<p>ರೈಲ್ವೆ ಖಾತೆಯ ಸಚಿವರ ಬದಲಾವಣೆ ಆಡಳಿತ ನಡೆಸುತ್ತಿರುವ ಮೈತ್ರಿಕೂಟಕ್ಕಷ್ಟೇ ಸೀಮಿತವಾದ ವಿದ್ಯಮಾನವಲ್ಲ. ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರ ರಾಜೀನಾಮೆ ನೀಡುವಂತಹ ಪರಿಸ್ಥಿತಿ ಉದ್ಭವವಾಗಲು ಕಾರಣ ಬಜೆಟ್ನಲ್ಲಿ ಅವರು ಮಾಡಿರುವ ಪ್ರಯಾಣದರ ಏರಿಕೆಯ ಪ್ರಸ್ತಾಪ.<br /> <br /> ಇದನ್ನು ವಿರೋಧಿಸಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಪ್ರಧಾನಿಯ ಮೇಲೆ ಒತ್ತಡ ಹೇರಿ ರೈಲ್ವೆ ಸಚಿವರನ್ನೇ ಬದಲಾಯಿಸಿದ್ದಾರೆ. ಅವರ ಸೇಡು ಸಚಿವರ ಬದಲಾವಣೆಯಿಂದಷ್ಟೇ ಶಮನಗೊಳ್ಳುವಂತೆ ಕಾಣುತ್ತಿಲ್ಲ. ಪ್ರಯಾಣ ದರ ಏರಿಕೆಯನ್ನೂ ಹಿಂದಕ್ಕೆ ಪಡೆಯುವಂತೆ ಅವರು ಪ್ರಧಾನಿಯವರ ಮೇಲೆ ಒತ್ತಡ ಹೇರುತ್ತಿದ್ದಾರೆ.</p>.<p> ಇದು ಜನವಿರೋಧಿ ರಾಜಕಾರಣ. ಬಜೆಟ್ಗೆ ಅದರದ್ದೇ ಆಗಿರುವ ಪಾವಿತ್ರ್ಯ ಇದೆ, ಅದನ್ನು ಮಂಡಿಸುವ ಸಚಿವರಿಗೆ ದೇಶದ ಹಿತಾಸಕ್ತಿ ಮುಖ್ಯವಾಗಬೇಕೇ ಹೊರತು, ಯಾವುದೋ ಒಂದು ರಾಜಕೀಯ ಪಕ್ಷದ ನೀತಿ-ನಿರ್ಧಾರಗಳಲ್ಲ.<br /> <br /> ಹಿಂದಿನ ರೈಲ್ವೆ ಸಚಿವರ ಜನಪ್ರಿಯತೆಯ ಖಯಾಲಿಯಿಂದಾಗಿ ಈ ಇಲಾಖೆ ಸಂಪೂರ್ಣವಾಗಿ ಸೊರಗಿ ಹೋಗಿದೆ. ಪ್ರತಿವರ್ಷ ನೂರಾರು ಪ್ರಯಾಣಿಕರ ಸಾವಿಗೆ ಕಾರಣವಾಗಿರುವ ಬ್ರಿಟಿಷರ ಕಾಲದ ಸುರಕ್ಷತಾ ವ್ಯವಸ್ಥೆ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.<br /> <br /> ಜನರ ಬೇಡಿಕೆಗೆ ಅನುಗುಣವಾಗಿ ಹೊಸ ರೈಲು ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ದೂರವೇ ಉಳಿಯಿತು, ಈಗ ಇರುವ ವ್ಯವಸ್ಥೆಯ ನಿರ್ವಹಣೆಯನ್ನೂ ಮಾಡಲಾಗದ ದಿವಾಳಿ ಸ್ಥಿತಿಗೆ ರೈಲ್ವೆ ಇಲಾಖೆ ತಲುಪಿದೆ. ಹೆಚ್ಚುವರಿ ಸಂಪನ್ಮೂಲವನ್ನು ಕ್ರೋಡೀಕರಿಸದೆ ರೈಲ್ವೆ ಇಲಾಖೆಯ ಸುಧಾರಣೆ ಅಸಾಧ್ಯ. <br /> <br /> ಈ ವಾಸ್ತವವನ್ನು ಅರ್ಥಮಾಡಿಕೊಂಡ ಕಾರಣದಿಂದಾಗಿಯೇ ದಿನೇಶ್ ತ್ರಿವೇದಿ ಪ್ರಯಾಣ ದರ ಏರಿಕೆ ಮೂಲಕ 4000 ಕೋಟಿ ರೂಪಾಯಿಗಳ ಹೆಚ್ಚುವರಿ ಆದಾಯವನ್ನು ಸಂಗ್ರಹಿಸುವ ಪ್ರಸ್ತಾಪ ಮಾಡಿದ್ದು.</p>.<p><br /> ಆದರೆ ಜನಪ್ರಿಯತೆಯ ವ್ಯಸನಕ್ಕೆ ಬಿದ್ದಿರುವ ಮಮತಾ ಬ್ಯಾನರ್ಜಿ ಇದನ್ನು ಒಪ್ಪುವ ಸಂಭವ ಕಡಿಮೆ. ಸಚಿವ ತ್ರಿವೇದಿಯವರು ಬಜೆಟ್ ಭಾಷಣದಲ್ಲಿ ಎರಡು ಸಮಿತಿಗಳ ವರದಿಗಳನ್ನು ಉಲ್ಲೇಖಿಸಿದ್ದಾರೆ.<br /> <br /> ಅವುಗಳಲ್ಲೊಂದಾದ ಡಾ. ಅನಿಲ್ ಕಾಕೋಡ್ಕರ್ ಅಧ್ಯಕ್ಷತೆಯ ಸಮಿತಿ, `ರೈಲ್ವೆ ಇಲಾಖೆಯ ಆರ್ಥಿಕ ಸ್ಥಿತಿಯ ಸುಧಾರಣೆಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಬೇಕಾಗಿದೆ~ ಎಂದು ವರದಿ ನೀಡಿದೆ.<br /> <br /> ರೈಲ್ವೆ ಸುರಕ್ಷತೆಯ ಬಗ್ಗೆ ಅಧ್ಯಯನ ನಡೆಸಿದ್ದ ಸ್ಯಾಮ್ ಪಿತ್ರೊಡಾ ಸಮಿತಿ `ಸುರಕ್ಷತಾ ವ್ಯವಸ್ಥೆ ಸುಧಾರಣೆಗಾಗಿ ಮುಂದಿನ ಐದುವರ್ಷಗಳ ಅವಧಿಯಲ್ಲಿ ಕನಿಷ್ಠ 5.6 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬೇಕಾಗಿದೆ~ ಎಂದು ಹೇಳಿದೆ. <br /> <br /> ರೈಲ್ವೆ ಇಲಾಖೆಯ ಈಗಿನ ಆದಾಯದಿಂದ ಈ ಸಮಿತಿಗಳ ವರದಿಗಳನ್ನು ಅನುಷ್ಠಾನಕ್ಕೆ ತರುವುದು ಅಸಾಧ್ಯ. ಪ್ರಯಾಣ ದರದ ಏರಿಕೆಯನ್ನು ಜನತೆ ಕೂಡಾ ಒಪ್ಪಿಕೊಂಡಿದೆ. ಉತ್ತಮ ಸೇವೆಯನ್ನು ಪಡೆಯಲು ರೈಲ್ವೆ ಇಲಾಖೆಯ ಸುಧಾರಣೆಯ ಅಗತ್ಯ ಇದೆ ಎಂದು ಅವರಿಗೂ ಅರಿವಾಗಿದೆ. ಆದ್ದರಿಂದಲೇ ಎಲ್ಲಿಯೂ ವಿರೋಧದ ಸೊಲ್ಲು ಕೇಳಿ ಬಂದಿಲ್ಲ. <br /> <br /> ಪ್ರಧಾನಿಯವರು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಈ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಮಿತ್ರಪಕ್ಷದ ಒತ್ತಡ ತಂತ್ರಕ್ಕೆ ಬಲಿಯಾಗಿ ರೈಲ್ವೆ ಇಲಾಖೆಯ ಸುಧಾರಣೆಗೆ ಒದಗಿಬಂದಿರುವ ಅಪೂರ್ವ ಅವಕಾಶವನ್ನು ಕಳೆದುಕೊಳ್ಳಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರೈಲ್ವೆ ಖಾತೆಯ ಸಚಿವರ ಬದಲಾವಣೆ ಆಡಳಿತ ನಡೆಸುತ್ತಿರುವ ಮೈತ್ರಿಕೂಟಕ್ಕಷ್ಟೇ ಸೀಮಿತವಾದ ವಿದ್ಯಮಾನವಲ್ಲ. ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರ ರಾಜೀನಾಮೆ ನೀಡುವಂತಹ ಪರಿಸ್ಥಿತಿ ಉದ್ಭವವಾಗಲು ಕಾರಣ ಬಜೆಟ್ನಲ್ಲಿ ಅವರು ಮಾಡಿರುವ ಪ್ರಯಾಣದರ ಏರಿಕೆಯ ಪ್ರಸ್ತಾಪ.<br /> <br /> ಇದನ್ನು ವಿರೋಧಿಸಿದ್ದ ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಪ್ರಧಾನಿಯ ಮೇಲೆ ಒತ್ತಡ ಹೇರಿ ರೈಲ್ವೆ ಸಚಿವರನ್ನೇ ಬದಲಾಯಿಸಿದ್ದಾರೆ. ಅವರ ಸೇಡು ಸಚಿವರ ಬದಲಾವಣೆಯಿಂದಷ್ಟೇ ಶಮನಗೊಳ್ಳುವಂತೆ ಕಾಣುತ್ತಿಲ್ಲ. ಪ್ರಯಾಣ ದರ ಏರಿಕೆಯನ್ನೂ ಹಿಂದಕ್ಕೆ ಪಡೆಯುವಂತೆ ಅವರು ಪ್ರಧಾನಿಯವರ ಮೇಲೆ ಒತ್ತಡ ಹೇರುತ್ತಿದ್ದಾರೆ.</p>.<p> ಇದು ಜನವಿರೋಧಿ ರಾಜಕಾರಣ. ಬಜೆಟ್ಗೆ ಅದರದ್ದೇ ಆಗಿರುವ ಪಾವಿತ್ರ್ಯ ಇದೆ, ಅದನ್ನು ಮಂಡಿಸುವ ಸಚಿವರಿಗೆ ದೇಶದ ಹಿತಾಸಕ್ತಿ ಮುಖ್ಯವಾಗಬೇಕೇ ಹೊರತು, ಯಾವುದೋ ಒಂದು ರಾಜಕೀಯ ಪಕ್ಷದ ನೀತಿ-ನಿರ್ಧಾರಗಳಲ್ಲ.<br /> <br /> ಹಿಂದಿನ ರೈಲ್ವೆ ಸಚಿವರ ಜನಪ್ರಿಯತೆಯ ಖಯಾಲಿಯಿಂದಾಗಿ ಈ ಇಲಾಖೆ ಸಂಪೂರ್ಣವಾಗಿ ಸೊರಗಿ ಹೋಗಿದೆ. ಪ್ರತಿವರ್ಷ ನೂರಾರು ಪ್ರಯಾಣಿಕರ ಸಾವಿಗೆ ಕಾರಣವಾಗಿರುವ ಬ್ರಿಟಿಷರ ಕಾಲದ ಸುರಕ್ಷತಾ ವ್ಯವಸ್ಥೆ ಇಲಾಖೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.<br /> <br /> ಜನರ ಬೇಡಿಕೆಗೆ ಅನುಗುಣವಾಗಿ ಹೊಸ ರೈಲು ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ದೂರವೇ ಉಳಿಯಿತು, ಈಗ ಇರುವ ವ್ಯವಸ್ಥೆಯ ನಿರ್ವಹಣೆಯನ್ನೂ ಮಾಡಲಾಗದ ದಿವಾಳಿ ಸ್ಥಿತಿಗೆ ರೈಲ್ವೆ ಇಲಾಖೆ ತಲುಪಿದೆ. ಹೆಚ್ಚುವರಿ ಸಂಪನ್ಮೂಲವನ್ನು ಕ್ರೋಡೀಕರಿಸದೆ ರೈಲ್ವೆ ಇಲಾಖೆಯ ಸುಧಾರಣೆ ಅಸಾಧ್ಯ. <br /> <br /> ಈ ವಾಸ್ತವವನ್ನು ಅರ್ಥಮಾಡಿಕೊಂಡ ಕಾರಣದಿಂದಾಗಿಯೇ ದಿನೇಶ್ ತ್ರಿವೇದಿ ಪ್ರಯಾಣ ದರ ಏರಿಕೆ ಮೂಲಕ 4000 ಕೋಟಿ ರೂಪಾಯಿಗಳ ಹೆಚ್ಚುವರಿ ಆದಾಯವನ್ನು ಸಂಗ್ರಹಿಸುವ ಪ್ರಸ್ತಾಪ ಮಾಡಿದ್ದು.</p>.<p><br /> ಆದರೆ ಜನಪ್ರಿಯತೆಯ ವ್ಯಸನಕ್ಕೆ ಬಿದ್ದಿರುವ ಮಮತಾ ಬ್ಯಾನರ್ಜಿ ಇದನ್ನು ಒಪ್ಪುವ ಸಂಭವ ಕಡಿಮೆ. ಸಚಿವ ತ್ರಿವೇದಿಯವರು ಬಜೆಟ್ ಭಾಷಣದಲ್ಲಿ ಎರಡು ಸಮಿತಿಗಳ ವರದಿಗಳನ್ನು ಉಲ್ಲೇಖಿಸಿದ್ದಾರೆ.<br /> <br /> ಅವುಗಳಲ್ಲೊಂದಾದ ಡಾ. ಅನಿಲ್ ಕಾಕೋಡ್ಕರ್ ಅಧ್ಯಕ್ಷತೆಯ ಸಮಿತಿ, `ರೈಲ್ವೆ ಇಲಾಖೆಯ ಆರ್ಥಿಕ ಸ್ಥಿತಿಯ ಸುಧಾರಣೆಗೆ ಸುಮಾರು ಒಂದು ಲಕ್ಷ ಕೋಟಿ ರೂಪಾಯಿ ಬೇಕಾಗಿದೆ~ ಎಂದು ವರದಿ ನೀಡಿದೆ.<br /> <br /> ರೈಲ್ವೆ ಸುರಕ್ಷತೆಯ ಬಗ್ಗೆ ಅಧ್ಯಯನ ನಡೆಸಿದ್ದ ಸ್ಯಾಮ್ ಪಿತ್ರೊಡಾ ಸಮಿತಿ `ಸುರಕ್ಷತಾ ವ್ಯವಸ್ಥೆ ಸುಧಾರಣೆಗಾಗಿ ಮುಂದಿನ ಐದುವರ್ಷಗಳ ಅವಧಿಯಲ್ಲಿ ಕನಿಷ್ಠ 5.6 ಲಕ್ಷ ಕೋಟಿ ರೂಪಾಯಿ ಖರ್ಚು ಮಾಡಬೇಕಾಗಿದೆ~ ಎಂದು ಹೇಳಿದೆ. <br /> <br /> ರೈಲ್ವೆ ಇಲಾಖೆಯ ಈಗಿನ ಆದಾಯದಿಂದ ಈ ಸಮಿತಿಗಳ ವರದಿಗಳನ್ನು ಅನುಷ್ಠಾನಕ್ಕೆ ತರುವುದು ಅಸಾಧ್ಯ. ಪ್ರಯಾಣ ದರದ ಏರಿಕೆಯನ್ನು ಜನತೆ ಕೂಡಾ ಒಪ್ಪಿಕೊಂಡಿದೆ. ಉತ್ತಮ ಸೇವೆಯನ್ನು ಪಡೆಯಲು ರೈಲ್ವೆ ಇಲಾಖೆಯ ಸುಧಾರಣೆಯ ಅಗತ್ಯ ಇದೆ ಎಂದು ಅವರಿಗೂ ಅರಿವಾಗಿದೆ. ಆದ್ದರಿಂದಲೇ ಎಲ್ಲಿಯೂ ವಿರೋಧದ ಸೊಲ್ಲು ಕೇಳಿ ಬಂದಿಲ್ಲ. <br /> <br /> ಪ್ರಧಾನಿಯವರು ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಈ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಮಿತ್ರಪಕ್ಷದ ಒತ್ತಡ ತಂತ್ರಕ್ಕೆ ಬಲಿಯಾಗಿ ರೈಲ್ವೆ ಇಲಾಖೆಯ ಸುಧಾರಣೆಗೆ ಒದಗಿಬಂದಿರುವ ಅಪೂರ್ವ ಅವಕಾಶವನ್ನು ಕಳೆದುಕೊಳ್ಳಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>