<p>ಗಂಗಾವತಿ: ಐತಿಹಾಸಿಕ ಕನಕಗಿರಿಯ ಆರಾಧ್ಯದೈವ, ನೂರಾರು ವರ್ಷಗಳಿಂದ ಕೋಟ್ಯಂತರ ಭಕ್ತರ ಅಭೀಷ್ಟಗಳನ್ನು ಪೂರೈಸುತ್ತಿರುವ ಸುವರ್ಣಗಿರಿಯ ಒಡೆಯ ಕನಕಾಚಲಪತಿ ಇನ್ನು ಮುಂದೆ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಬಂಧಿಯಾಗಲಿದ್ದಾನೆ.<br /> <br /> ಕನಕಚಾಲ ತಾನು ಮಾಡಿದ ಯಾವುದೋ ತಪ್ಪಿಗಾಗಿ ಬಂಧನದ ಭೀತಿ ಎದುರಿಸುತ್ತಿಲ್ಲ, ಬದಲಿಗೆ ಆತನಿಗೆ ಹೆಚ್ಚಿನ ಭದ್ರತೆ ಮತ್ತು ಭಕ್ತರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ದೇವಸ್ಥಾನಕ್ಕೆ ಸಿಸಿ ಕ್ಯಾಮೆರಾ ಅಳವಡಿಸುವ ಚಿಂತನೆ ನಡೆಸಿದೆ. <br /> <br /> ದೇವಸ್ಥಾನದ ಆವರಣದಲ್ಲಿನ ವಿವಿಧ ಭಾಗದಲ್ಲಿ ಸುಮಾರು ಹತ್ತು ಸಿ.ಸಿ. ಕ್ಯಾಮರಗಳನ್ನು ಅಳವಡಿಸುವ ಕಾಮಗಾರಿಗೆ ಈಗಾಗಲೆ ಟೆಂಡರ್ ಕಾರ್ಯ ಪೂರ್ಣಗೊಂಡಿದೆ. ಕಡತ ಜಿಲ್ಲಾಧಿಕಾರಿಗಳ ಅನುಮೋದನೆಗಾಗಿ ಕಾಯ್ದು ಕುಳಿತಿದೆ. <br /> <br /> ಎರಡನೆ ದೇವಸ್ಥಾನ: ಧಾರ್ಮಿಕ ಕ್ಷೇತ್ರ, ದೇವಸ್ಥಾನ, ಪ್ರಾರ್ಥನಾ ಮಂದಿರ ಗುಡಿ, ಗುಂಡಾರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಕಳ್ಳತನ, ವಿಗ್ರಹ ಧ್ವಂಸ ಮತ್ತಿತರ ಅಹಿತಕರ ಘಟನೆ ತಡೆಯುವ ಉದ್ದೇಶಕ್ಕೆ ಮುಜರಾಯಿ ಇಲಾಖೆ ಮುಂದಾಗಿದೆ. <br /> <br /> ಈ ಹಿನ್ನೆಲೆ ಇಲಾಖೆಯ ವ್ಯಾಪ್ತಿಗೆ ಬರುವ ಹಾಗೂ ಸ್ವಂತ ಆದಾಯದ ಮೂಲದಿಂದ ಅಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಶಕ್ತ ಇರುವ ದೇವಸ್ಥಾನಗಳು ಸಿಸಿ ಕ್ಯಾಮರ ಅಳವಡಿಸಿಕೊಳ್ಳುವಂತೆ ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶ ನೀಡಿದೆ. <br /> <br /> ಈ ಹಿನ್ನೆಲೆ ಗಂಗಾವತಿ ತಹಸೀಲ್ದಾರರು ಕನಕಗಿರಿಯ ಕನಕಾಚಲಪತಿ ದೇವಸ್ಥಾನಕ್ಕೆ ಸಿಸಿ ಕ್ಯಾಮರ ಅಳವಡಿಸುವ ಚಿಂತನೆ ನಡೆಸಿ ಕಾರ್ಯ ಪ್ರವೃತ್ತರಾಗಿದ್ದಾರೆ. ಕೊಪ್ಪಳದ ಹುಲಿಗಿ ಬಳಿಕ ಸಿಸಿ ಕ್ಯಾಮರ ಅಳವಡಿಸಿಕೊಳ್ಳುತ್ತಿರುವ ಕೊಪ್ಪಳ ಜಿಲ್ಲೆಯ ಎರಡನೇ ದೇವಸ್ಥಾನ ಕನಕಗಿರಿ.<br /> <br /> ಹತ್ತು ಸಿ.ಸಿ. ಕ್ಯಾಮರ: ದೇವಾಲಯದ ಮುಖ್ಯದ್ವಾರ, ದೇವರ ಗರ್ಭಗುಡಿ, ಹುಂಡಿ ಸ್ಥಳ, ದರ್ಶನಕ್ಕೆ ಬರುವ ಭಕ್ತರು ಸಾಲು, ದೇವಸ್ಥಾನದ ಹೊರನೋಟ, ಸೇವಾ ಚೀಟಿ, ದಾಸೋಹ ಶಾಲೆ ಹೀಗೆ ನಾನಾ ಭಾಗಗಳು ಸ್ಪಷ್ಟವಾಗಿ ಕಾಣುವಂತೆ ಸಿಸಿ ಕ್ಯಾಮರ ಅಳವಡಿಸುವ ಯೋಜನೆ ಸಿದ್ಧಪಡಿಸಲಾಗಿದೆ. <br /> <br /> ಹುಂಡಿ ಮತ್ತು ಗರ್ಭಗುಡಿ ರಾತ್ರಿಯೂ ಕಾಣುವಂತೆ ಇನ್ಪ್ರಾರೆಡ್ ತಂತ್ರಜ್ಞಾನದ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿ ಆಡಳಿತಾಧಿಕಾರಿ/ಮೇಲ್ವಿಚಾರಕರ ಕೊಠಡಿಯಲ್ಲಿ ಈ ಎಲ್ಲವನ್ನು ವೀಕ್ಷಿಸಲು ಎಲ್ಇಡಿ ಟಿ.ವಿ. ಸ್ಥಾಪಿಸುವ ಯೋಜನೆ ಇದೆ. <br /> <br /> ಕಾರಟಗಿಯ ವೆಂಕಟೇಶ್ವರ, ಆನೆಗೊಂದಿಯ ರಂಗನಾಥ, ಪಂಪಾಸರೋವರದ ಜಯಲಕ್ಷ್ಮಿ, ನವಲಿಯ ಭೋಗಾಪುರೇಶ, ಹಿರೇಜಂತಕಲ್ ಪಂಪಾಪತಿಗೂ ಸಿ.ಸಿ. ಕ್ಯಾಮರದ ಯೋಗವಿತ್ತು. ಆದರೆ ಆರ್ಥಿಕವಾಗಿ ಸಬಲರಲ್ಲ ಎಂಬ ಕಾರಣಕ್ಕೆ ಕ್ಯಾಮರದ ಕಣ್ಣಿನಿಂದ ತಪ್ಪಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಗಂಗಾವತಿ: ಐತಿಹಾಸಿಕ ಕನಕಗಿರಿಯ ಆರಾಧ್ಯದೈವ, ನೂರಾರು ವರ್ಷಗಳಿಂದ ಕೋಟ್ಯಂತರ ಭಕ್ತರ ಅಭೀಷ್ಟಗಳನ್ನು ಪೂರೈಸುತ್ತಿರುವ ಸುವರ್ಣಗಿರಿಯ ಒಡೆಯ ಕನಕಾಚಲಪತಿ ಇನ್ನು ಮುಂದೆ ಸಿಸಿ ಕ್ಯಾಮೆರಾ ಕಣ್ಗಾವಲಿನಲ್ಲಿ ಬಂಧಿಯಾಗಲಿದ್ದಾನೆ.<br /> <br /> ಕನಕಚಾಲ ತಾನು ಮಾಡಿದ ಯಾವುದೋ ತಪ್ಪಿಗಾಗಿ ಬಂಧನದ ಭೀತಿ ಎದುರಿಸುತ್ತಿಲ್ಲ, ಬದಲಿಗೆ ಆತನಿಗೆ ಹೆಚ್ಚಿನ ಭದ್ರತೆ ಮತ್ತು ಭಕ್ತರಿಗೆ ಸುರಕ್ಷತೆ ಒದಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ದೇವಸ್ಥಾನಕ್ಕೆ ಸಿಸಿ ಕ್ಯಾಮೆರಾ ಅಳವಡಿಸುವ ಚಿಂತನೆ ನಡೆಸಿದೆ. <br /> <br /> ದೇವಸ್ಥಾನದ ಆವರಣದಲ್ಲಿನ ವಿವಿಧ ಭಾಗದಲ್ಲಿ ಸುಮಾರು ಹತ್ತು ಸಿ.ಸಿ. ಕ್ಯಾಮರಗಳನ್ನು ಅಳವಡಿಸುವ ಕಾಮಗಾರಿಗೆ ಈಗಾಗಲೆ ಟೆಂಡರ್ ಕಾರ್ಯ ಪೂರ್ಣಗೊಂಡಿದೆ. ಕಡತ ಜಿಲ್ಲಾಧಿಕಾರಿಗಳ ಅನುಮೋದನೆಗಾಗಿ ಕಾಯ್ದು ಕುಳಿತಿದೆ. <br /> <br /> ಎರಡನೆ ದೇವಸ್ಥಾನ: ಧಾರ್ಮಿಕ ಕ್ಷೇತ್ರ, ದೇವಸ್ಥಾನ, ಪ್ರಾರ್ಥನಾ ಮಂದಿರ ಗುಡಿ, ಗುಂಡಾರಗಳಲ್ಲಿ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಹೆಚ್ಚುತ್ತಿರುವ ಕಳ್ಳತನ, ವಿಗ್ರಹ ಧ್ವಂಸ ಮತ್ತಿತರ ಅಹಿತಕರ ಘಟನೆ ತಡೆಯುವ ಉದ್ದೇಶಕ್ಕೆ ಮುಜರಾಯಿ ಇಲಾಖೆ ಮುಂದಾಗಿದೆ. <br /> <br /> ಈ ಹಿನ್ನೆಲೆ ಇಲಾಖೆಯ ವ್ಯಾಪ್ತಿಗೆ ಬರುವ ಹಾಗೂ ಸ್ವಂತ ಆದಾಯದ ಮೂಲದಿಂದ ಅಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಲು ಶಕ್ತ ಇರುವ ದೇವಸ್ಥಾನಗಳು ಸಿಸಿ ಕ್ಯಾಮರ ಅಳವಡಿಸಿಕೊಳ್ಳುವಂತೆ ಧಾರ್ಮಿಕ ಮತ್ತು ದತ್ತಿ ಇಲಾಖೆ ಆದೇಶ ನೀಡಿದೆ. <br /> <br /> ಈ ಹಿನ್ನೆಲೆ ಗಂಗಾವತಿ ತಹಸೀಲ್ದಾರರು ಕನಕಗಿರಿಯ ಕನಕಾಚಲಪತಿ ದೇವಸ್ಥಾನಕ್ಕೆ ಸಿಸಿ ಕ್ಯಾಮರ ಅಳವಡಿಸುವ ಚಿಂತನೆ ನಡೆಸಿ ಕಾರ್ಯ ಪ್ರವೃತ್ತರಾಗಿದ್ದಾರೆ. ಕೊಪ್ಪಳದ ಹುಲಿಗಿ ಬಳಿಕ ಸಿಸಿ ಕ್ಯಾಮರ ಅಳವಡಿಸಿಕೊಳ್ಳುತ್ತಿರುವ ಕೊಪ್ಪಳ ಜಿಲ್ಲೆಯ ಎರಡನೇ ದೇವಸ್ಥಾನ ಕನಕಗಿರಿ.<br /> <br /> ಹತ್ತು ಸಿ.ಸಿ. ಕ್ಯಾಮರ: ದೇವಾಲಯದ ಮುಖ್ಯದ್ವಾರ, ದೇವರ ಗರ್ಭಗುಡಿ, ಹುಂಡಿ ಸ್ಥಳ, ದರ್ಶನಕ್ಕೆ ಬರುವ ಭಕ್ತರು ಸಾಲು, ದೇವಸ್ಥಾನದ ಹೊರನೋಟ, ಸೇವಾ ಚೀಟಿ, ದಾಸೋಹ ಶಾಲೆ ಹೀಗೆ ನಾನಾ ಭಾಗಗಳು ಸ್ಪಷ್ಟವಾಗಿ ಕಾಣುವಂತೆ ಸಿಸಿ ಕ್ಯಾಮರ ಅಳವಡಿಸುವ ಯೋಜನೆ ಸಿದ್ಧಪಡಿಸಲಾಗಿದೆ. <br /> <br /> ಹುಂಡಿ ಮತ್ತು ಗರ್ಭಗುಡಿ ರಾತ್ರಿಯೂ ಕಾಣುವಂತೆ ಇನ್ಪ್ರಾರೆಡ್ ತಂತ್ರಜ್ಞಾನದ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿ ಆಡಳಿತಾಧಿಕಾರಿ/ಮೇಲ್ವಿಚಾರಕರ ಕೊಠಡಿಯಲ್ಲಿ ಈ ಎಲ್ಲವನ್ನು ವೀಕ್ಷಿಸಲು ಎಲ್ಇಡಿ ಟಿ.ವಿ. ಸ್ಥಾಪಿಸುವ ಯೋಜನೆ ಇದೆ. <br /> <br /> ಕಾರಟಗಿಯ ವೆಂಕಟೇಶ್ವರ, ಆನೆಗೊಂದಿಯ ರಂಗನಾಥ, ಪಂಪಾಸರೋವರದ ಜಯಲಕ್ಷ್ಮಿ, ನವಲಿಯ ಭೋಗಾಪುರೇಶ, ಹಿರೇಜಂತಕಲ್ ಪಂಪಾಪತಿಗೂ ಸಿ.ಸಿ. ಕ್ಯಾಮರದ ಯೋಗವಿತ್ತು. ಆದರೆ ಆರ್ಥಿಕವಾಗಿ ಸಬಲರಲ್ಲ ಎಂಬ ಕಾರಣಕ್ಕೆ ಕ್ಯಾಮರದ ಕಣ್ಣಿನಿಂದ ತಪ್ಪಿಸಿಕೊಂಡಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>