<p><strong>ಭುವನೇಶ್ವರ (ಐಎಎನ್ಎಸ್):</strong> ಆಡಳಿತಾರೂಢ ಬಿಜೆಡಿಯ ಬುಡಕಟ್ಟು ಪ್ರದೇಶದ ಶಾಸಕ ಜ್ಹೀನಾ ಹಿಕಾಕ ಅವರನ್ನು ಕಳೆದ ಹತ್ತು ದಿನಗಳಿಂದ ಅಪಹರಿಸಿ ಒತ್ತೆಯಿಟ್ಟುಕೊಂಡಿರುವ ಮಾವೊವಾದಿಗಳು ಗುರುವಾರದೊಳಗೆ (ಏಪ್ರಿಲ್ 5) ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮಂಗಳವಾರ ಗಡುವು ನೀಡಿದ್ದಾರೆ.<br /> <br /> ಮಾವೊವಾದಿಗಳ ಮುಖಂಡ, ಭಾರತ -ಮಾವೊವಾದಿ ಕಮ್ಯೂನಿಸ್ಟ್ ಪಕ್ಷದ ಆಂಧ್ರ - ಒಡಿಶಾ ಗಡಿಯ ವಿಶೇಷ ವಲಯ ಸಮಿತಿಯ ಕಾರ್ಯದರ್ಶಿ `ಚಂದ್ರಮೌಳಿ~ ಎಂದು ಹೇಳಿಕೊಂಡಿರುವ ವ್ಯಕ್ತಿ ಬೇಡಿಕೆ ಕುರಿತಂತೆ ರಾಜಧಾನಿ ಭುವನೇಶ್ವರದ ಹಲವು ಪತ್ರಕರ್ತರಿಗೆ ಧ್ವನಿ ಸಂದೇಶ ರವಾನಿಸಿದ್ದಾನೆ.<br /> <br /> ಸುಳ್ಳು ಆರೋಪದ ಮೇಲೆ ಕೊರಾಪಟ್ ಮತ್ತು ಮಲ್ಕನ್ಗಿರಿ ಜಿಲ್ಲೆಗಳಲ್ಲಿ ಬಂಧಿಸಿರುವ ಚಾಸಿ ಮುಲಿಯಾ ಆದಿವಾಸಿ ಸಂಘದ (ಸಿಎಂಎಎಸ್) ಕಾರ್ಯಕರ್ತರನ್ನು ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಬೇಡಿಕೆಯ ಸಂದೇಶದಲ್ಲಿ ಸೂಚಿಸಲಾಗಿದೆ.<br /> <br /> ಬೇಡಿಕೆ ಕುರಿತಂತೆ ಮಾತುಕತೆಗೆ ತಿರಸ್ಕರಿಸಿದರೆ `ನಾವು ಏಪ್ರಿಲ್ 5ದವರೆಗೆ ಗಡುವು ನೀಡುತ್ತೇವೆ~ ಎಂದು ಹೇಳಿರುವ ಮಾವೊ ನಾಯಕ ತನ್ನ ಗುಂಪಿನ ಯಾವುದೇ ಸದಸ್ಯನನ್ನು ಬಿಡುಗಡೆಗೊಳಿಸುವಂತೆ ಹೆಸರಿಸಿಲ್ಲ.<br /> <br /> ಸಿಎಂಎಎಸ್ ಸಂಘಟನೆಯು ಮಾವೊವಾದಿಗಳ ಬೆಂಬಲದಿಂದ ರಾಜ್ಯದ ಕೊರಾಪಟ್ ಮತ್ತು ಮಲ್ಕನ್ಗಿರಿ ಜಿಲ್ಲೆಗಳು ಸೇರಿದಂತೆ ದಕ್ಷಿಣದ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಲಕ್ಷ್ಮೀಪುರ ವಿಧಾನಸಭೆ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಿಕಾಕ ಅವರನ್ನು ಕೊರಾಪಟ್ ಜಿಲ್ಲೆಯ ಗುಡ್ಡಗಾಡು ಪ್ರದೇಶದಿಂದ ಮಾರ್ಚ್ 24ರಂದು ಅಪಹರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಭುವನೇಶ್ವರ (ಐಎಎನ್ಎಸ್):</strong> ಆಡಳಿತಾರೂಢ ಬಿಜೆಡಿಯ ಬುಡಕಟ್ಟು ಪ್ರದೇಶದ ಶಾಸಕ ಜ್ಹೀನಾ ಹಿಕಾಕ ಅವರನ್ನು ಕಳೆದ ಹತ್ತು ದಿನಗಳಿಂದ ಅಪಹರಿಸಿ ಒತ್ತೆಯಿಟ್ಟುಕೊಂಡಿರುವ ಮಾವೊವಾದಿಗಳು ಗುರುವಾರದೊಳಗೆ (ಏಪ್ರಿಲ್ 5) ತಮ್ಮ ಬೇಡಿಕೆ ಈಡೇರಿಸುವಂತೆ ಸರ್ಕಾರಕ್ಕೆ ಮಂಗಳವಾರ ಗಡುವು ನೀಡಿದ್ದಾರೆ.<br /> <br /> ಮಾವೊವಾದಿಗಳ ಮುಖಂಡ, ಭಾರತ -ಮಾವೊವಾದಿ ಕಮ್ಯೂನಿಸ್ಟ್ ಪಕ್ಷದ ಆಂಧ್ರ - ಒಡಿಶಾ ಗಡಿಯ ವಿಶೇಷ ವಲಯ ಸಮಿತಿಯ ಕಾರ್ಯದರ್ಶಿ `ಚಂದ್ರಮೌಳಿ~ ಎಂದು ಹೇಳಿಕೊಂಡಿರುವ ವ್ಯಕ್ತಿ ಬೇಡಿಕೆ ಕುರಿತಂತೆ ರಾಜಧಾನಿ ಭುವನೇಶ್ವರದ ಹಲವು ಪತ್ರಕರ್ತರಿಗೆ ಧ್ವನಿ ಸಂದೇಶ ರವಾನಿಸಿದ್ದಾನೆ.<br /> <br /> ಸುಳ್ಳು ಆರೋಪದ ಮೇಲೆ ಕೊರಾಪಟ್ ಮತ್ತು ಮಲ್ಕನ್ಗಿರಿ ಜಿಲ್ಲೆಗಳಲ್ಲಿ ಬಂಧಿಸಿರುವ ಚಾಸಿ ಮುಲಿಯಾ ಆದಿವಾಸಿ ಸಂಘದ (ಸಿಎಂಎಎಸ್) ಕಾರ್ಯಕರ್ತರನ್ನು ಸರ್ಕಾರ ಬಿಡುಗಡೆಗೊಳಿಸಬೇಕು ಎಂದು ಬೇಡಿಕೆಯ ಸಂದೇಶದಲ್ಲಿ ಸೂಚಿಸಲಾಗಿದೆ.<br /> <br /> ಬೇಡಿಕೆ ಕುರಿತಂತೆ ಮಾತುಕತೆಗೆ ತಿರಸ್ಕರಿಸಿದರೆ `ನಾವು ಏಪ್ರಿಲ್ 5ದವರೆಗೆ ಗಡುವು ನೀಡುತ್ತೇವೆ~ ಎಂದು ಹೇಳಿರುವ ಮಾವೊ ನಾಯಕ ತನ್ನ ಗುಂಪಿನ ಯಾವುದೇ ಸದಸ್ಯನನ್ನು ಬಿಡುಗಡೆಗೊಳಿಸುವಂತೆ ಹೆಸರಿಸಿಲ್ಲ.<br /> <br /> ಸಿಎಂಎಎಸ್ ಸಂಘಟನೆಯು ಮಾವೊವಾದಿಗಳ ಬೆಂಬಲದಿಂದ ರಾಜ್ಯದ ಕೊರಾಪಟ್ ಮತ್ತು ಮಲ್ಕನ್ಗಿರಿ ಜಿಲ್ಲೆಗಳು ಸೇರಿದಂತೆ ದಕ್ಷಿಣದ ಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.<br /> <br /> ಲಕ್ಷ್ಮೀಪುರ ವಿಧಾನಸಭೆ ಮತಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಿಕಾಕ ಅವರನ್ನು ಕೊರಾಪಟ್ ಜಿಲ್ಲೆಯ ಗುಡ್ಡಗಾಡು ಪ್ರದೇಶದಿಂದ ಮಾರ್ಚ್ 24ರಂದು ಅಪಹರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>