<p><strong>ದೇವದುರ್ಗ: </strong>ಕಳೆದ ದಶಕದ ಹಿಂದೆ ಆರಂಭವಾದ ನಾರಾಯಣಪೂರ ಬಲದಂಡೆ ಯೋಜನೆ ಜಿಲ್ಲೆಯ ರಾಯಚೂರು, ದೇವದುರ್ಗ ಮತ್ತು ಲಿಂಗಸೂಗೂರು ಮೂರು ತಾಲ್ಲೂಕುಗಳ ರೈತರಿಗೆ ಜೀವನಾಡಿ ಆಗಬೇಕಾಗಿದ್ದರೂ ಇಲಾಖೆಯ ಬೇಜವಾಬ್ದಾರಿಯಿಂದಾಗಿ ವರ್ಷಪೂರ್ತಿ ರೈತರು ತೊಂದರೆ ಪಡುವಂತಾಗಿದೆ.<br /> <br /> ಮೂರು ತಾಲ್ಲೂಕುಗಳ ಪೈಕಿ ಯೋಜನೆ ಪ್ರಕಾರ ದೇವದುರ್ಗ ತಾಲ್ಲೂಕು ಶೇ 90ರಷ್ಟು ಪ್ರದೇಶ ನೀರಾವರಿಗೆ ಒಳಪಡುವುದು ರೈತರ ಭಾಗ್ಯವಾಗಿದ್ದರೂ ಕೊನೆ ಭಾಗದ ರೈತರಿಗೆ ನೀರು ದೊರಕದೇ ಕಂಗಾಲಾಗಿದ್ದಾರೆ.<br /> <br /> ಉಪಕಾಲುವೆ 9ರಿಂದ 18ರವೆಗೂ ದೇವದುರ್ಗ ತಾಲ್ಲೂಕಿನಲ್ಲಿ ಕಾಮಗಾರಿ ಮುಗಿದಿದೆ. ರೈತರು ಕಳೆದ ಐದು ವರ್ಷದಿಂದ ನೀರು ಪಡೆಯುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಮಾತ್ರ ಒಂದು ದಿನವೂ ರೈತರ ಕಣ್ಣಿಗೆ ಬಿದ್ದ ಉದಾಹರಣೆ ಇಲ್ಲ. <br /> <br /> ತಾಲ್ಲೂಕಿನ ಅಮರಾಪೂರ ಮತ್ತು ಚಿಕ್ಕಹೊನ್ನಕುಣಿ ಗ್ರಾಮದಲ್ಲಿ ಕೋಟೆಗಟ್ಟಲೇ ಹಣ ಖರ್ಚು ಮಾಡಿ ಇಲಾಖೆಯ ವಿವಿಧ ಕಚೇರಿ ಮತ್ತು ಅಧಿಕಾರಿ, ಸಿಬ್ಬಂದಿಗಳಿಗೆ ವಸತಿಗೃಹಗಳನ್ನು ನಿರ್ಮಿಸಲಾಗಿದ್ದರೂ ಪ್ರಯೋಜನವಾಗಿಲ್ಲ. <br /> <br /> ಪಕ್ಕದ ಶಹಪೂರ, ಕೃಷ್ಣಪೂರ ಮತ್ತು ಯಾದಗಿರ ಪಟ್ಟಣಗಳಲ್ಲಿ ಇಲಾಖೆಯ ಬಹುತೇಕ ಅಧಿಕಾರಿ ಮತ್ತು ಎಂಜಿನಿಯರ್ಗಳು ವಾಸ್ತವ್ಯ ಮಾಡುತ್ತಿರುವುದರಿಂದ ಇಲ್ಲಿನ ರೈತರಿಗೆ ಇನ್ನಿಲ್ಲದ ತೊಂದರೆ ಎದುರಾಗಿದ್ದು, ಕಚೇರಿಗಳು ಬಿಕೋ ಎನ್ನುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದೇವದುರ್ಗ: </strong>ಕಳೆದ ದಶಕದ ಹಿಂದೆ ಆರಂಭವಾದ ನಾರಾಯಣಪೂರ ಬಲದಂಡೆ ಯೋಜನೆ ಜಿಲ್ಲೆಯ ರಾಯಚೂರು, ದೇವದುರ್ಗ ಮತ್ತು ಲಿಂಗಸೂಗೂರು ಮೂರು ತಾಲ್ಲೂಕುಗಳ ರೈತರಿಗೆ ಜೀವನಾಡಿ ಆಗಬೇಕಾಗಿದ್ದರೂ ಇಲಾಖೆಯ ಬೇಜವಾಬ್ದಾರಿಯಿಂದಾಗಿ ವರ್ಷಪೂರ್ತಿ ರೈತರು ತೊಂದರೆ ಪಡುವಂತಾಗಿದೆ.<br /> <br /> ಮೂರು ತಾಲ್ಲೂಕುಗಳ ಪೈಕಿ ಯೋಜನೆ ಪ್ರಕಾರ ದೇವದುರ್ಗ ತಾಲ್ಲೂಕು ಶೇ 90ರಷ್ಟು ಪ್ರದೇಶ ನೀರಾವರಿಗೆ ಒಳಪಡುವುದು ರೈತರ ಭಾಗ್ಯವಾಗಿದ್ದರೂ ಕೊನೆ ಭಾಗದ ರೈತರಿಗೆ ನೀರು ದೊರಕದೇ ಕಂಗಾಲಾಗಿದ್ದಾರೆ.<br /> <br /> ಉಪಕಾಲುವೆ 9ರಿಂದ 18ರವೆಗೂ ದೇವದುರ್ಗ ತಾಲ್ಲೂಕಿನಲ್ಲಿ ಕಾಮಗಾರಿ ಮುಗಿದಿದೆ. ರೈತರು ಕಳೆದ ಐದು ವರ್ಷದಿಂದ ನೀರು ಪಡೆಯುತ್ತಿದ್ದರೂ ಇಲಾಖೆಯ ಅಧಿಕಾರಿಗಳು ಮಾತ್ರ ಒಂದು ದಿನವೂ ರೈತರ ಕಣ್ಣಿಗೆ ಬಿದ್ದ ಉದಾಹರಣೆ ಇಲ್ಲ. <br /> <br /> ತಾಲ್ಲೂಕಿನ ಅಮರಾಪೂರ ಮತ್ತು ಚಿಕ್ಕಹೊನ್ನಕುಣಿ ಗ್ರಾಮದಲ್ಲಿ ಕೋಟೆಗಟ್ಟಲೇ ಹಣ ಖರ್ಚು ಮಾಡಿ ಇಲಾಖೆಯ ವಿವಿಧ ಕಚೇರಿ ಮತ್ತು ಅಧಿಕಾರಿ, ಸಿಬ್ಬಂದಿಗಳಿಗೆ ವಸತಿಗೃಹಗಳನ್ನು ನಿರ್ಮಿಸಲಾಗಿದ್ದರೂ ಪ್ರಯೋಜನವಾಗಿಲ್ಲ. <br /> <br /> ಪಕ್ಕದ ಶಹಪೂರ, ಕೃಷ್ಣಪೂರ ಮತ್ತು ಯಾದಗಿರ ಪಟ್ಟಣಗಳಲ್ಲಿ ಇಲಾಖೆಯ ಬಹುತೇಕ ಅಧಿಕಾರಿ ಮತ್ತು ಎಂಜಿನಿಯರ್ಗಳು ವಾಸ್ತವ್ಯ ಮಾಡುತ್ತಿರುವುದರಿಂದ ಇಲ್ಲಿನ ರೈತರಿಗೆ ಇನ್ನಿಲ್ಲದ ತೊಂದರೆ ಎದುರಾಗಿದ್ದು, ಕಚೇರಿಗಳು ಬಿಕೋ ಎನ್ನುತ್ತಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>