<p>ಧಾರವಾಡ: ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ರೂಪಿಸಿರುವ ತೆಗೆಯಿರಿ ಪುಸ್ತಕ ಹೊರಗೆ ನಗರ ಹಾಗೂ ತಾಲ್ಲೂಕಿನ ಹಲವು ಗ್ರಾಮದ ಶಾಲೆಗಳಲ್ಲಿ ಬುಧವಾರ ಆಚರಿಸಲಾಯಿತು. <br /> <br /> ಬೆಳಿಗ್ಗೆಯಿಂದಲೇ ಮಕ್ಕಳು ಉತ್ಸಾಹದಿಂದ ಈ ಕ್ಷಣವನ್ನು ಎದುರು ನೋಡುತ್ತಿದ್ದರು. ಸಂಬಂಧಪಟ್ಟ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಹಲವು ವರ್ಷಗಳಿಂದ ದೂಳು ಹಿಡಿದಿದ್ದ ಕಪಾಟುಗಳನ್ನು ತೆರೆದು ಒರೆಸಿ ಒಪ್ಪ ಓರಣ ಮಾಡಿದ್ದರೆ, ದಿನಾಲು ಬಳಕೆ ಮಾಡುತ್ತಿದ್ದ ಗ್ರಂಥಾಲಯಗಳನ್ನು ಸುಸ್ಥಿತಿಗೆ ತರಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಪುಸ್ತಕಗಳ ಕಪಾಟು ತೆರೆದಾಗ ಇಷ್ಟೊಂದು ಮಹತ್ವದ ಪುಸ್ತಕಗಳು ನಮ್ಮಲ್ಲಿದೆಯೇ ಎಂದು ಶಿಕ್ಷಕ-ಶಿಕ್ಷಕಿಯರಿಗೆ ಅನಿಸಿದ್ದು ಸುಳ್ಳಲ್ಲ! <br /> <br /> ನಗರದ ಮಹಿಳಾ ಪ್ರಶಿಕ್ಷಣಾರ್ಥಿಗಳ ತರಬೇತಿ ಶಾಲೆಯ ಆವರಣದ ಪ್ರಾಥಮಿಕ ಶಾಲೆಯಲ್ಲಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಮೌನವಾಗಿ ಕುಳಿತ ಮಕ್ಕಳೊಂದಿಗೆ ಮೌನವಾಗಿ ಪುಸ್ತಕ ಓದಿದರು. <br /> <br /> ಡಯಟ್ ಆವರಣದಲ್ಲಿಯೂ ಡಯಟ್ನ ಸಿಬ್ಬಂದಿ, ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯ ಸಿಬ್ಬಂದಿ ಓದಿನಲ್ಲಿ ತೊಡಗಿದರು. <br /> <br /> ನಗರದ ಮದಾರಮಡ್ಡಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಂ 6ರಲ್ಲಿ ನಿಗದಿತ ಅವಧಿಗಿಂತ ಒಂದೂವರೆ ಗಂಟೆಯಷ್ಟು ತಡವಾಗಿ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಜನಪ್ರತಿನಿಧಿಗಳು ಸಕಾಲಕ್ಕೆ ಆಗಮಿಸದಿದ್ದುದೇ ಇದಕ್ಕೆ ಕಾರಣ. ಈ ಬಗ್ಗೆ ಶಿಕ್ಷಕರೊಬ್ಬರನ್ನು ವಿಚಾರಿಸಿದಾಗ, ನಾವೇನೋ ಸರಿಯಾದ ಸಮಯಕ್ಕೇ ಕಾರ್ಯಕ್ರಮ ಆರಂಭಿಸಲು ಉದ್ದೇಶಿಸಿದ್ದೆವು. ಆದರೆ ಅತಿಥಿಗಳನ್ನು ಬಿಟ್ಟು ಸಭೆ ಆರಂಭಿಸಿದರೆ ಅವರು ಸಿಟ್ಟು ಮಾಡಿಕೊಳ್ಳುತ್ತಾರೆ ಎಂದರು. <br /> <br /> ವಿದ್ಯಾರಣ್ಯ ಸಂಯುಕ್ತ ಪದವಿಪೂರ್ವ ಕಾಲೇಜು: ಇಲ್ಲಿಯ ವಿದ್ಯಾರಣ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಹಿರಿಯ ಗ್ರಂಥಾಲಯ ತಜ್ಞ ಪ್ರೊ.ಕೆ.ಎಸ್.ದೇಶಪಾಂಡೆ ಉದ್ಘಾಟಿಸಿ, `ಪ್ರಪಂಚದ ಮಹಾಮೇಧಾವಿಗಳ ಸಭಾಭವನವೇ ಗ್ರಂಥಾಲಯಗಳಾಗಿವೆ~ ಎಂದರು. <br /> <br /> ಉಪಪ್ರಾಚಾರ್ಯ ಜಿ.ಆರ್.ಭಟ್ ಸ್ವಾಗತಿಸಿದರು. ಎನ್.ಎಸ್.ಗೋವಿಂದರೆಡ್ಡಿ, ಸಿಂಧು ಶಿರೂರ, ಎಸ್.ಎಂ.ಭೋಂಗಾಳೆ, ಆನಂದ ಕುಲಕರ್ಣಿ, ಪ್ರದೀಪ ದೊಡವಾಡ, ವೀಣಾ ಜಟ್ಟಯ್ಯನ್, ಆರ್. ಎಂ.ನಾವಳ್ಳಿ, ಪಿ.ನಾಗೇಂದ್ರಪ್ಪ, ಎಸ್. ಬಿ.ಕಡಕೋಳ ಸಂಗಮೇಶ ಹಡಪದ ಇದ್ದರು. <br /> <br /> ಸರ್ಕಾರಿ ಉರ್ದು ಶಾಲೆ: ವಾಚನಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲಿಕೆ ಸದಸ್ಯೆ ಸರೋಜಾ ಪಾಟೀಲ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಇಮಾಂ ಚೌಧರಿ, ಎಂ.ಎಂ.ಬೆಂಗಳೂರ, ಅಬ್ದುಲ್ ರೆಹಮಾನ್, ಮುಸ್ತಫಾ ಹಾಗೂ ಇರ್ಫಾನ್ ಭಾಗವಹಿಸಿದ್ದರು.<br /> <br /> ಗೋವನಕೊಪ್ಪ: ಕನಕದಾಸ ಪ್ರೌಢಶಾಲೆಯಲ್ಲಿ ಹೆಬ್ಬಳ್ಳಿ ಕ್ಲಸ್ಟರ್ ಮಟ್ಟದ ಸಿಆರ್ಸಿ ಸುಬೇದಾರ ಅವರು ಶಾಲಾ ವಿದ್ಯಾರ್ಥಿ ಪ್ರವೀಣ ಉಳ್ಳಿಗೇರಿ ಮೂಲಕ ಉದ್ಘಾಟಿಸಿದರು. ಶಿಕ್ಷಣ ಸಂಯೋಜಕ ಎಸ್.ಎಫ್.ಮಂಜಣ್ಣವರ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಧಾರವಾಡ: ಮಕ್ಕಳಲ್ಲಿ ಪುಸ್ತಕ ಓದುವ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ರಾಜ್ಯ ಸಾರ್ವಜನಿಕ ಶಿಕ್ಷಣ ಇಲಾಖೆಯು ರೂಪಿಸಿರುವ ತೆಗೆಯಿರಿ ಪುಸ್ತಕ ಹೊರಗೆ ನಗರ ಹಾಗೂ ತಾಲ್ಲೂಕಿನ ಹಲವು ಗ್ರಾಮದ ಶಾಲೆಗಳಲ್ಲಿ ಬುಧವಾರ ಆಚರಿಸಲಾಯಿತು. <br /> <br /> ಬೆಳಿಗ್ಗೆಯಿಂದಲೇ ಮಕ್ಕಳು ಉತ್ಸಾಹದಿಂದ ಈ ಕ್ಷಣವನ್ನು ಎದುರು ನೋಡುತ್ತಿದ್ದರು. ಸಂಬಂಧಪಟ್ಟ ಶಾಲೆಗಳ ಶಿಕ್ಷಕ-ಶಿಕ್ಷಕಿಯರು ಹಲವು ವರ್ಷಗಳಿಂದ ದೂಳು ಹಿಡಿದಿದ್ದ ಕಪಾಟುಗಳನ್ನು ತೆರೆದು ಒರೆಸಿ ಒಪ್ಪ ಓರಣ ಮಾಡಿದ್ದರೆ, ದಿನಾಲು ಬಳಕೆ ಮಾಡುತ್ತಿದ್ದ ಗ್ರಂಥಾಲಯಗಳನ್ನು ಸುಸ್ಥಿತಿಗೆ ತರಲು ಹೆಚ್ಚು ಹೊತ್ತು ಹಿಡಿಯಲಿಲ್ಲ. ಪುಸ್ತಕಗಳ ಕಪಾಟು ತೆರೆದಾಗ ಇಷ್ಟೊಂದು ಮಹತ್ವದ ಪುಸ್ತಕಗಳು ನಮ್ಮಲ್ಲಿದೆಯೇ ಎಂದು ಶಿಕ್ಷಕ-ಶಿಕ್ಷಕಿಯರಿಗೆ ಅನಿಸಿದ್ದು ಸುಳ್ಳಲ್ಲ! <br /> <br /> ನಗರದ ಮಹಿಳಾ ಪ್ರಶಿಕ್ಷಣಾರ್ಥಿಗಳ ತರಬೇತಿ ಶಾಲೆಯ ಆವರಣದ ಪ್ರಾಥಮಿಕ ಶಾಲೆಯಲ್ಲಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ಡಾ.ಬಿ.ಕೆ.ಎಸ್.ವರ್ಧನ್ ಮೌನವಾಗಿ ಕುಳಿತ ಮಕ್ಕಳೊಂದಿಗೆ ಮೌನವಾಗಿ ಪುಸ್ತಕ ಓದಿದರು. <br /> <br /> ಡಯಟ್ ಆವರಣದಲ್ಲಿಯೂ ಡಯಟ್ನ ಸಿಬ್ಬಂದಿ, ಇಲಾಖೆಯ ಹೆಚ್ಚುವರಿ ಆಯುಕ್ತರ ಕಚೇರಿಯ ಸಿಬ್ಬಂದಿ ಓದಿನಲ್ಲಿ ತೊಡಗಿದರು. <br /> <br /> ನಗರದ ಮದಾರಮಡ್ಡಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಸಂ 6ರಲ್ಲಿ ನಿಗದಿತ ಅವಧಿಗಿಂತ ಒಂದೂವರೆ ಗಂಟೆಯಷ್ಟು ತಡವಾಗಿ ಕಾರ್ಯಕ್ರಮ ಆರಂಭವಾಯಿತು. ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಜನಪ್ರತಿನಿಧಿಗಳು ಸಕಾಲಕ್ಕೆ ಆಗಮಿಸದಿದ್ದುದೇ ಇದಕ್ಕೆ ಕಾರಣ. ಈ ಬಗ್ಗೆ ಶಿಕ್ಷಕರೊಬ್ಬರನ್ನು ವಿಚಾರಿಸಿದಾಗ, ನಾವೇನೋ ಸರಿಯಾದ ಸಮಯಕ್ಕೇ ಕಾರ್ಯಕ್ರಮ ಆರಂಭಿಸಲು ಉದ್ದೇಶಿಸಿದ್ದೆವು. ಆದರೆ ಅತಿಥಿಗಳನ್ನು ಬಿಟ್ಟು ಸಭೆ ಆರಂಭಿಸಿದರೆ ಅವರು ಸಿಟ್ಟು ಮಾಡಿಕೊಳ್ಳುತ್ತಾರೆ ಎಂದರು. <br /> <br /> ವಿದ್ಯಾರಣ್ಯ ಸಂಯುಕ್ತ ಪದವಿಪೂರ್ವ ಕಾಲೇಜು: ಇಲ್ಲಿಯ ವಿದ್ಯಾರಣ್ಯ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಹಿರಿಯ ಗ್ರಂಥಾಲಯ ತಜ್ಞ ಪ್ರೊ.ಕೆ.ಎಸ್.ದೇಶಪಾಂಡೆ ಉದ್ಘಾಟಿಸಿ, `ಪ್ರಪಂಚದ ಮಹಾಮೇಧಾವಿಗಳ ಸಭಾಭವನವೇ ಗ್ರಂಥಾಲಯಗಳಾಗಿವೆ~ ಎಂದರು. <br /> <br /> ಉಪಪ್ರಾಚಾರ್ಯ ಜಿ.ಆರ್.ಭಟ್ ಸ್ವಾಗತಿಸಿದರು. ಎನ್.ಎಸ್.ಗೋವಿಂದರೆಡ್ಡಿ, ಸಿಂಧು ಶಿರೂರ, ಎಸ್.ಎಂ.ಭೋಂಗಾಳೆ, ಆನಂದ ಕುಲಕರ್ಣಿ, ಪ್ರದೀಪ ದೊಡವಾಡ, ವೀಣಾ ಜಟ್ಟಯ್ಯನ್, ಆರ್. ಎಂ.ನಾವಳ್ಳಿ, ಪಿ.ನಾಗೇಂದ್ರಪ್ಪ, ಎಸ್. ಬಿ.ಕಡಕೋಳ ಸಂಗಮೇಶ ಹಡಪದ ಇದ್ದರು. <br /> <br /> ಸರ್ಕಾರಿ ಉರ್ದು ಶಾಲೆ: ವಾಚನಾಲಯ ಉದ್ಘಾಟನಾ ಸಮಾರಂಭದಲ್ಲಿ ಪಾಲಿಕೆ ಸದಸ್ಯೆ ಸರೋಜಾ ಪಾಟೀಲ ಮಾತನಾಡಿದರು. ಎಸ್ಡಿಎಂಸಿ ಅಧ್ಯಕ್ಷ ಇಮಾಂ ಚೌಧರಿ, ಎಂ.ಎಂ.ಬೆಂಗಳೂರ, ಅಬ್ದುಲ್ ರೆಹಮಾನ್, ಮುಸ್ತಫಾ ಹಾಗೂ ಇರ್ಫಾನ್ ಭಾಗವಹಿಸಿದ್ದರು.<br /> <br /> ಗೋವನಕೊಪ್ಪ: ಕನಕದಾಸ ಪ್ರೌಢಶಾಲೆಯಲ್ಲಿ ಹೆಬ್ಬಳ್ಳಿ ಕ್ಲಸ್ಟರ್ ಮಟ್ಟದ ಸಿಆರ್ಸಿ ಸುಬೇದಾರ ಅವರು ಶಾಲಾ ವಿದ್ಯಾರ್ಥಿ ಪ್ರವೀಣ ಉಳ್ಳಿಗೇರಿ ಮೂಲಕ ಉದ್ಘಾಟಿಸಿದರು. ಶಿಕ್ಷಣ ಸಂಯೋಜಕ ಎಸ್.ಎಫ್.ಮಂಜಣ್ಣವರ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>