<p>ಶ್ರೀ ಪೇಜಾವರ ತೀರ್ಥರನ್ನೂ ಒಳಗೊಂಡಂತೆ, ಉಡುಪಿ ಅಷ್ಟಮಠಾಧೀಶರ ಆಲೋಚನಾ ವೈಖರಿ ಯಾವ ಶತಮಾನದ್ದೆಂದು ಪ್ರಜ್ಞಾವಂತರು ಪ್ರಶ್ನಿಸುವಂತಿದೆ. ಈ ಮಠಗಳ ಕಾರ್ಯ ಪ್ರದರ್ಶನ ಶ್ರೀಕೃಷ್ಣ ದೇಗುಲದ ಕಿಂಡಿಯನ್ನು `ಕನಕನ ಕಿಂಡಿ~ ಎಂದೇ ಕರೆದರೆ ಸಂತ ಕನಕದಾಸರ ಅಂಕಿತ ಬ್ರಾಹ್ಮಣರ ದೇಗುಲದ ಮೇಲೆ ಬೀಳುವುದೆಂಬ ಭಯವೆ, ಇಲ್ಲ ಜಾತ್ಯಂಧತೆಯೇ ತಿಳಿಯದು. ನಾವೆಲ್ಲ ನಮ್ಮ ಎಳೆತನದಲ್ಲಿ ಹಿರಿಯರ ಬಾಯಲ್ಲಿ ಕೇಳಿದ್ದು `ಕನಕನ~ ಕಿಂಡಿಯೊಂದೆ.<br /> ಈಗ ಪೇಜಾವರ ಶ್ರೀಗಳ ಕೃಪಾವಿಶೇಷದಿಂದ ನವಗ್ರಹಗಳು ಬೇರೆ ಕಿಂಡಿಯೊಳಗೆ ತೂರಿಬಂದಿವೆ. ಈ ಕನಕ ನವಗ್ರಹ ಜೋಡಿ ಫೆವಿಕಾಲ್ನಂತೆ ಅಂಟಿಕೊಳ್ಳುವ ಮೊದಲೆ ನವಗ್ರಹ ಕಿಂಡಿಯ ಔಚಿತ್ಯ, ವೈಶಿಷ್ಟ್ಯವನ್ನು ತಿಳಿಯಬೇಕಾಗಿದೆ. ಈ ಕಿಂಡಿಯ ಮೂಲಕ ಗ್ರಹ ವೀಕ್ಷಣೆ (ಯಾ ದರ್ಶನ) ಮಾಡಿದರೇನೇ ಗ್ರಹಪೀಡಾ ಪರಿಹಾರವೇ ಹೇಗೆ? ಇವುಗಳನ್ನು ಪ್ರತ್ಯೇಕವಾಗಿ ದರ್ಶಿಸಿ, ಕನಕನ ಕಿಂಡಿಯೊಂದನ್ನೆ ಪ್ರತ್ಯೇಕವಾಗಿ ದರ್ಶಿಸುವ ವ್ಯವಸ್ಥೆ ಇಲ್ಲವೆ?<br /> <br /> ಶ್ರೀ ವೃಷ್ಣವ ದೇವಾಲಯಗಳಲ್ಲಿ ಹತ್ತೂ ಆಳ್ವಾರರುಗಳ ವಿಗ್ರಹಗಳೂ ಇರುವುದು ಬ್ರಾಹ್ಮಣೇತರ ತತ್ರಾಪಿ ದಲಿತ ಶ್ರೀ ವೈಷ್ಣವ ಭಕ್ತರ ನೆನಪಿನಲ್ಲೆ (ಪೆರಿಯಾಳ್ವಾರ ಆಂಡಾಳ್ ಹೊರತುಪಡಿಸಿ) ಈ ವಿಗ್ರಹಗಳಿಗೆ ಇಂದಿಗೂ ಪೂಜಾಕೈಂಕರ್ಯ ನಿರುಪಾಧಿಕವಾಗಿ ನಡೆದಿದೆ.<br /> <br /> ಮೇಲುಕೋಟೆಯಲ್ಲಿ ಭಗವದ್ರಾಮಾನುಜರು ಪ್ರತಿಷ್ಠಾಪಿಸಿದ ಬೀಬಾನಾಚ್ಚಿಯಾರ್ ಸನ್ನಿಧಿ ಮುಸ್ಲಿಂ ರಾಜಕುವರಿಯ ನೆನಪಿಗಾಗಿ, ಆಕೆ ವಿಷ್ಣುಭಕ್ತೆ ಎಂಬ ಕಾರಣಕ್ಕಾಗಿ ಐತಿಹಾಸಿಕ, ಚಾರಿತ್ರಿಕ ಸತ್ಯಾಂಶಗಳು ನಮ್ಮೆದುರು ಇದ್ದೂ ಅವನ್ನು ಧಿಕ್ಕರಿಸಿ ಸಂತ ಕನಕದಾಸರನ್ನು ಎಲ್ಲೋ ಒಂದು ಕಡೆ ಈ ಮಠಗಳು ಉಪೇಕ್ಷಾಭಾವದಿಂದ ಕಾಣುತ್ತಿವೆ ಎಂದು ನನ್ನ ಗುಮಾನಿ. ಈ ವ್ಯವಸ್ಥೆಯಲ್ಲಿ ಪುರೋಗಾಮಿ ಚಿಂತನೆಗೆ ಆಸ್ಪದವೇ ಇಲ್ಲವೆ?<br /> .</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀ ಪೇಜಾವರ ತೀರ್ಥರನ್ನೂ ಒಳಗೊಂಡಂತೆ, ಉಡುಪಿ ಅಷ್ಟಮಠಾಧೀಶರ ಆಲೋಚನಾ ವೈಖರಿ ಯಾವ ಶತಮಾನದ್ದೆಂದು ಪ್ರಜ್ಞಾವಂತರು ಪ್ರಶ್ನಿಸುವಂತಿದೆ. ಈ ಮಠಗಳ ಕಾರ್ಯ ಪ್ರದರ್ಶನ ಶ್ರೀಕೃಷ್ಣ ದೇಗುಲದ ಕಿಂಡಿಯನ್ನು `ಕನಕನ ಕಿಂಡಿ~ ಎಂದೇ ಕರೆದರೆ ಸಂತ ಕನಕದಾಸರ ಅಂಕಿತ ಬ್ರಾಹ್ಮಣರ ದೇಗುಲದ ಮೇಲೆ ಬೀಳುವುದೆಂಬ ಭಯವೆ, ಇಲ್ಲ ಜಾತ್ಯಂಧತೆಯೇ ತಿಳಿಯದು. ನಾವೆಲ್ಲ ನಮ್ಮ ಎಳೆತನದಲ್ಲಿ ಹಿರಿಯರ ಬಾಯಲ್ಲಿ ಕೇಳಿದ್ದು `ಕನಕನ~ ಕಿಂಡಿಯೊಂದೆ.<br /> ಈಗ ಪೇಜಾವರ ಶ್ರೀಗಳ ಕೃಪಾವಿಶೇಷದಿಂದ ನವಗ್ರಹಗಳು ಬೇರೆ ಕಿಂಡಿಯೊಳಗೆ ತೂರಿಬಂದಿವೆ. ಈ ಕನಕ ನವಗ್ರಹ ಜೋಡಿ ಫೆವಿಕಾಲ್ನಂತೆ ಅಂಟಿಕೊಳ್ಳುವ ಮೊದಲೆ ನವಗ್ರಹ ಕಿಂಡಿಯ ಔಚಿತ್ಯ, ವೈಶಿಷ್ಟ್ಯವನ್ನು ತಿಳಿಯಬೇಕಾಗಿದೆ. ಈ ಕಿಂಡಿಯ ಮೂಲಕ ಗ್ರಹ ವೀಕ್ಷಣೆ (ಯಾ ದರ್ಶನ) ಮಾಡಿದರೇನೇ ಗ್ರಹಪೀಡಾ ಪರಿಹಾರವೇ ಹೇಗೆ? ಇವುಗಳನ್ನು ಪ್ರತ್ಯೇಕವಾಗಿ ದರ್ಶಿಸಿ, ಕನಕನ ಕಿಂಡಿಯೊಂದನ್ನೆ ಪ್ರತ್ಯೇಕವಾಗಿ ದರ್ಶಿಸುವ ವ್ಯವಸ್ಥೆ ಇಲ್ಲವೆ?<br /> <br /> ಶ್ರೀ ವೃಷ್ಣವ ದೇವಾಲಯಗಳಲ್ಲಿ ಹತ್ತೂ ಆಳ್ವಾರರುಗಳ ವಿಗ್ರಹಗಳೂ ಇರುವುದು ಬ್ರಾಹ್ಮಣೇತರ ತತ್ರಾಪಿ ದಲಿತ ಶ್ರೀ ವೈಷ್ಣವ ಭಕ್ತರ ನೆನಪಿನಲ್ಲೆ (ಪೆರಿಯಾಳ್ವಾರ ಆಂಡಾಳ್ ಹೊರತುಪಡಿಸಿ) ಈ ವಿಗ್ರಹಗಳಿಗೆ ಇಂದಿಗೂ ಪೂಜಾಕೈಂಕರ್ಯ ನಿರುಪಾಧಿಕವಾಗಿ ನಡೆದಿದೆ.<br /> <br /> ಮೇಲುಕೋಟೆಯಲ್ಲಿ ಭಗವದ್ರಾಮಾನುಜರು ಪ್ರತಿಷ್ಠಾಪಿಸಿದ ಬೀಬಾನಾಚ್ಚಿಯಾರ್ ಸನ್ನಿಧಿ ಮುಸ್ಲಿಂ ರಾಜಕುವರಿಯ ನೆನಪಿಗಾಗಿ, ಆಕೆ ವಿಷ್ಣುಭಕ್ತೆ ಎಂಬ ಕಾರಣಕ್ಕಾಗಿ ಐತಿಹಾಸಿಕ, ಚಾರಿತ್ರಿಕ ಸತ್ಯಾಂಶಗಳು ನಮ್ಮೆದುರು ಇದ್ದೂ ಅವನ್ನು ಧಿಕ್ಕರಿಸಿ ಸಂತ ಕನಕದಾಸರನ್ನು ಎಲ್ಲೋ ಒಂದು ಕಡೆ ಈ ಮಠಗಳು ಉಪೇಕ್ಷಾಭಾವದಿಂದ ಕಾಣುತ್ತಿವೆ ಎಂದು ನನ್ನ ಗುಮಾನಿ. ಈ ವ್ಯವಸ್ಥೆಯಲ್ಲಿ ಪುರೋಗಾಮಿ ಚಿಂತನೆಗೆ ಆಸ್ಪದವೇ ಇಲ್ಲವೆ?<br /> .</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>