<p><strong>ಮುಂಬೈ:</strong> ಮಹಾರಾಷ್ಟ್ರ ಸಂಗೀತ, ಕಲೆ, ಸಂಸ್ಕೃತಿ -ಈ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆ ನೀಡಿದೆ. ಕರ್ನಾಟಕದ ಹಿರಿಯ ಗಾಯಕರಾದ ಮಲ್ಲಿಕಾರ್ಜುನ ಮನ್ಸೂರ್, ಕುಮಾರ ಗಂಧರ್ವ, ಪಂಡಿತ ಭೀಮಸೇನ ಜೋಷಿ ಈ ಮುಂತಾದವರು ಈ ನೆಲದ ಆಶ್ರಯದಲ್ಲಿ , ಔದಾರ್ಯದಲ್ಲಿ ಬೆಳಗಿದ್ದಾರೆ ಎಂದು ಹಿರಿಯ ಪತ್ರಕರ್ತ ಶಾ.ಮಂ.ಕೃಷ್ಣರಾಯ ಅವರು ಹೇಳಿದರು.<br /> <br /> ಅವರು ಮಹಾರಾಷ್ಟ್ರದ ಸುವರ್ಣ ಮಹೋತ್ಸವದ ನಿಮಿತ್ತ ಪುಣೆಯ ಮರಾಠಿ - ಕನ್ನಡ ಸ್ನೇಹವರ್ಧನ ಕೇಂದ್ರ ಮತ್ತು ಮೈಸೂರು ಸಂಗೀತ ವಿದ್ಯಾಲಯ ಡೊಂಬಿವಲಿಯಲ್ಲಿ ಆಯೋಜಿಸಿದ ‘ಕರ್ನಾಟಕ- ಮಹಾರಾಷ್ಟ್ರ ಉತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು. <br /> <br /> ಕೃ.ಶಿ. ಹೆಗಡೆ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ದಲಿತರಾದ ಡಾ. ಯಶವಂತ್ ಅವರ ‘ಕ್ಷಣಕ್ಷಣವೂ ಬದುಕಬೇಕು’ ಜೀವನ ಕತೆಯನ್ನು ಬಿಡುಗಡೆಗೊಳಿಸಿದರು.<br /> <br /> ಈ ಕೃತಿಯ ಮೂಲ ಲೇಖಕಿ ಮಂಗಳ ಕೇವಳೆ ಈಗಾಗಲೇ ಈ ಕೃತಿ 11 ಆವೃತ್ತಿಗಳನ್ನು ಕಂಡಿದೆ ಎಂದರು. ಮರಾಠಿ ಕನ್ನಡ ಐತಿಹಾಸಿಕ ಅನುಬಂಧ ಎಂಬ ವಿಷಯದ ಮೇಲೆ ವಿಜಯಲಕ್ಷ್ಮಿ ರೇವಣಕರ, ಡಾ. ಸುನೀತಾ ಶೆಟ್ಟಿ, ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೃ.ಶಿ. ಹೆಗಡೆ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ಮಹಾರಾಷ್ಟ್ರ ಸಂಗೀತ, ಕಲೆ, ಸಂಸ್ಕೃತಿ -ಈ ಕ್ಷೇತ್ರಗಳಲ್ಲಿ ಉತ್ತಮ ಕೊಡುಗೆ ನೀಡಿದೆ. ಕರ್ನಾಟಕದ ಹಿರಿಯ ಗಾಯಕರಾದ ಮಲ್ಲಿಕಾರ್ಜುನ ಮನ್ಸೂರ್, ಕುಮಾರ ಗಂಧರ್ವ, ಪಂಡಿತ ಭೀಮಸೇನ ಜೋಷಿ ಈ ಮುಂತಾದವರು ಈ ನೆಲದ ಆಶ್ರಯದಲ್ಲಿ , ಔದಾರ್ಯದಲ್ಲಿ ಬೆಳಗಿದ್ದಾರೆ ಎಂದು ಹಿರಿಯ ಪತ್ರಕರ್ತ ಶಾ.ಮಂ.ಕೃಷ್ಣರಾಯ ಅವರು ಹೇಳಿದರು.<br /> <br /> ಅವರು ಮಹಾರಾಷ್ಟ್ರದ ಸುವರ್ಣ ಮಹೋತ್ಸವದ ನಿಮಿತ್ತ ಪುಣೆಯ ಮರಾಠಿ - ಕನ್ನಡ ಸ್ನೇಹವರ್ಧನ ಕೇಂದ್ರ ಮತ್ತು ಮೈಸೂರು ಸಂಗೀತ ವಿದ್ಯಾಲಯ ಡೊಂಬಿವಲಿಯಲ್ಲಿ ಆಯೋಜಿಸಿದ ‘ಕರ್ನಾಟಕ- ಮಹಾರಾಷ್ಟ್ರ ಉತ್ಸವ’ವನ್ನು ಉದ್ಘಾಟಿಸಿ ಮಾತನಾಡಿದರು. <br /> <br /> ಕೃ.ಶಿ. ಹೆಗಡೆ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ ದಲಿತರಾದ ಡಾ. ಯಶವಂತ್ ಅವರ ‘ಕ್ಷಣಕ್ಷಣವೂ ಬದುಕಬೇಕು’ ಜೀವನ ಕತೆಯನ್ನು ಬಿಡುಗಡೆಗೊಳಿಸಿದರು.<br /> <br /> ಈ ಕೃತಿಯ ಮೂಲ ಲೇಖಕಿ ಮಂಗಳ ಕೇವಳೆ ಈಗಾಗಲೇ ಈ ಕೃತಿ 11 ಆವೃತ್ತಿಗಳನ್ನು ಕಂಡಿದೆ ಎಂದರು. ಮರಾಠಿ ಕನ್ನಡ ಐತಿಹಾಸಿಕ ಅನುಬಂಧ ಎಂಬ ವಿಷಯದ ಮೇಲೆ ವಿಜಯಲಕ್ಷ್ಮಿ ರೇವಣಕರ, ಡಾ. ಸುನೀತಾ ಶೆಟ್ಟಿ, ಮರಾಠಿ-ಕನ್ನಡ ಸ್ನೇಹವರ್ಧನ ಕೇಂದ್ರದ ಪ್ರಧಾನ ಕಾರ್ಯದರ್ಶಿ ಕೃ.ಶಿ. ಹೆಗಡೆ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>