ, ತಮ್ಮ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆ, ತೆರಿಗೆ ಪಾವತಿ ರಸೀದಿ ಸಂಗ್ರಹಿಸಿ ಇದೀಗ ನಗರಸಭೆಯ ವಿರುದ್ಧ ಕಾನೂನು ಸಮರದ ಮೊರೆ ಹೋಗುತ್ತಿರುವುದರಿಂದ ಪ್ರಕರಣ ಬಯಲಿಗೆ ಬಂದಿದೆ.<br /> <br /> ಪ್ರಕರಣದ ವಿವರ: ನಗರಸಭಾ ವ್ಯಾಪ್ತಿಯ ಮುರಹರಿ ನಗರದ ಕುರಿ ಕಮೇಲಿ ಸಮೀಪ ಬ್ಲಾಕ್ ನಂಬರ್ ಪ್ಲಾಟ್ ನಂಬರ್ 23ನ್ನು ನಗರಸಭೆ, 1992ರಲ್ಲಿ 15X20 ಸೈಜಿನ ಟಿಎಂಜಿ/ ಪ್ಲಾಟ್/48/91–92 ನಿವೇಶನವನ್ನು ಅಂಬಮ್ಮ ಅವರಿಗೆ ₨ 900 ಪಡೆದು ವಿತರಿಸಿತ್ತು.<br /> <br /> ಆರ್ಥಿಕ ದುರ್ಬಲರ ಕೋಟಾದಡಿ ಅಂಬಮ್ಮರಿಗೆ 1992ರ ಜೂನ್ 17ರಂದು ನಗರಸಭೆಯು ನಿವೇಶನಕ್ಕೆ ಸಂಬಂಧಿಸಿದ ಹಕ್ಕುನ್ನು ಖರೀದಿ ಪತ್ರದ ಮೂಲಕ ಬಿಟ್ಟು ಕೊಟ್ಟಿತ್ತು. ನಿವೇಶನದ ಸುತ್ತಲಿನ ಚಕ್ಕುಬಂದಿಯ ಮಾಹಿತಿಯನ್ನು ಹಕ್ಕುಪತ್ರದಲ್ಲಿ ವಿವರಿಸಲಾಗಿತ್ತು.<br /> <br /> 1992ರಿಂದ 2013ರ ನವೆಂಬರ್ವರೆಗೂ ಅಂಬಮ್ಮರ ಹೆಸರಲ್ಲಿರುವ ನಿವೇಶನಕ್ಕೆ ವಾರಸುದಾರರು ತೆರಿಗೆ ಪಾವತಿಸುತ್ತಾ ಬಂದಿದ್ದಾರೆ. ಸದರಿ ಪ್ಲಾಟ್ನ ದಾಖಲೆಗಳನ್ನು ಪರಿಶೀಲಿಸಿದ ನಗರಸಭೆಯ ಪೌರಾಯುಕ್ತ, ನಿವೇಶನ ಅಂಬಮ್ಮರಿಗೆ ಸೇರಿದ್ದು ಎಂದು 24.10.2013ರಂದು ದೃಢೀಕರಣ ನೀಡಿದ್ದಾರೆ. <br /> <br /> ಮತ್ತೊಬ್ಬರ ಸೃಷ್ಟಿ: ಆದರೆ ನಗರಸಭೆಯ ಕಂದಾಯ ವಿಭಾಗದ ಸಿಬ್ಬಂದಿಯು ನಗರಸಭೆಯಿಂದ ಅಂಬಮ್ಮರಿಗೆ ಮಂಜೂರಾಗಿದ್ದ ನಿವೇನಕ್ಕೆ ಫಾತೀಮಾ ಗಂಡ ಇಮಾಮ್ಸಾಬರನ್ನು ವಾರಸುದಾರರಾಗಿ ಸೃಷ್ಟಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಸವರಾಜ ಬೆಣಕಲ್ ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>