<p><strong>ಕುಲಿಗೋಡ (ಮೂಡಲಗಿ): </strong>ಪ್ರತಿ ಟನ್ ಕಬ್ಬಿಗೆ ರೂ 3 ಸಾವಿರ ಬೆಲೆ ನೀಡಬೇಕು ಎಂದು ಆಗ್ರಹಿಸಿ ಗ್ರಾಮ ದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘ ಸದಸ್ಯರು ನಡೆಸಿರುವ ಧರಣಿ ಸತ್ಯಾಗ್ರಹವು ಗುರುವಾರ ಎರಡನೇ ದಿನಕ್ಕೆ ಮುಂದುವರಿಯಿತು.<br /> <br /> ಪ್ರತಿಭಟನಾಕಾರರು ಬುಧವಾರ ರಸ್ತೆಗೆ ಇಳಿದು ರಸ್ತೆ ತಡೆ ಮಾಡಿ ಪ್ರತಿಭಟಸಿದರು.ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಮಳಲಿ ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲಿಕರು ಟನ್ಗೆ ರೂ 3 ಸಾವಿರ ಪ್ರಕಟಿಸುವವರೆಗೆ ರೈತರು ಕಬ್ಬು ಕಟಾವು ಮಾಡಬಾರದು ಮತ್ತು ಕಾರ್ಖಾನೆಗಳಿಗೆ ಕಬ್ಬು ರವನಿಸಬಾರದು ಎಂದು ಸೂಚಿಸಿದರು.<br /> <br /> ಸುಧೀರ ವಂಟಗೋಡಿ, ಸತೀಶ ವಂಟಗೋಡಿ, ವೆಂಕಪ್ಪ ಗುಡಗುಡಿ, ರಮೇಶ ಬಡಕಲ್, ರಾಮಣ್ಣ ಚನ್ನಾಳ, ಜಗದೀಶ ಬೆಳಗಲಿ, ಈರಪ್ಪ ಅಂಗಡಿ, ಜಗದೀಶ ನಾಯಿಕ, ಭೀಮಶಿ ದಾಸರಡ್ಡಿ, ತಮ್ಮಣ್ಣ ದೇವರ, ಢವಳೇಶ್ವರ, ಮನ್ನಾಪುರ, ವೆಂಕಟಾಪುರ ಗ್ರಾಮದ ರೈತರು ಭಾಗವಹಿಸಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಲಿಗೋಡ (ಮೂಡಲಗಿ): </strong>ಪ್ರತಿ ಟನ್ ಕಬ್ಬಿಗೆ ರೂ 3 ಸಾವಿರ ಬೆಲೆ ನೀಡಬೇಕು ಎಂದು ಆಗ್ರಹಿಸಿ ಗ್ರಾಮ ದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಕಬ್ಬು ಬೆಳೆಗಾರರ ಸಂಘ ಸದಸ್ಯರು ನಡೆಸಿರುವ ಧರಣಿ ಸತ್ಯಾಗ್ರಹವು ಗುರುವಾರ ಎರಡನೇ ದಿನಕ್ಕೆ ಮುಂದುವರಿಯಿತು.<br /> <br /> ಪ್ರತಿಭಟನಾಕಾರರು ಬುಧವಾರ ರಸ್ತೆಗೆ ಇಳಿದು ರಸ್ತೆ ತಡೆ ಮಾಡಿ ಪ್ರತಿಭಟಸಿದರು.ರೈತ ಸಂಘದ ಜಿಲ್ಲಾ ಅಧ್ಯಕ್ಷ ಬಸವರಾಜ ಮಳಲಿ ಮಾತನಾಡಿ, ಸಕ್ಕರೆ ಕಾರ್ಖಾನೆ ಮಾಲಿಕರು ಟನ್ಗೆ ರೂ 3 ಸಾವಿರ ಪ್ರಕಟಿಸುವವರೆಗೆ ರೈತರು ಕಬ್ಬು ಕಟಾವು ಮಾಡಬಾರದು ಮತ್ತು ಕಾರ್ಖಾನೆಗಳಿಗೆ ಕಬ್ಬು ರವನಿಸಬಾರದು ಎಂದು ಸೂಚಿಸಿದರು.<br /> <br /> ಸುಧೀರ ವಂಟಗೋಡಿ, ಸತೀಶ ವಂಟಗೋಡಿ, ವೆಂಕಪ್ಪ ಗುಡಗುಡಿ, ರಮೇಶ ಬಡಕಲ್, ರಾಮಣ್ಣ ಚನ್ನಾಳ, ಜಗದೀಶ ಬೆಳಗಲಿ, ಈರಪ್ಪ ಅಂಗಡಿ, ಜಗದೀಶ ನಾಯಿಕ, ಭೀಮಶಿ ದಾಸರಡ್ಡಿ, ತಮ್ಮಣ್ಣ ದೇವರ, ಢವಳೇಶ್ವರ, ಮನ್ನಾಪುರ, ವೆಂಕಟಾಪುರ ಗ್ರಾಮದ ರೈತರು ಭಾಗವಹಿಸಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>